Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶನಿಗೆ ಶರಣು ಹೇಳಿ ಕಷ್ಟಕಾರ್ಪಣ್ಯ ಕಳೆದುಕೊಳ್ಳೋಣ..
ಯಾರಿಗಾದರೂ ಕಷ್ಟ ಕಾರ್ಪಣ್ಯಗಳು ಹೆಚ್ಚಾದಾಗ ಅವರಿಗೆ ಶನಿ ದೋಷವಿದೆ, ಗ್ರಹಚಾರ ಸರಿಯಾಗಿಲ್ಲ ಎಂಬ ಮಾತುಗಳನ್ನು ಹೇಳುವುದನ್ನು ಕೇಳಿರುತ್ತೀರಿ ಅಲ್ಲವೇ? ಶನಿ ವಕ್ಕರಿಸುವುದು ಎಂಬ ಮಾತೂ ಚಾಲ್ತಿಯಲ್ಲಿದ್ದು ತಡೆಯಲಾರದ ಕಷ್ಟವನ್ನು ಶನಿ ದೇವರು ಭೂಮಿಯಲ್ಲಿರುವ ಜನರಿಗೆ ನೀಡಿ ಅವರನ್ನು ತಮ್ಮ ಬಳಿಗೆ ಬರುವಂತೆ ಮಾಡುತ್ತಾರೆ.
ಕಾಲು ತೊಳೆಯುವಾಗ ಹಿಂಭಾಗವನ್ನು ನೀವು ಸರಿಯಾಗಿ ತೊಳೆದುಕೊಳ್ಳದೇ ಇದ್ದಲ್ಲಿ ಇಲ್ಲವೇ ಬೆನ್ನ ಹಿಂಭಾಗದಲ್ಲಿ ನೀರಿನ ಪಸೆಯನ್ನು ಚೆನ್ನಾಗಿ ಒರೆಸಿಕೊಳ್ಳದೇ ಇದ್ದಲ್ಲಿ ಶನಿ ವಕ್ಕರಿಸುತ್ತದೆ ಎಂಬ ಮಾತನ್ನು ಹಿರಿಯರು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಇದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಗೊತ್ತಿಲ್ಲದಿದ್ದರೂ ಶನಿಯ ಕಾಟ ಶಕ್ತಿಯುತವಾದುದು ಎಂಬುದಂತೂ ನಿಜ.
ಕಷ್ಟದ ಸಮಯದಲ್ಲಿ ಇನ್ನಷ್ಟು ಬಲಶಾಲಿಯನ್ನಾಗಿಸುವ ಶಕ್ತಿಯನ್ನು ಹೊಂದಿಕೊಳ್ಳುವಂತೆ ವ್ಯಕ್ತಿಯೋರ್ವನಲ್ಲಿ ಶನಿ ಮಾಡುತ್ತಾನೆ ಮತ್ತು ಕಷ್ಟದ ಕೋಟೆಯನ್ನು ಹೇಗೆ ಬೇಧಿಸಬೇಕೆಂಬ ಉಪಾಯ ಆತನಲ್ಲಿ ಸ್ವಯಂ ರಚನೆಯಾಗುವಂತೆ ಶನಿ ನೋಡಿಕೊಳ್ಳುತ್ತಾನೆ. ಮಹಾನ್ ಸತ್ಯವಂತ ಸತ್ಯ ಹರಿಶ್ಚಂದ್ರನನ್ನು ಶನಿ ಬೆನ್ನು ಬಿಡದೆ ಕಾಡಿದ್ದಾನೆ ಮತ್ತು ಆತನ ಸತ್ಯದ ಸತ್ವ ಪರೀಕ್ಷೆಯನ್ನು ಹಲವಾರು ವಿಧದಲ್ಲಿ ಪರೀಕ್ಷಿಸುತ್ತಾ ಅಂತಿಮವಾಗಿ ಹರಿಶ್ಚಂದ್ರನ ಎದುರು ತಲೆಬಾಗಿದ್ದಾನೆ.
