Just In
- 4 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 12 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 13 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 13 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- News Dr.Rajkumar: ಹುಟ್ಟೂರಲ್ಲಿ ಮುತ್ತುರಾಜಣ್ಣನ ನೆನಪುಗಳು ನೂರಾರು.. ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Movies ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರ್ಷದ ಕೊನೆಯ ಏಕಾದಶಿ ಯಾವಾಗ? ಅದರ ಮಹತ್ವವೇನು?
ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಪ್ರಾಮುಖ್ಯತೆಯಿದ್ದು, ಈ ದಿನದಂದು ಉಪವಾಸ ಮತ್ತು ಪೂಜೆಗೆ ಬಹಳ ಪ್ರಾಶಸ್ತ್ಯವಿದೆ. ಅದೇ ರೀತಿ, 2021 ರ ಕೊನೆಯ ಏಕಾದಶಿಯು ಡಿಸೆಂಬರ್ 30ರಂದು ಬಂದಿದೆ. ಈ ಪುಷ್ಯ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಸಫಲ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು, ಶ್ರದ್ಧೆಯಿಂದ ಮಾಡುವ ಉಪವಾಸವು ಎಲ್ಲಾ ಕಾರ್ಯಗಳಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ಈ ಉಪವಾಸದ ಮಹಿಮೆಯನ್ನು ಮಹಾಭಾರತದಲ್ಲಿ ಶ್ರೀ ಕೃಷ್ಣನೇ ವಿವರಿಸಿದ್ದಾನೆ. ಸಫಲ ಏಕಾದಶಿಯ ತಿಥಿ, ಮುಹೂರ್ತ ಮತ್ತು ಪೂಜಾ ವಿಧಾನದ ಬಗ್ಗೆ ತಿಳಿಯೋಣ.
ಸಫಲ ಏಕಾದಶಿಯ ದಿನಾಂಕ, ಸಮಯ ಹಾಗೂ ಮಹತ್ವದ ಬಗ್ಗೆ ಈ ಕೆಳಗೆ ನೀಡಲಾಗಿದೆ:
ಸಫಲ ಏಕಾದಶಿ ದಿನಾಂಕ ಮತ್ತು ಸಮಯ:
ಮಾರ್ಗಶಿರ ಮಾಸದ ಕೃಷ್ಣ ಏಕಾದಶಿಯನ್ನು ಸಫಲ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಮಾಸದ ಏಕಾದಶಿಯ ದಿನಾಂಕವು ಡಿಸೆಂಬರ್ 29 ರಂದು ಸಂಜೆ 04.00 ರಿಂದ ಪ್ರಾರಂಭವಾಗುತ್ತದೆ. ಇದು ಡಿಸೆಂಬರ್ 30 ರಂದು ಮಧ್ಯಾಹ್ನ 1.30 ಕ್ಕೆ ಕೊನೆಗೊಳ್ಳುತ್ತದೆ. ಡಿಸೆಂಬರ್ 30 ರಂದು ಏಕಾದಶಿಯಂದು ಸೂರ್ಯೋದಯವಾಗುವುದರಿಂದ, ಸಫಲ ಏಕಾದಶಿಯ ಉಪವಾಸವನ್ನು ಈ ದಿನ ಮಾತ್ರ ಆಚರಿಸಲಾಗುತ್ತದೆ. ಮರುದಿನ ಡಿಸೆಂಬರ್ 31ರ ದ್ವಾದಶಿಯಂದು ಉಪವಾಸ ಅಂತ್ಯಗೊಳ್ಳಲಿದೆ.
