Just In
Don't Miss
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Finance ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್ಗಳು
- News Subrahmanya Dhareshwara: ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಗಳಗೌರಿ ವ್ರತ 2022: ದಿನ ಹಾಗೂ ಮಂಗಳಗೌರಿ ವ್ರತ ಮಾಡುವ ವಿಧಾನ ಹೇಗೆ?
ಆಷಾಢ ಕಳೆದು ಶ್ರಾವಣ ಮಾಸ ಆರಂಭವಾಗಿದೆ. ಹಬ್ಬಗಳ ಮಾಸ ಶ್ರಾವಣ ಜುಲೈ 29 ಶುಕ್ರವಾರದಿಂದ ಆರಂಭವಾಗಿದೆ. ಶ್ರಾವಣ ಮಾಸದ ಮೊದಲ ಹಬ್ಬ ಹಾಗೂ ಅದರಲ್ಲೂ ದೇವಿಗೆ ಅರ್ಪಿತವಾದ ಹಬ್ಬ ಮಂಗಳ ಗೌರಿ ವ್ರತ. ಆಗಸ್ಟ್ 2, ಮಂಗಳವಾರ ಮೊದಲ ಮಂಗಳ ಗೌರಿ ವ್ರತದ ಆರಂಭದ ದಿನ.
ಗೌರಿ ದೇವಿಯು ಮನೆಯವರಿಗೆ ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ವೈವಾಹಿಕ ಜೀವನ ಆನಂದದಿಂದ ಇರುವಂತೆ ಆಶೀರ್ವದಿಸುವ ಉದ್ದೇಶದಿಂದ ಈ ಪೂಜೆಯನ್ನು ಪಾರ್ವತಿ ಅಥವಾ ಗೌರಿ ದೇವಿಗೆ ಪೂಜೆಯನ್ನು ಸಮರ್ಪಿಸಲಾಗುತ್ತದೆ. ಮದುವೆಯಾದ ಮೊದಲ ಐದು ವರ್ಷಗಳಲ್ಲಿ ಮಹಿಳೆಯರು ಈ ವ್ರತವನ್ನು ಮಾಡುತ್ತಾರೆ.
ಮುತ್ತೈದೆಯರು ದೀರ್ಘ ಸುಮಂಗಲಿಯ ಆಶೀರ್ವಾದಕ್ಕಾಗಿ, ಸಂತಾನ ಭಾಗ್ಯ ಪಡೆಯಲು, ಸಂತೋಷದ ದಾಂಪತ್ಯ ಜೀವನಕ್ಕಾಗಿ ಮಾಡಿದರೆ, ಹೆಣ್ಣುಮಕ್ಕಳು ಉತ್ತಮ ಬಾಳ ಸಂಗಾತಿಗಾಗಿ ಬೇಡಿಕೆ ಇಟ್ಟು ಬಹಳ ಭಕ್ತಿ ಭಾವದಿಂದ ಆಚರಿಸುವ ಈ ವ್ರತವನ್ನು ಪಾರ್ವತಿ ದೇವಿಗೆ ಅರ್ಪಿಸುತ್ತಾರೆ.
ಈ ವ್ರತ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹಿಂದೂಗಳು ಆಚರಿಸುವ ಪ್ರಮುಖ ವ್ರತ. ಶ್ರಾವಣ ಮಾಸದ ಯಾವುದೇ ಮಂಗಳವಾರವೂ ಮಂಗಳಗೌರಿ ವ್ರತ ಆಚರಿಸಬಹುದು.