ಹೀಗೆ
ಶನಿಕಾಟ
ಬಡವ
ಶ್ರೀಮಂತ
ಎಂಬ
ಭೇಧವಿಲ್ಲದೆ
ಎಲ್ಲರನ್ನೂ
ಕಾಡುತ್ತಾನೆ
ಪೀಡಿಸುತ್ತಾನೆ.
ಇವನ
ಆಟ
ಯಾವ
ಪ್ರಕಾರದ್ದಾಗಿರುತ್ತದೆ
ಎಂದರೆ
ಬಡವ
ಶ್ರೀಮಂತನಾಗಬಹುದು
ಅಂತೆಯೇ
ಶ್ರೀಮಂತ
ಬಡವನಾಗಬಹುದು.
ಶನಿ
ಕಾಟ
ಕೇವಲ
ಧನದ
ಸಮಸ್ಯೆಗಳನ್ನು
ಮಾತ್ರ
ಹೊಂದಿರದೇ
ಅನೇಕ
ಆರೋಗ್ಯ
ಸಮಸ್ಯೆಗಳ
ಮೂಲಕವೂ
ವ್ಯಕ್ತಿಯ
ಮೇಲೆ
ಕೆಟ್ಟ
ಪರಿಣಾಮವನ್ನು
ಉಂಟುಮಾಡಬಹುದು.
ಆದರೆ
ಈ
ಎಲ್ಲಾ
ಸಂಕಷ್ಟಗಳಿಂದ
ನೀವು
ಆದಷ್ಟು
ಬೇಗ
ಮುಕ್ತಿ
ಹೊಂದಬೇಕು
ಎಂದಾದಲ್ಲಿ
ಶನಿಗೆ
ಶರಣು
ಎಂದು
ಹೇಳಲೇಬೇಕು.
ಆತನನ್ನು
ಭಕ್ತಿಯಿಂದ
ಆರಾಧಿಸಿ
ಸಂಪ್ರೀತಿಗೊಳಿಸಿದರೆ
ಕಷ್ಟ
ನಿವಾರಣೆಯಾಗುತ್ತದೆ.
ಹಾಗಿದ್ದರೆ
ಆ
ವಿಧಾನಗಳೇನು
ಎಂಬುದನ್ನು
ಕೆಳಗಿನ
ಸ್ಲೈಡರ್ಗಳಲ್ಲಿ
ಪರಿಶೀಲಿಸೋಣ...
ಭಕ್ತಿಯಿಂದ ಸಾಸಿವೆ ಎಣ್ಣೆಯನ್ನು ಅರ್ಪಿಸಿ
ಧರ್ಮಗ್ರಂಥಗಳ ಪ್ರಕಾರ ಶನಿದೇವನಿಗೆ ಅರ್ಪಿಸಲು ಸಾಸಿವೆ ಎಣ್ಣೆ ಸೂಕ್ತವಾಗಿದೆ. ಇದನ್ನು ಅರ್ಪಿಸಲು ಶನಿದೇವನ ದಿನವಾದ ಶನಿವಾರವೇ ಅತ್ಯಂತ ಸೂಕ್ತವಾದ ದಿನವಾಗಿದ್ದು ಅಂದು ಸೂರ್ಯ ಹುಟ್ಟುವ ಮೊದಲೇ ಅರಳಿ ಮರದ ಬಳಿ ಧಾವಿಸಿ ಯಾವುದಾದರೊಂದು ರೆಂಬೆಯ ಮೇಲೆ ಎಣ್ಣೆಯನ್ನು ಸುರಿದು ಅರ್ಪಿಸಬೇಕು. ಸಾಸಿವೆ ಎಣ್ಣೆ ಲಭ್ಯವಿಲ್ಲದಿದ್ದರೆ ಕರಿಎಳ್ಳಿನ ಎಣ್ಣೆಯನ್ನೂ ಅರ್ಪಿಸಬಹುದು.
