Just In
- 49 min ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 2 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 5 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 7 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- News ಹನೂರು: ಮತದಾರರ ಪಟ್ಟಿಯಲ್ಲಿ ಹೆಸರಿಲ್ಲವೆಂದು ಬೀದಿಗಿಳಿದ ವ್ಯಕ್ತಿ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Movies "ಸದಾ ನನ್ನ ಹಿಂಭಾಗವನ್ನೇ ಜೂಮ್ ಮಾಡ್ತಾರೆ"; ನೋರಾ ಫತೇಹಿ ಆಕ್ರೋಶ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ಜಲ ಏಕಾದಶಿ 2021: ಶುಭ ಫಲ ದೊರೆಯಲು ಈ ದಿನ ಏನು ಮಾಡಬೇಕು, ಏನು ಮಾಡಬಾರದು?
ಹಿಂದೂ ಧರ್ಮದಲ್ಲಿ ನಿರ್ಜಲ ಏಕಾದಶಿಗೆ ತುಂಬಾನೇ ಮಹತ್ವವಿದೆ. ಉಳಿದ 23 ಏಕಾದಶಿಗಳ ಫಲ ಈ ಒಂದು ಏಕಾದಶಿ ಆಚರಣೆ ಮಾಡಿದರೆ ಸಿಗುವುದು ಎಂಬ ನಂಬಿಕೆ ಇದೆ.
ನಿರ್ಜಲ ಏಕಾದಶಿಯನ್ನು ಜ್ಯೇಷ್ಠ ಮಾಸದ ಶುಕ್ಲ ಪಕ್ಷದ 11ನೇ ದಿನದಂದು ಅಂದ್ರೆ ಜೂನ್ 21ರಂದು ಆಚರಿಸಲಾಗುವುದು. ಈ ಏಕಾದಶಿಯನ್ನು ಯಾರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೋ ಅವರು ಮಾಡಿರುವ ಪಾಪಗಳಿಂದ ಮುಕ್ತಿ ಪಡೆಯುತ್ತಾರೆ ಅಲ್ಲದೆ ಅವರ ಬದುಕಿನಲ್ಲಿ ಸಂತೋಷ, ಸಂಪತ್ತು ತುಂಬಿರುತ್ತದೆ ಎಂದು ಹೇಳಲಾಗುತ್ತದೆ.
ನಿರ್ಜಲ ಏಕಾದಶಿ ಆಚರಿಸಲು ಕೆಲವೊಂದು ನಿಯಮಗಳಿವೆ, ಅವುಗಳನ್ನು ಪಾಲಿಸಿದರಷ್ಟೇ ಇದರ ಫಲ ಸಿಗುವುದು. ಈ ದಿನ ಉತ್ತಮ ಫಲಕ್ಕಾಗಿ ಏನು ಮಾಡಬಾರದು, ಏನು ಮಾಡಬೇಕು ಎಂದು ನೋಡೋಣ ಬನ್ನಿ:
ಶ್ರೀ ವಿಷ್ಣುವಿನ ಆರಾಧನೆಯಲ್ಲಿ ತುಳಸಿ ಇರಲಿ
ಏಕಾದಶಿ ಎಂಬುವುದು ವಿಷ್ಣುವಿಗೆ ಸಮರ್ಪಿತವಾದ ದಿನ. ವಿಷ್ಣುವಿಗೆ ಪ್ರಿಯವಾದವಳು ತುಳಸಿ. ಆದ್ದರಿಂದ ವಿಷ್ಣುವಿನ ಆರಾಧನೆಯಲ್ಲಿ ತುಳಸಿಗೆ ತುಂಬಾನೇ ಪ್ರಾಶಸ್ತ್ಯ ನೀಡಲಾಗಿದೆ. ಈ ದಿನ ವಿಷ್ಣು ಹಾಗೂ ಲಕ್ಷ್ಮೀಯನ್ನು ಆರಾಧಿಸುವಾಗ ತುಳಸಿ ಬಳಸಲು ಮರೆಯದಿರಿ.
