Just In
- 12 min ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
- 1 hr ago ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- 3 hrs ago ಹೌಸ್ವೈಫ್ ಆಗಿರುವ ಈ ಮಹಿಳೆ ದಿನದಲ್ಲಿ 2 ಗಂಟೆ ಕೆಲಸ ಮಾಡಿ ಲಕ್ಷ ಗಳಿಸುತ್ತಿದ್ದಾರಂತೆ!
- 4 hrs ago ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
Don't Miss
- Sports PBKS vs MI: ಐಪಿಎಲ್ನಲ್ಲಿ ಈ ಇತಿಹಾಸ ನಿರ್ಮಿಸಿದ 2ನೇ ಆಟಗಾರ ರೋಹಿತ್ ಶರ್ಮಾ
- News ಸಿಎಂ ಸಿದ್ದರಾಮಯ್ಯಗೆ ಡಾ.ಕೆ.ಸುಧಾಕರ್ ಸವಾಲು!
- Movies ಕಬೀರ್ ಸಿಂಗ್ ನನ್ನ ಬದುಕಿನ ಬಹುದೊಡ್ಡ ತಪ್ಪು ಎಂದ ನಟ ; ಕೆರಳಿ ಕೆಂಡವಾದ ಸಂದೀಪ್ ರೆಡ್ಡಿ ವಂಗಾ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2019ನೇ ಸಾಲಿನ ವರಮಹಾಲಕ್ಷ್ಮಿ: ಪೂಜಾ ದಿನಾಂಕ, ಸಮಯ ಮತ್ತು ಆಚರಣೆಗಳು
ಕ್ಷೀರಸಮುದ್ರ ರಾಜನ ಮಗಳು, ಶ್ರೀರಂಗಧಾಮದ ಒಡತಿ, ಜಗತ್ತಿಗೆ ದಾರೀದೀಪ, ಮೂರು ಲೋಕಗಳಿಗೂ ಮಾತೆ, ಶ್ರೀ ಹರಿಯ ಪ್ರಿಯೆಯೇ ವರಮಹಾ ಲಕ್ಷ್ಮಿ. ಸಂಪತ್ತನ್ನು ದಯಪಾಲಿಸುವ ತಾಯಿ ಲಕ್ಷ್ಮಿ ದೇವಿ. ಈ ಐಶ್ವರ್ಯ ತಾಯಿ ಒಲಿದರೆ ಜೀವನವದಲ್ಲಿ ಸಾಕಷ್ಟು ಸಂಪತ್ತು ಹಾಗೂ ಹಣವನ್ನು ಕಾಣುತ್ತೇವೆ. ಅದೇ ಲಕ್ಷ್ಮಿ ಒಲಿಯದೆ ಹೋದರೆ ಜೀವನದಲ್ಲಿ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸುತ್ತೇವೆ. ಜೀವನದಲ್ಲಿ ಹಣವನ್ನು ಕಾಣದೆ ಬಡತನಕ್ಕೆ ಒಳಗಾಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಲಕ್ಷ್ಮಿ ದೇವಿ ಸಂತುಷ್ಟಳಾಗುವ ಹಾಗೆ ಪೂಜೆಯನ್ನು ಮಾಡಲಾಗುತ್ತದೆ. ಆಕೆಯ ಸಂಬಂಧಿಸಿದ ಮಂತ್ರ ಹಾಗೂ ಹಾಡುಗಳನ್ನು ಹೇಳುವುದರ ಮೂಲಕ ವ್ರತ ಮತ್ತು ಪೂಜೆಯನ್ನು ಕೈಗೊಳ್ಳಲಾಗುವುದು.
ಶ್ರಾವಣ ಮಾಸದ ಎರಡನೇ ಶುಕ್ರವಾರವನ್ನು ವರಮಹಾಲಕ್ಷ್ಮಿ ಪೂಜೆಯನ್ನು ಕೈಗೊಳ್ಳಲಾಗುವುದು. ಕೆಲವರು ಪ್ರತಿ ಶ್ರಾವಣ ಮಾಸದ ಶುಕ್ರವಾರದಂದು ಉಪವಾಸವನ್ನು ಕೈಗೊಳ್ಳುವುದರ ಮೂಲಕ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ದೇವಿಯನ್ನು ಸಂತುಷ್ಟಗೊಳಿಸಿದರೆ ಲಕ್ಷ್ಮಿ ದೇವಿಯು ಬಯಸಿದ ಸಂಪತ್ತನ್ನು ಕರುಣಿಸುತ್ತಾಳೆ ಎನ್ನುವ ನಂಬಿಕೆಯಿದೆ. ಪ್ರತಿ ವರ್ಷ ಈ ಹಬ್ಬವನ್ನು ಅನುಸರಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುವುದು. ಜೊತೆಗೆ ಮನೆ ಮಂದಿಯ ನಡುವೆಯೂ ಸಾಕಷ್ಟು ಪ್ರೀತಿ-ವಿಶ್ವಾಸ ಮೂಡುವುದು ಎಂದು ಹೇಳಲಾಗುವುದು.
