Just In
- 33 min ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 1 hr ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 4 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 6 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- News Mallikarjun Kharge: ಕಲಬುರಗಿ ಲೋಕಸಭಾ ಕ್ಷೇತ್ರ; ಅಳಿಯನ ಕಾಳಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಷ್ಠೆ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Movies "ಸದಾ ನನ್ನ ಹಿಂಭಾಗವನ್ನೇ ಜೂಮ್ ಮಾಡ್ತಾರೆ"; ನೋರಾ ಫತೇಹಿ ಆಕ್ರೋಶ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರಮಹಾಲಕ್ಷ್ಮಿ ಹಬ್ಬಕ್ಕೆ, ಪೂಜಾ ಕೋಣೆಯ ಸಿದ್ಧತೆ ಹೀಗಿರಲಿ
ಶ್ರಾವಣ ಮಾಸವೆಂದರೆ ಅದು ಹಬ್ಬಗಳ ಸುಗ್ಗಿಕಾಲವಾಗಿದೆ. ಎಲ್ಲಾ ಹಬ್ಬಕ್ಕೆ ಆರಂಭವನ್ನು ಒದಗಿಸುವ ನಾಗರಪಂಚಮಿ ಮುಗಿದ ಒಡನೆ ವರಮಹಾಲಕ್ಷ್ಮಿ ಬಂದೇ ಬಿಡುತ್ತದೆ. ದಕ್ಷಿಣ ಭಾಗಗಳ ಹಲವೆಡೆ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದು ಮುಖ್ಯವಾಗಿ ಸುಮಂಗಲಿಯರೇ ವ್ರತ ಪೂಜೆಗಳನ್ನು ಮಾಡುತ್ತಾರೆ.
ಈ ಬಾರಿ ಆಗಸ್ಟ್ 12 ರ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬ ಬಂದಿದ್ದು, ಹಬ್ಬದ ಸಮಯದಲ್ಲಿ ವ್ರತವನ್ನು ಆಚರಿಸುವ ಸುಮಂಗಲಿಯರಿಗೆ ದೇವಿ ಕೇಳಿದ್ದನ್ನು ನೀಡುತ್ತಾರೆ ಎಂಬ ನಂಬಿಕೆ ಬೇರೂರಿದೆ. ಹೆಸರಿಗೆ ತಕ್ಕಂತೆ ತಾಯಿ ಕೇಳಿದ್ದನ್ನು ನೀಡುವವರಾಗಿದ್ದಾರೆ. 'ವರಮಹಾಲಕ್ಷ್ಮಿ ವ್ರತದ' ಆಚರಣೆ ಹಾಗೂ ಪೂಜಾ ವಿಧಿವಿಧಾನ
ತಮಿಳುನಾಡಿನಲ್ಲಿ
ವರಮಹಾಲಕ್ಷ್ಮಿ
ಹಬ್ಬವನ್ನು
ತಿಂಗಳ
ಹುಣ್ಣಿಮೆಗೆ
ಆಚರಿಸಿದರೆ
ಮಹಾರಾಷ್ಟ್ರ,
ಕರ್ನಾಟಕ
ಮತ್ತು
ಆಂಧ್ರಪ್ರದೇಶದಲ್ಲಿ
ಶ್ರಾವಣ
ಮಾಸದಲ್ಲಿ
ಆಚರಿಸುತ್ತಾರೆ.
ಇಂದಿನ
ಲೇಖನದಲ್ಲಿ
ದೇವಿಯ
ಪೂಜೆಯನ್ನು
ಮಾಡುವಾಗ
ಯಾವೆಲ್ಲಾ
ಅಂಶಗಳಿಗೆ
ಪ್ರಾಮುಖ್ಯತೆ
ನೀಡಬೇಕು.
ದೇವರ
ಮಂಟಪದ
ಸಿದ್ಧತೆ,
ಪೂಜೆಯನ್ನು
ನಡೆಸುವ
ವಿಧಾನ
ಮೊದಲಾದ
ಬಗೆಯನ್ನು
ಅರಿತುಕೊಳ್ಳೋಣ.....
