Just In
- 9 min ago ದಿನ ಭವಿಷ್ಯ ಏಪ್ರಿಲ್ 21: ಭಾನುವಾರ ಯಾವ ರಾಶಿಯವರಿಗೆ ಒಳ್ಳೆಯದು? ಹಣಕಾಸು ಹೇಗಿರಲಿದೆ?
- 1 hr ago ಗುರು ಸಂಚಾರ 2024: ವೃಶ್ಚಿಕ ರಾಶಿಯವರಿಗೆ ಗುರು ಸಂಚಾರದಿಂದ ಅದೃಷ್ಟದ ಬೆಂಬಲ
- 4 hrs ago ಗುರು ಸಂಚಾರ 2024: ತುಲಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 7 hrs ago 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
Don't Miss
- Movies ಯಾರಿಗೂ ಹೇಳ್ಬೇಡಿ ; ಬಾಲಿವುಡ್ ಯಾರಿಗೂ ಸುರಕ್ಷಿತವಲ್ಲ ಎಂದ ಪ್ರೀತಿ ಜಿಂಟಾ..!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವರಾತ್ರಿಯಂದು ಈ ಕಾರ್ಯಗಳನ್ನು ತಪ್ಪಿಯೂ ಮಾಡದಿರಿ
ಫೆಬ್ರವರಿ 18 ರಂದು ಶನಿವಾರ ಮಹಾಶಿವರಾತ್ರಿ ಆಚರಿಸಲಾಗುವುದು. ಫಲ್ಗುಣ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಮಹಾಶಿವ ರಾತ್ರಿ ಆಚರಿಸಲಾಗುವುದು.
ಶಿವರಾತ್ರಿಯಂದು ಉಪವಾಸ ವ್ರತ ಮಾಡಿ, ಜಾಗರಣೆ ಇದ್ದು ಶಿವನ ಜಪ ಮಾಡುತ್ತಾ ಈ ದಿನವನ್ನು ಕಳೆಯಬೇಕು. ಶಿವರಾತ್ರಿಯನ್ನು ಹೇಗೆ ಆಚರಿಸಬೇಕೆಂಬ ನಿಯಮಗಳಿವೆ. ಅದೇ ರೀತಿ ಈ ಶುಭ ದಿನ ಕೆಲವೊಂದು ಕಾರ್ಯಗಳನ್ನು ಮಾಡಬಾರದು, ಈ ಲೇಖನದಲ್ಲಿ ಶಿವರಾತ್ರಿಯಂದು ಏನು ಮಾಡಬಾರದು ಎಂದು ಹೇಳಲಾಗಿದೆ ನೋಡಿ:
ಶಿವರಾತ್ರಿಯಂದು ಕಪ್ಪು ಬಟ್ಟೆ ಧರಿಸಬೇಡಿ
ಕಪ್ಪು ಬಣ್ಣವನ್ನು ಶಿವರಾತ್ರಿಯಂದು ಧರಿಸಬೇಡಿ. ಶನಿ ದೇವಾಲಯಕ್ಕೆ ಹೋಗುವಾಗ ಅಥವಾ ಅಯ್ಯಪ್ಪ ದೇವಾಲಯಕ್ಕೆ ಹೋಗುವಾಗ ಕಪ್ಪು ಬಟ್ಟೆ ಧರಿಸುತ್ತಾರೆ. ಆದರೆ ಶಿವನ ದೇವಾಲಯಕ್ಕೆ ಹೀಗುವಾಗ ಕೆಂಪು, ಹಳದಿ, ಪಿಂಕ್ ಈ ಬಣ್ಣದ ಉಡುಪು ಧರಿಸಿ.
ಈ ಆಹಾರ ಸೇವಿಸಬೇಡಿ
ಈ ದಿನ ಅಕ್ಕಿ, ಗೋಧಿ, ಧಾನ್ಯಗಳು ಈ ರೀತಿಯ ಆಹಾರ ಸೇವಿಸಬಾರದು. ಈ ದಿನ ಒಂದೋ ಕಟ್ಟು ನಿಟ್ಟಿನ ಉಪವಾಸ ವ್ರತ ಮಾಡಬೇಕು, ಇಲ್ಲದಿದ್ದರೆ ನೀರು, ಹಣ್ಣು ಇವಷ್ಟೇ ಸೇವಿಸಬೇಕು.
ಹಿರಿಯರಿಗೆ ಅಗೌರವ ತೋರಬಾರದು
ಶಿವರಾತ್ರಿಯಂದು ಮನೆಯಲ್ಲಿ ಹಿರಿಯರಿಗೆ ಅಗೌರವ ತೋರಬೇಡಿ ಹಾಗೂ ಮನೆಯಲ್ಲಿ ಕೋಪದಿಂದ ಕಿರಾಚಾಡುವುದು ಏನೂ ಮಾಡಬಾರದು. ಈ ದಿನ ಶಿವನ ಧ್ಯಾನದಲ್ಲಿ ಕಳೆಯುವುದರಿಂದ ಮನ-ಮನೆ ಆಹ್ಲಾದಕರವಾಗಿರುತ್ತೆ.
ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದ ಸೇವಿಸಬಾರದು
ದೇವಾಲಯಕ್ಕೆ ಹೋದಾಗ ದೇವರಿಗೆ ಅರ್ಪಿಸಿದ ಪ್ರಸಾದ ಸೇವಿಸುತ್ತೇವೆ. ಆದರೆ ಶಿವರಾತ್ರಿಯಂದು ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದ ಸೇವಿಸಬಾರದು ಎಂಬ ನಿಯಮವಿದೆ.
ಶಿವನಿಗೆ ತುಳಸಿ ಅರ್ಪಿಸಬಾರದು
ಹಿಂದೂ ಪೌರಾಣಿಕ ಕತೆಯ ಪ್ರಕಾರ ತುಳಸಿ ವಿಷ್ಣುವಿಗೆ ಅರ್ಪಿತಳು. ಆದ್ದರಿಂದ ಯಾವುದೇ ಕಾರಣಕ್ಕೆ ತುಳಸಿಯನ್ನು ಶಿವನಿಗೆ ಅರ್ಪಿಸಬಾರದು. ಯಾವುದೇ ಶಿವ ಪೂಜೆಯಲ್ಲಿ ತುಳಸಿ ಬಳಸುವುದಿಲ್ಲ.
ಅರಿಶಿಣವನ್ನು ಶಿವಲಿಂಗಕ್ಕೆ ಹಚ್ಚಬಾರದು
ಅರಿಶಿಣ ಪುರುಷ ತತ್ವವನ್ನು ಕುಗ್ಗಿಸುತ್ತೆ,ಅರಿಶಿಣವನ್ನು ಸ್ತ್ರೀಯರಿಗೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಮಹಾದೇವನನ್ನು ಪ್ರಾರ್ಥಿಸುವಾಗ ಅರಿಶಿಣ ಬಳಸಬಾರದು.
ಚಂಪಾ, ಕೇದಗೆ ಹೂ ಬಳಸಬಾರದು
ಶಿವ ಈ ಎರಡೂ ಹೂಗಳಿಗೆ ಶಾಪ ನೀಡಿದ್ದಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಎರಡು ಹೂಗಳನ್ನು ಬಳಸುವಂತಿಲ್ಲ.