For Quick Alerts
ALLOW NOTIFICATIONS  
For Daily Alerts

ಪರಿವರ್ತಿನಿ ಏಕಾದಶಿ 2021: ಇದು ತುಂಬಾ ಮಹತ್ವವಾದ ಏಕಾದಶಿ, ಹೇಗೆ? ಪೂಜೆಗೆ ಶುಭ ಮುಹೂರ್ತ ಯಾವಾಗ?

|

ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪರಿವರ್ತಿನಿ ಏಕಾದಶಿ ಅಥವಾ ಪದ್ಮ ಏಕಾದಶಿ ಎಂದು ಕರೆಯಲಾಗುವುದು. ವಿಷ್ಣುವಿನ ವಾಮನ ಅವತಾರವನ್ನು ಈ ದಿನ ಪೂಜಿಸಲಾಗುತ್ತದೆ.

ಈ ವರ್ಷ ಪರಿವರ್ತಿನಿ ಏಕಾದಶಿ ಸೆಪ್ಟೆಂಬರ್ 17, ಶುಕ್ರವಾರದಂದು ಆಚರಿಸಲಾಗುವುದು. ಧಾರ್ಮಿಕ ನಂಬಿಕೆಗಳ ಪ್ರಕಾರ ಪರಿವರ್ತಿನಿ ಏಕಾದಶಿ ಮಾಡುವುದರಿಂದ ವಿಷ್ಣುವಿನ ಹಾಗೂ ಲಕ್ಷ್ಮಿಯ ಆಶೀರ್ವಾದಿಂದ ಜೀವನದಲ್ಲಿ ಯಾವುದಕ್ಕೂ ಕೊರತೆ ಉಂಟಾಗುವುದಿಲ್ಲ.

Parivartini Ekadashi 2021

ಹಿಂದೂ ಪುರಾಣದ ಪ್ರಕಾರ ಭಗವಾನ್ ವಿಷ್ಣು ದೇವಶಯನ ಏಕಾದಶಿಯಿಂದ ಯೋಗ ನಿದ್ರೆಗೆ ಹೋಗುತ್ತಾನೆ ಮತ್ತು ವರಿವರ್ತಿ ಏಕಾದಶಿಯ ದಿನ ಬದಿಗೆ ಬದಲಾಗುತ್ತಾನೆ. ಬದಿಯನ್ನು ಬದಲಾಯಿಸುವುದು ವಿಷ್ಣುವಿನ ಸ್ಥಾನವನ್ನು ಬದಲಾಯಿಸುತ್ತದೆ.

ಅದಕ್ಕಾಗಿಯೇ ಇದನ್ನು ಪರಿವರ್ತಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಮಾಡುವ ಉಪವಾಸ ಮತ್ತು ಪೂಜೆಗೆ ವಿಶೇಷ ಮಹತ್ವವಿದೆ. ಈ ಏಕಾದಶಿಯಂದು ಉಪವಾಸವಿದ್ದು ಆಚರಿಸಿದರೆ ಎಲ್ಲಾ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.

ಈ ಏಕಾದಶಿಯ ಶುಭ ಮುಹೂರ್ತ ಯಾವುದು? ಇದರ ಮಹತ್ವವೇನು ಎಂಬುವುದರ ಬಗ್ಗೆ ತಿಳಿಯೋಣ:

ಪರಿವರ್ತನಿ ಏಕಾದಶಿ ಶುಭ ಸಮಯ:

ಪರಿವರ್ತನಿ ಏಕಾದಶಿ ಶುಭ ಸಮಯ:

ಏಕಾದಶಿ ಶುಭ ಸಮಯ-

ಏಕಾದಶಿ ತಿಥಿ ಸೆಪ್ಟೆಂಬರ್ 16 ಗುರುವಾರ ಬೆಳಿಗ್ಗೆ 09:39 ರಿಂದ ಆರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 17 ರ ಬೆಳಗ್ಗೆ 08:08 ರವರೆಗೆ ಮುಂದುವರಿಯುತ್ತದೆ. ಇದರ ನಂತರ, ದ್ವಾದಶಿ. .ಸೆಪ್ಟೆಂಬರ್ 16 ರ ಏಕಾದಶಿ ತಿಥಿಯು ಇಡೀ ದಿನ ಇರುತ್ತದೆ. ಉದಯ ತಿಥಿಯ ಉಪವಾಸದ ನಂಬಿಕೆಯ ಪ್ರಕಾರ, ಸೆಪ್ಟೆಂಬರ್ 17 ರ ಶುಕ್ರವಾರದಂದು ಪರಿವರ್ತಿನಿ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ.

