Just In
- 22 min ago ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- 1 hr ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 2 hrs ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 4 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Don't Miss
- Automobiles ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನವರಾತ್ರಿ 2021: ಕರ್ನಾಟಕದ ಶಕ್ತಿಯುತ ದೇವೀ ದೇವಾಲಯಗಳು ಇವೇ ನೋಡಿ
ಭಾರತದಲ್ಲಿ ಹಿಂದೂ ದೇವತೆಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ದೇವತೆಗಳು ಎಂದರೆ 'ಅಂತಿಮ ಶಕ್ತಿ' ಎಂದು ಸೂಚಿಸಲಾಗಿದ್ದು, 'ಶಕ್ತಿ' ಪದವು ದೇವತೆಗಳೊಂದಿಗೆ ಅವನಾಭಾವ ನಂಟನ್ನು ಹೊಂದಿದೆ.
ಹಾಗೆ ಹೇಳಬೇಕೆಂದರೆ ಪುರುಷ ದೇವರುಗಳಿಗಿಂತ ಸ್ತ್ರೀ ದೇವತೆಗಳಿಗೆ ಅಗಾಧ ಶಕ್ತಿ ಎಂದು ಹಲವು ಪೌರಾಣಿಕ ಕತೆಗಳಲ್ಲಿ ಕೇಳಬಹುದು. ಅದಕ್ಕಾಗಿಯೇ ಬಹುಶಃ, ಪುರುಷ ದೇವರುಗಳಿಗಿಂತ ಹೆಚ್ಚು ಭಯಭೀತವಾಗಿ ದೇವತೆಗಳನ್ನು ಪರಿಗಣಿಸಲಾಗಿದೆ. ದೇವಿಯು ವಿಭಿನ್ನ ಅವತಾರಗಳ ಮೂಲಕ ಭಕ್ತರನ್ನು, ನಂಬಿದವರನ್ನು ರಕ್ಷಿಸುತ್ತಾಳೆ, ಪೋಷಿಸುತ್ತಾಳೆ ಎಂದು ಹೇಳಲಾಗುತ್ತದೆ.
ಶರದ್ ನವರಾತ್ರಿ ಸಾಮಾನ್ಯ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ. 2021ನೇ ಸಾಲಿನಲ್ಲಿ ಅಕ್ಟೋಬರ್ 7ರಂದು ಆರಂಭವಾಗುವ ನವರಾತ್ರಿ ಅಕ್ಟೋಬರ್ 14ಕ್ಕೆ ಅಂತ್ಯವಾಗಿ 15ರಂದು ವಿಜಯ ದಶಮಿ ಆಚರಿಸಲಾಗುತ್ತದೆ. ನವರಾತ್ರಿ ಹಬ್ಬವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ನವರಾತ್ರಿಯ ಹಿನ್ನೆಲೆ ಈ ಲೇಖನದಲ್ಲಿ, ನಾವು ಕರ್ನಾಟಕದ ಪ್ರಸಿದ್ಧ ದೇವಿ ದೇವಾಲಯಗಳ ಸವಿವರ ಚಿತ್ರಣವನ್ನು ನೀಡಲಿದ್ದೇವೆ:
ಶೃಂಗೇರಿ ಶಾರದಾಂಬ ದೇವಸ್ಥಾನ
ಶ್ರೀ ಶಾರದಂಬ ದೇವಸ್ಥಾನ ಅಥವಾ ಶೃಂಗೇರಿ ಶಾರದ ಪೀಠವನ್ನು ಆದಿ ಶಂಕರಾಚಾರ್ಯರು ಸ್ಥಾಪಿಸಿದರು. ಈ ದೇವಾಲಯವನ್ನು ಹಿಂದೂ ಧರ್ಮದಲ್ಲಿ 'ಜ್ಞಾನದ ದೇವತೆ' ಆಗಿರುವ ಶಾರದಾ (ಸರಸ್ವತಿ) ದೇವರಿಗೆ ಅರ್ಪಿಸಲಾಗಿದೆ. ಇಂದು, ಶೃಂಗೇರಿ ಕರ್ನಾಟಕದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವು ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿದೆ. ಶೃಂಗೇರಿಯು ತುಂಗಾ ನದಿ ತಟದಲ್ಲಿರುವ ಚಿಕ್ಕ ಊರಾಗಿದ್ದು ಇಲ್ಲಿ ವಿಜಯನಗರದ ಕಾಲದ ಶಿಲ್ಪಕಲೆ ಮತ್ತು ಹೊಯ್ಸಳ ಶಿಲ್ಪಕಲೆ - ಎರಡರ ಸಮಾಗಮವನ್ನು ಈ ದೇವಸ್ಥಾನದಲ್ಲಿ ಕಾಣಬಹುದು.
