For Quick Alerts
ALLOW NOTIFICATIONS  
For Daily Alerts

ಅಶ್ವತ್ಥ ಮರವನ್ನು ಪೂಜಿಸಿದರೆ ಕಾಲಸರ್ಪ ದೋಷ ನಿವಾರಣೆಯಾಗುವುದು

By Manu
|

ಹಿಂದೂ ಧರ್ಮಿಯರಿಗೆ ಅಶ್ವತ್ಥ ಮರವೆಂದರೆ ತುಂಬಾ ಪೂಜ್ಯನೀಯವಾಗಿದೆ. ಅಶ್ವತ್ಥ ಮರದ ಎಲೆ ಹಾಗೂ ಕಡ್ಡಿಗಳನ್ನು ವಿವಿಧ ರೀತಿಯ ಪೂಜೆ ಹಾಗೂ ಹವನಗಳಿಗೂ ಬಳಸಲಾಗುತ್ತದೆ. ಶನಿವಾರದಂದು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ತುಂಬಾ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಅಶ್ವತ್ಥ ಮರದಲ್ಲಿ ಶನಿವಾರದಂದು ವಿಷ್ಣುವಿನ ಜತೆಗೆ ಲಕ್ಷ್ಮೀಯು ನೆಲೆಸಿರುತ್ತಾಳೆ ಎಂದು ಪುರಾಣಗಳು ಹೇಳುತ್ತವೆ.

ದೈವ ಸ್ವರೂಪಿ 'ಅಶ್ವತ್ಥ ಮರ'ದ ಎಲೆಗಳ ಔಷಧೀಯ ಗುಣಗಳು

ಮರವು ದೇವದೇವತೆಗಳಿಗೆ ಸ್ವರ್ಗ ಎಂದು ಅಥರ್ವ ವೇದ ಮತ್ತು ಛೋದೋಗ್ಯ ಉಪನಿಷತ್ ನಲ್ಲಿ ಹೇಳಲಾಗಿದೆ. ಪುರಾಣಗಳ ಪ್ರಕಾರ ಅಶ್ವತ್ಥ ಮರದ ಬೇರಿನಲ್ಲಿ ಬ್ರಹ್ಮ, ಕೊಂಬೆಯಲ್ಲಿ ವಿಷ್ಣು ಮತ್ತು ಎಲೆಗಳಲ್ಲಿ ಶಿವ ನೆಲೆಸಿರುತ್ತಾನೆ. ಅಶ್ವತ್ಥ ಮರವನ್ನು ಪೂಜಿಸುವವರಿಗೆ ಸಂಪತ್ತು ಸಿಗುವುದು ಮತ್ತು ಇದರಲ್ಲಿ ತಪ್ಪು ಮಾಡುವವರಿಗೆ ಬಡತನ ಕಾಡುವುದು ಎನ್ನಲಾಗಿದೆ. ಅಶ್ವತ್ಥ ಮರವನ್ನು ಪೂಜಿಸುವವರಿಗೆ ಇರುವ ನಿಯಮಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ತಿಳಿದು ಅಶ್ವತ್ಥ ಮರ ಪೂಜಿಸಿ.....

ವೈಜ್ಞಾನಿಕ ಕಾರಣಗಳು

ವೈಜ್ಞಾನಿಕ ಕಾರಣಗಳು

ಹೆಚ್ಚಿನ ಮರಗಳು ಕಾರ್ಬನ್ ಡೈಯಾಕ್ಸೈಡ್ ನ್ನು ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುತ್ತದೆ. ರಾತ್ರಿ ವೇಳೆ ಮರಗಳು ಆಮ್ಲಜನಕವನ್ನು ಹೀರಿಕೊಂಡು ಕಾರ್ಬನ್ ಡೈಯಾಕ್ಸೈಡ್ ನ್ನು ಬಿಡುಗಡೆ ಮಾಡುವುದು. ಇದರಿಂದ ರಾತ್ರಿ ವೇಳೆ ಮರಗಳ ಸಮೀಪ ಮಲಗಬಾರದು ಎನ್ನಲಾಗುತ್ತದೆ.

