Just In
Don't Miss
- News Gadag: ಕಾಂಗ್ರೆಸ್ ಸರ್ಕಾರದಲ್ಲಿ ಕೊಲೆಗಡುಕರಿಗೆ ರಾಜ ಮರ್ಯಾದೆ: ಮಾಜಿ ಸಿಎಂ
- Automobiles ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನವರಾತ್ರಿಯ 7ನೇ ದಿನ: ಕಾಳರಾತ್ರಿ ದೇವಿಯ ಆರಾಧನೆ ಮಾಡುವಾಗ ಈ ಮಂತ್ರ ಪಠಿಸಿ
ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯ 9 ರೂಪಗಳನ್ನು ಪೂಜಿಸಲಾಗುವುದು. 2023ರಲ್ಲಿ ಅಕ್ಟೋರ್ 21ರಂದು ಕಾಳರಾತ್ರಿ ದೇವಿಯ ಆರಾಧನೆ ಮಾಡಲಾಗುವುದು.
ಈ ವರ್ಷ ಶನಿವಾರದಂದು ಕಾಳರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಇದು ತುಂಬಾ ವಿಚಿತ್ರ ರೂಪವಾಗಿದೆ. ಈ ರೂಪದಲ್ಲಿ ತಾಯಿಯು ತುಂಬಾ ರೌದ್ರಾವತಾರ ಮತ್ತು ಕಪ್ಪಾಗಿ ಕಾಣುವರು.
ಹೆಸರೇ ಹೇಳುವಂತೆ ಇದು ತಾಯಿಯ ಕಾರ್ಗತ್ತಲು ರೂಪವಾಗಿದೆ. ಕತ್ತೆಯ ಮೇಲೆ ಆಕೆ ಸಂಚಾರಿಯಾಗಿದ್ದಾರೆ. ಕಾಳರಾತ್ರಿ ದೇವಿಗೆ ನಾಲ್ಕು ಕೈಗಳಿವೆ. ಇದರಲ್ಲಿ ಎರಡಲ್ಲಿ ಒಂದರಲ್ಲಿ ಬೆಂಕಿ, ಮತ್ತೊಂದರಲ್ಲಿ ಖಡ್ಗವಿದೆ. ಇನ್ನೆರಡು ಕೈಗಗಳು ವರ ನೀಡುವ ಮತ್ತು ರಕ್ಷಿಸುವ ಹಾಗೆ ಇದೆ.
ತಾಯಿ ಕಾಳರಾತ್ರಿಯ ಕಥೆ
ರೌದ್ರಾವತಾರ ಮತ್ತು ತುಂಬಾ ಉಗ್ರ ರೂಪದಲ್ಲಿರುವ ತಾಯಿ ದುರ್ಗೆಯು ಕಾಲರಾತ್ರಿಯಾಗಿ ರೂಪ ಧಾರಣೆ ಮಾಡಿ, ತನ್ನ ಬಂಗಾರದ ಮೈಬಣ್ಣದ ಚರ್ಮವನ್ನು ಕಿತ್ತು ರಾಕ್ಷಸರ ವಿರುದ್ಧ ಹೋರಾಡಲು ಹೋಗುವಳು. ಕಾಲರಾತ್ರಿಯು ಕಪ್ಪು ಹಾಗೂ ವಿಚಿತ್ರವಾಗಿ ಕಾಣಿಸುವರು. ಆಕೆ ಎಲ್ಲಾ ರೀತಿಯ ದುಷ್ಟಶಕ್ತಿ, ದುಷ್ಟತೆ ಮತ್ತು ನಕಾರಾತ್ಮಕ ಶಕ್ತಿ ಹಾಗೂ ಭೀತಿ ದೂರ ಮಾಡುವರು. ಅದಾಗ್ಯೂ, ಆಕೆ ತನ್ನ ಭಕ್ತರಿಗೆ ವರ ನೀಡಿ ರಕ್ಷಿಸುವರು. ಆಕೆ ತನ್ನ ಭಕ್ತರಿಗೆ ಹೆಚ್ಚಿನ ಸಂತೋಷ ಹಾಗೂ ತೃಪ್ತಿ ಕರುಣಿಸುವಳು. ಇದರಿಂದಾಗಿ ಆಕೆಯನ್ನು ಶುಭಾಂಕರಿ ಅಥವಾ ಪವಿತ್ರವೆಂದು ಪರಿಗಣಿಸಲಾಗಿದೆ.
Most Read: ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಯಾವ ದೇವಿಯನ್ನು ಪೂಜಿಸಬೇಕು?