ಉಪವಾಸ ಇರಬೇಕು
ಯಾರಿಗೆ ಇತರ ಏಕಾದಶಿ ಮಾಡಲು ಸಾಧ್ಯವಿಲ್ಲವೋ ಅವರು ನಿರ್ಜಲ ಏಕಾದಶಿ ಮಾಡಿದರೆ ಸಾಕು, ಅವುಗಳ ಪುಣ್ಯ ಎಲ್ಲಾ ಈ ಒಂದು ಏಕಾದಶಿ ಆಚರನೆಯಿಂದ ಸಿಗುವುದು. ಆದರೆ ಹೆಸರೇ ಸೂಚಿಸುವಂತೆ ಏಕಾದಶಿ ದಿನ ನೀರು ಕೂಡ ಮುಟ್ಟುವಂತಿಲ್ಲ. ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ಉಪವಾಸದ ಸಂಕಲ್ಪ ಕೈಗೊಳ್ಳಬೇಕು. ನಂತರ ಶ್ರೀವಿಷ್ಣುವಿನ ಪೂಜೆ ಮಾಡಬೇಕು.
ಭಗವಂತ ವಿಷ್ಣುವಿಗೆ ನೈವೇದ್ಯ ಅರ್ಪಿಸಿ
ಈ ದಿನ ಭಗವಾನ್ ವಿಷ್ಣುವಿಗೆ ನೈವೇದ್ಯ ಅರ್ಪಿಸಿ, ನೈವೇದ್ಯಕ್ಕೆ ಸಾತ್ವಿಕ ಆಹಾರವನ್ನು ಬಳಸಿ. ಸಿಹಿ, ಹಣ್ಣುಗಳನ್ನು ಅರ್ಪಿಸಿ. ಧಾರ್ಮಿಕ ನಂಬಿಕೆಗಳ ಪ್ರಕಾರ ಶ್ರೀ ವಿಷ್ಣುವಿಗೆ ನೈವೇದ್ಯ ಅರ್ಪಿಸುವಾಗ ತುಳಸಿಯನ್ನು ಇಟ್ಟು ಅರ್ಪಿಸಬೇಕು, ಇಲ್ಲದಿದ್ದರೆ ವಿಷ್ಣು ಆ ಆಹಾರಗಳನ್ನು ಸ್ವೀಕರಿಸುವುದಿಲ್ಲ.
ಅನ್ನ ತಿನ್ನಬೇಡಿ
ಉಪವಾಸ ಮಾಡುವವರು ಏನೂ ತಿನ್ನುವಂತಿಲ್ಲ, ಎಲ್ಲರಿಗೆ ಉಪವಾಸ ಮಾಡಲು ಸಾಧ್ಯವಾಗುವುದಿಲ್ಲ ಅಂಥವರು ಏಕಾದಶಿಯಂದು ಅಕ್ಕಿಯ ಯಾವುದೇ ಆಹಾರ ಸೇವಿಸಬಾರದು.
ಮಾಂಸ ಮತ್ತು ಮದ್ಯವನ್ನು ಸೇವಿಸಬೇಡಿ
ಏಕಾದಶಿ ದಿನವನ್ನು ವಿಷ್ಣುವಿನ ಆರಾಧನೆಗೆ ಸಮರ್ಪಿಸಲಾಗಿದೆ. ಈ ದಿನ ಮಾಂಸ ಮತ್ತು ಮದ್ಯ ಸೇವಿಸಬಾರದು. ನಿರ್ಜಲ ಏಕಾದಶಿ ದಿನದಂದು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ.
ಸ್ತ್ರೀ-ಪುರುಷ ಸೇರಬಾರದು
ಏಕಾದಶಿ ದಿನದಂದು ಮಿಲನ ಕ್ರಿಯೆ ನಡೆಸಬಾರದು. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ದೇವರ ಕೋರ್ತನೆ ಹಾಡಬೇಕು, ಶ್ರೀ ವಿಷ್ಣುವಿನ ಮಂತ್ರ ಪಠಿಸುತ್ತಾ ದಿನ ಕಳೆಯಬೇಕು. ಮನಸ್ಸಿನಲ್ಲಿ ಯಾವುದೇ ಕೆಡಕು ಬಯಸಬಾರದು.