PC: Calvinkrishy
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
ಪಶ್ಚಿಮ ಘಟ್ಟದ ಸೌಂದರ್ಯದ ಮಧ್ಯೆ ಇರುವ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನವು ಕರ್ನಾಟಕದ ಪ್ರಸಿದ್ಧ ದೇವಾಲಯವಾಗಿದೆ. ಕೊಡಚಾದ್ರಿ ಶಿಖರದ ತಪ್ಪಲು ಪ್ರದೇಶದಲ್ಲಿ ಮೂಕಾಂಬಿಕಾ ದೇವಿಯ ದೇವಸ್ಥಾನವು ನೆಲೆಗೊಂಡಿದೆ. ಶ್ರೀಚಕ್ರದ ಮೇಲೆ ಸ್ಥಾಪಿಸಲಾಗಿರುವ ದೇವತೆಯ ಪಂಚಲೋಹ ದ ವಿಗ್ರಹವನ್ನು ಆದಿ ಶಂಕರಾಚಾರ್ಯರು ಈ ಸ್ಥಳಕ್ಕೆ ತಾವು ಭೇಟಿನೀಡಿದ ಸಂದರ್ಭದಲ್ಲಿ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ. ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ, ದೇವಸ್ಥಾನವು ಭಕ್ತರ ದಟ್ಟಣೆಯಿಂದ ಕೂಡಿರುತ್ತದೆ. ಒಂದು ದಂತಕಥೆಯ ಪ್ರಕಾರ, ಮೂಕಾಂಬಿಕಾ ದೇವಿಯು ಬೆಳಿಗ್ಗೆ ಚೊಟ್ಟಿನಕ್ಕರ ದೇವಸ್ಥಾನದಲ್ಲಿ ಇರುತ್ತಾಳೆ ಮತ್ತು ಮಧ್ಯಾಹ್ನದ ಹೊತ್ತಿಗೆ ಕೊಲ್ಲೂರಿಗೆ ಹಿಂತಿರುಗುತ್ತಾಳೆ. ಅವಳನ್ನು ಕೇರಳಕ್ಕೆ ಆಹ್ವಾನಿಸುವುದು ಆದಿ ಶಂಕರಾಚಾರ್ಯರ ಆಶಯವಾಗಿತ್ತು ಮತ್ತು ಅವಳನ್ನು ಅಲ್ಲಿಗೆ ಆಹ್ವಾನಿಸಲು ಅವನು ದೊಡ್ಡ ತಪಸ್ಸು ಮಾಡಿದನು. ಉಡುಪಿಯಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಾಲಯವು ಪ್ರಸಿದ್ಧ ದೇವೀ ದೇವಾಲಯಗಳಲ್ಲಿ ಒಂದಾಗಿದೆ.