ತಾಯಿ ಕಾಳರಾತ್ರಿಯ ಪೂಜೆಯ ಪ್ರಾಮುಖ್ಯತೆ
ತಾಯಿ ಕಾಳರಾತ್ರಿಯು ಶನಿ ಗ್ರಹದ ಅಧಿಪತಿ. ಆಕೆ ಜನರು ಮಾಡಿರುವ ಕೆಡುಕು ಹಾಗೂ ಒಳಿತನ್ನು ನೋಡಿಕೊಂಡು ವರ ನೀಡುವರು. ಆಕೆ ದುಷ್ಟತೆಯನ್ನು ಶಿಕ್ಷಿಸಿ, ಒಳ್ಳೆಯದನ್ನು ರಕ್ಷಿಸುವರು. ಅವರು ಯಾವಾಗಲೂ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ಗುರುತಿಸುವರು. ತಾಯಿ ಕಾಳರಾತ್ರಿಯನ್ನು ಪೂಜಿಸುವುದರಿಂದಾಗಿ ಶನಿಯಿಂದ ಆಗುವ ತೊಂದರೆ ಹಾಗೂ ಸಾಡೇಸಾತಿ ಪ್ರಭಾವ ತಗ್ಗಿಸಬಹುದು.
ನವರಾತ್ರಿ 7ನೇ ದಿನ ತಾಯಿ ಕಾಲರಾತ್ರಿ ಪೂಜೆ
ಮಲ್ಲಿಗೆ ಹೂ ತಾಯಿ ಕಾಲರಾತ್ರಿಗೆ ಅರ್ಪಿಸಲು ಅತ್ಯುತ್ತಮವಾಗಿರುವ ಹೂ. ಶ್ರದ್ಧಾಭಕ್ತಿಯಿಂದ ನವರಾತ್ರಿಯ ಏಳನೇ ದಿನದಿಂದ ತಾಯಿ ಕಾಲರಾತ್ರಿಯ ಪೂಜೆ ಮಾಡಬೇಕು. ಗಣಪತಿ ಪೂಜೆಯ ಬಳಿಕ ಷೋಡಸೋಪಚಾರ ಪೂಜೆಯನ್ನು ಕಾಲರಾತ್ರಿ ತಾಯಿಗೆ ಮಾಡಬೇಕು. ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು.
ನವರಾತ್ರಿಯ ಏಳನೇ ದಿನ ಕಾಳರಾತ್ರಿಯ ಮಂತ್ರ
ಓಂ ದೇವಿ ಕಾಲರಾತ್ರೈ ನಮಃ
ಓಂ ದೇವಿ ಕಾಲರಾತ್ರೈ ನಮಃ ಏಕವೇನಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿನಿ
ವಾಮ್ ಪಾದೋಲ್ಲಸಲ್ಲೋಲತಾ ಕಂಠಕ್ಬುಷಾನಾ
ವರ್ಧನ್ ಮೂರ್ಧಮ್ ಧ್ವಜಾ ಕೃಷ್ಣ ಕಾಳರಾತ್ರಿಭಯಂಕರಿ
ತಾಯಿ ಕಾಳರಾತ್ರಿ ಪ್ರಾರ್ಥನೆ
ಏಕವೇನಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿನಿ
ವಾಮ್ ಪಾದೋಲ್ಲಸಲ್ಲೋಲತಾ ಕಂಠಕ್ಬುಷಾನಾ
ವರ್ಧನ್ ಮೂರ್ಧಮ್ ಧ್ವಜಾ ಕೃಷ್ಣ ಕಾಲರಾತ್ರಿಭಯಂಕರಿ
Most Read: ಈ ವರ್ಷದ ನವರಾತ್ರಿ ಯಾಕೆ ಇಷ್ಟೊಂದು ಮಂಗಳಕರ ಗೊತ್ತೇ? ಇಲ್ಲಿದೆ ಕಾರಣಗಳು
ತಾಯಿ ಕಾಳರಾತ್ರಿ ಸ್ತುತಿ
ಯಾ ದೇವಿ ಸರ್ವಭುತೇಶ್ ಮಾ ಕಾಲರಾತ್ರಿ ರೂಪೇನಾ ಸಂಹಿತಾ
ನಮಸ್ತಾಸ್ಯೈ ನಮಸ್ತಾಸ್ಯೈ ನಮಸ್ತಾಸ್ಯೈ ನಮೋ ನಮಃ
ಕಾಳರಾತ್ರಿ ದೇವಿ ಧ್ಯಾನ
ಕರಲಾವಂದನ ಘೋರಂ ಮುಕ್ತಾಕ್ಷಿ ಚತುರ್ಭುಜಂ
ಕಾಲರಾತ್ರಿಮ್ ಕರಾಲಿಮ್ಕಾ ದಿವ್ಯಾಂ ವಿದ್ಯುತ್ಮಾಲ ವಿಭಾಷಿತಂ
