Just In
- 24 min ago ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- 3 hrs ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- 3 hrs ago ಗುರು ಸಂಚಾರ: ಮೇ 1ರಿಂದ 3ನೇ ಸ್ಥಾನದಲ್ಲಿರುವ ಗುರು ಮೀನ ರಾಶಿಯವರಿಗೆ ಅದೃಷ್ಟವೇ?
- 15 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
Don't Miss
- News ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಮೋದಿ, ಅಮಿತ್ ಶಾ, ಯೋಗಿ ಪ್ರಚಾರ: ಡಿ ಕೆ ಸುರೇಶ್ ಹೇಳಿದ್ದೇನು?
- Movies ಡಾರ್ಲಿಂಗ್ ಕೃಷ್ಣ ನಟಿಸಿದ ಮೊದಲ ಸೀರಿಯಲ್ ನಟಿ 13 ವರ್ಷಗಳ ಬಳಿಕ ಕನ್ನಡ ಕಿರುತೆರೆ ಎಂಟ್ರಿ; ಯಾರಿವರು?
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನ್ಮಾಷ್ಟಮಿ ವಿಶೇಷ: ರಾಧಾ-ಕೃಷ್ಣರ ನಡುವಿನ ನಿಷ್ಕಲ್ಮಶ ಪ್ರೇಮ ಕಥೆ
ಇಂದಿಗೂ ಕೂಡ ರಾಧೆ ಮತ್ತು ಕೃಷ್ಣನ ಪ್ರೇಮವು ಅಮರವಾಗಿದೆ. ಯಾವುದೇ ಪ್ರೇಮಕಥೆಯಾದರೂ ಅದರು ರಾಧೆ ಹಾಗೂ ಕೃಷ್ಣನಂತಿರಬೇಕು ಎಂದು ಪ್ರತಿಯೊಬ್ಬರು ಬಯಸುವರು. ರಾಧೆ ಮತ್ತು ಕೃಷ್ಣನ ಪ್ರೇಮವು ಪರಮಾತ್ಮ ಮತ್ತು ಜೀವಾತ್ಮದ ಅಪೂರ್ವ ಸಮಾಗಮವಾಗಿದೆ. ಭಗವದ್ಗೀತೆಯಲ್ಲಿ ರಾಧೆ ಮತ್ತು ಕೃಷ್ಣನ ಪ್ರೇಮದ ಬಗ್ಗೆ ವಿವರವಿದೆ. ಈ ಪ್ರೇಮಕಥೆಯು ಸಾವಿರಾರು ವರ್ಷಗಳಿಂದಲೂ ಹಾಗೆ ಬೆಳೆದು ಬರುತ್ತಾ ಇದೆ.
ಕೃಷ್ಣ ಜನ್ಮಾಷ್ಟಮಿಯಂದು ಈ 6 ಸ್ಥಳಗಳಿಗೆ ಭೇಟಿ ನೀಡಿದರೆ ಕಷ್ಟ ನಿವಾರಣೆಯಾಗುವುದು
ರಾಧೆ ಮತ್ತು ಕೃಷ್ಣನ ಪ್ರೇಮಕಥೆಯನ್ನು ಕೇಳಿದ ಹೆಚ್ಚಿನವರಲ್ಲಿ ಮೂಡುವಂತಹ ಪ್ರಶ್ನೆಯೆಂದರೆ ರಾಧೆಯನ್ನು ಕೃಷ್ಣ ಯಾಕೆ ಮದುವೆಯಾಗಲಿಲ್ಲ. ವೃಂದಾವನವನ್ನು ಬಿಟ್ಟುಹೋದ ಕೃಷ್ಣ, ರುಕ್ಮಿಣಿಯನ್ನು ಮದುವೆಯಾಗಿರುವುದು ಯಾಕೆ ಎನ್ನುವ ಹಲವಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ. ಇದರ ಬಗ್ಗೆ ತಿಳಿಯಲು ಒಂದು ರೀತಿಯ ಅಧ್ಯಯನವನ್ನೇ ಮಾಡಲಾಗಿದೆ. ಈ ಅಧ್ಯಯನದಿಂದ ಹಲವಾರು ರೀತಿಯ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಿದೆ....
