Just In
- 1 hr ago ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- 2 hrs ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 4 hrs ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 5 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
Don't Miss
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Movies 'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
- News ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೆ ಜನ ಒಪ್ಪಲ್ಲ: ಡಿ ಕೆ ಸುರೇಶ್ ಹೀಗೆ ಹೇಳಿದ್ದು ಯಾರಿಗೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಯಲ್ಲಿ ನೆಮ್ಮದಿ, ಶಾಂತಿ ಇರಬೇಕೆಂದರೆ -ನಗುವ ಬುದ್ಧನ ಮೂರ್ತಿ ಹೀಗೆ ಇಟ್ಟುಕೊಳ್ಳಬೇಕು
ಶತಮಾನಗಳಿಂದಲೂ ವಾಸ್ತುಶಾಸ್ತ್ರವನ್ನು ಭಾರತೀಯರು ಮಾತ್ರವಲ್ಲದೆ ಇತರ ಕೆಲವೊಂದು ದೇಶಗಳಲ್ಲೂ ಅಳವಡಿಸಿಕೊಂಡು ಬರಲಾಗುತ್ತಾ ಇತ್ತು. ವಾಸ್ತುಶಾಸ್ತ್ರವನ್ನು ವಾಸ್ತುಶಿಲ್ಪ ವಿಜ್ಞಾನವೆಂದು ಕರೆಯಲಾಗುತ್ತದೆ. ಮನೆಯನ್ನು ಕಟ್ಟುವ ರೀತಿಯಿಂದ ಮನೆಯ ಒಳಗೆ ಸಂಪೂರ್ಣವಾಗಿ ಧನಾತ್ಮಕವಾಗಿರುವ ಶಕ್ತಿಯೇ ಬರುವಂತೆ ಇರುತ್ತದೆ.
ಹಿಂದಿನ ಮನೆಗಳು ಹಾಗೂ ಕಟ್ಟಡಗಳನ್ನು ನೋಡಿದರೆ ನಮಗೆ ಇದು ತಿಳಿದುಬರುವುದು. ಕೆಲವು ವಸ್ತುಗಳಿಂದ ಕೂಡ ಮನೆಯೊಳಗೆ ಧನಾತ್ಮಕವಾಗಿ ಶಕ್ತಿಯನ್ನು ಸೆಳೆಯಬಹುದು. ಮನೆಯ ಹಾಗೂ ಕಟ್ಟಡದ ಒಳಗೆ ಬರುವಂತಹ ಗಾಳಿ ಕೂಡ ಕೆಲವು ಸಲ ಧನಾತ್ಮಕವಾದ ಪರಿಣಾಮ ಬೀರುವುದು. ಅದೇ ರೀತಿಯಲ್ಲಿ ಇವುಗಳನ್ನು ನಿರ್ಮಾಣ ಮಾಡಲಾಗಿರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಕಟ್ಟಡದ ವಿನ್ಯಾಸ ಹಾಗೂ ಪ್ರದೇಶಕ್ಕೆ ಅನುಗುಣವಾಗಿ ಧನಾತ್ಮಕವಾದ ಶಕ್ತಿಯು ಬರುವುದು. ಉದಾಹರಣೆಗೆ ಪೂರ್ವದಲ್ಲಿ ಸೂರ್ಯನು ಮೂಡುವ ದಿಕ್ಕು ಮತ್ತು ಇಲ್ಲಿ ಧನಾತ್ಮಕತೆ ಇರುವುದು. ಇದರಿಂದ ಪೂರ್ವಭಾಗಕ್ಕೆ ಬಾಗಿಲು ತೆರೆದಿರಬೇಕು ಎಂದು ಹೇಳಲಾಗುತ್ತದೆ.