2019ರ ವರಮಹಾಲಕ್ಷ್ಮಿ ವ್ರತದ ಪ್ರಮುಖ ದಿನಗಳು ಮತ್ತು ಮುಹೂರ್ತದ ಸಮಯಗಳು:
2019
ಆಗಸ್ಟ್
9-
ಸಿಂಹ
ಲಗ್ನ,
ಮುಂಜಾನೆಯ
ಮುಹೂರ್ತ:
ಮುಂಜಾನೆ
6:27
ರಿಂದ
ಮುಂಜಾನೆ
8:44ರ
ವರೆಗೆ.
2019
ಆಗಸ್ಟ್
9-
ವೃಶ್ಚಿಕ
ಲಗ್ನ,
ಮಧ್ಯಾಹ್ನದ
ಮುಹೂರ್ತ:
ಮಧ್ಯಾಹ್ನ
1.20
ರಿಂದ
ಮಧ್ಯಾಹ್ನ
3:39ರ
ವರೆಗೆ.
2019
ಆಗಸ್ಟ್
9-
ಕುಂಭ
ಲಗ್ನ,
ಸಂಜೆಯ
ಮುಹೂರ್ತ:
ಸಾಯಂಕಾಲ
7:25
ರಿಂದ
8:52ರ
ವರೆಗೆ.
2019
ಆಗಸ್ಟ್
11-
ವೃಷಭ
ಲಗ್ನ,
ಮಧ್ಯರಾತ್ರಿ
ಮುಹೂರ್ತ:
ಮಧ್ಯರಾತ್ರಿ
11.53
ರಿಂದ
ಮುಂಜಾನೆ
1:48ರವರೆಗೆ.
ವರಮಹಾಲಕ್ಷ್ಮಿ ಪೂಜೆ ಮಾಡುವಾಗ ಜಪಿಸಬೇಕಾದ ಮಂತ್ರ:
ಲಕ್ಷ್ಮಿ ದೇವಿಗೆ ಆರಾಧನೆ ಮಾಡುವಾಗ ಭಕ್ತಿಯಿಂದ ಕೆಲವು ಮಂತ್ರ ಹಾಗೂ ಹಾಡುಗಳನ್ನು ಜಪಿsಬೇಕು. ಅದರಿಂದ ಲಕ್ಷ್ಮಿ ದೇವಿಯು ಸಂತೋಷಗೊಳ್ಳುತ್ತಾಳೆ.
1.
"ಓಂ
ಹ್ರೀಮ್
ಶ್ರೀಮ್
ಲಕ್ಷ್ಮಿಬ್ಯೋ
ನಮಃ"
2.
ಲಕ್ಷ್ಮೀಂ
ಕ್ಷೀರಸಮುದ್ರರಾಜತನಯಾಂ
ಶ್ರೀರಂಗಧಾಮೇಶ್ವರೀಂ|
ದಾಸೀಭೂತಸಮಸ್ತದೇವವನಿತಾಂ
ಲೋಕೈಕದೀಪಾಂಕುರಾಮ್||
ಶ್ರೀಮನ್ಮಂದಕಟಾಕ್ಷಲಬ್ಧವಿಭವಬ್ರಹ್ಮೇಂದ್ರಗಂಗಾಧರಾಂ|
ತ್ವಾಂ
ತ್ರೈಲೋಕ್ಯಕುಟುಂಬಿನೀಂ
ಸರಸಿಜಾಂ
ವಂದೇ
ಮುಕುಂದಪ್ರಿಯಾಮ್||"
3.
"ನಮಸ್ತೇsಸ್ತು
ಮಹಾಮಾಯೇ
ಶ್ರೀಪೀಠೇ
ಸುರಪೂಜಿತೇ|
ಶಂಖಚಕ್ರಗದಾಹಸ್ತೇ
ಮಹಾಲಕ್ಷ್ಮಿ!
ನಮೋsಸ್ತು
ತೇ||"
4.
