Just In
- 10 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 11 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 11 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 13 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News 'ಚೆಂಬು' ಜಾಹೀರಾತಿನ ಮೂಲಕ ಮೋದಿ ಸರ್ಕಾರದ ವಿರುದ್ದ ನೇರ ದಾಳಿಗಿಳಿದ ಕಾಂಗ್ರೆಸ್
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರತಿ ದಿನ ಸೂರ್ಯ ದೇವರಿಗೆ ಜಲ ಅರ್ಪಣೆ ಮಾಡಿದರೆ, ನಿಮ್ಮ ಅದೃಷ್ಟವೇ ಬದಲಾಗುತ್ತದೆ
ನಮ್ಮಲ್ಲಿ ಹೆಚ್ಚಿನವರಿಗೆ ಅವರ ಅಜ್ಜ ಅಥವಾ ತಾತಂದಿರು ಸೂರ್ಯೋದಯಕ್ಕೂ ಮುನ್ನವೇ ಎದ್ದು ಸೂರ್ಯನಿಗೆ ನಿತ್ಯವೂ ನೀರನ್ನು ಅರ್ಪಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದುದು ನೆನಪಿರಬಹುದು. ಈ ಜಗತ್ತಿಗೆ ಬೆಳಕು ನೀಡುವ ಸೂರ್ಯನನ್ನು ಮುಂಜಾನೆ ವಂದಿಸುವುದನ್ನು ಪವಿತ್ರ ಎಂದು ಭಾವಿಸಲಾಗುತ್ತದೆ ಹಾಗೂ ಪ್ರಥಮ ಕಿರಣಗಳು ಆಗಮಿಸುವ ಸಯಮದಲ್ಲಿ ನೀರನ್ನು ಅರ್ಪಿಸುವ ಮೂಲಕ ದೇಹದಲ್ಲಿ ಧನಾತ್ಮಕ ಶಕ್ತಿ ತುಂಬುತ್ತದೆ ಹಾಗೂ ಇದು ದಿನವನ್ನು ಉತ್ತಮವಾಗಿಸುತ್ತದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಹಿಂದೂ ಧರ್ಮದಲ್ಲಿ ಸೂರ್ಯ ನಮಸ್ಕಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ.
ಅಷ್ಟಕ್ಕೂ ಸೂರ್ಯನಿಗೆ ನೀರನ್ನೇ ಏಕೆ ಅರ್ಪಿಸಬೇಕು?
ಹಿಂದೊಮ್ಮೆ ಈ ಭೂಮಿಯ ಮೇಲಿನ ಜನರಿಗೆಲ್ಲಾ ಅಪಾರ ತೊಂದರೆಗಳು ಎದುರಾದವು. ಮಂದೇಹ ರಾಕ್ಷಸರು ಸೂರ್ಯನನ್ನು ಸೆರೆಹಿಡಿದು ಬಂದಿಯಾಗಿಸಿದ್ದರು. ಹಾಗಾಗಿ ಪೂರ್ವದಿಂದ ಮೂಡಲು ಸೂರ್ಯದೇವನಿಗೆ ಸಾಧ್ಯವಾಗಲೇ ಇಲ್ಲ. ಭೂಮಿಯ ಪ್ರತಿ ಜೀವಿಗೂ ಸೂರ್ಯನ ಬೆಳಕು ಅತ್ಯಗತ್ಯವಾಗಿದ್ದು ಈಗ ಸೂರ್ಯನ ಬೆಳಕಿಲ್ಲದೇ ಏನೂ ಮಾಡುವಂತಿಲ್ಲ. ಆಗ ಜನರ ಕಷ್ಟಗಳಿಗೆ ನೆರವಾಗಲು ಆಗಮಿಸಿದ ಬ್ರಹ್ಮದೇಹ 'ಆರ್ಗ್ಯ' ಎಂಬ ಮಂತ್ರವನ್ನು ನೀಡಿದ. ಈ ಸಮಯದಲ್ಲಿ ಬ್ರಾಹ್ಮಣರು ಗಾಯತ್ರಿ ಮಂತ್ರವನ್ನು ಪಠಿಸುತ್ತಾ ಸೂರ್ಯನಿಗೆ ನೀರನ್ನು ಅರ್ಪಿಸುವಂತೆ ಬ್ರಹ್ಮದೇವ ಸೂಚಿಸಿದ. ಗಾಯತ್ರಿ ಮಂತ್ರದ ಪ್ರಭಾವ ಪಡೆದ ನೀರು ಈ ರಾಕ್ಷಸರ ವಿರುದ್ದ ಹೋರಾಡುವ ಶಕ್ತಿ ಪಡೆದಿತ್ತು ಹಾಗೂ ಸೂರ್ಯನನ್ನು ಉದಯಿಸದಂತೆ ತಡೆಹಿಡಿದಿದ್ದ ರಾಕ್ಷಸರ ವಿರುದ್ದ ಹೋರಾಡಿತು. ಈ ಹೋರಾಟದಲ್ಲಿ ಜಯಿಸಿದ ಪರಿಣಾಮವಾಗಿ ಸೂರ್ಯದೇವ ಬಂಧನದಿಂದ ಬಿಡುಗಡೆಗೊಂಡು ಭೂಮಿಗೆ ಬೆಳಕು ನೀಡಲು ಉದಯಿಸುತ್ತಾನೆ. ಆದರೆ ಪ್ರತಿ ಬಾರಿಯೂ ಈ ಮಂದೇಹ ರಾಕ್ಷಸರು ಸೂರ್ಯನನ್ನು ಕಟ್ಟಿಹಾಕಲು ಯತ್ನಿಸುತ್ತಲೇ ಇರುತ್ತಾರೆ. ಹಾಗಾಗಿ ಈ ಸಮಯದಲ್ಲಿ ನೀರನ್ನು ಅರ್ಪಿಸುವ ಮೂಲಕ ಸೂರ್ಯದೇವವನ್ನು ಈ ಬಂಧನದಿಂದ ಬಿಡುಗಡೆಗೊಳಿಸಬಹುದು ಎಂದು ಪುರಾಣಗಳು ವಿವರಿಸುತ್ತವೆ.
ಸೂರ್ಯನಿಗೆ ನೀರನ್ನು ಅರ್ಪಿಸುವುದರ ಪ್ರಯೋಜನಗಳು
ಸೂರ್ಯನಿಗೆ ನೀರು ಅಥವಾ ಅರ್ಗ್ಯವನ್ನು ಅರ್ಪಿಸುವ ಮೂಲಕ ಮಾನಸಿಕ ಶಾಂತಿ, ದೈಹಿಕ ಶಕ್ತಿ ಹಾಗೂ ದಿನದ ಕೆಲಸಗಳಲ್ಲಿ ಎದುರಾಗುವ ಯಾವುದೇ ಕಷ್ಟವನ್ನು ಎದುರಿಸಲು ಪ್ರಾಯೋಗಿಕ ಸಹಿಷ್ಣುತೆ ಲಭಿಸುತ್ತದೆ. ಅಷ್ಟೇ ಅಲ್ಲ, ಸೂರ್ಯದೇವನ ರಕ್ಷಣೆ ಇರುವ ಭಾವನೆಯೊಂದೇ ವ್ಯಕ್ತಿಗೆ ಅಪಾರವಾದ ಆತ್ಮವಿಶ್ವಾಸವನ್ನೂ ನಿರ್ಭಿಡತೆಯನ್ನೂ ನೀಡುತ್ತದೆ. ಸೂರ್ಯನ ಆರಾಧನೆಯನ್ನು ನಿತ್ಯದ ಅಭ್ಯಾಸವಾಗಿಸುವವರಿಗೆ ಅಪಾರ ಸ್ಥೈರ್ಯ, ತಮ್ಮ ಮಾತಿನ ಮೇಲೆ ಹಿಡಿತ ಹಾಗೂ ಬುದ್ದಿವಂತಿಕೆಗಳು ಲಭಿಸುತ್ತವೆ. ಒಂದು ವೇಳೆ ನೀವು ನಿತ್ಯವೂ ಸೂರ್ಯನನ್ನು ಆರಾಧಿಸುವವರಾದರೆ ಇದರಿಂದ ನಿಮ್ಮ ಮನದಿಂದ ಸ್ವಾರ್ಥ, ಕ್ರೋಧ, ಲಾಲಸೆ, ದುರಾಸೆ ಮೊದಲಾದ ಋಣಾತ್ಮಕ ಚಿಂತನೆಗಳು ಇಲ್ಲವಾಗುತ್ತವೆ ಹಾಗೂ ಈ ಸ್ಥಾನದಲ್ಲಿ ಮಾನಸಿಕ ಶಾಂತಿ ತುಂಬುತ್ತದೆ.
