Just In
- 41 min ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 2 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 3 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 4 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
Don't Miss
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿರುವ ಪ್ರಖ್ಯಾತ ಮಹಾಲಕ್ಷ್ಮೀ ದೇವಸ್ಥಾನಗಳು
ಧನ ಮತ್ತು ಕನಕ ಸಂಪತ್ತಿಗೆ ಒಡತಿಯಾಗಿರುವ ಮಹಾಲಕ್ಷ್ಮೀಯನ್ನು ಬೇರೆಬೇರೆ ವಿಧದಲ್ಲಿ ಪೂಜಿಸಲಾಗುತ್ತದೆ. ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಲಕ್ಷ್ಮೀ ಮಾತೆಯು ಕೇಳಿದ್ದನ್ನು ಪ್ರಸಾದಿಸುವ ಕರುಣಾಮಯಿಯಾಗಿದ್ದಾರೆ. ವಿಷ್ಣುವು ತನ್ನ ಭಕ್ತರಿಗೆ ಶೀಘ್ರದಲ್ಲಿ ವರವನ್ನು ಪ್ರಸಾದಿಸುವುದಿಲ್ಲ ಎಂಬ ಮಾತಿದೆ.
ಅಂತಹ ಸಂದರ್ಭದಲ್ಲಿ ಲಕ್ಷ್ಮೀ ದೇವಿಯನ್ನು ಬೇಡಿಕೊಳ್ಳುವುದರಿಂದ ಕೆಲಸಗಳು ಸುಸೂತ್ರಗೊಳ್ಳುತ್ತವೆ ಎಂಬ ನಂಬಿಕೆ ಇದೆ. ನೀವು ಹೆಚ್ಚಿನ ಕಷ್ಟದಲ್ಲಿದ್ದರೆ ಲಕ್ಷ್ಮೀಯನ್ನು ಬೇಡಿಕೊಳ್ಳುವುದರಿಂದ ನಿಮ್ಮ ಕಷ್ಟಗಳು ದೂರಾಗಲಿದೆ. ಅಂತೆಯೇ ಸರಳ ಭಕ್ತಿ ನಿಷ್ಟೆಯಿಂದ ಕೂಡಿರುವ ಭಕ್ತಿಗೆ ಮಹಾಲಕ್ಷ್ಮೀಯು ಕೂಡಲೇ ಒಲಿದುಬಿಡುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಭಾರತದಲ್ಲಿ ಕೂಡ ಲಕ್ಷ್ಮೀ ಮಾತೆಗೆ ಸಂಬಂಧಿಸಿದ ಹೆಚ್ಚಿನ ದೇವಾಲಯಗಳಿದ್ದು ಜೀವನದಲ್ಲಿ ಒಮ್ಮೆ ಈ ದೇವಾಲಯಗಳಿಗೆ ಭೇಟಿ ನೀಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಕನಸುಗಳು ಖಂಡಿತ ನೆರವೇರುತ್ತವೆ. ದೇವಿಗೆ ವೃತವನ್ನು ಮಾಡಿ ಅವರನ್ನು ಸಂಪ್ರೀತಿಗೊಳಿಸುವ ಮೂಲಕ ಆಕೆಯಿಂದ ಅನುಗ್ರಹವನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ವರಮಹಾಲಕ್ಷ್ಮಿವೃತ ಕೂಡ ಒಂದು. ಆಷಾಢದಲ್ಲಿ ಬರುವ ಈ ವೃತವನ್ನು ಹಬ್ಬದ ಮಾದರಿಯಲ್ಲಿಯೇ ನಡೆಸಲಾಗುತ್ತದೆ. ಆದರೆ ಇಂದಿನ ಲೇಖನದಲ್ಲಿ ನಾವು ವಿಶೇಷವಾಗಿರುವ ಕೆಲವೊಂದು ದೇವಸ್ಥಾನಗಳ ಮಾಹಿತಿಗಳನ್ನು ನೀಡುತ್ತಿದ್ದು ಇದನ್ನು ವಿಶೇಷವಾಗಿ ಲಕ್ಷ್ಮೀ ಮಾತೆಗೆ ಅರ್ಪಿಸಲಾಗಿದೆ....