ಹನುಮ೦ತನನ್ನು ಆರಾಧಿಸಿ
ಮ೦ಗಳವಾರ ಹಾಗೂ ಶನಿವಾರಗಳ೦ದು ಭಗವಾನ್ ಹನುಮ೦ತನನ್ನು ಆರಾಧಿಸುವುದರಿ೦ದ ಶನಿಯು ಶಾ೦ತನಾಗಲು ನೆರವಾಗುತ್ತದೆ. ಜೊತೆಗೆ, ಪ್ರತಿದಿನವೂ ಹನುಮಾನ್ ಚಾಲೀಸಾವನ್ನು ಪಠಿಸುವುದರಿ೦ದ ಶನಿದೇವನಿ೦ದ ಸ೦ಭವಿಸಬಹುದಾದ ವೈಪರೀತ್ಯಗಳು ಉಪಶಮನಗೊಳ್ಳಲು ನೆರವಾಗುತ್ತದೆ.
ಶನಿದೇವರಿಗೆ ಬಡವರೇ ಪ್ರಿಯರು
ಶನಿದೇವನಿಗೆ ಬಡವರು ಮತ್ತು ಬಲ್ಲಿದರು ಇಷ್ಟವಾಗಿದ್ದು ಅವರಿಗೆ ಹೆಚ್ಚಿನ ಸಹಾಯ ಮಾಡುತ್ತಾನೆಂದು ನಂಬಲಾಗಿದೆ. ಬಡವರಿಗೆ ನೆರವಾಗುವ ಮೂಲಕ ಶನಿದೇವನನ್ನು ಒಲಿಸಿಕೊಳ್ಳಬಹುದು ಮತ್ತು ಶನಿದೋಷದಿಂದ ಮುಕ್ತಿ ಹೊಂದಬಹುದು ಎಂದು ಭಾವಿಸುವ ಭಕ್ತರು ಬಡಬಗ್ಗರಿಗೆ ಅಗತ್ಯವಿವಸ್ತುಗಳನ್ನು ದಾನರೂಪದಲ್ಲಿ ನೀಡುವ ಮೂಲಕ ಶನಿಯ ಪ್ರಭಾವದಿಂದ ಹೊರಬರಲು ಯತ್ನಿಸುತ್ತಾರೆ. ಬಡವರಿಗೆ ಬಟ್ಟೆ ಅಥವಾ ಹಣವನ್ನು ಶನಿವಾರದಂದು ನೀಡಲಾಗುತ್ತದೆ. ಪರ್ಯಾಯವಾಗಿ ಬಡವರಿಗೆ ಕಪ್ಪು ಬಟ್ಟೆಯ ಚಿಕ್ಕ ತುಂಡನ್ನೂ ದಾನರೂಪದಲ್ಲಿ ಬಡಬಗ್ಗರಿಗೆ ನೀಡಬಹುದು.
ಕಪ್ಪು ಎಳ್ಳು ಬೆರೆಸಿದ ಹಾಲಿನ ಅಭಿಷೇಕ
ಕಪ್ಪು ಎಳ್ಳನ್ನು ಸೇರಿಸಿದ ಹಸಿಹಾಲನ್ನು ಶಿವಲಿ೦ಗದ ಮೇಲೆ ಪ್ರತಿದಿನವೂ ಇಲ್ಲವೇ ನಿರ್ದಿಷ್ಟವಾಗಿ ಪ್ರತೀ ಶನಿವಾರಗಳ೦ದು ಭಕ್ತಿಪೂರ್ವಕವಾಗಿ ಅಭಿಷೇಕ ಮಾಡಿಸುವುದರಿ೦ದ ಶನಿದೇವನ ಕೆಟ್ಟ ಪ್ರಭಾವವನ್ನು ಅಥವಾ ವಕ್ರದೃಷ್ಟಿಯನ್ನು ಶಾ೦ತಗೊಳಿಸಲು ಸಹಾಯವಾಗುತ್ತದೆ.
