Just In
Don't Miss
- Movies ಬಿಸಿಲು, ಮಳೆ, ಧೂಳು ಬರಲಿ.. ಯಶ್ ಇದ್ರೆ ಸಾಕು.. ಏನಂತೀರಾ?
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Automobiles ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Navratri 2022: ದಕ್ಷಿಣ ಭಾರತದ ಹೆಮ್ಮೆ ಗೊಂಬೆ ಹಬ್ಬ ಹೇಗೆ ಆಚರಿಸುತ್ತಾರೆ, ಇದರ ಹಿನ್ನೆಲೆ ಏನು ಗೊತ್ತಾ?
ಕರ್ನಾಟಕ್ಕೆ ನವರಾತ್ರಿ ಹಬ್ಬ ಎಂದರೆ ಅದು ನಮ್ಮ ಹಬ್ಬ, ನಾಡಿನ ಹಬ್ಬ ಎಂಬ ವಿಶೇಷ ಸಂಭ್ರಮ. ಅದಕ್ಕೆ ಕಾರಣ ಮೈಸೂರು ದಸರಾ ಒಂದು ಅದ್ಭುತ ಮೆರುಗಾದರೆ ಮನೆಮನೆಗಳಲ್ಲಿ ಇಡುವ ಗೊಂಬೆಗಳು ಮತ್ತೊಂದು ಮೆರುಗು.
ನವರಾತ್ರಿ ಒಂಬತ್ತು ದಿನಗಳ ಕಾಲ ಮನೆಗಳಲ್ಲಿ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಮಕ್ಕಳ ಇಷ್ಟದ ಗೊಂಬೆಗಳನ್ನು ಥೀಮ್ ಆಧಾರಿತವಾಗಿ ಇಟ್ಟು ಅದಕ್ಕೆ ಅಲಂಕಾರ ಮಾಡಿ, ನವರಾತ್ರಿ ಪೂಜೆ ಮಾಡುತ್ತಾರೆ. ಕೆಲವು ಮನೆಗಳು ಸರಳ ಮತ್ತು ಸಾಂಪ್ರದಾಯಿಕ ಥೀಮ್ ಅನ್ನು ಅನುಸರಿಸುತ್ತಾರೆ. ಪ್ರತಿ ಮನೆಯಲ್ಲೂ ಸಂಗ್ರಹವು ಪ್ರತಿವರ್ಷ ಹೆಚ್ಚಾಗುತ್ತದೆ. ಗೊಂಬೆಗಳನ್ನು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ರವಾನಿಸಲಾಗುತ್ತದೆ. ಅದರಂತೆ, ಕೆಲವು ಕುಟುಂಬಗಳು 100 ವರ್ಷಗಳಿಗಿಂತ ಹಳೆಯದಾದ ಗೊಂಬೆಗಳನ್ನು ಹೊಂದಿವೆ. ಮುತ್ತೈದೆಯರಿಗೆ ಅರಿಶಿನ, ಕುಂಕುಮ ಇಡುತ್ತಾರೆ ಇದು ಗೊಂಬೆ ಹಬ್ಬದ ವಿಶೇಷತೆ.
ಈ ವರ್ಷ, ನವರಾತ್ರಿಯು ಸೋಮವಾರ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 4 ರಂದು ಕೊನೆಗೊಳ್ಳುತ್ತದೆ. ವಿಜಯ ದಶಮಿ ಅಥವಾ ದಸರಾವನ್ನು ಅಕ್ಟೋಬರ್ 5, 2022 ರಂದು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಇನ್ನಷ್ಟು ವಿಶೇಷತೆಗಳು, ಭಿನ್ನತೆಗಳು ಹಾಗೂ ಆಸಕ್ತಿಕರ ಸಂಗತಿಗಳಿಗೆ, ಅದೇನು ಮುಂದೆ ನೋಡೋಣ:
1. ಭಾರತದ ಯಾವ ಭಾಗದಲ್ಲಿ ನವರಾತ್ರಿ ಹೇಗೆ ಆಚರಿಸುತ್ತಾರೆ?
ನವರಾತ್ರಿಗೆ ಸಂಬಂಧಿಸಿದ ಅನೇಕ ಆಚರಣೆಗಳಿವೆ. ಲಕ್ಷ್ಮಿ, ದುರ್ಗಾ ಮತ್ತು ಸರಸ್ವತಿ ದೇವತೆಗಳಿಗೆ ಒಂಬತ್ತು ರಾತ್ರಿಗಳನ್ನು ಅರ್ಪಿಸಲಾಗುತ್ತದೆ. ಉತ್ತರ ಭಾರತದಲ್ಲಿ, ಹೆಚ್ಚಿನ ಜನರು ನವರಾತ್ರಿ ಸಮಯಲ್ಲಿ ಉಪವಾಸವನ್ನು ಆಚರಿಸುತ್ತಾರೆ, ಪಶ್ಚಿಮ ಭಾರತದಲ್ಲಿ ನವರಾತ್ರಿ ಹಬ್ಬವು ಗರ್ಬಾಗೆ ಸಮಾನಾರ್ಥಕವಾಗಿದೆ, ಇಲ್ಲಿ ಜನಪ್ರಿಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸುವ ಮೂಲಕ ಹಬ್ಬ ಆಚರಿಸುತ್ತಾರೆ.