"
ಯಾ
ರಕ್ತಾಂಬುಜವಾಸಿನೀ
ವಿಲಸಿನೀ
ಚಂಡಾಶು
ತೇಜಸ್ವಿನೀ|
ಆರಕತಾ
ರುಧಿರಾಂಬರಾ
ಹರಿಸಖೀ
ಯಾ
ಶ್ರೀ
ಮನೋಹ್ಲಾದಿನೀ||
ಯಾ
ರತ್ನಾಕರಮಂಥನಾತ್ಪ್ರಘಟಿತಾ
ವಿಷ್ಣೋಶ್ಚ
ಯಾ
ಗೇಹಿನೀ|
ಸಾ
ಮಾಂ
ಪಾತು
ಮನೋರಮಾ
ಭಗವತೀ
ಲಕ್ಷ್ಮೀಶ್ಚ
ಪದ್ಮಾಲಯಾ||
"
ವರಮಹಾ ಲಕ್ಷ್ಮಿ ವ್ರತದ ಕಥೆ:
ವರಮಹಾ ಲಕ್ಷ್ಮಿ ವ್ರತವನ್ನು ಪರಮೇಶ್ವರನು ತನ್ನ ಪತ್ನಿ ಪಾರ್ವತಿಗೆ ಕುಟುಂಬದಲ್ಲಿ ಸಮೃದ್ಧಿ ಹಾಗೂ ಸಂತೋಷವನ್ನು ಪಡೆದುಕೊಳ್ಳಲು ಹೇಳಿದ ಅಥವಾ ಆರಂಭಿಸಿದ ವ್ರತ ಆಚರಣೆ ಎಂದು ಸಹ ಹೇಳಲಾಗುವುದು. ಅದನ್ನು ಕೇಳಿದ ಪಾರ್ವತಿ ದೇವಿಯು ತನ್ನ ಅಚ್ಚು ಮೆಚ್ಚಿನ ಪತಿಯ ಮಾತಿನಂತೆ ಕುಟುಂಬದ ಏಳಿಗೆಗಾಗಿ ಮತ್ತು ಸಂತೋಷಕ್ಕಾಗಿ ಉಪವಾಸ ವ್ರತವನ್ನು ಕೈಗೊಳ್ಳುವುದರ ಮೂಲಕ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿದಳು ಎನ್ನಲಾಗುತ್ತದೆ. ಅಂದಿನಿಂದಲೇ ದಕ್ಷಿಣ ಭಾರತದಲ್ಲಿ ಮಹಿಳೆಯರು ಶ್ರಾವಣ ಶುಕ್ಲಪಕ್ಷದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾ ಬಂದರು ಎಂದು ಸಹ ಹೇಳಲಾಗುತ್ತದೆ. ಪ್ರತಿಯೊಬ್ಬ ಮಹಿಳೆಯು ತನ್ನ ಕುಟುಂಬ, ಮಕ್ಕಳು ಹಾಗೂ ಪತಿಯ ಆರೋಗ್ಯವು ಉತ್ತಮವಾಗಲಿ, ಸಕಲ ಐಶ್ವರ್ಯವು ಫಲಿಸಲಿ ಎಂದು ಪ್ರಾರ್ಥಿಸುತ್ತಾ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾರೆ.
ವರಮಹಾ ಲಕ್ಷ್ಮಿ ವ್ರತದ ಮಹತ್ವ:
ಈ ವರಮಹಾ ಲಕ್ಷ್ಮಿ ವ್ರತವು ಈ ವರ್ಷ ಆಗಸ್ಟ್ 9ರಂದು ಬಂದಿದೆ. ಲಕ್ಷ್ಮಿ ದೇವಿಗೆ ಅರ್ಪಿತವಾದ ಈ ಹಬ್ಬವನ್ನು ಸಂಪತ್ತು, ಸಮೃದ್ಧಿ ಹಾಗೂ ಕುಟುಂಬದ ಏಳಿಗೆಗಾಗಿ ಕೈಗೊಳ್ಳಲಾಗುವುದು. ಶ್ರಾವಣ ಶುಕ್ರವಾರದಂದು ದೇವಿಯ ಆರಾಧನೆ ಮಾಡಿದರೆ ಭಕ್ತರ ಎಲ್ಲಾ ಬಯಕೆಗಳು ಈಡೇರುವುದು ಎನ್ನುವ ನಂಬಿಕೆಯಿದೆ. ಜೊತೆಗೆ ಮಹಿಳೆಯರು ಪರಸ್ಪರ ಅರಿಶಿನ ಕುಂಕುಮ ಕೊಡುವುದರಿಂದ ಸೌಭಾಗ್ಯ ವೃದ್ಧಿಯಾಗುವುದು ಎಂದು ಹೇಳಲಾಗುವುದು.
ವರಮಹಾ ಲಕ್ಷ್ಮಿಯ ವ್ರತದ ಇನ್ನೊಂದು ಕಥೆ:
ಪೂರ್ವಕಾಲದಲ್ಲಿ ಸತ್ಯಲೋಕವಾಸಿಗಳಾದ ಋಷಿಶ್ರೇಷ್ಠರೆಲ್ಲರೂ ನೈಮಿಶಾರಣ್ಯದಲ್ಲಿ ಒಟ್ಟಾಗಿ ಸೇರಿ ಪುರಾಣಿಕ ಶಿಖಾಮಣಿಯಾದ ಸೂತಮಹರ್ಷಿಯನ್ನು ಕುರಿತು- 'ಎಲೈ ಪುರಾಣಪುರುಷೋತ್ತಮನೆ ! ತ್ರಿಕಾಲಜ್ಞಾನಿಯಾದ ನೀನು ನಮ್ಮಲ್ಲಿ ಅನುಗ್ರಹ ಮಾಡುವುದಾದರೆ, ಲೋಕದಲ್ಲಿ ಸರ್ವ ಸೌಭಾಗ್ಯಗಳನ್ನೂ ಕೊಡುವ ಉತ್ತಮವಾದ ವ್ರತವನ್ನು ಹೇಳು" ಎಂದು ಕೇಳಿದರು. ಸಂತುಷ್ಟನಾದ ಸೂತಮಹಾಮುನಿ ಆಗ ಪುಂಖಾನುಪುಂಖ ಹೇಳಿದ ವಿಷಯವಿದು...
