Just In
- 4 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 4 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 5 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 5 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನವರಾತ್ರಿಯಲ್ಲಿಈ ಕಾರ್ಯಗಳನ್ನು ಮಾಡಲೇಬಾರದು
ನವರಾತ್ರಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಒಂಭತ್ತು ದಿನ ನಡೆಯುವ ಈ ಆಚರಣೆಯಲ್ಲಿ ಪ್ರತಿಯೊಂದು ದಿನ ದೇವಿಯ ಒಂದೊಂದು ಸ್ವರೂಪವನ್ನು ಪೂಜಿಸ ಆರಾಧಿಸಲಾಗುವುದು.
ಈ ಹಬ್ಬದಲ್ಲಿ ಪೂಜೆ ಜೊತೆ ವ್ರತವನ್ನು ಮಾಡಲಾಗುವುದು. ಐಶ್ವರ್ಯ, ಸಂಪತ್ತು, ಆರೋಗ್ಯಕ್ಕಾಗಿ ದೇವಿಯನ್ನು ಆರಾಧಿಸಲಾಗುವುದು. ಈ ಒಂಭತ್ತು ದಿನಗಳಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಅಂತಾರೆ. ನವರಾತ್ರಿಯಲ್ಲಿ ಯಾವ ಕಾರ್ಯಗಳನ್ನು ಮಾಡಬಾರದು ನೋಡೋಣ ಬನ್ನಿ:
ಉಗುರು ಮತ್ತು ಕೂದಲನ್ನು ಕತ್ತರಿಸಬಾರದು
ನವರಾತ್ರಿಯಲ್ಲಿ ಉಗುರು ಮತ್ತು ಕೂದಲನ್ನು ಕತ್ತರಿಸುವುದರಿಂದ ದೇವಿಯ ಕೋಪಕ್ಕೆ ತುತ್ತಾಗುವರು ಎಂಬ ನಂಬಿಕೆ ಇದೆ. ಶೇವಿಂಗ್ ಮಾಡಬಹುದು ಆದರೆ ಕೂದಲನ್ನು ಕತ್ತರಿಸುವುದು ಒಳ್ಳೆಯದಲ್ಲ ಎಂದು ಹೇಳಲಾಗುವುದು.
ಮಾಂಸಾಹಾರ ಸೇವನೆ
ನವರಾತ್ರಿಯಲ್ಲಿ ಸಾತ್ವಿಕ ಆಹಾರ ಸೇವನೆ ಮಾಡಬೇಕು. ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿ ಬಳಸುವುದು, ಮದ್ಯಪಾನ ಇವೆಲ್ಲಾ ನವರಾತ್ರಿ ಸಮಯದಲ್ಲಿ ವರ್ಜಿತ.
ನಿಂಬೆಹಣ್ಣನ್ನು ಕತ್ತರಿಸುವುದು
ನವರಾತ್ರಿ ಸಮಯದಲ್ಲಿ ನಿಂಬೆಹಣ್ಣು ಕತ್ತರಿಸಬಾರದು ಅಂತಾರೆ. ನಿಂಬೆರಸ ಬೇಕಿದ್ದರೆ ಹೊರಗಿನಿಂದ ಕೊಂಡು ಬಳಸಬಹುದು ಆದರೆ ಕತ್ತರಿಸಬಾರದು ಎಂಬ ನಂಬಿಕೆ ಇದೆ.
ಕರಿದ ಪದಾರ್ಥಗಳನ್ನು ಸೇವಿಸಬಾರದು
ನವರಾತ್ರಿಯ ಮುಖ್ಯ ಉದ್ದೇಶ ದೇಹದಲ್ಲಿರುವ ಕಶ್ಮಲಗಳನನ್ಉ ಹೊರಹಾಕುವುದು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ನವರಾತ್ರಿ ಸಮಯದಲ್ಲಿ ಬಳಸಬಾರದು.
ಹಸಿದ ಹೊಟ್ಟೆಯಲ್ಲಿ ಇರಬಾರದು
ನವರಾತ್ರಿಯಲ್ಲಿ ಉಪವಾಸ ಮಾಡಲಾಗುವುದು, ಆದರೆ ಹಸಿದ ಹೊಟ್ಟೆಯಲ್ಲಿ ಇರಬಾರದು. ಸ್ವಲ್ಪ ಹಣ್ಣು-ಹಂಪಲು ಇವುಗಳನ್ನು ತಿನ್ನಬೇಕು. ಹೊಟ್ಟೆ ಹಸಿದು ಇದ್ದರೆ ಅದು ದೇವಿಗ ಇಷ್ಟವಾಗುವುದಿಲ್ಲ ಎನ್ನಲಾಗುವುದು.
ಮಧ್ಯಾಹ್ನ ಹೊತ್ತು ಮಲಗುವುದು
ಮಧ್ಯಾಹ್ನದ ಹೊತ್ತು ಮಲಗುವುದು ಶುಭಕರವಲ್ಲ ಎಂದು ಹೇಳಲಾಗುವುದು. ಮಧ್ಯಾಹ್ನ ಮಲಗುವುದರಿಂದ ವ್ರತದಿಂದ ಗಳಿಸಿದ ಪುಣ್ಯ ಇಲ್ಲವಾಗುವುದು.
ದೀಪ ಕೆಡಬಾರದು
ನವರಾತ್ರಿ ಸಮಯದಲ್ಲಿ ರಾತ್ರಿ-ಹಗಲು ಹಚ್ಚಿದ ದೀಪ ಬೆಳಗುತ್ತಲೇ ಇರಬೇಕು. ದೀಪದಲ್ಲಿ ಎಣ್ಣೆ, ಬತ್ತಿ ಇದೆಯೇ ಆಗಾಗ ನೋಡುತ್ತಾ ದೀಪವನ್ನು ಆರದಂತೆ ನೋಡಿಕೊಳ್ಳಬೇಕು. ಹೀಗೆ ಮಾಡಿದ್ದೇ ಆದರೆ ಮನೆಗೆ ಅದೃಷ್ಟಲಕ್ಷ್ಮಿ ಒಲಿಯುವಳು.
ಜಗಳ ಆಡಬಾರದು
ನವರಾತ್ರಿಯಲ್ಲಿ ಯಾರ ಜೊತೆ ಜಗಳ ಆಡಬಾರದು, ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣಬೇಕು ಎಂದು ಹೇಳಲಾಗುವುದು. ಬೇರೆಯವರ ಬಗ್ಗೆ ಕೆಟ್ಟದಾಗಿ ಹೇಳಿದರೆ ಇದರಿಂದ ನಮಗೇ ದೋಷ ಉಂಟಾಗುವುದು ಎಂದು ಹೇಳಲಾಗುವುದು.