ವಾಸ್ತುಪ್ರಕಾರ ಕಟ್ಟಡದ ನಿರ್ಮಾಣವಾಗದೆ ಇದ್ದರೆ…
ವಾಸ್ತುಶಾಸ್ತ್ರದ ಪ್ರಕಾರ ಕಟ್ಟಡದ ನಿರ್ಮಾಣವು ಆಗದೆ ಇದ್ದರೆ ಆಗ ನಕಾರಾತ್ಮಕ ಶಕ್ತಿಗಳು ಮನೆಯ ಒಳಗೆ ಬಂದು ಮನೆಯಲ್ಲಿರುವ ಸದಸ್ಯರ ಮೇಲೆ ಪರಿಣಾಮ ಬೀರಬಹುದು. ಇಂತಹ ಪರಿಸ್ಥಿತಿಗೆ ವಾಸ್ತುಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಆಗ ನಕಾರಾತ್ಮಕ ಶಕ್ತಿಯು ದೂರವಾಗುವುದು. ಇದರಲ್ಲಿ ಒಂದು ನಗುತ್ತಿರುವ ಬುದ್ಧ.
ನಗುವ ಬುದ್ಧನ ಮೂರ್ತಿಯನ್ನು ಯಾಕೆ ಇಡಬೇಕು?
ನಗುವ ಬುದ್ಧನ ಮೂರ್ತಿಯನ್ನು ಮನೆಯಲ್ಲಿ ಇಟ್ಟಾಗ ಅದರಿಂದ ಮನೆಯಲ್ಲಿ ಹಣ ಹಾಗೂ ಅದೃಷ್ಟವು ಹರಿದು ಬರುತ್ತದೆ ಎಂದು ನಂಬಲಾಗಿದೆ. ಕೆಲವೊಂದು ಸಲ ನಗುವ ಬುದ್ಧನ ಮೂರ್ತಿಯನ್ನು ಇಡುವಂತಹ ಸರಿಯಾದ ದಿಕ್ಕು ಗೊತ್ತಿಲ್ಲದೆ ಕೆಲವು ಮನೆಯಲ್ಲಿ ಎಲ್ಲೆಲ್ಲೋ ಇಟ್ಟುಬಿಡುವರು. ಇದರಿಂದ ಧನಾತ್ಮಕವಾದ ಶಕ್ತಿ ಪಡೆಯುವಂತಹ ಶ್ರಮವು ವ್ಯರ್ಥವಾಗುವುದು. ಮನೆಯಲ್ಲಿ ನಗುವ ಬುದ್ಧನ ಮೂರ್ತಿಯನ್ನು ಎಲ್ಲಿಡಬೇಕು ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.
ಮನೆಯಲ್ಲಿ ನಗುವ ಬುದ್ಧನ ಮೂರ್ತಿ ಯಾಕಿಡಬೇಕು?
ಶಾಂತಿ ಹಾಗೂ ಸೌಹಾರ್ದತೆಗೆ
ಮನೆಯಲ್ಲಿ ಶಾಂತಿಯ ಕೊರತೆಯಿದ್ದರೆ ಮತ್ತು ಮನೆಯ ಸದಸ್ಯರ ಮಧ್ಯೆ ಪ್ರತಿನಿತ್ಯ ಜಗಳವಾಗುತ್ತಲಿದ್ದರೆ ಆಗ ನೀವು ನಗುವ ಬುದ್ಧನ ಮೂರ್ತಿಯನ್ನು ಮನೆಯ ಪೂರ್ವ ದಿಕ್ಕಿನಲ್ಲಿಡಬೇಕು. ಇದರಿಂದ ಸೌಹಾರ್ದತೆ ಮತ್ತು ಸದಸ್ಯರ ಮಧ್ಯೆ ಹೊಂದಾಣಿಕೆ ಕಂಡುಬರುವುದು.