ಹಾಸನದಲ್ಲಿರುವ ಲಕ್ಷ್ಮೀ ದೇವಿ ದೇವಸ್ಥಾನ - ದೊಡ್ಡಗೊಡ್ಡವಲ್ಲಿ
ಹಾಸನದಲ್ಲಿರುವ ಈ ಲಕ್ಷ್ಮೀ ದೇವಿ ದೇವಸ್ಥಾನವು ರಾಜ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಿಸಲಾಗಿದೆ. ಹೊಯ್ಸಳ ಪ್ರಕಾರದಲ್ಲಿ ದೇವಾಲಯದ ರಚನೆ ಇದೆ. ಮಹಾಲಕ್ಷ್ಮೀ, ವಿಷ್ಣು, ಭೂತನಾಥ ಮತ್ತು ಮಹಾಕಾಳಿ ದೇವತೆಗಳು ಈ ದೇವಳದಲ್ಲಿ ನೆಲೆಸಿದ್ದಾರೆ. ಹಾಸನದಿಂದ ಈ ದೇವಳಕ್ಕೆ 16 ಕಿ.ಮೀ ದೂರವಿದ್ದು ಹಾಸನ ಬೇಲೂರು ಹೆದ್ದಾರಿಯಲ್ಲಿ ಈ ದೇವಸ್ಥಾನ ಕಂಡುಬರುತ್ತದೆ.
ಲಕ್ಷ್ಮೀನಾರಾಯಣ ದೇವಸ್ಥಾನ ಬಿರ್ಲಾ ಮಂದಿರ ನವದೆಹಲಿ
ಏಳೂವರೆ ಎಕರೆಯಷ್ಟು ಅಂಗಳದಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದೆ. ಜೊತೆಗೆ ಸುಂದರ ಉದ್ಯಾನವನವನ್ನು ನಾವು ದೇವಾಲಯದ ಸುತ್ತಲೂ ಕಾಣಬಹುದಾಗಿದೆ. ಲಕ್ಷ್ಮೀನಾರಾಯಣರು ಈ ದೇವಸ್ಥಾನದಲ್ಲಿ ನಿತ್ಯವೂ ಪೂಜಿಸಲ್ಪಡುತ್ತಿದ್ದಾರೆ. ಶಿವ, ಕೃಷ್ಣ ಮತ್ತು ಬುದ್ಧನ ಪ್ರತಿಮೆಗಳೂ ಈ ದೇವಸ್ಥಾನದಲ್ಲಿ ಇವೆ. ಈ ದೇವಸ್ಥಾನವನ್ನು ಮಹಾತ್ಮಾ ಗಾಂಧಿಯವರು ಉದ್ಘಾಟಿಸಿದ್ದರು. ಬಲೋಡಾ ಬಿರ್ಲಾ ಮತ್ತು ಅವರ ಪುತ್ರರು ಈ ದೇವಸ್ಥಾನವನ್ನು 1933 ರಿಂದ 1939 ರ ಅವಧಿಯಲ್ಲಿ ನಿರ್ಮಿಸಿದ್ದರು.
