Just In
- 4 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 5 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 8 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 10 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Movies Amruthadhaare ; ತವರು ಮನೆಗಾಗಿ ಮಿಡಿದ ಭೂಮಿಕಾ ; ಒಡವೆಗಳನ್ನು ಅಡವಿಡುತ್ತಾಳಾ..?
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Navratri 2022: ನವರಾತ್ರಿ ಎರಡನೇ ದಿನ ಬ್ರಹ್ಮಚಾರಣಿ ದೇವಿ ಆರಾಧನೆ ಹೇಗೆ ಮಾಡಬೇಕು?
ನವರಾತ್ರಿಯ ಒಂಬತ್ತು ದಿನಗಳ ಕಾಲ ದುರ್ಗಾದೇವಿಯ 9 ಅವತಾರಗಳನ್ನು ಪೂಜಿಸಲಾಗುವುದು. ಎರಡನೇ ದಿನದಂದು ದುರ್ಗಾ ದೇವಿಯ ಬ್ರಹ್ಮಚಾರಿಣಿ ಅವತಾರವನ್ನು ಪೂಜಿಸಲಾಗುವುದು. ಸುದೀರ್ಘವಾದ ಪೂಜೆಯ ಮೂಲಕ ದುರ್ಗಾದೇವಿಯ ಬ್ರಹ್ಮಚಾರಿಣಿ ಅವತಾರವನ್ನು ಭಕ್ತರು ಪೂಜಿಸಿ ಆಕೆಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.
ಬ್ರಹ್ಮಚಾರಿಣಿ ದೇವಿಯೆಂದರೆ ಜ್ಞಾನವನ್ನು ಹೊಂದಿರುವಾಕೆ. ಒಂದು ಕೈಯಲ್ಲಿ ಜಪಮಾಲೆ ಮತ್ತೊಂದು ಕೈಯಲ್ಲಿ ಕಮಂಡಲವಿದೆ. ಬ್ರಹ್ಮಚಾರಿಣಿ ದೇವಿಯು ಭಕ್ತರಿಗೆ ಜ್ಞಾನವನ್ನು ನೀಡುವಳು. ಬ್ರಹ್ಮಚಾರಿಣಿ ಎಂದರೆ ಮದುವೆಯಾಗದೆ ಇರುವ ಮತ್ತು ಯುವ ಎಂದರ್ಥ. ಬ್ರಹ್ಮಚಾರಣಿ ದೇವಿಯನ್ನು ಪೂಜಿಸುವುದರಿಂದ ಮನಸ್ಸಿಗೆ ಶಾಂತಿ ಹಾಗೂ ಆತ್ಮವಿಶ್ವಾಸವು ಸಿಗುವುದು.
2022ನೇ ಸಾಲಿನಲ್ಲಿ ಸೆಪ್ಟೆಂಬರ್ 27ರಂದು ದುರ್ಗೆಯ 2ನೇ ಅವತಾರ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತಿದೆ.
ಬ್ರಹ್ಮಚಾರಣಿ ಕಥೆ
ದೇವಿಯು ಕುಶ್ಮಾಂದ ಅವತಾರವನ್ನು ಪಡೆದ ಬಳಿಕ ಬ್ರಹ್ಮಚಾರಣಿಯಾದರು. ಈಶ್ವರ ದೇವನ್ನು ವಿರೋಧಿಸುತ್ತಿದ್ದ ದಕ್ಷ ಪ್ರಜಾಪತಿಯ ಮನೆಯಲ್ಲಿ ಪಾರ್ವತಿಯು ಜನಿಸುವರು. ಈ ಅವತಾರವನ್ನು ಬ್ರಹ್ಮಚಾರಣಿ ಎಂದು ಪೂಜಿಸಲಾಗುವುದು. ಮುಂದಿನ ಜನ್ಮದಲ್ಲಿ ತನಗೆ ಒಳ್ಳೆಯ ತಂದೆ ಮತ್ತು ಶಿವನನ್ನು ಆರಾಧಿಸುವವರು ಸಿಗಲಿ ಎಂದು ದೇವಿಯು ಘೋರ ತಪಸ್ಸು ಮಾಡುವರು. ಆಕೆ ಪಾದಯಾತ್ರೆ ಮಾಡಿದ ಬಳಿಕ ಸಾವಿರಾರು ವರ್ಷಗಳ ಕಾಲ ಶಿವನನ್ನು ಮದುವೆಯಾಗಬೇಕೆಂದು ತಪಸ್ಸು ಮಾಡುವರು. ಆಕೆ ಹೂಗಳು ಹಾಗೂ ಹಣ್ಣುಗಳನ್ನು ಮಾತ್ರ ಸೇವನೆ ಮಾಡುತ್ತಿದ್ದಳು. ಅಂತಿಮವಾಗಿ ಇದನ್ನು ತ್ಯಜಿಸಿ, ಕೇವಲ ಗಾಳಿಯನ್ನು ಉಸಿರಾಡಿ ಬದುಕುತ್ತಿದ್ದಳು. ಇದರಿಂದಾಗಿ ಬ್ರಹ್ಮಚಾರಿಣಿಯನ್ನು ಅಪರ್ಣಾ ಎಂದು ಕರೆಯಲಾಗುತ್ತದೆ.