Most Read:ಪ್ರತಿ ದಿನ ಮುಂಜಾನೆ ಸೂರ್ಯ ದೇವನಿಗೆ ಪೂಜೆ ಸಲ್ಲಿಸುವ ವಿಧಾನ
ಆದರೆ ’ಅರ್ಗ್ಯ’ವನ್ನು ಕೇವಲ ಮುಂಜಾನೆಯ ಹೊತ್ತಿನಲ್ಲಿ ಮಾತ್ರವೇ ಏಕೆ ಅರ್ಪಿಸಬೇಕು?
ಸೂರ್ಯನ ಕಿರಣಗಳು ಸೂರ್ಯೋದಯದ ಸಮಯದಲ್ಲಿ ಅತ್ಯಂತ ಕಡಿಮೆ ತೀಕ್ಷ್ಣವಾಗಿರುತ್ತವೆ ಹಾಗೂ ಭಕ್ತರಿಗೆ ಸೂರ್ಯನನ್ನು ಪೂಜಿಸಲು ಮತ್ತು ಅರ್ಗ್ಯವನ್ನು ಅರ್ಪಿಸಲು ಈ ಸಮಯ ಅತ್ಯಂತ ಸೂಕ್ತವಾಗಿದೆ. ಹಾಗಾಗಿ ಸೂಯನ ಪ್ರಥಮ ಕಿರಣಗಳು ತಾಕುವ ಸಮಯವೇ ಅರ್ಗ್ಯ ಅರ್ಪಿಸಲು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ.
ಈ ಕಾರ್ಯಕ್ಕೆ ತಾಮ್ರದ ಪಾತ್ರೆಯನ್ನೇ ಉಪಯೋಗಿಸುವ ಮಹತ್ವವೇನು?
ತಾಮ್ರ ಸಹಸ್ರಾರು ವರ್ಷಗಳಿಂದ ಬಳಕೆಯಲ್ಲಿರುವ ಲೋಹವಾಗಿದೆ. ತಿಳಿದುಬಂದಿರುವ ಇತಿಹಾಸದ ಪ್ರಕಾರ ಕ್ರಿ. ಪೂ 9000 ನೇ ಇಸವಿಯಿಂದಲೂ ತಾಮ್ರ ಬಳಕೆಯಲ್ಲಿದೆ. ವೇದಕಾಲದಲ್ಲಿಯೂ ತಾಮ್ರದ ಬಳಕೆ ಪ್ರಮುಖವಾಗಿತ್ತು. ಆಯುರ್ವೇದದ ಪ್ರಕಾರವೂ ನೀರನ್ನು ಸಂಗ್ರಹಿಸಿಡಲು ತಾಮ್ರದ ಪಾತ್ರೆಯೇ ಅತ್ಯುತ್ತಮವಾಗಿದೆ. ಅಲ್ಲದೇ ಸನಾತನ ಧರ್ಮದಲ್ಲಿ ಕಳಸದ ರೂಪದಲ್ಲಿ ತಾಮ್ರದ ಪಾತ್ರೆಯನ್ನೇ ಬಳಸಲಾಗುತ್ತಿತ್ತು ಹಾಗೂ ತಾಮ್ರವನ್ನು ಸಮೃದ್ದಿಯ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಅರ್ಗ್ಯ ಅರ್ಪಿಸಲು ತಾಮ್ರದ ಪಾತ್ರೆಯೇ ಶ್ರೇಷ್ಠವಾಗಿದೆ.