ದಿವ್ಯಾಂ ಲಾಹುವಾಜ್ರಾ ಖಡ್ಗ ವಮೊಘೋರ್ಧ್ವಾ ಕರಂಭುಜಮ್
ಅಭಯಂ ವರದಂ ಚೈವ ದಕ್ಷಿಣೋಧವಘಹ್ ಪರ್ಣಿಕಾಮ್ ಮಾಮ್
ಮಹಮೇಘ ಪ್ರಬಂಧ ಶ್ಯಾಮಮ್ ತಕ್ಷ ಚೈವಾ ಗಾರ್ದಭಾರುಧ
ಘೋರದಾಂಶ ಕರಾಲ್ಯಾಸಂ ಪಿನ್ನೊನಾತಾ ಪಯೋಧರಂ
ಸುಖ ಪ್ರಸನ್ನವಧನ ಶರ್ಮೆನ್ನಾ ಸರೊರುಹಮ್
ಇವಾಮ್ ಸಚಿಯಂತಾಯೆತ್ ಕಾಲರಾತ್ರಿಮ್ ಸರ್ವಕಂ ಸಮೃದ್ಧಿಂ
ತಾಯಿ ಕಾಳರಾತ್ರಿ ಸ್ತೋತ್ರ
ಹಿಮ್ ಕಲಾರತ್ರಿ ಶಿಮ್ ಕರಾಳಿ ಚಾ ಕ್ಲೈಮ್ ಕಲ್ಯಾಣಿ ಕಲಾವತಿ
ಕಲಾಮತಾ ಕಾಳಿದರ್ಪದ್ನಿ ಕಾಮದಿಶಾ ಕುಪನ್ವಿತಾ
ಕಾಮಬಿಜಪಂದ ಕಮಬಿಜಸ್ವರ್ಪಿನಿ
ಕುಮತಿಘಿನಿ ಕುಲಿನಾರ್ನಾನಿಶಿ ಕುಲಾ ಕಾಮಿನಿ
ಕ್ಲಿಮ್ ಹ್ರಮ್ ಶ್ರೀಮಿ ಮಾಂತ್ರ್ವರ್ನೆನಾ ಕಲಾಕಂತಕಘಾತಿನಿ
ಕೃಪಮಾಯಿ ಕೃಪಾಧಾರ ಕೃಪಾಪಾರಾ ಕೃಪಾಗಾಮಾ
Most Read: ಗರ್ಭದಲ್ಲಿ ಬೆಳೆಯುತ್ತಿರುವ ಮಗು ಹೆಣ್ಣಾ? ತಿಳಿದುಕೊಳ್ಳುವ ಕುತೂಹಲವಿದೆಯೇ?
ಏಳನೇ ದಿನ ಕಾಳರಾತ್ರಿ ಕವಚ
ಓಂ ಕ್ಲಿಮ್ ಮಿ ಹೃದಯಂ ಪತು ಪದೂ ಶ್ರೀಕಾಲಾರಾತ್ರಿ
ಲಲೇತೆ ಸತತಂ ಪತು ತುಶ್ಗ್ರಾಘ ನಿವಾರಿಣಿ
ರಾಸನಮ್ ಪತು ಕೌಮರಿ, ಭೈರವಿ ಚಕ್ರಶೋರ್ಭಮಾ
ಕತೂ ಪ್ರಿಶ್ಥ್ ಮಹೇಶನಿ, ಕರ್ಣಶಂಕರಾಭಮಿಣಿ
ವರ್ಜಿತಾನಿ ತು ಸ್ತಾನಭಿ ಯಾನಿ ಚಾ ಕವಚೇನಾ ಹಾಯ್
ತನಿ ಸರ್ವಾನಿ ಮೀ ದೇವಿಸತಾಪಂಪತು ಸ್ಟ್ಯಾಂಬಿಣಿ
ಕಾಳರಾತ್ರಿ ದೇವಿಯ ಪೂಜೆಯ ಮಹತ್ವ
ಕಾಲರಾತ್ರಿ ತಾಯಿಯನ್ನು ಏಳನೇ ದಿನದಂದು ಪೂಜಿಸುವುದರಿಂದ ಭಕ್ತರಲ್ಲಿರುವಂತಹ ಎಲ್ಲಾ ರೀತಿಯ ಭಯವು ನಿವಾರಣೆಯಾಗುವುದು. ಅವರ ಅಭಿವೃದ್ಧಿಗೆ ಇರುವಂತಹ ಎಲ್ಲಾ ಅಡೆತಡೆಗಳು ನಿವಾರಣೆಯಾಗುವುದು. ಗುಣವಾಗದ ರೋಗವು ಗುಣವಾಗುವುದು, ಮಾನಸಿಕ ಶಾಂತಿ ಹಾಗೂ ಸುಖ ನೀಡುವರು. ಆಕೆ ತನ್ನ ಭಕ್ತರಿಗೆ ಎಲ್ಲಾ ರೀತಿಯ ಒಳ್ಳೆಯತನ ಮತ್ತು ಸಮೃದ್ಧಿ ಕರುಣಿಸುವರು. ಇದೇ ವೇಳೆ ಎಲ್ಲಾ ರೀತಿಯ ಪಾಪ ನಿವಾರಣೆ ಮಾಡಿ ಸರಿಯಾದ ಮಾರ್ಗದಲ್ಲಿ ಸಾಗಲು ನೆರವಾಗುವರು. ನವರಾತ್ರಿಯ ಏಳನೇ ದಿನವನ್ನು ಮಹಾಸಪ್ತಮಿ ಎಂದು ಕರೆಯಲಾಗುತ್ತದೆ. ಈ ದಿನ ಸರಸ್ವತಿ ದೇವಿಯ ಪೂಜೆಯು ಆರಂಭವಾಗುವುದು.