Just In
Don't Miss
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ಜಲ ಏಕಾದಶಿ 2022: ಈ ದಿನ ಇವುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿ
ನಿರ್ಜಲ ಏಕಾದಶಿ ಎಲ್ಲಾ ಏಕಾದಶಿಗಳಿಗಿಂತ ಬಹಳ ಶ್ರೇಷ್ಠ. ಹಿಂದೂ ಧರ್ಮದಲ್ಲಿರುವ 24 ಏಕಾದಶಿಗಳಲ್ಲಿ ಜ್ಯೇಷ್ಠ ಮಾಸ ಶುಕ್ಲ ಪಕ್ಷದ ಏಕಾದಶಿ ಅತ್ಯಂತ ಫಲಪ್ರದ, ಏಕೆಂದರೆ ಈ ಏಕಾದಶಿ ವ್ರತವನ್ನು ಆಚರಿಸುವುದರಿಂದ ಇತರ ಏಕಾದಶಿಗಳಲ್ಲಿ ಆಹಾರ ಸೇವಿಸಿದ ಪಾಪದಿಂದ ಮುಕ್ತಿ ದೊರೆಯುತ್ತದೆ ಮತ್ತು ಎಲ್ಲಾ ಏಕಾದಶಿಗಳ ಪುಣ್ಯದ ಲಾಭವೂ ದೊರೆಯುತ್ತದೆ. ಈ ಪವಿತ್ರ ಏಕಾದಶಿಯನ್ನು ಪೂಜ್ಯಭಾವದಿಂದ ಆಚರಿಸುವವನು ಎಲ್ಲಾ ಪಾಪಗಳಿಂದ ಮುಕ್ತಿ ಹೊಂದುತ್ತಾನೆ ಮತ್ತು ಅವಿನಾಶಿ ಸ್ಥಿತಿಯನ್ನು ಪಡೆಯುತ್ತಾನೆ.
ಮತ್ತೊಂದು ವಿಶೇಷತೆ ಎಂದರೆ ನಿರ್ಜಲ ಏಕಾದಶಿ ದಾನ. ಏಕಾದಶಿ ದಿನ ದಾನ ಮಾಡಿದರೆ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಆದರೆ ಯಾವೆಲ್ಲಾ ವಸ್ತುಗಳನ್ನು ಈ ದಿನ ಮಾಡಬೇಕು ಮತ್ತು ಏಕೆ ಮುಂದೆ ನೋಡೋಣ:
1. ನಿರ್ಜಲ ಏಕಾದಶಿ 2021
ವರ್ಷದ 24 ಏಕಾದಶಿಗಳು ಸಹ ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿವೆ. ಏಕಾದಶಿ ತಿಥಿಯಂದು, ಮುಖ್ಯವಾಗಿ ನಾರಾಯಣನನ್ನು ಅಂದರೆ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ಎಲ್ಲಾ ಏಕಾದಶಿಗಳಲ್ಲಿ, ಕೆಲವು ವಿಶೇಷವಾದ ಮಹತ್ವವನ್ನು ಹೊಂದಿವೆ ಮತ್ತು ಅವುಗಳಲ್ಲಿ ಒಂದು ನಿರ್ಜಲ ಏಕಾದಶಿ.
ನಿರ್ಜಲ ಏಕಾದಶಿಯಂದು ಉಪವಾಸ ಮಾಡುವ ವ್ಯಕ್ತಿಗೆ ವರ್ಷದ ಉಳಿದ 23 ಏಕಾದಶಿಗಳ ಉಪವಾಸದಷ್ಟೇ ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಉಪವಾಸವನ್ನು ಆಚರಿಸುವವರಿಗೆ ಮೋಕ್ಷ ಮತ್ತು ದೀರ್ಘಾಯುಷ್ಯವನ್ನು ಪಡೆಯುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಬೇಸಿಗೆಯಲ್ಲಿ ಬರುವ ನಿರ್ಜಲ ಏಕಾದಶಿಯಂದು ದಾನ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ನಿರ್ಜಲ ಏಕಾದಶಿ ಜೂನ್ 10ರಂದು ಆಚರಿಸಲಾಗುತ್ತಿದೆ.
2. ನಿರ್ಜಲ ಏಕಾದಶಿ ದಾನದ ಮಹತ್ವ
ಮಹರ್ಷಿ ವೇದವ್ಯಾಸಜೀಯವರು ಈ ಏಕಾದಶಿಯ ಕುರಿತು ಪಾಂಡವರಿಗೆ ಹೇಳುತ್ತಾ ಏಕಾದಶಿಯ ದಿನ ಯಾವ ದಾನ, ಧರ್ಮ, ಹವನ, ಪೂಜೆಗಳನ್ನು ಮಾಡಿದರೂ ಅದರ ಫಲವು ಪುನರುತ್ಥಾನಗೊಳ್ಳುತ್ತದೆ ಎಂದು ಪದ್ಮ ಪುರಾಣದಲ್ಲಿ ಹೇಳಲಾಗಿದೆ. ಈ ದಿನದಂದು ಮಾಡಿದ ಪುಣ್ಯಗಳ ಫಲವು ಅನೇಕ ಜನ್ಮಗಳಲ್ಲಿ ವ್ಯಕ್ತಿಗೆ ಪ್ರಯೋಜನಕಾರಿಯಾಗಿದೆ.
