Just In
- 26 min ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 9 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 10 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 11 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
Don't Miss
- Movies Amruthadhaare ; ಪಾರ್ಥ ಮತ್ತು ಅಪೇಕ್ಷಾ ಪ್ರೀತಿ, ಕೆಂಡಾಮಂಡಲಗೊಂಡ ಶಕುಂತಲಾ..!
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನವರಾತ್ರಿ 2021: ಎಂದಿನಿಂದ ಆರಂಭ, ಯಾವ ದಿನ ಯಾವ ದೇವತೆಯ ಆರಾಧನೆ?
ದೇಶಾದ್ಯಂತ ಸಂಭ್ರಮದಿಂದ ಆಚರಿಸುವ ನವರಾತ್ರಿ ಹಬ್ಬ ಕರ್ನಾಟಕಕ್ಕೆ ಇನ್ನಷ್ಟು ಹೆಮ್ಮೆಯ ಹಬ್ಬ. ಗೊಂಬೆಹಬ್ಬ, ದಸರಾ, ಶರನ್ನವರಾತ್ರಿ ಎಂಬೆಲ್ಲ ಹೆಸರುಗಳಿಂದ ಇದು ಕರುನಾಡಿನ ನಾಡಹಬ್ಬ. ಈಗಾಗಲೇ ಹಬ್ಬದ ತಯಾರಿ ಮೈಸೂರಿನಲ್ಲಿ ಆರಂಭವಾಗಿದೆ. ನಾವು ಇನ್ನೇನು ಹಬ್ಬಕ್ಕೆ ಈಗಿಂದಲೇ ಸಿದ್ಧತೆ ಆರಂಭಿಸಬೇಕಿದೆ.
2021ನೇ ಸಾಲಿನಲ್ಲಿ ನವರಾತ್ರಿ ಅಕ್ಟೋಬರ್ 07 ಗುರುವಾರದಿಂದ ಆರಂಭವಾಗುತ್ತದೆ ಮತ್ತು ಅಕ್ಟೋಬರ್ 14 ಆಯುಧ ಪೂಜೆ ಹಾಗೂ 15 ಶುಕ್ರವಾರದಂದು ವಿಜಯ ದಶಮಿ ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ.
ನವರಾತ್ರಿ ಅಥವಾ ಶರನ್ನವರಾತ್ರಿಯು ಹತ್ತನೇ ದಿನದ ಒಳಿತಿನ ವಿಜಯದ ಫಲಿತಾಂಶದೊಂದಿಗೆ ದುಷ್ಟರ ವಿರುದ್ಧ ಒಳ್ಳೆಯ ಯುದ್ಧದ ಒಂಬತ್ತು ರಾತ್ರಿಗಳ ಸಾಂಕೇತಿಕ ಆಚರಣೆಯಾಗಿದೆ. ಈ ಅವಧಿಯಲ್ಲಿ, ದುರ್ಗಾ ಮಾತೆಯನ್ನು ಶಕ್ತಿ ಮತ್ತು ಬುದ್ಧಿವಂತಿಕೆಯ ದೇವತೆಯಾಗಿ ಪೂಜಿಸಲಾಗುತ್ತದೆ.
