Just In
- 22 min ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 3 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 12 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 13 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಶ್ವತ್ಥ ಮರವನ್ನು ಪೂಜಿಸಿದರೆ ಕಾಲಸರ್ಪ ದೋಷ ನಿವಾರಣೆಯಾಗುವುದು
ಹಿಂದೂ ಧರ್ಮಿಯರಿಗೆ ಅಶ್ವತ್ಥ ಮರವೆಂದರೆ ತುಂಬಾ ಪೂಜ್ಯನೀಯವಾಗಿದೆ. ಅಶ್ವತ್ಥ ಮರದ ಎಲೆ ಹಾಗೂ ಕಡ್ಡಿಗಳನ್ನು ವಿವಿಧ ರೀತಿಯ ಪೂಜೆ ಹಾಗೂ ಹವನಗಳಿಗೂ ಬಳಸಲಾಗುತ್ತದೆ. ಶನಿವಾರದಂದು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ತುಂಬಾ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಅಶ್ವತ್ಥ ಮರದಲ್ಲಿ ಶನಿವಾರದಂದು ವಿಷ್ಣುವಿನ ಜತೆಗೆ ಲಕ್ಷ್ಮೀಯು ನೆಲೆಸಿರುತ್ತಾಳೆ ಎಂದು ಪುರಾಣಗಳು ಹೇಳುತ್ತವೆ.
ದೈವ ಸ್ವರೂಪಿ 'ಅಶ್ವತ್ಥ ಮರ'ದ ಎಲೆಗಳ ಔಷಧೀಯ ಗುಣಗಳು
ಮರವು ದೇವದೇವತೆಗಳಿಗೆ ಸ್ವರ್ಗ ಎಂದು ಅಥರ್ವ ವೇದ ಮತ್ತು ಛೋದೋಗ್ಯ ಉಪನಿಷತ್ ನಲ್ಲಿ ಹೇಳಲಾಗಿದೆ. ಪುರಾಣಗಳ ಪ್ರಕಾರ ಅಶ್ವತ್ಥ ಮರದ ಬೇರಿನಲ್ಲಿ ಬ್ರಹ್ಮ, ಕೊಂಬೆಯಲ್ಲಿ ವಿಷ್ಣು ಮತ್ತು ಎಲೆಗಳಲ್ಲಿ ಶಿವ ನೆಲೆಸಿರುತ್ತಾನೆ. ಅಶ್ವತ್ಥ ಮರವನ್ನು ಪೂಜಿಸುವವರಿಗೆ ಸಂಪತ್ತು ಸಿಗುವುದು ಮತ್ತು ಇದರಲ್ಲಿ ತಪ್ಪು ಮಾಡುವವರಿಗೆ ಬಡತನ ಕಾಡುವುದು ಎನ್ನಲಾಗಿದೆ. ಅಶ್ವತ್ಥ ಮರವನ್ನು ಪೂಜಿಸುವವರಿಗೆ ಇರುವ ನಿಯಮಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ತಿಳಿದು ಅಶ್ವತ್ಥ ಮರ ಪೂಜಿಸಿ.....
ವೈಜ್ಞಾನಿಕ ಕಾರಣಗಳು
ಹೆಚ್ಚಿನ ಮರಗಳು ಕಾರ್ಬನ್ ಡೈಯಾಕ್ಸೈಡ್ ನ್ನು ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುತ್ತದೆ. ರಾತ್ರಿ ವೇಳೆ ಮರಗಳು ಆಮ್ಲಜನಕವನ್ನು ಹೀರಿಕೊಂಡು ಕಾರ್ಬನ್ ಡೈಯಾಕ್ಸೈಡ್ ನ್ನು ಬಿಡುಗಡೆ ಮಾಡುವುದು. ಇದರಿಂದ ರಾತ್ರಿ ವೇಳೆ ಮರಗಳ ಸಮೀಪ ಮಲಗಬಾರದು ಎನ್ನಲಾಗುತ್ತದೆ.
ವೈಜ್ಞಾನಿಕ ಕಾರಣಗಳು
ಅಶ್ವತ್ಥ ಮರವು ರಾತ್ರಿ ವೇಳೆ ಕೂಡ ಆಮ್ಲಜನಕವನ್ನು ಬಿಡುಗಡೆ ಮಾಡುವುದು. ಅಶ್ವತ್ಥ ಮರವು ರಾತ್ರಿ ವೇಳೆಯೂ ಆಮ್ಲಜನಕವನ್ನು ಬಿಡುಗಡೆ ಮಾಡುವುದು. ಯಾಕೆಂದರೆ ಕ್ರಾಸ್ಲುಲೇಶನ್ ಮೆಟಾಬಾಲಿಸಮ್ ಅನ್ನು ಎನ್ನುವ ಒಂದು ರೀತಿಯ ದ್ಯುತಿಸಂಶ್ಲೇಷಣೆ ನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ.
ವೈಜ್ಞಾನಿಕ ಕಾರಣಗಳು
ನಿಮ್ಮ ಸುತ್ತಮುತ್ತ ಅಶ್ವತ್ಥ ಮರಗಳು ಹೆಚ್ಚಾಗಿದ್ದರೆ ಅದು ಆರೋಗ್ಯಕ್ಕೆ ಒಳ್ಳೆಯದು. ಯಾಕೆಂದರೆ ಇದು ವಾತಾವರಣವನ್ನು ಶುದ್ಧೀಕರಿಸುವುದು.
ಧಾರ್ಮಿಕ ಕಾರಣಗಳು
ಅಶ್ವತ್ಥ ಮರದಲ್ಲಿ ನಾನು ನೆಲೆಸಿರುತ್ತೇನೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ದೇವರು ಹೇಳಿದ್ದಾರೆ. ಅಶ್ವತ್ಥ ಮರಕ್ಕೆ ನೀರು ಹಾಕುವುದು, ಪೂಜಿಸುವುದು ಮತ್ತು ಸುತ್ತು ಬರುವುದರಿಂದ ಸಂಪತ್ತು, ಸಂತೋಷ ಮತ್ತು ಒಳ್ಳೆಯ ಅದೃಷ್ಟ ಬರುವುದು ಎಂದು ನಂಬಲಾಗಿದೆ. ಅಶ್ವತ್ಥ ಮರವನ್ನು ಪೂಜಿಸಿದರೆ ಪಿತ್ತ ದೋಷ ಮತ್ತು ಕಾಲಸರ್ಪ ದೋಷವು ನಿವಾರಣೆಯಾಗುವುದು ಎಂದು ಪುರಾಣಗಳಲ್ಲಿ ಇದೆ.
ಅಮವಾಸ್ಯೆಯ ದಿನ
ಅಮವಾಸ್ಯೆಯ ದಿನ ಹನುಮಾನ್ ಚಾಲೀಸ ಹೇಳಿಕೊಂಡು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ಜೀವನದಲ್ಲಿ ಬರುವ ಹಲವಾರು ರೀತಿಯ ಸಂಕಷ್ಟಗಳು ದೂರವಾಗುವುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅಶ್ವತ್ಥ ಮರದ ಕೆಳಗೆ ಪ್ರತೀದಿನ ಸಾಸಿವೆ ಎಣ್ಣೆಯ ದೀಪ ಹಚ್ಚಿದರೆ ತುಂಬಾ ಒಳ್ಳೆಯದು