ಎಲೈ ಋಷಿಗಳಿರಾ ! ಕೇಳಿ, ಲೋಕದಲ್ಲಿ ಭಕ್ತಿಯಿಂದ ಪೂಜಿಸುವವರಿಗೆ ಸಕಲ ಇಷ್ಟಾರ್ಥಗಳನ್ನು ಕೊಡುವ ಅತ್ಯುತ್ತಮವಾದ ವ್ರತವೊಂದುಂಟು. ಅವರ ವಿವರವನ್ನು ನಿಮಗೋಸ್ಕರ ಹೇಳುವೆನು ಕೇಳಿ- ಮನೋಹರವಾದ ಶೃಂಗಗಳಿಂದ ಒಪ್ಪುತ್ತಿರುವ ಕೈಲಾಸಪರ್ವತವು ದೇವನದಿಗಳಿಂದ ಪೂರ್ಣವಾಗಿ ಫಲಭರಿತವಾದ ನಾನಾಬಗೆಯ ವೃಕ್ಷಸಮೂಹದಿಂದ ಕೂಡಿ ಕಾಮಧೇನು ಕಲ್ಪವೃಕ್ಷ ಸೇವಿತಮಾಗಿ ಸಕಲ ಸುಖಗಳಿಗೂ ಆವಾಸಸ್ಥಾನವಾಗಿರುವುದು. ಆದ ಕಾರಣ ಯಕ್ಷರಾಕ್ಷಸ ಗರುಡ ಗಂಧರ್ವ ದೇವಮಾನುಷಾದಿಗಳು ತಮ್ಮ ಪೂರ್ವ ಪುಣ್ಯಾನುಸಾರ ಸೇರಿ ಅಲ್ಲಿಗೆ ಒಡೆಯನಾದ ಪಾರ್ವತೀಶ್ವರನಿಗೆ ಸೇವೆ ಸಲ್ಲಿಸುತ್ತಿರುವರು.
ಒಂದಾನೊಂದು ಕಾಲದಲ್ಲಿ ಹರ್ಷಯುಕ್ತನಾಗಿ ದೇವದೇವನಾದ ಪರಮೇಶ್ವರನು ಪಾರ್ವತಿಯಾಡನೆ ಸಂತೋಷದಿಂದ ಕುಳಿತಿರುವಾಗ ಲೋಕಾನುಗ್ರಹಾರ್ಥವಾಗಿ ಜಗನ್ಮಾತೆಯಾದ ಪಾರ್ವತಿಯು ಪರಮೇಶ್ವರನನ್ನು ಕುರಿತು, 'ಎಲೈ ಮಹಾದೇವನೆ ! ಪ್ರಪಂಚದಲ್ಲಿ ಸಕಲ ಸುಖಗಳನ್ನು ಕೊಟ್ಟು ಭಕ್ತರ ಕಷ್ಟವನ್ನು ಪರಿಹರಿಸಿ ಸೌಭಾಗ್ಯ ಸಂತೋಷಗಳನ್ನು ಉಂಟುಮಾಡುವ ವ್ರತವಾವುದು? ಅದನ್ನು ನನಗೆ ಹೇಳು" ಎಂದು ಕೇಳಿದಳು.
ಆಗ ಪರಮೇಶ್ವರನು- 'ಎಲೌ ಪಾರ್ವತಿಯೆ ! ಕೇಳು. ಸರ್ವ ಸಂಪತ್ಪ್ರದವಾದ ಪುತ್ರಪೌತ್ರದಾಯಕವಾದ ಸನ್ಮಂಗಳ ಸಂತಾನಕರವಾದ ವರಲಕ್ಷ್ಮೀವ್ರತವೆಂಬುದೊಂದುಂಟು. ಈ ವ್ರತವನ್ನು ಭಕ್ತಿ ಸಂಪನ್ನರಾದ ಹೆಂಗಸರಾಗಲಿ, ಗಂಡಸರಾಗಲಿ, ಮಕ್ಕಳಾಗಲಿ ಮಾಡಬಹುದು. ಈ ವ್ರತವನ್ನು ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಮಾಡಬೇಕು" ಎಂದನು.
ಆಗ ಆನಂದತುಂದಿಲಳಾದ ಪಾರ್ವತಿ, 'ಸ್ವಾಮಿ ! ಆ ವ್ರತದ ನಿಯಮವೇನು? ಅದನ್ನು ಹೇಗೆ ಮಾಡಬೇಕು? ಆ ವ್ರತಕ್ಕೆ ಅಧಿದೇವತೆ ಯಾರು?" ಎಂದು ಕೇಳಿದಳು. ಆಗ ಪರಮೇಶ್ವರನು, 'ಆ ವ್ರತಕ್ಕೆ ಅಧಿದೇವತೆ ಮಹಾಲಕ್ಷ್ಮಿ. ಇದನ್ನು ಶ್ರಾವಣಮಾಸದಲ್ಲಿ ಪೌರ್ಣಿಮೆ ಸಮೀಪಸ್ಥವಾದ ಭೃಗುವಾರದಲ್ಲಿ ಮಾಡಬೇಕು. ಹಾಗೆ ಮಾಡಿದ ಭಕ್ತರ ಕೋರಿಕೆಗಳೆಲ್ಲ ಕೈಗೂಡಿ ಕಷ್ಟ ಕಾಯಕಗಳು ನಾಶವಾಗುವುವು. ಇದು ಸತ್ಯ. ಈ ವಿಷಯದಲ್ಲಿ ಪ್ರಸಿದ್ಧವಾದ ಒಂದು ಕಥೆಯುಂಟು. ಅದನ್ನು ನಿನಗೋಸ್ಕರವಾಗಿ ವಿಸ್ತರಿಸಿ ಹೇಳುವೆನು, ಕೇಳು" ಎಂದು ಕಥೆಯನ್ನು ಹೇಳಲು ಅನುವಾದನು...
ಪೂರ್ವ ಕಾಲದಲ್ಲಿ ಮಹಾ ವೈಭವಯುಕ್ತವಾದ ವಿದರ್ಭದೇಶಕ್ಕೆ ರಾಜಧಾನಿಯಾದ ಕುಂಡಿನನಗರದಲ್ಲಿ ದರಿದ್ರಳಾದರೂ ಸದಾಚಾರ ಸಂಪನ್ನಳಾದ, ಪತಿ ಶುಶ್ರೂಷೆಯೆ ಮುಖ್ಯವೆಂದು ತಿಳಿದು ಸದಾ ಸಂತೋಷಚಿತ್ತಳಾಗಿ ಪತಿಯ ಮನಸ್ಸನ್ನು ನೋಯಿಸದೆ ಸದ್ವರ್ತನೆ ಉಳ್ಳವಳಾಗಿದ್ದ ಚಾರುಮತಿ ಎಂಬ ಸ್ತ್ರೀ ಇದ್ದಳು. ಇವಳ ಸದಾಚಾರ ಸಂಪನ್ನತೆಗೆ ಮೆಚ್ಚಿ ಕರುಣಾಳುವಾದ ಮಹಾಲಕ್ಷ್ಮಿಯು, ಒಂದು ದಿನ ಚಾರುಮತಿಯು ಮಲಗಿ ನಿದ್ರಿಸುತ್ತಿರುವಾಗ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಬಂದು ಹೇಳಿದಳು- 'ಎಲೌ ಪತಿವ್ರತೆಯಾದ ಚಾರುಮತಿಯೆ ! ನಿನ್ನ ಗುಣಶೀಲಗಳಿಗೆ ಮೆಚ್ಚಿ ನಿನ್ನ ಪೂರ್ವ ಪುಣ್ಯಾನುಸಾರವಾಗಿ ನಿನ್ನಲ್ಲಿ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮಿ ನಾನು. ಈಗ ನಾನು ಹೇಳುವ ವಿಷಯವನ್ನು ಗ್ರಹಿಸಿಕೊಂಡು ನೀನು ಆಚರಿಸಿದರೆ ಅದರಿಂದ ನಿನಗೆ ಮಹಾಪ್ರಯೋಜನ ಉಂಟಾಗುವುದು. ನಿನ್ನ ದಾರಿದ್ರ್ಯವು ನಾಶವಾಗಿ ನಿನಗೆ ಅಷ್ಟೈಶ್ವರ್ಯವು ಪ್ರಾಪ್ತಿಯಾಗುವುದು. ಆದ ಕಾರಣ ಶ್ರಾವಣ ಮಾಸದಲ್ಲಿ ಬರುವ ಎರಡನೆಯ ಶುಕ್ರವಾರದ ದಿನ ಪ್ರದೋಷ ಸಮಯಕ್ಕೆ ಸರಿಯಾಗಿ ವಿಧಿವತ್ತಾಗಿ ನನ್ನ ಪೂಜೆಯನ್ನು ಮಾಡಿದರೆ ನಾನು ಅವರಿಗೆ ಸಕಲ ಭೋಗಭಾಗ್ಯಗಳನ್ನು ಕೊಡುವೆನು. ಯಾರಿಗೆ ಪುಣ್ಯ ಸಂಪರ್ಕವಿರುವುದೊ, ಅಂಥವರಿಗೆ ಈ ವ್ರತದಲ್ಲಿ ಭಕ್ತಿ ಹುಟ್ಟುವುದಲ್ಲದೆ ಅನ್ಯರಿಗೆಂದಿಗೂ ಹುಟ್ಟಲಾರದು. ಇಹಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುವರೊ ಅವರೇ ಧನ್ಯರು ! ಅವರೇ ಶೂರರು ! ಅವರೇ ಪುಣ್ಯಶಾಲಿಗಳು, ಅವರೇ ಮಹಾತ್ಮರು, ಸಾಹಸಿಗಳು. ಅವರೇ ಪಂಡಿತರು, ಅಂಥವರೇ ಸ್ತೋತ್ರಾರ್ಹರು, ಬಹಳವಾಗಿ ಹೇಳುವುದೇನು? ಅವರೇ ಸರ್ವೋತ್ತಮರು. ಯಾರು ನನ್ನ ಕಟಾಕ್ಷಕ್ಕೆ ಬಾಹಿರರಾಗಿರುವರೊ ! ಅವರ ಬಾಳು ಅಜಗಳಸ್ತನದಂತೆ ವ್ಯರ್ಥವೇ ಸರಿ. ಆದ ಕಾರಣ ನೀನು ಈ ವ್ರತವನ್ನು ಮಾಡಿ ಧನ್ಯಳಾಗು". ಹೀಗೆ ನಿದ್ರೆಯಲ್ಲಿ ಉಪದೇಶಿಸಿ ಮಹಾಲಕ್ಷ್ಮಿಯು ಕಣ್ಮರೆಯಾದಳು.