ಉದ್ಯೋಗದ ಅವಕಾಶಕ್ಕಾಗಿ…
ನಗುವ ಬುದ್ಧನ ಮೂರ್ತಿಯು ಉದ್ಯೋಗವನ್ನು ಕೂಡ ದೊರಕಿಸಿಕೊಡುವನು. ಮನೆಯ ಯಾವುದಾದರೂ ಸದಸ್ಯರಿಗೆ ಉದ್ಯೋಗ ಸಿಗಲು ಕಷ್ಟವಾಗುತ್ತಲಿದ್ದರೆ ಆಗ ಮನೆಯ ಆಗ್ನೇಯ ಭಾಗದಲ್ಲಿ ನಗುವ ಬುದ್ಧನ ಮೂರ್ತಿಯನ್ನಿಡಬೇಕು. ಇದರಿಂದ ಬೇಗನೆ ಉದ್ಯೋಗ ಸಿಗುವುದು. ಇದರೊಂದು ಆಗ್ನೇಯ ಭಾಗದಲ್ಲಿ ನಗುವ ಬುದ್ಧನ ಮೂರ್ತಿಯನ್ನು ಇಡುವುದರಿಂದ ಮನೆಯಲ್ಲಿ ಹಣದ ಕೊರತೆಯಾಗದು.
ವೃತ್ತಿ ಜೀವನ ಸುಧಾರಣೆಗೆ
ವೃತ್ತಿಯಲ್ಲಿ ನಿಮಗೆ ಸಮಾಧಾನವಿಲ್ಲದೆ, ಕಚೇರಿಯಲ್ಲಿ ಹಲವಾರು ಸಮಸ್ಯೆಗಳು ಇದ್ದರೆ ಅಥವಾ ಉದ್ಯೋಗಕ್ಕೆ ಯಾವುದೋ ದುಷ್ಟಶಕ್ತಿಯ ಕಣ್ಣು ಬಿದ್ದಿದೆ ಎಂದು ನಿಮಗನಿಸಿದರೆ ಆಗ ನೀವು ನಗುವ ಬುದ್ಧನ ಮೂರ್ತಿಯನ್ನು ಪ್ರತಿಯೊಬ್ಬರು ನೋಡುವಂತಹ ಜಾಗದಲ್ಲಿಡಿ. ಇದು ತುಂಬಾ ಲಾಭಕಾರಿಯಾಗಲಿದೆ. ಇದು ದುಷ್ಟಶಕ್ತಿಯನ್ನು ನಿವಾರಣೆ ಮಾಡಿಕೊಂಡು ವೃತ್ತಿಜೀವನದಲ್ಲಿ ಸುಧಾರಣೆ ಹಾಗೂ ಪ್ರಗತಿ ತರುವುದು.
ಇತರ ಸಮಸ್ಯೆಗಳಿಗೆ
ಮನೆಯಲ್ಲಿ ಅಥವಾ ಕಚೇರಿಯಲ್ಲಿ ಯಾವುದೇ ರೀತಿಯ ಸಮಸ್ಯೆಯಿದ್ದರೆ ಆಗ ನೀವು ನಗುವ ಬುದ್ಧನ ಕೈ ಮೇಲೆ ಎತ್ತಿರುವ ಮೂರ್ತಿಯನ್ನು ಪೂರ್ವ ಭಾಗದಲ್ಲಿ ಇಡಬೇಕು. ಇದು ಪರಿಸ್ಥಿತಿ ಸುಧಾರಣೆ ಮಾಡುವುದು. ನೀವು ಹೀಗೆ ಮಾಡಿದರೆ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ಬಗೆಹರಿಯುವುದು ಮತ್ತು ಎಲ್ಲವು ಶುಭವಾಗುವುದು.
ಸಂತಾನಭಾಗ್ಯಕ್ಕೆ
ಸಂತಾನಭಾಗ್ಯ ಬೇಕೆಂದು ಇರುವವರು ನಗುವ ಬುದ್ಧನ ಮಕ್ಕಳೊಂದಿಗೆ ಆಡುತ್ತಿರುವಂತಹ ಮೂರ್ತಿಯನ್ನು ಮನೆಯಲ್ಲಿ ಇಡಬೇಕು. ಅಡುಗೆಮನೆ, ಅಡುಗೆಮನೆ ಅಥವಾ ಶೌಚಾಲಯಕ್ಕೆ ಸಮೀಪದಲ್ಲಿ ಇದನ್ನು ಇಡಬೇಡಿ. ಇದರಿಂದ ಮನೆಗೆ ಅಶುಭ ಉಂಟಾಗುವುದು.