ಬ್ರಹ್ಮಚಾರಣಿ ದೇವಿಯ ಮಹತ್ವ
ಬ್ರಹ್ಮಚಾರಣಿ ದೇವಿಯು ಮಂಗಳ ಗ್ರಹದ ಅಧಿಪತಿ ಎಂದು ಹೇಳಲಾಗುತ್ತದೆ. ಆಕೆಯು ಎಲ್ಲಾ ಅದೃಷ್ಟವನ್ನು ನೀಡುವಳು ಮತ್ತು ಭಕ್ತರ ಮಾನಸಿಕ ಕ್ಷೋಭೆ ನಿವಾರಣೆ ಮಾಡಿ ಅವರ ದುಃಖ ನಿವಾರಿಸುವಳು. ಮಂಗಳ ದೋಷ ಮತ್ತು ಜಾತಕದಲ್ಲಿ ಮಂಗಳ ಗ್ರಹವು ಕೆಟ್ಟ ಸ್ಥಾನದಲ್ಲಿದ್ದರೆ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಬೇಕು.
ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ದೇವಿ ಪೂಜೆ
ಬ್ರಹ್ಮಚಾರಿಣಿ ದೇವಿಗೆ ತುಂಬಾ ಇಷ್ಟವಾಗಿರುವಂತಹ ಹೂವೆಂದರೆ ಅದು ಮಲ್ಲಿಗೆ. ಇದರಿಂದ ನವರಾತ್ರಿಯ ಎರಡನೇ ದಿನವು ನೀವು ಮಲ್ಲಿಗೆ ಹೂವಿನೊಂದಿಗೆ ಪೂಜೆ ಮಾಡಿ, ಬ್ರಹ್ಮಚಾರಿಣಿ ತಾಯಿಯ ಆಶೀರ್ವಾದ ಪಡೆಯಿರಿ. ಬ್ರಹ್ಮಚಾರಿಣಿ ದೇವಿಯ ದೈವಿಸ್ವರೂಪದ ಬಗ್ಗೆ ಆಲೋಚಿಸಿ ಮತ್ತು ಆರತಿಯೊಂದಿಗೆ ಸುಮಾರು 16 ವಿವಿಧ ಅಪರ್ಣೆಗಳನ್ನು ಮಾಡಿ
Most Read:ನವರಾತ್ರಿ ಸಮಯದಲ್ಲಿ ಯಾವ ಬಗೆಯ ಆಹಾರಗಳನ್ನು ಸೇವಿಸಬೇಕು ಯಾವುದನ್ನು ಸೇವಿಸಬಾರದು?
ನವರಾತ್ರಿ ಎರಡನೇ ದಿನದ ಬ್ರಹ್ಮಚಾರಿಣಿ ಮಂತ್ರಗಳು
ಓಂ ದೇವಿ ಬ್ರಹ್ಮಚಾರಿಣಿಯೇ ನಮಃ
ಓಂ ದೇವಿ ಬ್ರಹ್ಮಚಾರಿಣಿಯೇ ನಮಃ ದಾಧನಾ ಕರ್
ಪದ್ಮಭಯಮಕ್ಷ್ಮಾಳ ಕಮಂಡಲೂ
ದೇವಿ ಪ್ರಸಾದಿ ಮಾಯಿ ಬ್ರಹ್ಮರಿಕನ್ನತಮಾ
ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ತಾಯಿಯ ಪ್ರಾರ್ಥನೆ
ದಧಾನಾ ಕರ್ ಪದ್ಮಭಯಮಕ್ಷ್ಮಾಳ ಕಮಂಡಲೂ
ದೇವಿ ಪ್ರಸಾದಿ ಮಾಯಿ ಬ್ರಹ್ಮರಿಕನ್ನತಮಾ
Most Read:ನವರಾತ್ರಿಗಳಲ್ಲಿ 'ನವದುರ್ಗೆ'ಯನ್ನು ಪೂಜಿಸುವ ಆ ಒಂಬತ್ತು ರೂಪಗಳು...
