Just In
- 1 hr ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 1 hr ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- 3 hrs ago ದಿನ ಭವಿಷ್ಯ ಏಪ್ರಿಲ್ 20: ಶನಿವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
- 4 hrs ago ವೃಷಭ ರಾಶಿಗೆ ಗುರು ಸಂಚಾರ: 10ನೇ ಮನೆಯಲ್ಲಿ ಗುರು ಸಿಂಹ ರಾಶಿಯವರು ಆಸ್ತಿ ಖರೀದಿಸಬಹುದು
Don't Miss
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೌನಿ ಅಮವಾಸ್ಯೆ: ಈ ದಿನ ಏನು ಮಾಡಿದರೆ ಒಳಿತಾಗುತ್ತದೆ, ಯಾವ ವಸ್ತುಗಳನ್ನು ದಾನ ಮಾಡಬೇಕು?
ಫೆಬ್ರವರಿ ಹನ್ನೊಂದಕ್ಕೆ ಮೌನಿ ಅಮವಾಸ್ಯೆ. ಹಿಂದೂಗಳಿಗೆ ತುಂಬಾ ವಿಶೇಷವಾದ ದಿನ ಇದಾಗಿದೆ. ಹಿಂದೂ ಪಂಚಾಂಗದ ಪ್ರಕಾರ ಮಾಘ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಅಮವಾಸ್ಯೆಯನ್ನು ಮೌನಿ ಅಮವಾಸ್ಯೆಯಂದು ಆಚರಿಸಲಾಗುವುದು.
ಮೌನಿ ಅಮವಾಸ್ಯೆಯ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಶ್ರೇಯಸ್ಸು ಉಂಟಾಗುತ್ತದೆ. ಅಲ್ಲದೆ ಈ ದಿನ ಮಾಡುವ ದಾನವು ತುಂಬಾ ಶ್ರೇಷ್ಠವಾದದ್ದು. ಮೌನಿ ಅಮವಾಸ್ಯೆಯಂದು ಕೆಲವೊಂದು ಕಾರ್ಯಗಳನ್ನು ಮಾಡಬೇಕು, ಇನ್ನು ಕೆಲವೊಂದು ಮಾಡಬಾರದು.
ನಾವು ಈ ಇಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು, ಯಾವ ಕಾರ್ಯಗಳನ್ನು ಮಾಡಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:
ಮೌನಿ ಅಮವಾಸ್ಯೆಯ ವಿಶೇಷತೆ
ಮಹಾ ಶಿವರಾತ್ರಿ ಮೊದಲು ಇರುವ ಕೊನೆಯ ಅಮವಾಸ್ಯೆ ಇದಾಗಿದೆ. ಈ ದಿನ ಮೌನವ್ರತ ಮಾಡಿದರೆ ಮನಸ್ಸನ್ನು ನಿಗ್ರಹಿಸಬಹುದು, ಜ್ಞಾನ ಹೆಚ್ಚುವುದು ಅಲ್ಲದೆ ಮನಸ್ಸಿಗೆ ನೆಮ್ಮದಿ ಸಿಗುವುದು.
ಭಗವದ್ಗೀತೆ (ಅಧ್ಯಾಯ ೬.೫) ಪ್ರಕಾರ ಮನುಷ್ಯ ಮನಸ್ಸು ಅನೇಕ ಆಲೋಚನೆಗಳು, ಗೊಂದಲಗಳಿಂದಾಗಿ ತುಂಬಾ ದಣಿದಿರುತ್ತದೆ. ಈ ದಿನ ಮೌನವಾಗಿದ್ದರೆ ಮನಸ್ಸಿನ ನೆಮ್ಮದಿ ಹಾಳು ಮಾಡುವ ಮಾತುಗಳನ್ನು ನಿಯಂತ್ರಿಸುವ ಶಕ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಏನು ಮಾಡಬೇಕು?
* ಸೂರ್ಯಾದಯದಿಂದ ಸೂರ್ಯಾಸ್ತಮವಾಗುವವರೆಗೆ ಮೌನವಾಗಿರಬೇಕು.
* ಬೆಳಗ್ಗೆ ಪುಣ್ಯ ನದಿಯಲ್ಲಿ ಮುಳುಗಿ ಏಳಬೇಕು.
* ಈ ದಿನ ಉಪವಾಸ ಇರಬೇಕು.
* ಬಡವರಿಗೆ ದಾನ ಮಾಡಬೇಕು
ಯಾವ ವಸ್ತುಗಳನ್ನು ದಾನ ಮಾಡಬೇಕು?
ಮೌನ ಅಮವಾಸ್ಯೆಯ ಸಂಪ್ರದಾಯದ ಪ್ರಕಾರ ಎಳ್ಳು, ಕಪ್ಪು ಬಟ್ಟೆ, ಎಣ್ಣೆ, ಹೊದಿಕೆ, ಚಪ್ಪಲಿ, ಬೆಚ್ಚಗಿನ ಉಡುಪುಗಳು ಮುಂತಾದವುಗಳನ್ನು ಅಗತ್ಯ ಇರುವವರಿಗೆ ದಾನ ಮಾಡಬೇಕು. ಇನ್ನು ಹಾಲು, ಅಕ್ಕಿ, ಧಾನ್ಯಗಳನ್ನು ದಾನ ಮಾಡಬಹುದು.
ಈ ದಿನ ದಾನ ಮಾಡುವುದರಿಂದ ಸಿಗುವ ಫಲವೇನು?
ಈ ದಿನ ದಾನ ಮಾಡಿದರೆ ತುಂಬಾ ಶುಭ ಫಲ ಉಂಟಾಗುವುದು. ಈ ದಿನ ಪುಣ್ಯ ಸ್ನಾನ ಮಾಡಿದ ಬಳಿಕ ಪೂಜೆ ಮಾಡಿ, ನಂತರ ದಾನ ಮಾಡಬೇಕು. ಹೀಗೆ ಮಾಡಿದರೆ ಪಾಪ ಕರ್ಮಗಳು ನಾಶವಾಗುವುದು, ಅಲ್ಲದೆ ಮನೋಕಾಮನೆಗಳು ನೆರವೇರುವುದು, ಒಳಿತಾಗುತ್ತದೆ ಎಂದು ಹೇಳಲಾಗಿದೆ.
ಮೌನಿ ಅಮವಾಸ್ಯೆ ದಿನ ಏನು ಮಾಡಬಾರದು?
* ಸಮಾಧಿ ಬಳಿ ಸುತ್ತಾಡಬಾರದು
* ಬಡವರು ಹಾಗೂ ನಿರ್ಗತಿಕರಿಗೆ ಅವಮಾನ ಮಾಡಬಾರದು, ಒಂದು ವೇಳೆ ಮಾಡಿದರೆ ಮುಂದೆ ಕೆಟ್ಟ ಪರಿಣಾಮ ಎದುರಿಸುವಿರಿ.
* ಸಂಗಾತಿ ಜೊತೆ ದೈಹಿಕ ಸಂಪರ್ಕ ನಡೆಸಬಾರದು.
* ಈ ದಿನ ಮಾಂಸಾಹಾರ ಸೇವಿಸಬಾರದು, ಸಾತ್ವಿಕ ಆಹಾರಗಳನ್ನಷ್ಟೇ ಸೇವಿಸಬೇಕು.