ರಾಧೆ ಕೃಷ್ಣನ ಬಾಲ್ಯದ ಸ್ನೇಹಿತೆ
ರಾಧೆಯು ಕೃತಿಧಾ ಮತ್ತು ವೃಸಭನುವಿನ ಮಗಳಾಗಿದ್ದಳು. ಕೃಷ್ಣನು ನಂದಾ ಮತ್ತು ಯೋಶೋಧೆಯ ಮಗ. ಕೆಲವು ಪುರಾಣಗಳ ಪ್ರಕಾರ ರಾಧೆಯು, ಕೃಷ್ಣನ ಸೋದರ ಸಂಬಂಧಿ ಎಂದರೆ ಇನ್ನು ಕೆಲವು ಪುರಾಣಗಳು ಕೃಷ್ಣನ ಚಿಕ್ಕಮ್ಮ ರಾಧೆ ಎನ್ನುತ್ತವೆ. ಯಶೋಧೆಯು ರಾಧೆಯನ್ನು ಹೆಚ್ಚು ಪ್ರೀತಿಸುತ್ತಾ ಇದ್ದಳು ಮತ್ತು ಆಕೆಯನ್ನು ತನ್ನ ಮಗಳಂತೆ ನೋಡಿಕೊಳ್ಳುತ್ತಿದ್ದಳು. ಕೃಷ್ಣ ಗೋಪಾಲಕನಾಗಿದ್ದರೆ, ರಾಧೆಯು ಹಳ್ಳಿ ಹುಡುಗಿಯಂತಿದ್ದಳು. ಆದರೆ ವಯಸ್ಸಿನಲ್ಲಿ ಕೃಷ್ಣನಿಗಿಂತ ರಾಧೆಯು ಹತ್ತು ವರ್ಷ ದೊಡ್ಡವಳು. ಬಾಲ್ಯದಲ್ಲಿ ಜತೆಯಾಗಿ ಆಟವಾಡುತ್ತಿದ್ದ ಅವರಿಬ್ಬರು ಪರಸ್ಪರರನ್ನು ಬಿಟ್ಟಿರುತ್ತಲೇ ಇರಲಿಲ್ಲ. ಅವರಿಬ್ಬರು ದೈಹಿಕತೆಗಿಂತ ಆಧಾತ್ಮಿಕವಾಗಿ ತುಂಬಾ ಹತ್ತಿರವಾಗಿದ್ದರು. ಅವರು ಬೆಳೆಯುತ್ತಾ ಇದ್ದಂತೆ ಅವರಿಬ್ಬರ ಪ್ರೀತಿಯು ಹೆಚ್ಚಾಗುತ್ತಾ ಹೋಯಿತು. ಕೃಷ್ಣ ಮತ್ತು ರಾಧೆ ಬಾಲ್ಯದಿಂದಲೇ ತುಂಬಾ ಪ್ರೀತಿಸುತ್ತಾ ಇದ್ದರೂ ಅವರಿಬ್ಬರ ಮಧ್ಯೆ ದೈಹಿಕ ಆಕರ್ಷಣೆ ಮಾತ್ರ ಇರಲಿಲ್ಲ ಎಂದು ಹೇಳಲಾಗಿದೆ.
ವೃಂದಾವನ ಬಿಟ್ಟ ಕೃಷ್ಣ
ಬಾಲ್ಯದ ಬಳಿಕ ತನ್ನ ನಿಜವಾದ ತಂದೆತಾಯಿ ಯಶೋಧೆ ಮತ್ತು ನಂದಾ ಅವರಲ್ಲ ಎನ್ನುವುದು ಕೃಷ್ಣನಿಗೆ ತಿಳಿದುಬರುತ್ತದೆ. ದೇವಕಿ ಮತ್ತು ರಾಜ ವಾಸುದೇವ ತನ್ನ ನಿಜವಾದ ತಂದೆತಾಯಿ ಎಂದು ಕೃಷ್ಣನಿಗೆ ತಿಳಿಯುತ್ತದೆ. ತನ್ನ ಸೋದರ ಮಾವ ಕಂಸನ ದುಷ್ಕೃತ್ಯಗಳಿಂದಾಗಿ ತನ್ನ ತಂದೆತಾಯಿ ಜೈಲಿನಲ್ಲಿದ್ದಾರೆ ಎಂದು ತಿಳಿದ ಕೃಷ್ಣ ಕಂಸನನ್ನು ಸಂಹಾರ ಮಾಡಿ ತನ್ನ ತಂದೆತಾಯಿ ಹಾಗೂ ರಾಜ್ಯವನ್ನು ಕಂಸನ ದುಷ್ಕೃತ್ಯದಿಂದ ರಕ್ಷಿಸುತ್ತಾನೆ. ಕಂಸನ ಸಂಹಾರಕ್ಕಾಗಿಯೇ ತಾನು ಹುಟ್ಟಿದ್ದೇನೆಂದು ತಿಳಿದ ಕೃಷ್ಣ ವೃಂದಾವನ ಬಿಟ್ಟು ಹೋಗುತ್ತಾನೆ.
