Just In
- 46 min ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 3 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 13 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 13 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅ.13ಕ್ಕೆ ದುರ್ಗಾಷ್ಟಮಿ, ಈ ದಿನದ ವಿಶೇಷತೆ ಏನು, ಪೂಜಾ ವಿಧಿಗಳೇನು?
ನವರಾತ್ರಿಯ ಎಂಟನೇ ದಿನವನ್ನು ದುರ್ಗಾಷ್ಟಮಿ ಎಂದು ಆಚರಿಸಲಾಗುವುದು. ಭಕ್ತರಿಗೆ ಈ ದಿನ ತುಂಬಾ ವಿಶೇಷವಾದ ದಿನವಾಗಿದೆ. ಇದನ್ನು ದೇಶದ ವಿವಿಧ ಕಡೆಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುವುದು.
ಒಂಭತ್ತು ದಿನ ನಡೆಯುವ ನವರಾತ್ರಿ ಆಚರಣೆಯಲ್ಲಿ ಭಕ್ತರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ದೇವಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಕೆಲವರು ಈ ದಿನಗಳಲ್ಲಿ ವ್ರತವನ್ನು ಕೂಡ ಆಚರಿಸುತ್ತಾರೆ.
ಈ ವರ್ಷ ಅಷ್ಟಮಿಯನ್ನು ಅಕ್ಟೋಬರ್ 13ರಂದು ಆಚರಿಸಲಾಗುತ್ತದೆ. ಈ ದಿನದ ವಿಶೇಷ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:
ದುರ್ಗಾಷ್ಟಮಿ
ತಿಥಿ
ಪ್ರಾರಂಭ:
ಅಕ್ಟೋಬರ್
12
ರಾತ್ರಿ
9:27ಕ್ಕೆ
ದುರ್ಗಾಷ್ಟಮಿ
ತಿಥಿ
ಮುಕ್ತಾಯ:
ಅಕ್ಟೋಬರ್
13
ರಾತ್ರಿ
08:07ಕ್ಕೆ
ಪೂಜಾ
ಮುಹೂರ್ತ
ಅಕ್ಟೋಬರ್
13
ರಾತ್ರಿ
07:43ರಿಮದ
08:31ರವರೆಗೆ
ದುರ್ಗಾಷ್ಟಮಿ ಮಹತ್ವ
ದುರ್ಗಾಷ್ಟಮಿಯಂದು ಅನೇಕ ಪೂಜಾ ವಿಧಿ ವಿಧಾನಗಳನ್ನು ಆಚರಿಸಲಾಗುವುದು. ಅನೇಕ ಹಿಂದೂ ಕುಟುಂಬಗಳಲ್ಲಿ ಈ ದಿನ ಕನ್ಯಾಪೂಜೆ ಮಾಡಲಾಗುವುದು, ಇದನ್ನು ಕನ್ಯಾ ಬೋಜ್ ಎಂದು ಕೂಡ ಕರೆಯಲಾಗುವುದು. ಈ ದಿನ ಮುಟ್ಟಿನ ಚಕ್ರ ಪ್ರಾರಂಭವಾಗದ 9 ಬಾಲಕಿಯರನ್ನು ಮನೆಗೆ ಆಹ್ವಾನಿಸಿ, ಅವರಿಗೆ ಸ್ವಾದಿಷ್ಟಕರವಾದ ಆಹಾರವನ್ನು ನೀಡಲಾಗುವುದು. ಈ ಬಾಲಕಿಯರನ್ನು ದುರ್ಗೆಯ ಅವತಾರ ಎಂದು ಪೂಜಿಸಲಾಗುವುದು. ಮನೆಗೆ ಆಹ್ವಾನಿಸಿದ ಬಾಲಕಿಯರ ಪಾದಗಳನ್ನು ತೊಳೆದು, ಕೆಂಪು ದಾರವನ್ನು ಕೈಗೆ ಕಟ್ಟಲಾಗುವುದು, ನಂತರ ಅವರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು. ಸಾಮಾನ್ಯವಾಗಿ ವಸ್ತ, ಮೇಕಪ್ ಬಾಕ್ಸ್ ಈ ರೀತಿಯ ವಸ್ತುಗಳನ್ನು ಗಿಪ್ಟ್ ಆಗಿ ನೀಡುತ್ತಾರೆ.