ಮಹಾಲಕ್ಷ್ಮಿದೇವಸ್ಥಾನ ಕೊಲ್ಹಾಪುರ
ಕೊಲ್ಹಾಪುರದಲ್ಲಿರುವ ಮಹಾಲಕ್ಷ್ಮಿದೇವಸ್ಥಾನ ಭಾರತಕ್ಕೆ ಹಿರಿಮೆಯ ಸಂಕೇತವಾಗಿದೆ. ವಿಶೇಷ ಕಲಾರಚನೆಗಳನ್ನು ನಮಗೆ ಇಲ್ಲಿ ಕಾಣಬಹುದಾಗಿದೆ. ಈ ದೇವಸ್ಥಾನವನ್ನು ಚಾಲುಕ್ಯರು 17 ನೇ ಶತಮಾನದಲ್ಲಿ ಕಟ್ಟಿದ್ದರು. ಪುರಾಣಗಳಲ್ಲಿ ಪಟ್ಟಿ ಮಾಡಿರುವ ಶಕ್ತಿ ಪೀಠಗಳಲ್ಲಿ ಇದೂ ಕೂಡ ಒಂದಾಗಿದೆ. ಲಕ್ಷ್ಮೀಮಾತೆಯನ್ನು ಇಲ್ಲಿ ಕಲ್ಲಿನ ರೂಪದಲ್ಲಿ ಕೆತ್ತಲಾಗಿದೆ ಮತ್ತು ಇದು 40 ಕೆಜಿ ಭಾರವುಳ್ಳದ್ದಾಗಿದೆ. ಕಪ್ಪು ಕಲ್ಲು ಮೂರು ಫೀಟ್ ಎತ್ತರದಲ್ಲಿದೆ. ಈ ಮೂರ್ತಿಯಲ್ಲಿ ನಾಲ್ಕು ಕೈಗಳಿವೆ ಮತ್ತು ಸಿಂಹದ ಕಲ್ಲಿನ ಪ್ರತಿಮೆಯು ದೇವಿಯ ಹಿಂಭಾಗದಲ್ಲಿದೆ.
ವಿಗ್ರಹದ ನಾಲ್ಕು ಕೈಗಳನ್ನು ಚಿತ್ರದಲ್ಲಿ ಕಾಣಬಹುದಾಗಿದೆ
ಕೆಳಗಿನ ಬಲಗೈ, ಸಿಟ್ರಸ್ಫ್ರೂಟ್ - ಮೆಹಲುಂಗ
ಮೇಲ್ಭಾಗದ ಬಲ, ಅದರ ತಲೆ ನೆಲವನ್ನು ಸ್ಪರ್ಶಿಸುವ ದೊಡ್ಡ ಪ್ರಮಾಣದ - ಕಯುಡಾಕಕಿ
ಮೇಲ್ಭಾಗದ ಎಡ, ಆಷ್ಫೀಲ್ಡ್- ಖೇಟಾಕಾ ಮತ್ತು
ಕೆಳಗಿನ ಎಡ, ಒಂದು ಬೌಲ್ - ಪನ್ಪತ್ರಾ.
ಅತ್ಯಂತ ಭಿನ್ನವಾಗಿ ಹಿಂದೂ ಚಿತ್ರಗಳಲ್ಲಿರುವಂತೆ ಉತ್ತರ ಅಥವಾ ಪೂರ್ವ ಎದುರಿಸಲು, ಈ ದೇವತೆಯ ಚಿತ್ರ ಪಶ್ಚಿಮ ಕಾಣುತ್ತದೆ (ಪಾಶ್ಚಿಮ್). ಪಶ್ಚಿಮ ಗೋಡೆಯ ಮೇಲೆ ಸಣ್ಣ ತೆರೆದ ಕಿಟಕಿ ಇದೆ, ಅದರ ಮೂಲಕ ಸೂರ್ಯನ ಬೆಳಕನ್ನು ಪ್ರತೀ ಮಾರ್ಚ್ ಮತ್ತು ಸೆಪ್ಟೆಂಬರ್ 21 ರ ಸುಮಾರು ಮೂರು ದಿನಗಳವರೆಗೆ ಚಿತ್ರದ ಮುಖದ ಮೇಲೆ ಬೀಳುತ್ತದೆ.