ನವರಾತ್ರಿ ಎಂದಿನಿಂದ ಆರಂಭ, ಯಾವ ದಿನ ದುರ್ಗಾ ಮಾತೆಯ ಯಾವ ಅವತಾರಕ್ಕೆ ಪೂಜೆ, ದೇವತೆಯ ಇಷ್ಟ ಬಣ್ಣ ಯಾವುದು, ಈ ಹಬ್ಬದ ಮಹತ್ವವೇನು ಎಂಬುದರ ಬಗ್ಗೆ ಸವಿವರವಾಗಿ ತಿಳಿಸಿಕೊಡಲಿದ್ದೇವೆ:
2021 ರಲ್ಲಿ ನವರಾತ್ರಿ ಹಬ್ಬದ ದಿನಾಂಕಗಳು
ದಿನ ಮತ್ತು ದಿನಾಂಕ ಹಬ್ಬ ತಿಥಿ ಪೂಜೆಗೆ ಬಣ್ಣ
ಗುರುವಾರ, ಅಕ್ಟೋಬರ್ 7 ಘಟಸ್ಥಾಪನ ಪ್ರತಿಪದ ಹಳದಿ
ಶುಕ್ರವಾರ, ಅಕ್ಟೋಬರ್ 8 ಮಾ ಬ್ರಹ್ಮಚಾರಿಣಿ ಪೂಜೆ ದ್ವಿತೀಯಾ ಹಸಿರು
ಶನಿವಾರ, ಅಕ್ಟೋಬರ್ 9 ಮಾ ಚಂದ್ರಘಂಟ ಪೂಜೆ ತೃತೀಯಾ ಬೂದಿ
ಭಾನುವಾರ, ಅಕ್ಟೋಬರ್ 10 ಮಾ ಕೂಷ್ಮಾಂಡ ಪೂಜೆ ಚತುರ್ಥಿ ಆರೆಂಜ್
ಸೋಮವಾರ, ಅಕ್ಟೋಬರ್ 11 ಮಾ ಸ್ಕಂದಮಾತಾ ಪೂಜೆ ಪಂಚಮಿ ಬಿಳಿ
ಮಂಗಳವಾರ, ಅಕ್ಟೋಬರ್ 12 ಮಾ ಕಾತ್ಯಾಯಿನಿ ಪೂಜೆ ಷಷ್ಠಿ ಕೆಂಪು
ಬುಧವಾರ, ಅಕ್ಟೋಬರ್ 13 ಮಾ ಕಾಳರಾತ್ರಿ ಪೂಜೆ ಸಪ್ತಮಿ ನೀಲಿ
ಗುರುವಾರ, ಅಕ್ಟೋಬರ್ 14 ಮಾ ಮಹಾ ಗೌರಿ ಪೂಜೆ ಅಷ್ಟಮಿ ಪಿಂಕ್
ಆಯುಧ ಪೂಜೆ
ಶುಕ್ರವಾರ, ಅಕ್ಟೋಬರ್ 15 ಮಾ ಸಿದ್ದಿದಾತ್ರಿ ಪೂಜೆ ನವಮಿ / ದಶಮಿ ನೇರಳೆ
ಮಹಾ ನವಮಿ/ ವಿಜಯ ದಶಮಿ
ನವರಾತ್ರಿಯ ಮಹತ್ವ
ಶರನ್ನವರಾತ್ರಿಯನ್ನು ಒಂಭತ್ತು ದಿನಗಳ ಕಾಲ ಆಚರಿಸುವ ಒಂದು ಸುದೀರ್ಘ ಹಬ್ಬ ಎಂದೇ ಹೇಳಬಹುದು. ಈ ಹಬ್ಬದ ಪ್ರತಿ ದಿನವೂ ಒಂದು ದೇವಿಗೆ ಮೀಸಲಾಗಿದ್ದು, ದೇವಿಯ ಪ್ರತಿಯೊಂದು ಅವತಾರವೂ ಪೌರಾಣಿಕ ಘಟನೆಗಳನ್ನು ವಿವರಿಸುತ್ತದೆ. ನವರಾತ್ರಿಯ ಆರನೇ ದಿನದಿಂದ ದುರ್ಗಾ ಪೂಜೆಯನ್ನು ಆಚರಿಸಲಾಗುತ್ತದೆ. ಇದು 4 ದಿನಗಳವರೆಗೆ ಮುಂದುವರಿಯುತ್ತದೆ ಮತ್ತು ನಂತರ ವಿಜಯದಶಮಿಯೊಂದಿಗೆ ಕೊನೆಗೊಳ್ಳುತ್ತದೆ.
ಗೊಂಬೆಹಬ್ಬ, ದಸರಾ ಹಬ್ಬ ಅಥವಾ ಶರನ್ನವರಾತ್ರಿ ಅಶ್ವಿನಿ ಮಾಸದಲ್ಲಿ ಆಚರಿಸಲಾಗುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ, ಇದು ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಬರುತ್ತದೆ.