ಕನ್ಯಾಪೂಜೆಯನ್ನು ಮಾಡುವ ಹಿಂದಿರುವ ಕಾರಣ
- ಒಂದು ಹುಡುಗಿಯನ್ನು ಕನ್ಯಾಪೂಜೆ ಮಾಡುವುದರಿಂದ ಐಶ್ವರ್ಯ ಪ್ರಾಪ್ತಿಯಾಗುವುದು
- ಎರಡು ಹುಡುಗಿಯರನ್ನು ಪೂಜಿಸಿದರೆ ಭೋಗ ಮತ್ತು ಮೋಕ್ಷ ಸಿಗುವುದು.
- ಮೂರು ಹುಡುಗಿಯರನ್ನು ಪೂಜಿಸಿದರೆ ಧರ್ಮ, ಅರ್ಥ, ಕಾಮವನ್ನು ಒದಗಿಸುತ್ತದೆ.
- ನಾಲ್ಕು ಹುಡುಗಿಯರನ್ನು ಪೂಜಿಸಿದರೆ ಅಧಿಕಾರ ಲಭಿಸುವುದು.
- ಐದು ಹುಡುಗಿಯರನ್ನು ಪೂಜಿಸಿದರೆ ಜ್ಞಾನ ಹೆಚ್ಚುವುದು.
- ಆರು ಹುಡುಗಿಯರನ್ನು ಪೂಜಿಸಿದರೆ ಆರು ತರದ ವಿಶೇಷ ಸಿದ್ಧಿಗಳು ಲಭಿಸುತ್ತದೆ.
- ಏಳು ಹುಡುಗಿಯರನ್ನು ಪೂಜಿಸಿದರೆ ಆಳುವ ಅಧಿಕಾರ ದೊರೆಯುವುದು.
- ಎಂಟು ಹುಡುಗಿಯರನ್ನು ಪೂಜಿಸಿದರೆ ಸಂಪತ್ತು ಹೆಚ್ಚುವುದು.
- ಒಂಭತ್ತು ಹುಡುಗಿಯರನ್ನು ವೃತ್ತಿಯಲ್ಲಿ ಪ್ರಗತಿ ಸಿಗುವುದು.
ದೇವಿ ಪೂಜೆ
ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ ಈ ದಿನಗಳಲ್ಲಿ ಹಬ್ಬದ ಸಡಗರ ಹೆಚ್ಚಾಗುವುದು ಅದರಲ್ಲೂ ಅಷ್ಟಮಿ ದಿನ ತುಂಬಾ ವಿಶೇಷವಾದ ದಿನವಾಗಿದೆ. ಈ ದಿನ ದುರ್ಗೆಗೆ 108 ದೀಪಗಳನ್ನು ಹಚ್ಚಿ, 108 ತಾವರೆ ಹಾಗೂ ಬಿಲ್ವಾ ಪತ್ರೆ ಎಲೆಗಳನ್ನು ಅರ್ಪಿಸಲಾಗುವುದು.
ಪೌರಾಣಿಕ ಕತೆ
ಪೌರಾಣಿಕ ಕತೆಯ ಪ್ರಕಾರ ದುರ್ಗೆಯ ಮೂರನೇಯ ಕಣ್ಣಿನಿಂದ ಉದ್ಭವವಾಗುವ ಕಾಳಿಗೆ ಯುದ್ಧ ನಿಯಮಗಳನ್ನು ಉಲ್ಲಂಘಿಸುವ ಮಹಿಷಾಸುರ ಕಣ್ಣಿಗೆ ಬೀಳುತ್ತಾನೆ. ಆತನ ಸಂಹಾರ ಮಾಡುತ್ತಾಳೆ.
ಪ್ರಸಾದ
ದುರ್ಗಾಷ್ಟಮಿ ದಿನದಂದು ಬೋಗ್ ಎನ್ನುವ ವಿಶೇಷ ಪ್ರಸಾದವನ್ನು ತಯಾರಿಸಲಾಗುವುದು. ಅವುಗಳನ್ನು ದೊಡ್ಡ ಪಾತ್ರೆಯಲ್ಲಿ ತಯಾರಿಸಿ ದುರ್ಗೆಯ ದರ್ಶನಕ್ಕೆ ಬಂದಿರುವ ಭಕ್ತಾದಿಗಳಿಗೆ ನೀಡಲಾಗುವುದು. ಈ ದಿನ ಚನ್ನಾದಾಲ್, ಪಲಾವ್, ಪನ್ನೀರ್, ಕಿಚಡಿ, ರಾಜ್ಬೋಗ್, ಟೊಮೆಟೊ ಚಟ್ನಿ, ಹಪ್ಪಳ, ಸಲಾಡ್ ಮುಂತಾದ ವಿಶೇಷ ತಿನಿಸುಗಳನ್ನು ನೀಡಲಾಗುವುದು.