ಮುಂಬೈನ ಮಹಾಲಕ್ಷ್ಮಿದೇವಸ್ಥಾನ
ಬೂಲ್ಬಾಯ್ ದೇಸಾಯಿ ರಸ್ತೆಯಲ್ಲಿ ಈ ದೇವಸ್ಥಾನವಿದೆ. ಇಲ್ಲಿ ಮೂರು ವಿಗ್ರಹಗಳಿವೆ. ಶ್ರೀ ಮಹಾಲಕ್ಷ್ಮೀ, ಸರಸ್ವತಿ ಮತ್ತು ಮಹಾಶಕ್ತಿ. ಮುಸ್ಲೀಮರ ದಾಳಿಯಿಂದ ವಿಗ್ರಹಗಳನ್ನು ರಕ್ಷಿಸುವುದಕ್ಕಾಗಿ ವರ್ಲಿ ಕ್ರೀಕ್ ಬಳಿಯ ಸಮುದ್ರದ ನೀರಿನಿಂದ ಇದನ್ನು ತೊಳೆದಿದ್ದರು. ಬ್ರಿಟೀಷರು ಭಾರತವನ್ನು ಆಕ್ರಮಣ ಮಾಡಿದಾಗ ವರ್ಲಿ ಮತ್ತು ಮಲಬಾರ್ ಕ್ರೀಕ್ ಅನ್ನು ಒಟ್ಟುಗೂಡಲು ನಿರ್ಧರಿಸಿದ್ದರು. ರಾಮ್ಜಿ ಶಿವ್ಜಿ ಎಂಬ ಸರಕಾರಿ ಇಂಜಿನಿಯರ್ ಅನ್ನು ಈ ಕೆಲಸಕ್ಕಾಗಿ ನಿಯೋಜಿಸಿದ್ದರು. ಆದರೆ ಅವರಿಗೆ ಈ ಕೆಲಸವನ್ನು ಪೂರ್ಣಗೊಳಿಸಲು ಆಗಲೇ ಇಲ್ಲ. ಬ್ರಿಟೀಷ್ ಅಧಿಕಾರಿಯೊಬ್ಬರ ಕನಸಿನಲ್ಲಿ ಬಂದ ಮಹಾಲಕ್ಷ್ಮೀಯು ಹೀಗೆ ಮಾಡದಂತೆ ಅವರಿಗೆ ಹೇಳಿದರು ಎಂಬುದಾಗಿ ನಂಬಲಾಗಿದೆ. ನಂತರ ಈ ವಿಗ್ರಹಗಳನ್ನು ಸರಿಯಾಗಿ ನಿರ್ಮಿಸಲಾಯಿತು ನಂತರ ಬ್ರಿಟೀಷರ ಕಾರ್ಯ ನೆರವೇರಿತು
ಚೆನ್ನೈ ಅಷ್ಟ ಲಕ್ಷ್ಮೀ ದೇವಸ್ಥಾನ
ಚೆನ್ನೈ ಬೀಚ್ ಬಳಿ ಈ ದೇವಾಲಯವಿದೆ. ಲಕ್ಷ್ಮೀ ದೇವಿಯ ಎಂಟು ರೂಪಗಳಲ್ಲಿ ಈ ದೇವಾಲಯದಲ್ಲಿ ವಿಗ್ರಹಗಳನ್ನು ಕಾಣಬಹುದಾಗಿದೆ. ಕಾಂಚೀ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿಯ ಅಧಿಪತ್ಯದಲ್ಲಿ ಈ ವಿಗ್ರಹವನ್ನು ಕೆತ್ತಲಾಗಿದೆ. ಎಂಟು ಭಾಗದಲ್ಲಿಯೂ ಭಕ್ತರು ಭೇಟಿ ನೀಡಿ ವಿಗ್ರಹವನ್ನು ನೋಡಬಹುದಾಗಿದೆ. 1974 ರಲ್ಲಿ ದೇವಳವನ್ನು ಕಟ್ಟಿಸಿ ಅದನ್ನು 1976 ರಲ್ಲಿ ಭಕ್ತರಿಗೆ ಅರ್ಪಿಸಲಾಯಿತು.
ಶ್ರೀಪುರಂ ಗೋಲ್ಡನ್ ದೇವಸ್ಥಾನ ವೆಲ್ಲೂರು
ಈ ದೇವಸ್ಥಾನ ವೆಲ್ಲೂರ್ನಲ್ಲಿದೆ. 1500 ಕೆಜಿ ಚಿನ್ನದಲ್ಲಿ ಈ ಮಹಾಲಕ್ಷ್ಮಿದೇವಳವನ್ನು ಕಟ್ಟಿದ್ದು ದೇವಸ್ಥಾನದ ಗೋಪುರ ಸಂಪೂರ್ಣ ಚಿನ್ನದ್ದಾಗಿದೆ. ನಕ್ಷತ್ರ ಆಕಾರದ ಶ್ರೀ ಚಕ್ರ ಇಲ್ಲಿದೆ.