ಆಗ ಚಾರುಮತಿಯು ಭ್ರಾಂತಳಾಗಿ ನಿದ್ರೆಯಿಂದೆದ್ದು ನಡೆದ ಸಂಗತಿಯನ್ನೆಲ್ಲ ತನ್ನವರಿಗೆ ಹೇಳಿ ಅವರೊಡನೆ ಆನಂದಿಸುತ್ತ ಕೆಲವು ದಿವಸಗಳನ್ನು ಕಳೆಯಲು ಶ್ರಾವಣಮಾಸದ ಎರಡನೆಯ ಶುಕ್ರವಾರ ಬಂದಿತು. ಆ ದಿನ ಭಕ್ತಿವಂತರಾಗಿ ಶ್ರದ್ಧೆಯಿಂದ ಕಲ್ಪೋಕ್ತಪ್ರಕಾರವಾಗಿ ಬಹು ಜನ ಭಕ್ತರು ವರಮಹಾಲಕ್ಷ್ಮಿಯನ್ನು ಪೂಜಿಸಿ ಸಂತೋಷದಿಂದ ಕೋರಿಕೆಗಳನ್ನು ಕೈಗೂಡಿಸಿಕೊಂಡು ಸುಖದಿಂದ ಬಾಳುತ್ತಿದ್ದರು.
ಇತ್ತ ದರಿದ್ರಳಾದ ಚಾರುಮತಿಯು ನಿಯಮದಿಂದ ಈ ವ್ರತವನ್ನು ಮಾಡಿ ವರಲಕ್ಷ್ಮಿಯ ಕಟಾಕ್ಷದಿಂದ ಅಷ್ಟೈಶ್ವರ್ಯವನ್ನೂ ಪಡೆದಳು. ಪುತ್ರಪೌತ್ರಾದಿಗಳಿಂದ ಕೂಡಿ, ಸುಖವನ್ನು ಅನುಭವಿಸುತ್ತ ಬಡವರಿಗೆ ಅನ್ನದಾನ ಮಾಡಿ, ಬಂಧುವರ್ಗದವರನ್ನು ಪ್ರೀತಿಯಿಂದ ಕಾಪಾಡುತ್ತ ಇಹಲೋಕದಲ್ಲಿ ಅನಂತವಾದ ಅಪಾರಸೌಖ್ಯ ಅನುಭವಿಸಿ, ಪರಲೋಕದಲ್ಲಿ ಶ್ರೇಷ್ಠವಾದ ಪತಿಸಾಯುಜ್ಯವನ್ನು ಪಡೆದಳು. ಆದ ಕಾರಣ ಈ ಲೋಕದಲ್ಲಿ ಯಾರು ಭಕ್ತಿಭಾವದಿಂದ ಈ ವ್ರತವನ್ನು ಆಚರಿಸುವರೋ ಅಂಥವರು ಅಖಂಡವಾದ ಐಶ್ವರ್ಯ ಪಡೆದು, ವರಲಕ್ಷ್ಮಿಯ ಪ್ರಸಾದದಿಂದ ಭೋಗಭಾಗ್ಯಗಳನ್ನು ಅನುಭವಿಸುವರು.