ವೈಜ್ಞಾನಿಕ ಕಾರಣಗಳು

ವೈಜ್ಞಾನಿಕ ಕಾರಣಗಳು

ಅಶ್ವತ್ಥ ಮರವು ರಾತ್ರಿ ವೇಳೆ ಕೂಡ ಆಮ್ಲಜನಕವನ್ನು ಬಿಡುಗಡೆ ಮಾಡುವುದು. ಅಶ್ವತ್ಥ ಮರವು ರಾತ್ರಿ ವೇಳೆಯೂ ಆಮ್ಲಜನಕವನ್ನು ಬಿಡುಗಡೆ ಮಾಡುವುದು. ಯಾಕೆಂದರೆ ಕ್ರಾಸ್ಲುಲೇಶನ್ ಮೆಟಾಬಾಲಿಸಮ್ ಅನ್ನು ಎನ್ನುವ ಒಂದು ರೀತಿಯ ದ್ಯುತಿಸಂಶ್ಲೇಷಣೆ ನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ.

ವೈಜ್ಞಾನಿಕ ಕಾರಣಗಳು

ವೈಜ್ಞಾನಿಕ ಕಾರಣಗಳು

ನಿಮ್ಮ ಸುತ್ತಮುತ್ತ ಅಶ್ವತ್ಥ ಮರಗಳು ಹೆಚ್ಚಾಗಿದ್ದರೆ ಅದು ಆರೋಗ್ಯಕ್ಕೆ ಒಳ್ಳೆಯದು. ಯಾಕೆಂದರೆ ಇದು ವಾತಾವರಣವನ್ನು ಶುದ್ಧೀಕರಿಸುವುದು.

ಧಾರ್ಮಿಕ ಕಾರಣಗಳು

ಧಾರ್ಮಿಕ ಕಾರಣಗಳು

ಅಶ್ವತ್ಥ ಮರದಲ್ಲಿ ನಾನು ನೆಲೆಸಿರುತ್ತೇನೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ದೇವರು ಹೇಳಿದ್ದಾರೆ. ಅಶ್ವತ್ಥ ಮರಕ್ಕೆ ನೀರು ಹಾಕುವುದು, ಪೂಜಿಸುವುದು ಮತ್ತು ಸುತ್ತು ಬರುವುದರಿಂದ ಸಂಪತ್ತು, ಸಂತೋಷ ಮತ್ತು ಒಳ್ಳೆಯ ಅದೃಷ್ಟ ಬರುವುದು ಎಂದು ನಂಬಲಾಗಿದೆ. ಅಶ್ವತ್ಥ ಮರವನ್ನು ಪೂಜಿಸಿದರೆ ಪಿತ್ತ ದೋಷ ಮತ್ತು ಕಾಲಸರ್ಪ ದೋಷವು ನಿವಾರಣೆಯಾಗುವುದು ಎಂದು ಪುರಾಣಗಳಲ್ಲಿ ಇದೆ.

ಅಮವಾಸ್ಯೆಯ ದಿನ

ಅಮವಾಸ್ಯೆಯ ದಿನ

ಅಮವಾಸ್ಯೆಯ ದಿನ ಹನುಮಾನ್ ಚಾಲೀಸ ಹೇಳಿಕೊಂಡು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ಜೀವನದಲ್ಲಿ ಬರುವ ಹಲವಾರು ರೀತಿಯ ಸಂಕಷ್ಟಗಳು ದೂರವಾಗುವುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅಶ್ವತ್ಥ ಮರದ ಕೆಳಗೆ ಪ್ರತೀದಿನ ಸಾಸಿವೆ ಎಣ್ಣೆಯ ದೀಪ ಹಚ್ಚಿದರೆ ತುಂಬಾ ಒಳ್ಳೆಯದು

English summary

Scientific & Religious Reasons Why Peepal Tree Is Worshipped

The much revered Peepal tree is called the Paradise Of Gods by Atharva Veda and Chhodogya Upanishad. This is because Laxmi resides on it along with Lord Vishnu on Saturdays. That's why it is considered auspicious to water the tree on this day.According to religious scriptures, the roots of the Peepal tree represent Brahma, the trunk of the tree represents Lord Vishnu and leaves, Lord Shiva.
X
Desktop Bottom Promotion