ಶಕ್ತಿ ದೇವತೆಗಳಾದ ಸರಸ್ವತಿ, ಮಹಾಲಕ್ಷಿ ಮತ್ತು ಮಹಾಕಾಳಿ ರೂಪದಲ್ಲಿ ದೇವಿಯನ್ನು ಪೂಜಿಸುವ ಹಬ್ಬವೇ ನವರಾತ್ರಿ. ಜ್ಞಾನಸ್ವರೂಪಿಣಿ ಸರಸ್ವತಿ, ಸಕಲ ಸಂಪತ್ತಿನ ಆಧಿದೇವತೆ ಲಕ್ಷ್ಮಿ ಹಾಗೂ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ನಾಶ ಮಾಡುವ ಮಹಾಕಾಳಿಯನ್ನು ಒಂಬತ್ತು ದಿನಗಳ ಕಾಲ ಆರಾಧಿಸುತ್ತೇವೆ. ಮಹಾಕಾಳಿಯು ದುಷ್ಟಸಂಹಾರಿಣಿ. ಮನುಷ್ಯನಲ್ಲಿರುವ ದುಷ್ಟ ಗುಣಗಳನ್ನು ನಾಶ ಮಾಡುವುದೇ ಕಾಳಿಯನ್ನು ಪೂಜಿಸುವ ಉದ್ಧೇಶವಾಗಿದೆ. ಮನುಷ್ಯನಲ್ಲಿ ಗುಣ ಸಂಪತ್ತು ಸೌಭಾಗ್ಯ ಹಾಗೂ ಒಳ್ಳೆಯ ಚಿಂತನೆಗಳನ್ನು ಹೃದಯದಲ್ಲಿ ತುಂಬಲು ಮಹಾಲಕ್ಷ್ಮಿಯನ್ನು ಪೂಜಿಸುವುದಾಗಿದೆ. ಮಹಾ ಸರಸ್ವತಿಯು ಜ್ಞಾನದ ಆಧಿದೇವತೆ. ಮನುಷ್ಯನ ಬುದ್ಧಿಯನ್ನು ಪ್ರಚೋದಿಸಿ, ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವುದರಿಂದ ಸರಸ್ವತೀ ದೇವಿಯು ಜ್ಞಾನ ಪ್ರದಾಯಿನಿ. ನವರಾತ್ರಿಯ ಕೊನೆಯ ಮೂರು ದಿನಗಳಲ್ಲಿ ಮಹಾಸರಸ್ವತಿಯನ್ನು ಪೂಜಿಸುವುದರಿಂದ ಮಾನವನು ಅಜ್ಞಾನದಿಂದ ಸುಜ್ಞಾನದೆಡೆಗೆ ಗಮಿಸುತ್ತಾನೆ ಎಂಬುದನ್ನು ಸಂಕೇತಿಸುತ್ತದೆ.
ನವರಾತ್ರಿಯ ಆಕರ್ಷಣೆ ಗೊಂಬೆ ಹಬ್ಬ
ದಸರಾ ಹಬ್ಬವನ್ನು ಮನೆಗಳಲ್ಲಿ ಪೌರಾಣಿಕ ಕತೆಗಳನ್ನು ವಿವರಿಸುವ ಗೊಂಬೆಗಳನ್ನು ಇಡುವ ಮೂಲಕವೂ ಆಚರಿಸುವ ವಾಡಿಕೆ ನಾಡಿನಲ್ಲಿದೆ. ಇದು ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡಿನಲ್ಲಿ ಜನಪ್ರಿಯ ಹಬ್ಬ. ಸುಮಾರು 18ನೇ ಶತಮಾನದಿಂದಲೂ ಮನೆಮನೆಯಲ್ಲೂ ದಸರಾ ಗೊಂಬೆ ಕೂರಿಸುವ ಪದ್ಧತಿ ಜಾರಿಗೆ ಬಂದಿತು ಎನ್ನಬಹುದು. ಮನೆಗಳಲ್ಲಿ ಗೊಂಬೆ ಕೂರಿಸುವಾಗ ಸ್ಥಳಾವಕಾಶ ನೋಡಿಕೊಂಡು 3,5,7,9 ಹಂತಗಳಲ್ಲಿ ಕೂರಿಸುತ್ತಾರೆ. ಅಷ್ಟಲಕ್ಷ್ಮಿಯರು, ದಶಾವತಾರದ ಬೊಂಬೆಗಳು, ಸೀತಾ ಕಲ್ಯಾಣದ ಜೋಡಿಗಳು, ವೈಕುಂಠ ಪ್ರದರ್ಶನದ ಬೊಂಬೆಗಳು, ಶಿವ-ಪಾರ್ವತಿಯರ ಕೈಲಾಸ ಹೀಗೆ ಹಲವು ದೇವತೆಗಳು ಹಾಗೂ ಪೌರಾಣಿಕ ಕತೆಗಳು ಗೊಂಬೆ ಹಬ್ಬದ ಆಕರ್ಷಣೆ.