2022ರಲ್ಲಿ ಮಂಗಳಗೌರಿ ವ್ರತ ಆಚರಿಸುವ ದಿನಗಳು
ಕರ್ನಾಟಕ, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಗುಜರಾತ್, ಮತ್ತು ತಮಿಳುನಾಡಿನಲ್ಲಿ ಮಂಗಳಗೌರಿ ವ್ರತ ಆಚರಿಸುವ ದಿನಗಳು
ಮಂಗಳವಾರ, 2 ಆಗಸ್ಟ್ 2022
ಮಂಗಳವಾರ, 9 ಆಗಸ್ಟ್ 2022
ಮಂಗಳವಾರ, 16 ಆಗಸ್ಟ್ 2022
ಮಂಗಳವಾರ, 23 ಆಗಸ್ಟ್ 2022
ಪೂಜೆಗೆ ಬೇಕಾಗುವ ಅಗತ್ಯ ಸಾಮಗ್ರಿಗಳು
ಪಾರ್ವತಿ ಅಥವಾ ಗೌರಿ ದೇವಿಯ ವಿಗ್ರಹ
ಅಥವಾ ಅರಿಶಿನ ಪುಡಿಯಿಂದ ಮಾಡಿದ ಪಿರಮಿಡ್ ಆಕೃತಿ
ಕಲಶ
ಬೆಲ್ಲ
ಅಕ್ಕಿ
ಹತ್ತಿ ಅಥವಾ ಹೂವಿನ ಮಾಲಾ ಅಥವಾ ಹಾರ
ಕೆಂಪು ಹೂವುಗಳು
ತೆಂಗಿನಕಾಯಿ
ಪಿರಮಿಡ್ನಂತೆ ಮಡಿಚಲ್ಪಟ್ಟ ಬಟ್ಟೆ
ಬಗೆಬಗೆಯ ಹಣ್ಣುಗಳು
ಪೂಜೆ ಮಾಡುವ ವಿಧಾನ ಹೇಗೆ
ಸೂರ್ಯೋದಯಕ್ಕೂ ಮುನ್ನ ಮುಂಜಾನೆ ಮಹಿಳೆ/ಹೆಣ್ಣುಮಕ್ಕಳು ಸ್ನಾನ ಮಾಡಿ, ಗೌರಿಯ ವಿಗ್ರಹವನ್ನು ಅರಿಶಿನದೊಂದಿಗೆ ತಯಾರಿಸಿ ಅದನ್ನು ಮಡಿ ಬಟ್ಟೆಯಿಂದ ಅಲಂಕರಿಸಿ. ಅಗತ್ಯ ಪೂಜಾ ವಸ್ತುಗಳನ್ನು ಮೊದಲೇ ಸಿದ್ಧ ಇಟ್ಟುಕೊಳ್ಳಿ. ಬೇಯಿಸದ ಅಕ್ಕಿಯನ್ನು ಬೆಳ್ಳಿ ತಟ್ಟೆಯಲ್ಲಿ, ನೀರನ್ನು ತುಂಬಿಸಿದ ಕಲಶವನ್ನು ಅಕ್ಕಿ ತಟ್ಟೆಯಲ್ಲಿ ಇಡಲಾಗುತ್ತದೆ. ಕಳಶಕ್ಕೆ ಐದು ವೀಳ್ಯದೆಲೆಯನ್ನು ಇಡಿ ಮತ್ತು ತೆಂಗಿನಕಾಯಿಗೆ ಅರಿಶಿನ, ಕುಂಕುಮ ಇಟ್ಟು ಅಲಂಕರಿಸಿ. ಪೂಜೆ ಆರಂಭಕ್ಕೂ ಮುನ್ನ ಗಣೇಶ ವಿಗ್ರಹಕ್ಕೆ ಹಾಲು, ನೀರು ಚಿಮುಕಿಸಿ ಪೂಜೆ ಮಾಡಿ. ನಂತರ ಅರಿಶಿನದ ಅಥವಾ ಬೆಳ್ಳಿಯ ಗೌರಿಗೆ ಅಭಿಷೇಕ ಮಾಡಲು ಪ್ರಾರಂಭಿಸಿ. ಅಷ್ಠೋತ್ರವನ್ನು ಹೇಳುತ್ತಾ ಹೂವುಗಳಿಂದ ಅಭಿಷೇಕ ಮಾಡಿ, ಸಂಜೆ ಪೂಜೆ ವೇಳೆ ಮಂಗಳಗೌರಿಯ ಕಥೆಯನ್ನು ಓದಿ.
ಮತ್ತೈದೆಯರಿಗೆ ನೀಡುವ ತಾಂಬೂಲದಲ್ಲಿ ಏನಿರಬೇಕು?
ಕನಿಷ್ಠ ಐದು ಮಹಿಳೆಯರನ್ನು ಕರೆದು ಕುಂಕುಮ ತಾಂಬೂಲ ನೀಡಬೇಕು. ತಾಂಬೂಲದಲ್ಲಿ 5 ಬಗೆಯ ಹಣ್ಣುಗಳು, ಹಸಿರು ಕಾಳುಗಳು, ಅಕ್ಕಿ ಹಿಟ್ಟು ಮತ್ತು ಎಳ್ಳಿನಿಂದ ತಯಾರಿಸಿ ಸಿಹಿ ಖಾದ್ಯ ತಮಟೆ ನೀಡಬೇಕು. ಶುಭ ಸುದ್ದಿ, ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಈ ರೀತಿ ಪೂಜೆಯನ್ನು ಶ್ರಾವಣ ತಿಂಗಳ ಎಲ್ಲಾ ಮಂಗಳವಾರದಂದು 5ವರ್ಷಗಳು ವ್ರತ ಮಾಡಬೇಕು.