ನವರಾತ್ರಿ ಎರಡನೇ ದಿನದ ಬ್ರಹ್ಮಚಾರಿಣಿ ಮಂತ್ರಗಳು
ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ದೇವಿ ಸ್ತುತಿ
ಯಾ ದೇವಿ ಸರ್ವಭುತೇಶ್ ಮಾ ಬ್ರಹ್ಮಚಾರಿಣಿ ರುಪನೆ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸಾಯಿ ನಮಸ್ಟಾಸ್ಯೈ ನಮೋ ನಮಃ
ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ದೇವಿ ಧ್ಯಾನ
ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ
ಜಾಪಮಾಲಾ ಕಾಮಂಡಲು ದಾರ ಬ್ರಹ್ಮಚಾರಿಣಿ ಶುಭಾಮ್
ಗೌರವರ್ಣ ಸ್ವಧೀತಾನಸ್ಥಿತ ದ್ವಿತೀಯ ದುರ್ಗಾ ತ್ರಿನೇತ್ರಂ
ಧವಾಲಾ ಪರಿಧನಾ ಬ್ರಹ್ಮರೂಪಾ ಪುಷ್ಪಲಂಕರ ಭೂಶಿಂತಂ
ಪರಮಾ ವಂದನಾ ಪಲ್ಲವರಧರಂ ಕಾಂತ ಕಪೋಲಾ ಪಿನಾ
ಪಯೋಧರಂ ಕಾಮನಿಯಾ ಲವಣಯಂ ಶೆರ್ಮಮುಖಿ ನಿಮ್ನಾನಾಭಿ ನಿತಂಬನಿಮ್
ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ದೇವಿ ಸ್ತೋತ್ರ
ತಪಶ್ಚಾರಿಣಿ ತುಮಮಿ ತಪತ್ರಾಯ ನಿವಾರಾನಿಮ್
ಬ್ರಹ್ಮರುಪಧಾರ ಬ್ರಹ್ಮಚಾರಿಣಿ ಪ್ರಾಣಮಾಮಯಂ
ಶಂಕರಾಪ್ರಿಯ ತುಮಹಿ ಭಕ್ತಿ-ಮುಕ್ತಿ ದಯಾನಿ
ಶಾಂತಿಡಾ ಜ್ಞಾನದ್ರ ಬ್ರಹ್ಮಚಾರಿಣಿ ಪ್ರಾಣಮಾಮಯಂ
Most Read:ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆಗಾಗಿ 'ಶಕ್ತಿಯುತ' ಮಂತ್ರಗಳು
ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ದೇವಿ ಕವಚ
ತ್ರಿಪುರಾ ಮೇನ್ ಹೃದಯಂ ಪಟು ಲಾಲೇತ ಪಟು ಶಂಕರಭಮಿಣಿ
ಅರ್ಪಾನಾ ಸದಾಪತು ನೆತ್ರೋ, ಅರ್ಧಾರಿ ಚಾ ಕಾಪೋಲೊ
ಪಂಚದಾಶಿ ಕಾಂತೆ ಪತು ಮಧ್ಯಾಧೇಶ್ ಪತು ಮಹೇಶ್ವರಿ
ಶೋದಾಶಿ ಸದಪತು ನಾಬೋ ಗ್ರಿಹೋ ಚಾ ಪಡಾಯೊ
ಅಂಗಾ ಪ್ರತ್ಯಾಂಗ ಸತಾತಾ ಪತು ಬ್ರಹ್ಮಚಾರಿಣಿ
ನವರಾತ್ರಿ ಎರಡನೇ ದಿನದ ಮಹತ್ವ
ಬ್ರಹ್ಮಚಾರಣಿ ದೇವಿಯನ್ನು ಎರಡನೇ ದಿನ ಪೂಜಿಸುವುದು ದೊಡ್ಡ ತಪಸ್ಸಿಗೆ ಸಮಾನವಾಗಿದೆ. ಇದು ಭಕ್ತರಿಗೆ ತ್ಯಾಗ, ಸದ್ಗುಣ ಮತ್ತು ಸಂಪತ್ತನ್ನು ನೀಡುವುದು. ಯಶಸ್ಸಿಗೆ ಇರುವಂತಹ ಯಾವುದೇ ರೀತಿಯ ಅಡೆತಡೆಗಳನ್ನು ಇದು ನಿವಾರಣೆ ಮಾಡುವುದು ಮತ್ತು ಕುಟುಂಬದಲ್ಲಿ ಒಳ್ಳೆಯ ಮಾನಸಿಕ ಶಾಂತಿಯು ಬರುವುದು. ನಿಮ್ಮ ಎಲ್ಲಾ ಚಟುವಟಿಕೆಗಳಲ್ಲಿ ಸಂತೃಪ್ತಿಯು ಸಿಗುವುದು. ಎರಡನೇ ದಿನ ನೀವು ಬಹ್ಮಚಾರಿಣಿ ದೇವಿಯನ್ನು ಪೂಜಿಸುವ ಮೂಲ ಯಶಸ್ಸಿಗೆ ಇರುವ ಅಡ್ಡಿಗಳನ್ನು ನಿವಾರಣೆ ಮಾಡಬಹುದು.