ಪುರಾಣಗಳ ಪ್ರಕಾರ ನವರಾತ್ರಿಯ ಹಿಂದಿನ ವಿಭಿನ್ನ ಕಥೆಗಳು
1. ದುರ್ಗೆ ಹಾಗೂ ಮಹಿಷಾಸುರ
ರಾಕ್ಷಸರ ರಾಜ ಮಹಿಷಾಸುರ ಸ್ವರ್ಗದಲ್ಲಿರುವ ದೇವರ ವಿರುದ್ಧ ಯುದ್ಧ ಆರಂಭಿಸಿದ. ಆತನ ವಿರುದ್ಧ ಹೋರಾಡಲು, ದೇವರು, ಬ್ರಹ್ಮ ಮತ್ತು ವಿಷ್ಣುವಿನ ತ್ರಿಮೂರ್ತಿಗಳನ್ನು ಒಳಗೊಂಡಂತೆ ಎಲ್ಲಾ ದೇವರುಗಳು ತಮ್ಮ ದೈವಿಕ ಶಕ್ತಿಯನ್ನು ಸಂಗ್ರಹಿಸಿ ಶಕ್ತಿಯ ತಾಯಿಗೆ ಜನ್ಮ ನೀಡಿದರು. ಹೀಗೆ ದುರ್ಗಾ ದೇವಿಯನ್ನು ಸೃಷ್ಟಿಸಲಾಯಿತು ಮತ್ತು ಆಕೆಯು ತನ್ನ ಶಕ್ತಿ ಮತ್ತು ಬುದ್ಧಿವಂತಿಕೆಯಿಂದ ಮಹಿಷಾಸುರನ ವಿರುದ್ಧ ಒಂಬತ್ತು ರಾತ್ರಿಗಳ ಉಗ್ರ ಯುದ್ಧದ ನಂತರ ಕೊಂದಳು. ವಿಜಯದ ಹತ್ತನೆಯ ದಿನವನ್ನು ವಿಜಯ ದಶಮಿಯೆಂದು ಆಚರಿಸಲಾಗುತ್ತದೆ- ಕೆಟ್ಟದ್ದರ ಮೇಲೆ ಒಳ್ಳೆಯದನ್ನು ಗೆಲ್ಲುವ ದಿನ ಇದಾಗಿದೆ.
2. ರಾಮ ಹಾಗೂ ದುರ್ಗೆ
ಲಂಕೆಯಲ್ಲಿರುವ ಸೀತೆಯನ್ನು ರಕ್ಷಿಸಲು ಶ್ರೀರಾಮನು ರಾವಣನ ವಿರುದ್ಧ ಯುದ್ಧಕ್ಕೆ ಹೊರಟನು. ಯುದ್ಧವನ್ನು ಪ್ರಾರಂಭಿಸುವ ಮೊದಲು, ದುರ್ಗಾದೇವಿಯ ಆಶೀರ್ವಾದಕ್ಕಾಗಿ ರಾಮನು ಆರಾಧಿಸುತ್ತಿದ್ದನು. ಪೂಜೆಗೆ ಅವನಿಗೆ 108 ಕಮಲಗಳು ಬೇಕಾಗಿದ್ದವು. ಎಣಿಕೆಯನ್ನು ಪೂರ್ಣಗೊಳಿಸಲು, ರಾಮನು ಅವನ ಒಂದು ಕಣ್ಣನ್ನು ತೆಗೆಯಲು ಹೊರಟಾಗ, ದುರ್ಗಾ ದೇವಿಯು ಹೊರಹೊಮ್ಮಿದಳು ಮತ್ತು ತನ್ನ ದೈವಿಕ 'ಶಕ್ತಿಯಿಂದ' ಆಶೀರ್ವದಿಸಿದಳು. ರಾಮನು ಅಂದು ಯುದ್ಧದಲ್ಲಿ ಗೆದ್ದನು.