Just In
Don't Miss
- News ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ, ಕಾರಣ ಏನು?
- Movies Puttakkana Makkalu:ಸ್ನೇಹಾ ಕೈ ಸೇರಿಯೇ ಬಿಡ್ತು ವಿಚ್ಛೇದನದ ಪೇಪರ್; ಮುಂದೇನು?
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಂಜಾನೆ ಸೂರ್ಯ ದೇವರಿಗೆ ಜಲ ಅರ್ಪಣೆ ಮಾಡುವ ವಿಧಾನಗಳು
ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವದೇವತೆಗಳು ಇದ್ದಾರೆ ಎನ್ನುವ ನಂಬಿಕೆಯಿದೆ. ಇದರಲ್ಲಿ ಮುಖ್ಯವಾಗಿ ಹಾಗೂ ನಮಗೆ ದಿನಾಲೂ ಕಾಣುವಂತಹ ದೇವರು ಎಂದರೆ ಅದು ಸೂರ್ಯ ದೇವರು. ಸೂರ್ಯ ದೇವರು ನಮಗೆ ಪ್ರತಿನಿತ್ಯವು ದರ್ಶನ ನೀಡುವರು. ಯಾವುದೇ ಯುಗ ಬಂದರೂ ಸೂರ್ಯ ದೇವರು ಮಾತ್ರ ಭೂಮಿ ಮೇಲಿನ ಮನುಷ್ಯರಿಗೆ ದರ್ಶನ ನೀಡುವರು. ಹಿಂದೂ ಧರ್ಮದಲ್ಲಿ ಪ್ರತಿನಿತ್ಯ ಎದ್ದ ಬಳಿಕ ನಿತ್ಯ ಕರ್ಮಗಳನ್ನು ಪೂರೈಸಿಕೊಂಡು ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸುವಂತಹ ಕ್ರಮವಿದೆ.
ಈ ವೇಳೆ ಹಿಂದೂಗಳು ಒಂದು ತಾಮ್ರದ ಪಾತ್ರೆ ಅಥವಾ ಲೋಟದಲ್ಲಿ ನೀರು ಹಿಡಿದುಕೊಂಡು ಸೂರ್ಯ ದೇವರ ಮಂತ್ರ ಪಠಿಸುತ್ತಾ ಅದನ್ನು ನೆಲಕ್ಕೆ ಅರ್ಪಿಸುವರು. ಇದರಿಂದ ಜೀವನದಲ್ಲಿ ಒಳ್ಳೆಯ ಅದೃಷ್ಟ ಸಿಗುವುದು ಎಂದು ನಂಬಲಾಗಿದೆ. ಇಷ್ಟು ಮಾತ್ರವಲ್ಲದೆ ಇದರಿಂದ ಆತ್ಮಾಭಿಮಾನ ಹೆಚ್ಚಾಗುವುದು ಮತ್ತು ಸಮಾಜದಲ್ಲಿ ಪ್ರತಿಷ್ಠೆಯು ವೃದ್ಧಿಸುವುದು.
ಸೂರ್ಯ ದೇವರನ್ನು ಪೂಜಿಸುವ ಮೂಲಕ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು. ಸೂರ್ಯ ದೇವರ ಪೂಜೆ ಮಾಡುವವರಿಗೆ ಕಣ್ಣಿನ ದೃಷ್ಟಿ ಒಳ್ಳೆಯದಾಗುವುದು ಮತ್ತು ಚರ್ಮವು ಆರೋಗ್ಯವಾಗಿರುವುದು. ಅದಾಗ್ಯೂ, ಸೂರ್ಯ ದೇವರ ಆಶೀರ್ವಾದ ಪಡೆದುಕೊಳ್ಳಲು ಅವರನ್ನು ಪೂಜಿಸುವ ವೇಳೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಈ ನಿಯಮಗಳು ಯಾವುದು ಎಂದು ತಿಳಿಯಿರಿ.