ಪೂಜಾ ಮಂಟಪ
ನಾಲ್ಕು ಬದಿಗೂ ರಂಗೋಲಿಯನ್ನು ಹಾಕಿ ಪೂಜಾ ಮಂಟಪವನ್ನು ಸಿಂಗರಿಸುತ್ತಾರೆ. ಕಾವಿ ಅಂಚಿನಲ್ಲಿ ಹೃದಯ ಕಮಲ ಅಥವಾ ಐಶ್ವರ್ಯಾ ರಂಗೋಲಿಯನ್ನು ಹಾಕಬಹುದಾಗಿದೆ. ಮಾವಿನ ಎಲೆಗಳನ್ನು ಸಿಂಗರಿಸಲು ಬಳಸಿ
ತೆಂಗಿನ ಮುಖದ ಅಲಂಕಾರ
ತೆಂಗಿನ ನಾರನ್ನು ಜಾಗರೂಕತೆಯಿಂದ ಸುಲಿಯಿರಿ. ಅರಿಶಿನ ಪುಡಿಯನ್ನು ನೀರಿನಲ್ಲಿ ಕಲಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ತೆಂಗಿನ ಕಾಯಿ ಸುತ್ತಲೂ ಈ ಮಿಶ್ರಣವನ್ನು ಹಚ್ಚಿಕೊಳ್ಳಿ ಮತ್ತು ತೆಂಗಿನ ಕಾಯಿಗೆ ಕುಂಕುಮದಿಂದ ಎರಡು ಕಣ್ಣುಗಳನ್ನು ಬಿಡಿಸಿ. ವರಮಹಾಲಕ್ಷ್ಮಿ ಹಬ್ಬದಲ್ಲಿ ಈ ಅಲಂಕಾರವನ್ನು ಪ್ರಮುಖವಾಗಿ ಮಾಡುತ್ತಾರೆ
ಹೂಮಾಲೆ
ಹೂವಿನ ಅಲಂಕಾರವನ್ನು ನಿಮ್ಮ ಪೂಜಾ ಕೊಠಡಿಗೆ ಮಾಡಿಲ್ಲ ಎಂದಾದಲ್ಲಿ ವರಮಹಾಲಕ್ಷ್ಮಿ ಹಬ್ಬದ ಆಚರಣೆ ಕಳೆಗುಂದುವುದು ಖಂಡಿತ. ನಿಮ್ಮ ಪೂಜಾ ಮನೆಯನ್ನು ಇನ್ನಷ್ಟು ಆಕರ್ಷಕವಾಗಿಸಲು ಹೂವಿನ ಅಲಂಕಾರವನ್ನು ಮಾಡಿ
ಎಲ್ಇಡಿ ಲೈಟ್ಸ್
ಅಲಂಕಾರಕ್ಕಾಗಿ ಎಲ್ಇಡಿ ಲೈಟ್ಗಳನ್ನು ಈಗ ಸಾಮಾನ್ಯವಾಗಿ ಬಳಸುತ್ತಾರೆ. ಇದು ಸಂಪೂರ್ಣ ವಾತಾವರಣವನ್ನು ಹೆಚ್ಚು ಆಕರ್ಷಕವನ್ನಾಗಿಸುತ್ತದೆ. ಒಂದೇ ಅಥವಾ ಹಲವು ಬಣ್ಣದ ಲೈಟ್ಗಳನ್ನು ಇದಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ನಿಮ್ಮ ಪೂಜಾ ಮಂಟಪಕ್ಕೆ ಮಾತ್ರವಲ್ಲದೆ ಮನೆಗೂ ಈ ಲೈಟಿಂಗ್ ಅನ್ನು ಬಳಸಿಕೊಳ್ಳಬಹುದಾಗಿದೆ.
ಮೂರ್ತಿ ಅಲಂಕಾರ
ವರಮಹಾಲಕ್ಷ್ಮಿ ಪೂಜೆಯಲ್ಲಿ ಮೂರ್ತಿಗೆ ಅಲಂಕಾರವನ್ನು ನೀವು ಚೆನ್ನಾಗಿ ಮಾಡಬೇಕು. ನಿಮ್ಮ ಮಂಟಪಕ್ಕೆ ಹೊಂದಿಕೊಳ್ಳುವ ಮೂರ್ತಿಯನ್ನು ಆಯ್ಕೆಮಾಡಿ. ಮೂರ್ತಿಯ ಅಲಂಕಾರಕ್ಕೆ ಸಮನಾಗಿ ಮಂಟಪದ ಅಲಂಕಾರ ಕೂಡ ಇರಲಿ.
ದೀಪಗಳ ಅಲಂಕಾರ
ಅಲಂಕಾರಿಕ ದೀಪಗಳನ್ನು ಬಳಸಿ ಹಬ್ಬವನ್ನು ಇನ್ನಷ್ಟು ಶ್ರದ್ಧಾಪೂರ್ವಕವನ್ನಾಗಿ ಮಾಡಬಹುದು. ಮಣ್ಣಿನ ದೀಪಗಳ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ, ಅಂತೆಯೇ ಬೆಳ್ಳಿ ಹಾಗೂ ಎಣ್ಣೆಯ ದೀಪಗಳನ್ನು ಪೂಜೆಗಾಗಿ ಬಳಸಿಕೊಳ್ಳಬಹುದಾಗಿದೆ. ಮರುಬಳಕೆಯನ್ನು ಮಾಡಲು ನೀವು ಬಯಸುತ್ತೀರಿ ಎಂದಾದಲ್ಲಿ ಮುಂದಿನ ವರ್ಷಕ್ಕೂ ಇದನ್ನು ಬಳಕೆ ಮಾಡಬಹುದಾಗಿದೆ. ವರಮಹಾಲಕ್ಷ್ಮಿ ಹಬ್ಬದ ಆಚರಣೆಯಲ್ಲಿ ಇದು ಹೆಚ್ಚು ಮುಖ್ಯವಾದುದು.
ರಂಗೋಲಿ
ಪೂಜೆಯಲ್ಲಿ ರಂಗೋಲಿ ಹೆಚ್ಚು ಪ್ರಾಮುಖ್ಯವಾದುದು. ಸಾಂಪ್ರದಾಯಿಕ ರಂಗೋಲಿ ವಿನ್ಯಾಸವನ್ನು ಪ್ರಯತ್ನಿಸುವುದರ ಜೊತೆಗೆ, ಹೊಸ ಮತ್ತು ವಿನ್ಯಾಸದ ರಂಗೋಲಿಯನ್ನು ನೀವು ಹಾಕಬಹುದಾಗಿದೆ. ಎಣ್ಣೆಯ ದೀಪಗಳನ್ನು ಇರಿಸುವುದರ ಮೂಲಕ ರಂಗೋಲಿ ವಿನ್ಯಾಸಗಳನ್ನು ಅಲಂಕರಿಸಿ.ನಿಮ್ಮ ಹಬ್ಬವನ್ನು ಇನ್ನಷ್ಟು ನೆನಪಿನಲ್ಲುಳಿಯುವಂತೆ ಮಾಡಲು ಈ ಅಲಂಕಾರದ ವಿಧಾನಗಳನ್ನು ಅನುಸರಿಸಿ. ಇದು ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸುವುದು ಖಂಡಿತ.