ಕಪ್ಪು ಬಣ್ಣ ಪ್ರಿಯ ಶನಿದೇವ
ಶನಿದೇವನ ಅಚ್ಚುಮೆಚ್ಚಿನ ಬಣ್ಣವು ಕಪ್ಪಾಗಿರುತ್ತದೆ. ಆದ್ದರಿ೦ದ, ಒ೦ದು ವೇಳೆ ನೀವು ಶನಿಗ್ರಹದಿ೦ದ ಭಾಧಿತರಾಗಿದ್ದರೆ ಹಾಗೂ ಆತನನ್ನು ಮೆಚ್ಚಿಸಬಯಸುವಿರಾದರೆ, ಕಪ್ಪು ವಸ್ತ್ರಗಳನ್ನು ಶನಿವಾರಗಳ೦ದು ಧರಿಸಿಕೊಳ್ಳಿರಿ.
ಶನಿ ಮ೦ತ್ರ ಪಠಿಸಿ
"ನೀಲಾ೦ಜನ ಸ೦ಭಾಸ೦ ರವಿಪುತ್ರ೦ ಯಮಾಗ್ರಜ೦ ಛಾಯಾ ಮಾರ್ತ೦ಡ ಸ೦ಭೂತ೦ ತ೦ ನಮಾಮಯೇ ಶನೈಶ್ಚರ೦" ಈ ಮ೦ತ್ರವನ್ನು ಶನಿವಾರಗಳ೦ದು ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಪಠಿಸಿರಿ. ಈ ಮ೦ತ್ರವನ್ನು ಕನಿಷ್ಟ ಪಕ್ಷ ನೂರಾ ಎ೦ಟು ಬಾರಿಯಾದರೂ ಪಠಿಸಲು ನೀವು ಪ್ರಯತ್ನವನ್ನು ಮಾಡಬೇಕು.
ದುರಭ್ಯಾಸಗಳಿಂದ ದೂರವಿರಿ
ಶನಿದೇವನನ್ನು ಒಲಿಸಿಕೊಳ್ಳಲು ಮದ್ಯಪಾನದ ವರ್ಜನೆ ಅಗತ್ಯ. ಏಕೆಂದರೆ ಶನಿ ಓರ್ವ ನ್ಯಾಯದೇವತೆಯೂ ಆಗಿದ್ದಾನೆ. ಕೆಟ್ಟ ಅಭ್ಯಾಸಗಳಾದ ಧೂಮಪಾನ, ಮದ್ಯಪಾನ, ಮಾಂಸಸೇವನೆ ಮೊದಲಾದವು ಶನಿದೇವನಿಗೆ ಕೋಪ ತರಿಸುತ್ತದೆ. ಆದ್ದರಿಂದ ಈ ಎಲ್ಲಾ ದುರಭ್ಯಾಸಗಳನ್ನು ತ್ಯಜಿಸುವುದರಿಂದ, ಅದರಲ್ಲೂ ವಿಶೇಷವಾಗಿ ಸಾಡೆಸಾತಿಯ ಅವಧಿಯಲ್ಲಿ ಅನುಸರಿಸುವ ಮೂಲಕ ಶೀಘ್ರವಾಗಿ ತೊಂದರೆಯಿಂದ ಪಾರಾಗಬಹುದು.
ಪ್ರಾಮಾಣಿಕರಾಗಿರಿ
ನಿಮ್ಮ ಜೀವನದಲ್ಲಿ ಪ್ರಾಮಾಣಿಕರಾಗಿರುವುದು, ಲಂಚ ನೀಡದಿರುವುದು, ಯಾರಿಗೂ ತೊಂದರೆ ಅಥವಾ ನೋವು ನೀಡದಿರುವುದು ಸಾಡೆಸಾತಿಯ ಅವಧಿಯಲ್ಲಿ ಅವಶ್ಯವಾಗಿದೆ.