ಮುಂಜಾನೆ ವೇಳೆ…
ನಾವು ಬೆಳಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ಎದ್ದೇಳಬೇಕು ಎಂದು ಹೇಳಲಾಗುತ್ತದೆ. ಇದು ತುಂಬಾ ಶುಭ ಸಮಯ ಎಂದು ನಂಬಲಾಗಿದೆ. ಯಾಕೆಂದರೆ ಈ ವೇಳೆ ಸುತ್ತಲಿನ ಧನಾತ್ಮಕವಾದ ಶಕ್ತಿಗಳು ದೇಹಕ್ಕೆ ಸಿಗುವುದು. ಇದರಿಂದ ಪ್ರಾರ್ಥನೆ ಮಾಡುವ ವೇಳೆ ಕೂಡ ಹೆಚ್ಚಿನ ಗಮನ ಕೇಂದ್ರೀಕರಿಸಬಹುದು. ಬೆಳಗ್ಗೆ ಎದ್ದು ಸ್ನಾನ ಮಾಡಿದ ಬಳಿಕ ಸೂರ್ಯ ದೇವರಿಗೆ ಜಲ ಅರ್ಪಣೆ ಮಾಡಬೇಕು. ನೀವು ಪೂರ್ವಾಭಿಮುಖವಾಗಿ ನಿಂತುಕೊಂಡು ಜಲವನ್ನು ಅರ್ಪಿಸಬೇಕು. ಕೆಲವೊಂದು ಸಲ ಮೋಡ ಮತ್ತು ಮಂಜಿನಿಂದಾಗಿ ಸೂರ್ಯ ಕಾಣದೆ ಇದ್ದರೂ ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡು ಜಲ ಅರ್ಪಣೆ ಮಾಡಿ. ಆದರೆ ಸೂರ್ಯ ಉದಯಿಸಿದ ಬಳಿಕ ಹೀಗೆ ಮಾಡಬೇಕು.
Most
Read:
ಸೂರ್ಯ
ದೇವನಿಗೆ
ಶರಣು
ಹೇಳಿ,
ಕಷ್ಟಕಾರ್ಪಣ್ಯ
ಕಳೆದುಕೊಳ್ಳೋಣ..
ತಾಮ್ರದ ಪಾತ್ರೆ
ಜ್ಯೋತಿಷ್ಯದ ಪ್ರಕಾರ ಸೂರ್ಯನು ತಾಮ್ರ ಲೋಹಕ್ಕೆ ಸಂಬಂಧಪಟ್ಟವನೆಂದು ಹೇಳಲಾಗಿದೆ. ಇದರಿಂದಾಗಿ ನಾವು ತಾಮ್ರದ ಪಾತ್ರೆಯಲ್ಲೇ ಸೂರ್ಯನಿಗೆ ಜಲ ಅರ್ಪಣೆ ಮಾಡಬೇಕು. ಇದಕ್ಕಾಗಿ ನೀವು ಗಾಜು, ಸ್ಟೀಲ್ ಇತ್ಯಾದಿ ಪಾತ್ರೆಗಳನ್ನು ಬಳಸಿಕೊಳ್ಳಬಾರದು. ನೀವು ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸಲು ಪ್ರತ್ಯೇಕವಾದ ಪಾತ್ರೆಯನ್ನು ಬಳಸಿಕೊಳ್ಳಿ. ಅಡುಗೆ ಮನೆಯಲ್ಲಿ ಆಹಾರ ತಯಾರಿಸಲು ಬಳಸುವ ಅಥವಾ ಬೇರೆ ಯಾವುದೇ ರೀತಿಯ ಉದ್ದೇಶಕ್ಕೆ ಬಳಸಿರುವಂತಹ ಪಾತ್ರೆಯನ್ನು ನೀವು ಇದಕ್ಕೆ ಬಳಕೆ ಮಾಡಲೇಬಾರದು.