3. ನಿರ್ಜಲ ಏಕಾದಶಿ 2021: ನಿರ್ಜಲ ಏಕಾದಶಿಯಂದು ಯಾವ ವಸ್ತುಗಳನ್ನು ದಾನ ಮಾಡಬೇಕು?
ಈ ದಿನದಂದು ಬ್ರಾಹ್ಮಣನಿಗೆ ಪಾದರಕ್ಷೆಗಳನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ದಿನದಂದು ಪಾದರಕ್ಷೆಗಳನ್ನು ದಾನ ಮಾಡುವ ವ್ಯಕ್ತಿಯು ಚಿನ್ನದ ವಿಮಾನದಲ್ಲಿ ಕುಳಿತು ಸ್ವರ್ಗಕ್ಕೆ ಹೋಗುತ್ತಾನೆ. ಅನ್ನದಾನ, ಕೊಡೆ ದಾನ, ಹಾಸಿಗೆ, ಮಣೆ, ಹಣ್ಣು ಮತ್ತು ವಸ್ತ್ರದಾನದ ಮಹತ್ವವನ್ನು ಈ ವ್ರತದಲ್ಲಿ ಹೇಳಲಾಗಿದೆ. ಈ ದಿನದಂದು ಬೇಳೆ ಮತ್ತು ಬೆಲ್ಲವನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಪಾದರಕ್ಷೆ, ಛತ್ರಿ ಮತ್ತು ಬೀಸಣಿಗೆ ನೀಡುವುದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮಾವಿನಹಣ್ಣು ಮತ್ತು ಕಲ್ಲಂಗಡಿಗಳನ್ನು ದಾನ ಮಾಡುವುದು ಸಹ ಅತ್ಯಂತ ಶುಭ ಫಲ ನೀಡುತ್ತದೆ.
4. ತಂಪಾದ ವಸ್ತುಗಳನ್ನು ದಾನ ಮಾಡುವುದು ಶ್ರೇಷ್ಠ
ಈ ದಿನ ನೀರು ದಾನ ಮಾಡುವ ಭಕ್ತರಿಗೆ ವರ್ಷದ ಏಕಾದಶಿಯ ಫಲ ದೊರೆಯುತ್ತದೆ. ನಿರ್ಜಲ ಏಕಾದಶಿಯ ಉಪವಾಸವು ನೀರಿನ ಮಹತ್ವವನ್ನು ತೋರಿಸುತ್ತದೆ ಎಂದು ಹೇಳಲಾಗುತ್ತದೆ. ಜ್ಯೇಷ್ಠ ಮಾಸದಲ್ಲಿ ಬರುವ ಈ ವ್ರತದಿಂದಾಗಿ ತಂಪು ನೀಡುವ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ತಿಂಗಳು ಬಿಸಿಯಾಗಿರುತ್ತದೆ ಮತ್ತು ಸೂರ್ಯನು ಪೂರ್ಣ ಬೇಸಿಗೆಯಲ್ಲಿದ್ದಾನೆ ಎಂದು ನಂಬಲಾಗಿದೆ. ಆದ್ದರಿಂದ, ನಿರ್ಜಲ ಏಕಾದಶಿಯಂದು ಶಾಖವನ್ನು ನಿವಾರಿಸುವ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
5. ನಿರ್ಜಲ ಏಕಾದಶಿಯಂದು ತುಳಸಿ ಪೂಜೆಯಿಂದ ಆಗುವ ಲಾಭಗಳು
ಏಕಾದಶಿ ತಿಥಿಯು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ ಮತ್ತು ಈ ದಿನ ತುಳಸಿಯನ್ನು ಪೂಜಿಸುವುದರಿಂದ ಶ್ರೀ ಹರಿಯು ತುಂಬಾ ಸಂತೋಷಪಡುತ್ತಾನೆ. ಸಂಜೆ ತುಳಸಿ ಮರದ ಕೆಳಗೆ ತುಪ್ಪದ ದೀಪವನ್ನು ಹಚ್ಚಿ ವಿಷ್ಣು ಸಹಸ್ರನಾಮವನ್ನು ಪಠಿಸಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವತ್ತೂ ಹಣದ ಕೊರತೆ ಇರುವುದಿಲ್ಲ ಮತ್ತು ಸಾಲದಿಂದ ಮುಕ್ತಿ ಪಡೆಯಬಹುದು. ವ್ಯಾಪಾರದಲ್ಲಿ ಹೆಚ್ಚಳ ಮತ್ತು ಉದ್ಯೋಗದಲ್ಲಿ ಬಡ್ತಿ ದೊರೆಯುವುದು.