ಕೃಷ್ಣ ಮತ್ತು ರಾಧೆ ಯಾಕೆ ಮದುವೆಯಾಗಲಿಲ್ಲ?
ವೃಂದಾವನ ಬಿಟ್ಟು ಕಂಸನನ್ನು ವಧೆ ಮಾಡಿದ ಕೃಷ್ಣ ದ್ವಾರಕೆಯಲ್ಲಿ ರಾಜನಾದ. ಅಲ್ಲಿ ಆತ ರಾಜ ವಿಸ್ಮಕನ ಪುತ್ರಿ ರುಕ್ಮಿಣಿಯನ್ನು ಮದುವೆಯಾದ. ರಾಜನಾದ ಬಳಿಕ ಯಾವತ್ತೂ ಕೃಷ್ಣನನ್ನು ಭೇಟಿಯಾಗುವುದಿಲ್ಲವೆಂದು ರಾಧೆ ಹೇಳಿದ್ದಳು. ಗೋಪಾಲಕ ಹಾಗೂ ಸರಳವಾಗಿದ್ದ ಕೃಷ್ಣನನ್ನು ಮಾತ್ರ ತಾನು ಪ್ರೀತಿಸಿದ್ದು, ರಾಜನಾದ ಬಳಿಕ ಕೃಷ್ಣನಿಗೆ ತಾನು ಸರಿಯಾದ ಜೋಡಿಯೂ ಅಲ್ಲ ಎಂದು ರಾಧೆ ಹೇಳುತ್ತಾಳೆ. ಇದರಿಂದಾಗಿಯೇ ಅವರು ಮದುವೆಯಾಗಲಿಲ್ಲ. ಆದರೆ ಅವರ ನಿಷ್ಕಲ್ಮಶ ಪ್ರೀತಿ ಮಾತ್ರ ಇಂದಿಗೂ ಪೂಜ್ಯನೀಯವಾಗಿದೆ ಎಂದು ಇತಿಹಾಸವು ಹೇಳುತ್ತದೆ.
ಪ್ರೀತಿ ಎನ್ನುವುದು ನಿಸ್ವಾರ್ಥ ಮತ್ತು ಸುಂದರ ಭಾವನೆ
ಕೃಷ್ಣ ಕೂಡ ಮದುವೆಯಲ್ಲಿ ನಂಬಿಕೆಯನ್ನು ಇಟ್ಟಿರಲಿಲ್ಲ. ಯಾಕೆಂದರೆ ಮದುವೆಯಾದರೆ ಬಂಧನದಲ್ಲಿದ್ದು, ಕರ್ತವ್ಯ ನಿಭಾಯಿಸಬೇಕಾಗುತ್ತದೆ ಎನ್ನುವುದು ಕೃಷ್ಣನ ಯೋಚನೆ. ಪ್ರೀತಿ ಎನ್ನುವುದು ನಿಸ್ವಾರ್ಥ ಮತ್ತು ಸುಂದರ ಭಾವನೆ. ಅದೇ ಮದುವೆ ಒಂದು ಒಪ್ಪಂದ. ನಿಜವಾದ ಪ್ರೀತಿಯು ಯಾವುದೇ ಅಡೆತಡೆಗಳು ಇಲ್ಲದೆ ಇಬ್ಬರ ಮಧ್ಯೆ ಮೂಡುವುದು. ಇದರ ಮಧ್ಯೆ ಬರುವ ಎಲ್ಲವನ್ನು ಅದು ಬೇರ್ಪಡಿಸುತ್ತದೆ.
ರಾಧೆ ಮತ್ತು ಕೃಷ್ಣನ ಪ್ರೀತಿಯು ಪರಿಶುದ್ಧ ಹಾಗೂ ಸುಂದರವಾಗಿತ್ತು
ಹೌದು, ರಾಧೆ ಮತ್ತು ಕೃಷ್ಣನ ಪ್ರೀತಿಯು ಪರಿಶುದ್ಧ ಹಾಗೂ ಸುಂದರವಾಗಿತ್ತು. ಅವರ ಪ್ರೀತಿಯು ಯಾವುದೇ ಬಾಹ್ಯ ಆಕರ್ಷಣೆಯನ್ನು ಹೊಂದಿರಲಿಲ್ಲ. ಅವರು ಪ್ರೇಮಿಗಳಾಗಿ ಒಂದು ಉನ್ನತ ಮಟ್ಟವನ್ನು ದಾಟಿದ್ದರು. ಆದರೆ ಯಾವತ್ತೂ ಮದುವೆಯಾಗಲಿಲ್ಲ.