ಪರಿವರ್ತಿನಿ ಏಕಾದಶಿ ಪಾರಣ ಸಮಯ : ಸೆಪ್ಟೆಂಬರ್ 18 ಬೆಳಗ್ಗೆ 06:07 ರಿಂದ 06:54

ದ್ವಾದಶಿ ಪಾರಣಾ ತಿಥಿಯ ಅಂತ್ಯದ ಸಮಯ - ಬೆಳಗ್ಗೆ 06:54

 ಧಾರ್ಮಿಕ ಮಹತ್ವ

ಧಾರ್ಮಿಕ ಮಹತ್ವ

ಧಾರ್ಮಿಕ ನಂಬಿಕೆಯ ಪ್ರಕಾರ ವಿಷ್ಣುವು ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನಾಂಕದಂದು ಮಲಗುವ ಸ್ಥಿತಿಯನ್ನು ಬದಲಾಯಿಸುತ್ತಾನೆ. ಇದರಿಂದ ಅನೇಕ ಬದಲಾವಣೆಗಳಾಗುತ್ತವೆ ಎಂದು ಹೇಳಲಾಗುವುದು. ಆದ್ದರಿಂದ ಇದನ್ನು ಪರಿವರ್ತಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಕಟ್ಟು ನಿಟ್ಟಿನ ಉಪವಾಸವಿದ್ದು ವಿಷ್ಣುವಿನ ವಿಶೇಷ ಪೂಜೆಯನ್ನು ಮಾಡಲಾಗುವುದು. ಪ್ರಸ್ತುತ ಚಾತುರ್ಮಾಸ ನಡೆಯುತ್ತಿದೆ. ಈ ದಿನ, ಚಾತುರ್ಮಾಸದ ಅವಧಿಯಲ್ಲಿ, ಯೋಗನಿದ್ರೆಯಲ್ಲಿ ಮಲಗಿರುವ ವಿಷ್ಣು ತಿರುವುಗಳನ್ನು ಪಡೆಯುತ್ತಾನೆ ಮತ್ತು ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ ಎಂದು ನಂಬಲಾಗಿದೆ. ಇದರ ಜೊತೆಯಲ್ಲಿಈ ದಿನಾಂಕದಂದು ವಿಷ್ಣುವಿನ ವಾಮನ ರೂಪವನ್ನು ಪೂಜಿಸುವುದು. ಈ ಸಮಯದಲ್ಲಿ ವಿಷ್ಣು ವಾಮನ ರೂಪದಲ್ಲಿ ಪಾತಾಳ ಲೋಕದಲ್ಲಿ ನೆಲೆಸಿರುತ್ತಾನೆ ಎಂದು ನಂಬಲಾಗಿದೆ.

ಪರಿವರ್ತಿನಿ ಏಕಾದಶಿ ಆಚರಿಸಿದರೆ ದೊರೆಯುವ ಪ್ರಯೋಜನಗಳು

ಪರಿವರ್ತಿನಿ ಏಕಾದಶಿ ಆಚರಿಸಿದರೆ ದೊರೆಯುವ ಪ್ರಯೋಜನಗಳು

ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಬರುವ ಈ ಏಕಾದಶಿ ತುಂಬಾ ಮಹತ್ವವನ್ನು ಹೊಂದಿದೆ. ಈ ಏಕಾದಶಿ ಆಚರಿಸಿದರೆ ವಾಜಪೇಯಿ ಯಜ್ಞ ಮಾಡಿದಷ್ಟು ಫಲ ಸಿಗುವುದು ಎಂದು ಹೇಳಲಾಗುವುದು. ಈ ಏಕಾದಶಿ ಆಚರಿಸುವುದರಿಂದ ಜೀವನದಲ್ಲಿ ಯಾವುದೇ ಕೊರತೆಯಾಗುವುದಿಲ್ಲ. ಐಶ್ವರ್ಯ, ಆರೋಗ್ಯ ತುಂಬಿರುತ್ತದೆ.

ಪೂಜೆ ಫಲಕ್ಕಾಗಿ ಕಟ್ಟುನಿಟ್ಟಿನ ಉಪವಾಸ ಮಾಡಬೇಕು

ಪೂಜೆ ಫಲಕ್ಕಾಗಿ ಕಟ್ಟುನಿಟ್ಟಿನ ಉಪವಾಸ ಮಾಡಬೇಕು

ಏಕಾದಶಿ ಉಪವಾಸವನ್ನು ಅತ್ಯಂತ ಕಷ್ಟಕರವಾದ ಉಪವಾಸವೆಂದು ಪರಿಗಣಿಸಲಾಗಿದೆ. ಏಕಾದಶಿ ತಿಥಿಯ ಆರಂಭದಿಂದಲೇ ಈ ಉಪವಾಸದ ಸಿದ್ಧತೆ ಆರಂಭವಾಗುತ್ತದೆ. ಉದಯದ ದಿನದಂದು ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ಉಪವಾಸವನ್ನು ಮುಂದಿನ ದಿನಾಂಕದಂದು ಅಂದರೆ ದ್ವಾದಶಿಯ ದಿನದಂದು ಮುರಿಯಲಾಗುವುದು. ಏಕಾದಶಿ ಉಪವಾಸದ ವಿವರಣೆಯು ಮಹಾಭಾರತದ ಕಥೆಯಲ್ಲೂ ಕಂಡುಬರುತ್ತದೆ.

English summary

Parivartini Ekadashi 2021 Shubh Muhurat, Puja Vidhi, Vrat Katha and Vrat Rules

Parivartini Ekadashi 2021 Shubh Muhurat, Puja Vidhi, Vrat Katha and Vrat Rules, Read on...
X
Desktop Bottom Promotion