PC: PremKudva
ಚಾಮುಂಡೇಶ್ವರಿ ದೇವಸ್ಥಾನ
ಚಾಮುಂಡೇಶ್ವರಿ ದೇವಸ್ಥಾನವು ಕರ್ನಾಟಕದ ಅಧಿಕೃತ ನಾಡ ದೇವತೆಯಾಗಿದ್ದಾಳೆ ಅಲ್ಲದೆ ಚಾಮುಂಡೇಶ್ವರಿ ದೇವಿಯನ್ನು ಮೈಸೂರು ನಗರದ ರಕ್ಷಕಿ ಎಂದು ಸಹ ಪರಿಗಣಿಸಲಾಗಿದೆ. ಸಮುದ್ರ ಮಟ್ಟಕ್ಕಿಂತ 1074 ಮೀಟರ್ ಎತ್ತರದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನವು ಕರ್ನಾಟಕದ ಅತ್ಯಂತ ಜನಪ್ರಿಯ ದೇವತೆ ದೇವಾಲಯಗಳಲ್ಲಿ ಒಂದಾಗಿದೆ. ಜನರನ್ನು ಪೀಡಿಸುತ್ತಿದ್ದ ಮಹಿಷಾಸುರನನ್ನು ದುರ್ಗಾ ದೇವಿ ಸಂಹರಿಸಿದ ಕಾರಣ ದುರ್ಗಾ ದೇವಿಯನ್ನು ಮಹಿಷಾಸುರ ಮರ್ದಿನಿ ಎಂದೂ ಕರೆಯುತ್ತಾರೆ. ಆದ್ದರಿಂದಲೇ ವರ್ಣರಂಜಿತ ಮಹಿಷಾಸುರ, ಹಾವು ಮತ್ತು ಖಡ್ಗವನ್ನು ಹಿಡಿದುಕೊಂಡ ಪ್ರತಿಮೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವವರನ್ನು ಸ್ವಾಗತಿಸುತ್ತದೆ. ಚಾಮುಂಡೇಶ್ವರಿ ದೇವಿಯು ಮೈಸೂರು ವಂಶಸ್ಥರ ಕುಲದೇವತೆಯಾಗಿದ್ದಾಳೆ. ದೇವತೆಯು ಅಷ್ಟ ಭುಜಗಳಿಂದ ಕೂಡಿದ್ದು, ಅವಳ ಮೇಲಿನ ಬಲಗೈ ಮತ್ತು ಕೆಳಗಿನ ಎಡಗೈಯಲ್ಲಿ ತ್ರಿಶೂಲವಿದ್ದು, ಅದು ರಾಕ್ಷಸರ ಎದೆಯನ್ನು ಸೀಳುವಂತೆ ತೋರಿಸಲಾಗಿದೆ. ದೇವಿಯ ಉಳಿದ ಕೈಗಳಲ್ಲಿ ಖಡ್ಗ, ಬಾಣ, ವಜ್ರ, ಚಾಕು, ಈಟಿ, ಶಂಖ ಮತ್ತು ಸರ್ಪವಿದೆ. ಕೂತಿರುವ ದೇವತೆಯು ಹೊಯ್ಸಳರ ಕಲೆಯನ್ನು ನೆನಪಿಸುತ್ತದೆ. ಬೆಳ್ಳಿ ಮಂಟಪದಲ್ಲಿ ದೇವಿಯ ಹಲವಾರು ಅವತಾರಗಳಿವೆ. ಉತ್ಸವ ಮೂರ್ತಿಯಲ್ಲೂ ಇದೇ ಸಮನಾದ ಲಕ್ಷಣಗಳಿವೆ.
PC: Sanjay Acharya
ಸವದತ್ತಿ ಎಲ್ಲಮ್ಮ ದೇವಸ್ಥಾನ
ರೇಣುಕಾ ಎಲ್ಲಮ್ಮ ಎಂದೂ ಕರೆಯಲ್ಪಡುವ ಸವದತ್ತಿ ಎಲ್ಲಮ್ಮ ಉತ್ತರ ಕರ್ನಾಟಕದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ, ಎಲ್ಲಮ್ಮನನ್ನು 'ಫಲವತ್ತತೆಯ ದೇವತೆ' ರೂಪದಲ್ಲಿ ಕಾಣಲಾಗುತ್ತದೆ. ಸವದಟ್ಟಿ ಕರ್ನಾಟಕದ ಬೆಳಗಾಂ ಜಿಲ್ಲೆಯ ಹಳೆಯ ದೇವಾಲಯ ಪಟ್ಟಣದಲ್ಲಿದೆ. ತರಳಬಾಳು ಹುಣ್ಣಿಮೆ ದಿನದಂದು ಇಲ್ಲಿ ವಿಶೇಷ ಪೂಜೆ, ಜಾತ್ರ ಮಹೋತ್ಸವ ನಡೆಯುತ್ತದೆ. ಶ್ರೀಕ್ಷೇತ್ರಕ್ಕೆ ರಾಜ್ಯ ಮತ್ತು ಅಕ್ಕಪಕ್ಕದ ಹೊರ ರಾಜ್ಯಗಳಿಂದಲೂ ಸಹ ಈ ಹುಣ್ಣಿಮೆಗೆ ಕುಟುಂಬ ಸಮೇತ ಜನರು ಆಗಮಿಸುತ್ತಾರೆ. ದೇವಿಗೆ ಪಡ್ಡಲಗಿ ತುಂಬಿಸಿ, ಕಾಯಿ ಒಡೆಸಿ, ಕರ್ಪೂರ ಹಚ್ಚಿ ತಾಯಿ ಕೃಪೆಗೆ ಪಾತ್ರರಾಗುತ್ತಾರೆ. ವರ್ಷವಿಡೀ ಈ ದೇವಸ್ಥಾನಕ್ಕೆ ಭಕ್ತರ ಆಗಮನವಾಗುತ್ತಿದ್ದರೂ ಭಾರತ ಹುಣ್ಣಿಮೆಯಲ್ಲಿ ಮಾತ್ರ ಅದು ಇಮ್ಮಡಿಗೊಳ್ಳುತ್ತದೆ.
PC: Manjunath Doddamani
ಸಿಗಂದೂರು ಚೌಡೇಶ್ವರಿ ದೇವಸ್ಥಾನ
ಸಿಗಂದೂರು ಶಿವಮೊಗ್ಗದ ಸಾಗರ ತಾಲೂಕಿನಲ್ಲಿದೆ. ಸಿಗಂಧೂರು ಲಿಂಗನಮಕ್ಕಿ ಜಲಾಶಯದ ದಡದಲ್ಲಿರುವ ಒಂದು ಸಣ್ಣ ಹಳ್ಳಿ. ಇದು ಚೌಡೇಶ್ವರಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಅವಳು ಸ್ವಯಂ ಅಭಿವ್ಯಕ್ತ ದೇವತೆ ಎಂದು ಹೇಳಲಾಗುತ್ತದೆ. ದೇವಾಲಯಕ್ಕೆ ತೆರಳಲು ರಸ್ತೆ ಸಂಪರ್ಕ ಇಲ್ಲದ ಕಾರಣ ದೇವಾಲಯವನ್ನು ಸಂಪರ್ಕಿಸುವ ದೋಣಿಯ ಮೂಲಕವೇ ದೇವಾಲಯಕ್ಕೆ ತಲುಪಬೇಕು.
PC: Official Website
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ
ಅನ್ನಪೂರ್ಣೇಶ್ವರಿ ದೇವಿಯು ಹೆಸರೇ ಹೇಳಿದಂತೆ ಪೋಷಣೆ ಮತ್ತು ಆಹಾರದ ದೇವತೆಯಾಗಿದ್ದಾಳೆ. ಅವಳು ಎಲ್ಲರಿಗೂ ಆಹಾರವನ್ನು ಒದಗಿಸುವವಳು. ದೇವಿಯು ನಿತ್ಯಹರಿದ್ವರ್ಣ ಬೆಟ್ಟಗಳ ಮಧ್ಯೆ ನೆಲೆಸಿದ್ದು, ಮುಖ್ಯ ದೇವತೆ ಅನ್ನಪೂರ್ಣೇಶ್ವರಿಯನ್ನು ಚಿನ್ನದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವತೆಯ ಆಶೀರ್ವಾದ ಪಡೆದ ಭಕ್ತ ಜೀವನದಲ್ಲಿ ಆಹಾರಕ್ಕಾಗಿ ಯಾವುದೇ ಕೊರತೆಯನ್ನು ಹೊಂದಿಲ್ಲ ಎಂದು ನಂಬಲಾಗಿದೆ. ಒಮ್ಮೆ ಭಗವಾನ್ ಶಿವನು ಶಾಪ ಹೊಂದಿದ್ದನೆಂದು ಮತ್ತು ದೇವಿಯು ಅನ್ನಪೂರ್ಣ ದೇವಿಯನ್ನು ಭೇಟಿ ಮಾಡಿದಾಗ ಆಶೀರ್ವದಿಸಬೇಕೆಂದು ಈ ಶಾಪವನ್ನು ತಿರುಗಿಸಲಾಗಿದೆ ಎಂದು ನಂಬಲಾಗಿದೆ. ಹೊರನಾಡಿನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನವು ಕರ್ನಾಟಕದ ಪ್ರಸಿದ್ಧ ದೇವಿ ದೇವಾಲಯಗಳಲ್ಲಿ ಒಂದಾಗಿದೆ.
