Just In
- 4 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 5 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 8 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 10 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- News ನೇಹಾ ಹತ್ಯೆ: ಸಾವಿನ ಮನೆಯಲ್ಲಿ ರಾಜಕಾರಣ ಸರಿಯಲ್ಲ, 90 ದಿನದಲ್ಲಿ ನ್ಯಾಯ ಸಿಗಲಿದೆ: ಸುರ್ಜೇವಾಲ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರೋಗ್ಯ, ಸಂಪತ್ತಿಗಾಗಿ ಗಣಪನಿಗೆ 6 ವಸ್ತುಗಳನ್ನು ಸಮರ್ಪಿಸಿ
ಸೆಪ್ಟೆಂಬರ್ 10ಕ್ಕೆ ಗಣೇಶ ಚತುರ್ಥಿ ಸಂಭ್ರಮ. ಗಣೇಶನಿಗೆ ಪೂಜೆ ಸಲ್ಲಿಸಲು ಕಟ್ಟು ನಿಟ್ಟಿನ ನಿಯಮಗಳೇನು ಇಲ್ಲ. ಗಣೇಶನಿಗೆ ಭಕ್ತಿಯಿಂದ ಗರಿಕೆ ಸಮರ್ಪಿಸಿದರೆ ಸಾಕು ತೃಪ್ತನಾಗುತ್ತಾನೆ.
ತನ್ನ ನಂಬಿದ ಭಕ್ತರನ್ನು ಎಂದಿಗೂ ಕೈ ಬಿಡಲ್ಲ ಗಣಪ. ಶಕ್ತಿ, ಬುದ್ಧಿವಂತಿಕೆ, ಜ್ಞಾನ, ಸಂಪತ್ತು, ಆರೋಗ್ಯವನ್ನು ನೀಡು ಎಂದು ಭಕ್ತರು ಗಣಪನಲ್ಲಿ ಬೇಡಿಕೊಳ್ಳುತ್ತಾರೆ.
ಗಜಮುಖನಿಗೆ ಪೂಜೆ ಸಲ್ಲಿಸುವಾಗ ಕೆಲವೊಂದು ವಿಧಿ ವಿಧಾನಗಳಿವೆ, ಅವುಗಳಂತೆ ಪೂಜೆ ಸಲ್ಲಿಸಿದರೆ ತುಂಬಾ ತೃಪ್ತನಾಗುತ್ತಾನೆ. ಇಲ್ಲಿ ನಾವು ನೀವು ಗಣಪತಿಗೆ ಪೂಜೆ ಸಲ್ಲಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳ ಬಗ್ಗೆ ಹೇಳಿದ್ದೇವೆ ನೋಡಿ:
ಗರಿಕೆ
ಗಣಪ ತೃಪ್ತಿಗೊಳ್ಳಲು ನೀವೇನು ಆಡಂಭರದ ವಸ್ತುಗಳನ್ನು ಅರ್ಪಿಸಬೇಕಾಗಿಲ್ಲ. ಭಕ್ತಿಯಿಂದ ಗರಿಕೆಯನ್ನು ಸಮರ್ಪಿಸಿದರೆ ಸಾಕು, ಗಣಪ ತೃಪ್ತನಾಗುತ್ತಾನೆ. ಅಲ್ಲದೆ ಗಣೇಶನ ಪೂಜೆಯಲ್ಲಿ ಗರಿಕೆ ಇಲ್ಲದಿದ್ದರೆ ಆ ಪೂಜೆ ಪೂರ್ಣವಾಗುವುದಿಲ್ಲ. ಗಣೇಶನ ಪೂಜಿಸುವಾಗ 21 ಗರಿಕೆಯನ್ನು ಸಮರ್ಪಿಸುವುದರಿಂದ ಶ್ರೇಯಸ್ಸು ಉಂಟಾಗುವುದು.
ಎಕ್ಕೆಯ ಹೂ
ಗಣಪನಿಗೆ ಎಕ್ಕೆಯ ಹೂ ಸಮರ್ಪಿಸುವುದು ಶ್ರೇಷ್ಠವೆಂದು ಹೇಳಲಾಗುತ್ತದೆ. ಎಕ್ಕೆಯ 21 ಹೂಗಳಿಂದ ಹಾರ ಮಾಡಿ ಗಣೇಶನ ಕೊರಳಿಗೆ ಹಾಕಬೇಕು. ಜೊತೆಗೆ ಗಣೇಶನಿಗೆ ಹಳದಿ ಹೂಗಳಿಂದ ಅಲಂಕಾರ ಮಾಡಿದರೆ ಬೇಗ ಒಲಿಯುತ್ತಾನೆ ಎಂದು ಹೇಳಲಾಗುತ್ತದೆ.
