Just In
- 3 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 4 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 7 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 9 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- News ಏಪ್ರಿಲ್ 28ಕ್ಕೆ ಬೆಣ್ಣೆನಗರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಸಿದ್ಧತೆ ಹೇಗಿದೆ? ಮಾಹಿತಿ
- Automobiles Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜ. 13ಕ್ಕೆ ವೈಕುಂಠ ಏಕಾದಶಿ: ಏಕಾದಶಿ ತಿಥಿ ಹಾಗೂ ಪಾರಣೆ ಸಮಯ ಯಾವಾಗ?
ಜನವರಿ 13ಕ್ಕೆ ವೈಕುಂಠ ಏಕಾದಶಿ. ಇದನ್ನು ಮುಕ್ಕೋಟಿ ಏಕಾದಶಿಯೆಂದೂ ಕರೆಯಲಾಗುವುದು. ಧರ್ನುಮಾಸದ ಈ ಏಕಾದಶಿಯನ್ನು ಸ್ವಗದ ಬಾಗಿಲಿನ ಏಕಾದಶಿಯೆಂದೂ ಕರೆಯಲಾಗುವುದು. ಅಂದ್ರೆ ಈ ಏಕಾದಶಿಯಂದು ವ್ರತ ನಿಯಮಗಳನ್ನು ಪಾಲಿಸಿದವರಿಗೆ ಸ್ವರ್ಗ ಪ್ರಾಪ್ತಿಯಾಗುವುದು ಎಂಬ ನಂಬಿಕೆ ಇದೆ.
ಏಕಾದಶಿ ತಿಥಿ ಸಮಯ
ವೈಕುಂಠ ಏಕಾದಶಿಯನ್ನು ಜನವರಿ, 13 ಗುರುವಾರ ಆಚರಿಸಲಾಗುತ್ತಿದೆ.
ತಿಥಿ ಪ್ರಾರಂಭ : ಜನವರಿ 12, 2022 ಸಂಜೆ 04:49ಕ್ಕೆ
ತಿಥಿ ಮುಕ್ತಾಯ: ಜನವರಿ 13, 2022 ಸಂಜೆ 07:32ಕ್ಕೆ
ಉಪವಾಸ ಹಾಗೂ ಪಾರಣೆ ಸಮಯ
ಏಕಾದಶಿಯಂದು ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಿದರೆ ಒಳ್ಳೆಯದು. ಏಕಾದಶಿ ವ್ರತ ಒಂದು ದಿನ ಮೊದಲು ಪ್ರಾರಂಭವಾಗುವುದು, ಅಂದರೆ ಜನವರಿ 12, ಸಂಜೆಯಿಂದಲೇ ಉಪವಾಸ ಪ್ರಾರಂಭಿಸುತ್ತಾರೆ. ಏಕಾದಶಿ ತಿಥಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ, ವಿಷ್ಣುವಿಗೆ ಹೂಗಳಿಂದ ಅಲಂಕರಿಸಿ, ವಿಷ್ಣು ಮಂತ್ರಗಳನ್ನು ಹೇಳುತ್ತಾ ಪೂಜೆ ಮಾಡಬೇಕು.
ಈ ದಿನ ಉಪವಾಸ ಮಾಡುವವರು ಹಾಲು, ಬಾಳೆ ಹಣ್ಣು ಸೇವಿಸಬಹುದು. ಉಪವಾಸ ಮಾಡುವವರು ಪಾರಣೆ ಸಮಯದವರೆಗೆ ಉಪವಾಸವಿದ್ದು, ನಂತರ ಮುರಿಯಬಹುದು.
ಉಪವಾಸ ಮುರಿಯಲು ಪಾರಣೆ ಸಮಯ
ಜನವರಿ 14, ಬೆಳಗ್ಗೆ 07:15ರಿಂದ 9:28ರವರೆಗೆ
ವೈಕುಂಠ ಏಕಾದಶಿ 2022ರ ಮಹತ್ವ
ವೈಕುಂಠ ಏಕಾದಶಿಯಂದು ವೈಕುಂಠದ ದ್ವಾರ ತೆರೆಯುವುದು, ಭಕ್ತರು ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಿದರೆ ಅವರಿಗೆ ಮೋಕ್ಷ ಸಿಗುತ್ತದೆ, ಅವರ ಬದುಕಿನಲ್ಲಿರುವ ಕಷ್ಟಗಳು ದೂರಾಗುವುದು.