PC: Ganapati Kateel
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
ಕಟೀಲು ಪಟ್ಟಣದ ಶ್ರೀ ದುರ್ಗಪರಮೇಶ್ವರಿ ದೇವಾಲಯವನ್ನು ಪ್ರಸಿದ್ಧ ಸ್ಥಳವೆಂದು ಪರಿಗಣಿಸಲಾಗಿದೆ. ಮಂಗಳೂರಿನಿಂದ ಸುಮಾರು 26 ಕಿ.ಮೀ ದೂರದಲ್ಲಿರುವ ಈ ದೇವಾಲಯ ಹಿಂದೂ ಧರ್ಮದ ಪವಿತ್ರ ದೇವಾಲಯಗಳಲ್ಲೊಂದಾಗಿದೆ. ಕಟೀಲು ದುರ್ಗಾ ದೇವಿಯು ದೇವಾಲಯದ ಪ್ರಧಾನ ದೇವತೆಯಾಗಿದೆ. ಕಾರ್ತಿಕ ಮಾಸದ ಬಹುಲಾ ಪಂಚಮಿ ದಿನದಂದು ದೀಪಗಳ ಹಬ್ಬವನ್ನು ಆಚರಿಸಲಾಗುತ್ತದೆ. ಪವಿತ್ರ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಆಲಯದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಉತ್ಸವದ ಭಾಗವಾಗಿ 'ಲಲಿತ ಪಂಚಮಿ', 'ಮಹಾನವಮಿ','ವಿಜಯದಶಮಿ' ಹಾಗೂ 'ಮಧ್ವ ಜಯಂತಿ'ಯನ್ನು ಆಚರಿಸಲಾಗುತ್ತದೆ.
PC: official website
ಮಂಗಳೂರಿನ ಮಂಗಳಾದೇವಿ ದೇವಸ್ಥಾನ
ಮಂಗಳೂರು ಎಂಬ ಹೆಸರು ಶ್ರೀ ಮಂಗಳಾದೇವಿ ದೇವಸ್ಥಾನದಿಂದ ಬಂದಿದೆ ಎಂದು ಹೇಳಲಾಗಿದೆ. ಈ ದೇವಾಲಯಕ್ಕೆ ಸಾಕಷ್ಟು ದಂತಕತೆಗಳಿವೆ. ಒಂದು ದಂತಕಥೆಯ ಪ್ರಕಾರ, ಈ ದೇವಾಲಯವನ್ನು ಪರಶುರಾಮನು ಸ್ಥಾಪಿಸಿದನು. ಇನ್ನೊಂದು ಐತಿಹಾಸಿಕ ಮಾಹಿತಿಯಂತೆ ಈ ದೇವಾಲಯವನ್ನು ವಿಷ್ಣು ದೇವರ ಹತ್ತು ಅವತಾರಗಳಲ್ಲಿ ಒಂದಾದ ಪರಶುರಾಮನು ನಿರ್ಮಿಸಿದನೆಂದು ನಂಬಲಾಗಿದೆ ಮತ್ತು ನಂತರ ಅದನ್ನು ಕುಂದವರ್ಮನು ವಿಸ್ತರಿಸಿದನೆಂದು ಪ್ರತೀತಿ ಇದೆ. ಇದು ಮಂಗಳೂರಿನ ಬೋಲಾರಾದ ಪ್ರದೇಶದಲ್ಲಿದೆ. ಈ ದೇವಾಲಯದಲ್ಲಿ ಮಂಗಳಾದೇವಿಯ ರೂಪದಲ್ಲಿ ಶಕ್ತಿ ಸ್ವರೂಪಿಣಿಯನ್ನು ಪೂಜಿಸಲಾಗುತ್ತದೆ. ನವರಾತ್ರಿ (ದಸರಾ) ಹಬ್ಬದ ಒಂಭತ್ತು ದಿನಗಳಲ್ಲಿ ವಿಶೇಷ ಪೂಜೆಗಳನ್ನು ದೇವಿಗೆ ಸಲ್ಲಿಸಲಾಗುತ್ತದೆ. ಕರ್ನಾಟಕವಲ್ಲದೇ, ಹೊರ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸಿ ಹೃನ್ಮನಗಳಲ್ಲಿ ಮಂಗಳಾದೇವಿಯನ್ನು ತುಂಬಿಕೊಳ್ಳುತ್ತಾರೆ. ಏಳನೇ ದಿನ ಮಂಗಳದೇವಿಯನ್ನು ಚಂಡಿಕಾ ಅಥವಾ ಮಾರಿಕಾಂಬ ಎಂದು ಪೂಜಿಸಲಾಗುತ್ತದೆ. ಎಂಟನೇ ದಿನ ದೇವಿಯನ್ನು ಮಹಾ ಸರಸ್ವತಿಯಾಗಿ ಪೂಜಿಸಲಾಗುತ್ತದೆ. ಒಂಭತ್ತನೇ ದಿನ ಮಹಾನವಮಿಯ ದಿನ ವಾಗ್ದೇವಿ ಮಾತಿನ ದೇವತೆ ಎಂದು ಪೂಜಿಸಲಾಗುತ್ತದೆ. ಆಯುಧ ಪೂಜೆ ನಡೆಸಲಾಗುತ್ತದೆ. ಎಲ್ಲಾ ಶಸ್ತ್ರಾಸ್ತ್ರಗಳು ಮತ್ತು ಸಾಧನಗಳನ್ನು ಪೂಜಿಸಲಾಗುತ್ತದೆ.
PC: Vinay Bhat
ಬಾದಾಮಿ ಬನಶಂಕರಿ ದೇವಿ ದೇವಸ್ಥಾನ
ಬನಶಂಕರಿ ದೇವಿಯು ಪಾರ್ವತಿ ದೇವಿಯ ಮತ್ತೊಂದು ರೂಪವೆಂದು ನಂಬಲಾಗಿದೆ. ಬಾದಾಮಿ ಸಮೀಪದ ಬನಶಂಕರಿ ದೇವಿ ದೇವಸ್ಥಾನವು ಚಾಲುಕ್ಯರ ಯುಗಕ್ಕೆ ಸೇರಿದೆ. ಇಲ್ಲಿ ದೇವತೆಯನ್ನು ಶಾಕಾಂಬರಿ ಎಂದೂ ಕರೆಯುತ್ತಾರೆ. ದೇವಿಗೆ ಅಷ್ಟ ಭುಜ, ಕೈಗಳಿವೆ. ಬಲಗೈಯಲ್ಲಿ ಖಡ್ಗ, ಗಂಟೆ, ತ್ರಿಶೂಲ ಮತ್ತು ಲಿಪ್ತಿ ಹಾಗೂ ಎಡಗೈಯಲ್ಲಿ ಡಮರು, ಡಾಲು, ರುಂಡ ಮತ್ತು ಅಮೃತ ಪಾತ್ರೆಗಳಿವೆ. ದೇವಾಲಯಕ್ಕೆ ನಾಲ್ಕೂ ದಿಕ್ಕಿನಲ್ಲಿ ದ್ವಾರಗಳಿವೆ. ದೇವಾಲಯದ ಆವರಣದಲ್ಲಿ ನಾಲ್ಕು ದೀಪಸ್ತಂಭಗಳಿವೆ. ಕಾರ್ತಿಕ ಮಾಸದಲ್ಲಿ ಈ ದೀಪಸ್ತಂಭಗಳಲ್ಲಿ ಭಕ್ತರು ದೀಪವನ್ನು ಬೆಳಗಿಸುತ್ತಾರೆ.
PC: Biggs, thomas