ಎರಡು ಕೈಗಳನ್ನು ಜತೆಯಾಗಿ ಬಳಸಿ
ಕೇವಲ ಒಂದು ಕೈ ಅಥವಾ ಎಡದ ಕೈಯನ್ನು ಬಳಸಿಕೊಂಡು ನೀವು ನೀರು ಅರ್ಪಣೆ ಮಾಡಲೇಬಾರದು. ಯಾವಾಗಲೂ ದೇವರ ಪ್ರಾರ್ಥನೆ ಮತ್ತು ಇತರ ಪವಿತ್ರ ಕೆಲಸಗಳಿಗೆ ಬಲದ ಕೈಯನ್ನು ಬಳಸಲಾಗುತ್ತದೆ. ಜಲ ಅರ್ಪಣೆ ಮಾಡುವ ವೇಳೆ ನೀವು ಎರಡು ಕೈಗಳನ್ನು ಎತ್ತರಕ್ಕೆ ಎತ್ತಬೇಕು. ಇದರಿಂದ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವಂತಾಗಬೇಕು. ಸೂರ್ಯ ದೇವರಿಗೆ ಜಲ ಅರ್ಪಣೆ ಮಾಡುವ ವೇಳೆ ಎಲ್ಲಾ ಒಂಭತ್ತು ಗ್ರಹಗಳು ಒಲಿಯುತ್ತವೆ ಎಂದು ಹೇಳಲಾಗಿದೆ. ಜಲ ಅರ್ಪಣೆ ಮಾಡಿದ ಬಳಿಕ ನೀವು ಮೂರು ಪ್ರದಕ್ಷಿಣೆ ಹಾಕಲು ಮರೆಯಬೇಡಿ.
ನೀರಿಗೆ ಏನು ಬೆರೆಸಬೇಕು?
ನೀರನ್ನು ಅರ್ಪಣೆ ಮಾಡುವ ವೇಳೆ ನೀವು ಅದಕ್ಕೆ ಹೂ, ಅಕ್ಕಿ, ಒಂದು ಚಿಟಿಕೆ ಕುಂಕುಮ ಮತ್ತು ಸ್ವಲ್ಪ ಬೆಲ್ಲ ಹಾಕಿಕೊಳ್ಳಬಹುದು. ಇದರ ಬಳಿಕ ನೀವು ಈ ನೀರನ್ನು ಸೂರ್ಯ ದೇವರಿಗೆ ಅರ್ಪಣೆ ಮಾಡಬೇಕು. ಬೆಲ್ಲ, ಕುಂಕುಮ, ಅಕ್ಕಿ ಮತ್ತು ಕೆಂಪು ಹೂಗಳು ಸೂರ್ಯ ದೇವರಿಗೆ ತುಂಬಾ ಇಷ್ಟದ ಸಾಮಗ್ರಿಗಳು ಎಂದು ಹೇಳಲಾಗಿದೆ.
Most
Read:
ಮಣಿಕಟ್ಟಿನಲ್ಲಿರುವ
ರೇಖೆಗಳು
-ಎಷ್ಟಿವೆ?
ಏನು
ಹೇಳುತ್ತವೆ?
ನೇರವಾಗಿ ಸೂರ್ಯ ದೇವರನ್ನು ನೋಡಬೇಡಿ
ನೀವು ಪ್ರತಿನಿತ್ಯ ಸೂರ್ಯ ದೇವರಿಗೆ ಜಲ ಅರ್ಪಣೆ ಮಾಡುವ ವೇಳೆ ನೇರವಾಗಿ ಸೂರ್ಯ ದೇವರನ್ನು ನೋಡಬಾರದು. ಪಾತ್ರೆಯಿಂದ ಬೀಳುತ್ತಿರುವಂತಹ ನೀರಿನ ಮೂಲಕವಾಗಿ ನೀವು ಸೂರ್ಯ ದೇವರನ್ನು ಕಾಣಬಹುದು. ಸೂರ್ಯ ದೇವರಿಗೆ ಕೆಂಪು ಬಣ್ಣವು ತುಂಬಾ ಇಷ್ಟವಾಗಿರುವ ಕಾರಣದಿಂದ ನೀವು ಕೆಂಪು ಬಟ್ಟೆ ಧರಿಸಿಕೊಂಡು ಜಲ ಅರ್ಪಣೆ ಮಾಡಿದರೆ ಅದರಿಂದ ನಿಮಗೆ ತುಂಬಾ ಶುಭವಾಗುವುದು ಎಂದು ಹೇಳಲಾಗುತ್ತದೆ.