ಮೋದಕ
ಗಣೇಶನ ಪೂಜೆಯಲ್ಲಿ ಮೋದಕ ಇರಲೇಬೇಕು. ಎಷ್ಟೇ ಬಗೆಯ ತಿಂಡಿ ಮಾಡಿ ಆದರೆ ಮೋದಕ ಇಲ್ಲ ಎಂದರೆ ಪೂಜೆ ಸಂಪೂರ್ಣವಾಗುವುದಿಲ್ಲ. ಗಣೇಶನಿಗೆ ತೃಪ್ತಿ ಆಗಬೇಕು ಎಂದರೆ ಮೋದಕ ಇಡಲೇಬೇಕು, ಅದರಲ್ಲೂ 21 ಮೋದಕಗಳನ್ನು ಇಡಬೇಕು. ಮೋದಕ ಜೊತೆಗೆ ಲಡ್ಡು, ಪುರಿ ಉಂಡೆ ಇವುಗಳನ್ನು ಸಮರ್ಪಿಸುತ್ತಾರೆ. ಆದರೆ ಮೋದಕ ಮಾತ್ರ ಇರಲೇಬೇಕು.
ಬಾಳೆಹಣ್ಣು
ಗಣೇಶನ ಪೂಜಿಸುವಾಗ ಎಲ್ಲಾ ಬಗೆಯ ಫಲಗಳನ್ನು ಇಡುತ್ತಾರೆ, ಆದರೆ ಬಾಳೆಹಣ್ಣು ಕಡ್ಡಾಯವಾಗಿ ಇಡಲೇಬೇಕು. ಗಣೇಶನಿಗೆ ಬಾಳೆಹಣ್ಣು ಇಡುವಾಗಲೂ 21 ಬಾಳೆ ಹಣ್ಣು ಇಟ್ಟರೆ ಒಳ್ಳೆಯದು. ಕೆಲವರು 21 ಬಾಳೆ ಹಣ್ಣಿನಿಂದ ಹಾರ ಮಾಡಿ ಗಣಪನಿಗೆ ಹಾಕುತ್ತಾರೆ.
ಶಂಖ
ಹಿಂದೂ ಧರ್ಮದಲ್ಲಿ ಪೂಜೆಯಲ್ಲಿ ಶಂಖ ಬಳಸುವುದು ಸಹಜ. ಆದರೆ ಗಣೇಶನ ಪೂಜೆಯಲ್ಲಿ ಕಡ್ಡಾಯವಾಗಿ ಶಂಖ ಇರಬೇಕು. ಗಣೇಶನ ಒಂದು ಕೈಯಲ್ಲಿ ಶಂಖ ಇದ್ದೇ ಇರುತ್ತದೆ. ಶಂಖನಾದ ಮೊಳಗಿದರೆ ಆ ಪರಿಸರದಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು, ಪೂಜೆ ಮಂಗಳಕರವಾಗಿರುತ್ತದೆ. ಆದ್ದರಿಂದ ಗಣೇಶ ಪೂಜಿಸುವಾಗ ಶಂಖನಾದ ಮೊಳಗಿಸಲಾಗುವುದು.
ಸಿಂಧೂರ
ಸಿಂಧೂರ ಅರ್ಪಿಸಿದರೆ ಗಣೇಶನಿಗೆ ತುಂಬಾ ಇಷ್ಟವಾಗುವುದು. ಚಿಂತೆ, ದುಃಖ, ಆರೋಗ್ಯ ಸಮಸ್ಯೆ ಇವೆಲ್ಲಾ ಸಿಂಧೂರ ಅರ್ಪಿಸುವುದರಿಂದ ದೂರವಾಗುವುದು. ಸಿಂಧೂರ ಶೋಭನಮ್ ರಕ್ತಮ್ ಸೌಭಾಗ್ಯಂ ಸುಖವರ್ಧನಮ್, ಶುಭದಂ ಕಾಮದಮ್ ಚೌವ ಸಿಂಧೂರಮ್ ಪ್ರತಿಗ್ಯತಮ್ ಎಂಬ ಮಂತ್ರದೊಂದಿಗೆ ಸಿಂಧೂರ ಅರ್ಪಿಸಬೇಕು. ಈ ರೀತಿ ಸಿಂಧೂರ ಅರ್ಪಿಸುವುದರಿಂದ ಉದ್ಯೋಗ, ವ್ಯಾಪರದಲ್ಲಿ ಶ್ರೇಯಸ್ಸು ಉಂಟಾಗುವುದು.