- ಪರಮೇಶ್ವರ ಕಥೆಯನ್ನು ಹೇಳಿ ಮುಗಿಸಲು, ಪಾರ್ವತಿಯು, 'ಎಲೈ ದೇವದೇವನೆ ! ನನ್ನಲ್ಲಿ ನಿನಗೆ ದಯೆಯುಂಟಾದರೆ ಈ ವಿಧಾನವನ್ನು ವಿವರವಾಗಿ ಹೇಳಬೇಕು" ಎಂದು ಕೇಳಿಕೊಂಡಳು. ಆಗ ಪರಮೇಶ್ವರನು ಪೂಜಾ ವಿಧಾನಗಳನ್ನು ಹೀಗೆ ವಿವರಿಸಿದನು-
'ಕೇಳೌ ದೇವಿಯೆ ! ಕೇವಲ ಪುಣ್ಯಪ್ರದವಾದ ಶ್ರಾವಣಮಾಸದ ಎರಡನೆಯ ಶುಕ್ರವಾರದ ದಿನ ಭಕ್ತಿಯುಳ್ಳ ಸ್ತ್ರೀಯರಾಗಲಿ, ಪುರುಷರಾಗಲಿ ಅಭ್ಯಂಜನವನ್ನು ಮಾಡಿಕೊಂಡು ಮಂಗಳಸ್ನಾನಾನಂತರ ಶುಭವಸ್ತ್ರಗಳನ್ನು ಧರಿಸಬೇಕು. ಮನೆಯಲ್ಲಿ ರಂಗವಲ್ಯಾದಿಗಳಿಂದ ಅಲಂಕೃತವಾದ ಶುದ್ಧ ಪ್ರದೇಶದಲ್ಲಿ ಮನೋಹರವಾದ ಮಂಟಪವನ್ನು ನಿರ್ಮಿಸಬೇಕು. ಅದರ ಮಧ್ಯದಲ್ಲಿ ಪಂಚವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಮಾವಿನ ಚಿಗುರುಗಳಿಂದ ಕೂಡಿದ ಕಲಶವನ್ನು ಇಟ್ಟು ಪ್ರಾಣಪ್ರತಿಷ್ಠಾಪನಪುರಸ್ಸರವಾಗಿ ವರಮಹಾಲಕ್ಷ್ಮಿಯನ್ನು ಪೂಜಿಸಬೇಕು. ಪದ್ಮಾಸನೆ, ಪದ್ಮಊರು, ಪದ್ಮಾಕ್ಷಿ, ಪದ್ಮ ಸಂಭವೆ ಎಂಬ ಮಂತ್ರ ಪೂರ್ವಕವಾಗಿ ಷೋಡಶೋಪಚಾರ ಪೂಜೆಯಿಂದ ದೇವಿಯನ್ನು ತೃಪ್ತಿಪಡಿಸಿ, ಯೋಗ್ಯನಾದ ಬ್ರಾಹ್ಮಣನಿಗೆ ಉಪಾಯನ ದಾನವನ್ನು ಕೊಡಬೇಕು. ಸುವಾಸಿನಿಯರನ್ನು ಸಮಾರಾಧನೆ ಸುಗಂಧ ತಾಂಬೂಲಗಳಿಂದ ತೃಪ್ತಿಪಡಿಸಬೇಕು. ಅನಂತರ ಭಕ್ತಿಯುಕ್ತರಾದ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ, ಭೂರಿದಕ್ಷಿಣೆಗಳನ್ನು ಕೊಟ್ಟು ಈ ಕಥೆಯನ್ನು ಕೇಳಬೇಕು".
ಸೂತಪುರಾಣಿಕನು ಶೌನಕಾದಿ ಋಷಿಗಳಿಗೆ ಇಷ್ಟೆಲ್ಲಾ ಹೇಳಿದಾಗ, ಋಷಿಗಳು ಸಂತೋಷ ಭರಿತರಾದರು. ಇಂಥ ವರ ಮಹಾಲಕ್ಷ್ಮಿ ವ್ರತವನ್ನು ಯಾರು ಮಾಡುವರೊ, ಈ ಕಥೆಯನ್ನು ಯಾರು ಕೇಳುವರೊ ಅವರಿಗೆ ದಾರಿದ್ರ್ಯ ದುಃಖಾದಿಗಳು ನಾಶವಾಗಿ ಪುತ್ರಪೌತ್ರಾದಿ ಸಂಪತ್ತಿಯಿಂದ ಸಕಲ ಭಾಗ್ಯಗಳೂ ಕೈಗೂಡುತ್ತವೆ.
ವರಮಹಾ ಲಕ್ಷ್ಮಿಯ ವ್ರತದ ಆಚರಣೆಗಳು ಮತ್ತು ಕಾರ್ಯವಿಧಾನಗಳು:
ಪುರುಷರು ಮತ್ತು ಮಹಿಳೆಯರು ವ್ರತವನ್ನು ನಿರ್ವಹಿಸಬಹುದಾದರೂ, ಸಾಮಾನ್ಯವಾಗಿ ಕುಟುಂಬದ ಮಹಿಳೆಯರು ಅವರ ಕುಟುಂಬ ಸದಸ್ಯರ ಯೋಗಕ್ಷೇಮಕ್ಕಾಗಿ ಆಶೀರ್ವಾದ ಪಡೆಯುವ ಉಪವಾಸವನ್ನು ಆಚರಿಸುತ್ತಾರೆ.