ಏಕಾದಶಿ ತಿಥಿ ಆರಂಭ: ಡಿಸೆಂಬರ್ 29 ರಂದು ಸಂಜೆ 04.00
ಏಕಾದಶಿ ತಿಥಿ ಮುಕ್ತಾಯ: ಡಿಸೆಂಬರ್ 30 ರಂದು ಮಧ್ಯಾಹ್ನ 1.30 ಕ್ಕೆ
ಪಾರಣ ಸಮಯ: ಡಿಸೆಂಬರ್ 31ರಂದು ಬೆಳಗ್ಗೆ 06:41ರಿಂದ 08:58ರವರೆಗೆ
ಸಫಲ ಏಕಾದಶಿಯ ಮಹತ್ವ:
ಮಾರ್ಗಶಿರ-ಪುಷ್ಯ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಸಫಲಾ ಏಕಾದಶಿ ಎಂದು ಹೇಳಲಾಗುತ್ತದೆ. ಈ ಏಕಾದಶಿಯನ್ನು ಹಿಂದೂ ಪಂಚಾಂಗದಲ್ಲಿ ಸರ್ವೈಕಾದಶೀ ಎಂದು ಕರೆಯಲಾಗುತ್ತದೆ. ಇನ್ನು ಉತ್ತರ ಭಾರತದಾದ್ಯಂತ ಈ ಏಕಾದಶಿಯನ್ನು ಪುಷ್ಯ ಏಕಾದಶಿಯೆಂದೂ ಕರೆಯುತ್ತಾರೆ. ಈ ದಿನ ವಿಷ್ಣು ಮತ್ತು ಅವನ ಎಲ್ಲಾ ಅವತಾರಗಳನ್ನು ಪೂಜಿಸುವುದರಿಂದ ವಿಶೇಷ ಫಲ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಏಕಾದಶಿಯ ಎಲ್ಲಾ ಉಪವಾಸಗಳಲ್ಲಿ, ಸಫಲ ಏಕಾದಶಿಯ ಉಪವಾಸವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ನಿಜವಾದ ಶ್ರದ್ಧೆ ಮತ್ತು ನಂಬಿಕೆಯೊಂದಿಗೆ ಈ ಉಪವಾಸವನ್ನು ಆಚರಿಸುವ ಮೂಲಕ, ನಿಮಗೆ ಅದೃಷ್ಟ ಮತ್ತು ಯಶಸ್ಸು ಸಿಗುತ್ತದೆ.
ಸಫಲ ಏಕಾದಶಿಯ ಪೂಜಾ ವಿಧಾನ:
ಸಫಲ ಏಕಾದಶಿ ದಿನದಂದು ಬೆಳಗ್ಗೆ ಎದ್ದ ಸ್ನಾನ ಮಾಡಿ ನಂತರ ಉಪವಾಸ ವ್ರತವನ್ನು ಮಾಡುವುದಾಗಿ ಪ್ರತಿಜ್ಞೆ ಮಾಡಿಕೊಳ್ಳಬೇಕು.
ನಂತರ ನಿಮ್ಮ ಪೂಜಾ ಸ್ಥಳದಲ್ಲಿ ಗಂಗಾಜಲವನ್ನು ಸಿಂಪಡಿಸಿ ವಿಷ್ಣುವನ್ನು ವಿಧಿ - ವಿಧಾನಗಳ ಮೂಲಕ ಪೂಜಿಸಿ.
ತುಳಸಿ ಎಲೆಗಳು, ಧೂಪದ್ರವ್ಯ, ಅಗರಬತ್ತಿ, ವೀಳ್ಯದೆಲೆ, ಅಡಿಕೆ, ಹಳದಿ ಬಣ್ಣದ ಹಣ್ಣುಗಳು ಮತ್ತು ತೆಂಗಿನಕಾಯಿಗಳು ಭಗವಾನ್ ವಿಷ್ಣುವಿನ ಅಚ್ಚುಮೆಚ್ಚಿನ ವಸ್ತುಗಳು. ಪೂಜಿಸಿದ ನಂತರ ಇದನ್ನು ಅವರಿಗೆ ಅರ್ಪಿಸಿ.
ಈ ಶುಭ ಸಂದರ್ಭದಲ್ಲಿ ವಿಷ್ಣುವಿನೊಂದಿಗೆ ಕೃಷ್ಣನನ್ನೂ ಪೂಜಿಸಲಾಗುತ್ತದೆ.
ಈ ಸಂದರ್ಭದಲ್ಲಿ ಕೆಲವರು ತಮ್ಮ ಮನೆಯಲ್ಲಿ ಭಗವಾನ್ ಸತ್ಯನಾರಾಯಣನ ಕಥೆಯನ್ನು ಹೇಳುತ್ತಾರೆ ಹಾಗೂ ಓದುತ್ತಾರೆ.
ಉಪವಾಸದ ಕಥೆಯನ್ನು ಓದಿ ನಂತರ ಭೋಗವನ್ನು ಅರ್ಪಿಸಿ.