1.
ಈ
ಶುಭ
ದಿನದಂದು
ಮಹಿಳೆಯರು
ಬೇಗನೆ
ಎದ್ದು,
ಆಚರಣೆಯ
ಉಪವಾಸವನ್ನು
ಆಚರಿಸುತ್ತಾರೆ
ಮತ್ತು
ವರಲಕ್ಷ್ಮಿ
ಪೂಜೆಯನ್ನು
ಮಾಡುತ್ತಾರೆ.
ಇದರಲ್ಲಿ
ಅವರು
ದೇವಿಗೆ
ತಾಜಾ
ಸಿಹಿತಿಂಡಿಗಳು
ಮತ್ತು
ಹೂವುಗಳನ್ನು
ಅರ್ಪಿಸುತ್ತಾರೆ.
2.
ವರಲಕ್ಷ್ಮಿ
ಪೂಜೆಯನ್ನು
ಆಚರಿಸುವ
ಮಹಿಳೆಯರು
ಕೆಲವು
ಆಹಾರಗಳನ್ನು
ಸೇವಿಸುವುದನ್ನು
ತ್ಯಜಿಸುತ್ತಾರೆ.
ಅದು
ಪ್ರದೇಶದಿಂದ
ಪ್ರದೇಶಕ್ಕೆ
ಬದಲಾಗಬಹುದು.
3.
ಒಂದು
ಕಳಶ
ಅಥವಾ
ಹಿತ್ತಾಳೆ
ಮಡಕೆ
(ದೇವತೆಯನ್ನು
ಪ್ರತಿನಿಧಿಸುತ್ತದೆ)
ಸುತ್ತಿ
ಸೀರೆಯಿಂದ
ಅಲಂಕರಿಸಲಾಗುತ್ತದೆ.
ಕುಮ್ಕುಮ್
ಮತ್ತು
ಶ್ರೀಗಂಧದ
ಪೇಸ್ಟ್ನೊಂದಿಗೆ
ಸ್ವಸ್ತಿಕ
ಚಿಹ್ನೆಯನ್ನು
ಎಳೆಯಲಾಗುತ್ತದೆ.
ಕಳಶ
ಮಡಕೆಯಲ್ಲಿ
ಅಕ್ಕಿ
ಅಥವಾ
ನೀರು,
ನಾಣ್ಯಗಳು,
ಐದು
ಬಗೆಯ
ಎಲೆಗಳು
ಮತ್ತು
ಜೀರುಂಡೆ
ಕಾಯಿಗಳಿಂದ
ತುಂಬಿರುತ್ತದೆ.
4.
ಅಂತಿಮವಾಗಿ,
ಕೆಲವು
ಮಾವಿನ
ಎಲೆಗಳನ್ನು
ಕಳಶದ
ಬಾಯಿಗೆ
ಇಡಲಾಗುತ್ತದೆ
ಮತ್ತು
ಕಳಶದ
ಬಾಯಿ
ಮುಚ್ಚಲು
ಅರಿಶಿನದೊಂದಿಗೆ
ಹೊದಿಸಿದ
ತೆಂಗಿನಕಾಯಿಯನ್ನು
ಬಳಸಲಾಗುತ್ತದೆ.
ವರಲಕ್ಷ್ಮಿ
ಪೂಜೆಯ
ಸಮಯದಲ್ಲಿ
ಕಟ್ಟಿದ
ಪವಿತ್ರ
ದಾರವನ್ನು
ಡೋರಾಕ್
ಎಂದು
ಕರೆಯಲಾಗುತ್ತದೆ.
5.
ದೇವತೆಯ
ಮುಂದೆ
ಇರಿಸಿದ
ಸಿಹಿತಿಂಡಿಗಳು
ಮತ್ತು
ಅರ್ಪಣೆಗಳನ್ನು
ವಯನಾ
ಎಂದು
ಕರೆಯಲಾಗುತ್ತದೆ.
6.
ಸಂಜೆ
ಸಮಯದಲ್ಲಿ
ದೇವರಿಗೆ
ಆರತಿಯನ್ನು
ಅರ್ಪಿಸಲಾಗುತ್ತದೆ.
7.
ಮರುದಿನ,
ಕಳಶದ
ನೀರನ್ನು
ಮನೆಯ
ಸುತ್ತಲೂ
ಚಿಮುಕಿಸಲಾಗುತ್ತದೆ.
ಕಳಶದಲ್ಲಿ
ಭತ್ತದ
ಧಾನ್ಯಗಳು
ಒಂದು
ಅಂಶವಾಗಿದ್ದರೆ,
ಮರುದಿನ
ಕುಟುಂಬಕ್ಕೆ
ಅಕ್ಕಿ
ಊಟ
ಅಥವಾ
ಪ್ರಸಾದವನ್ನು
ತಯಾರಿಸಲು
ಬಳಸಲಾಗುತ್ತದೆ.