ಪೂರ್ವವು ದುರ್ಗಾ ಪೂಜೆ ಆಚರಣೆಗಳ ಮೂಲಕ ಜೀವಂತವಾಗಿರುತ್ತದೆ. ಇದೇ ರೀತಿಯ ಧಾಟಿಯಲ್ಲಿ, ಬೊಮ್ಮಾಯಿ ಗೊಂಬೆ ಅಥವಾ ನವರಾತ್ರಿ ಗೊಂಬೆ, ಗೊಂಬೆಗಳು ಮತ್ತು ಪ್ರತಿಮೆಗಳ ಅಲಂಕೃತ ಪ್ರದರ್ಶನ ದಕ್ಷಿಣ ಭಾರತದ ಮನೆಗಳಲ್ಲಿ ಹಬ್ಬಗಳ ಅವಿಭಾಜ್ಯ ಅಂಗವಾಗಿದೆ.
ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ, ಹಬ್ಬವು ಬಹುಸಂಖ್ಯೆಯ ದೇವರುಗಳು, ದೇವತೆಗಳು, ಪ್ರಾಣಿಗಳು, ಪುರುಷರು ಮತ್ತು ಮಕ್ಕಳ ಗೊಂಬೆಗಳನ್ನು ಹಂತ ಹಂತದ ಮೆಟ್ಟಿಲುಗಳನ್ನು ಮಾಡಿ ಸೆಟ್ಅಪ್ನಲ್ಲಿ ಇರಿಸುವುದನ್ನು ಒಳಗೊಂಡಿದೆ. ತಮಿಳಿನಲ್ಲಿ, ಬೊಮ್ಮಾಯಿ ಗೊಂಬೆ ಅಥವಾ ಕೋಲು ಎಂದರೆ ‘ದೈವಿಕ ಉಪಸ್ಥಿತಿ', ತೆಲುಗಿನಲ್ಲಿ ಬೊಮ್ಮಲ ಕೊಲುವು ಎಂದರೆ ‘ಆಟಿಕೆಗಳ ನ್ಯಾಯಾಲಯ' ಮತ್ತು ಕನ್ನಡದಲ್ಲಿ ಬೊಂಬೆ ಹಬ್ಬ ಎಂದರೆ ‘ಗೊಂಬೆ ಹಬ್ಬ' ಎಂಬ ಹೆಸರಿನಿಂದ ಪ್ರಚಲಿತದಲ್ಲಿದೆ.
ಗೊಂಬೆಗಳು ತಾತ್ಕಾಲಿಕ ಮೆಟ್ಟಿಲುಗಳನ್ನು ಒಳಗೊಂಡಿದೆ, ಅದರ ಮೇಲೆ ಅನೇಕ ತಲೆಮಾರುಗಳಿಂದ ಬಂದ ಗೊಂಬೆಗಳನ್ನು ಇರಿಸಲಾಗುತ್ತದೆ. ರಾಮಾಯಣ, ಪುರಾಣಗಳು ಮತ್ತು ದಶಾವತಾರದ ಪಾತ್ರಗಳನ್ನು ಇಲ್ಲಿ ಚಿತ್ರಿಸಲಾಗುತ್ತದೆ. ಗೊಂಬೆ ಪರಿಸರ, ಬಾಹ್ಯಾಕಾಶ, ಪುರಾಣ, ಪ್ರಸ್ತುತ ವ್ಯವಹಾರಗಳು ಮತ್ತು ಹೆಚ್ಚಿನವುಗಳಂತಹ ನಿರ್ದಿಷ್ಟ ವಿಷಯಗಳನ್ನು ಸಹ ಚಿತ್ರಿಸುತ್ತದೆ.
2. ಗೊಂಬೆ ಹಬ್ಬದ ಆಚರಣೆಯ ಮಹತ್ವ
ಕರ್ನಾಟಕವು ಗೊಂಬೆ ಹಬ್ಬವನ್ನು ಸಂಪ್ರದಾಯಗಳಿಗೆ ಬೇರೂರಿಸುವ ರೀತಿಯಲ್ಲಿ ಅನುಸರಿಸುತ್ತದೆ ಮತ್ತು ಹೊಸ ಪೀಳಿಗೆಯನ್ನು ಭೂಮಿಯ ಶ್ರೀಮಂತ ಸಂಸ್ಕೃತಿ ಮತ್ತು ಪುರಾಣಗಳಿಗೆ ಪರಿಚಯಿಸುತ್ತದೆ. ದಸರ ಹಬ್ಬದ ಸಮಯದಲ್ಲಿ ದೈವಿಕ ಆಶೀರ್ವಾದ ಪಡೆಯಲು ಮತ್ತು ಮಕ್ಕಳನ್ನು ರಂಜಿಸಲು ಇದು ಒಂದು ಮಾರ್ಗವಾಗಿದೆ.
ಸಾಂಪ್ರದಾಯಿಕ ಗೊಂಬೆ ತಯಾರಿಕೆಯ ಕರಕುಶಲತೆಯು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ದಸರ ಹಬ್ಬದ ಸಂದರ್ಭದಲ್ಲಿ ಮೈಸೂರು ಗೊಂಬೆಗಳ ನಾಡು ಆಗುತ್ತದೆ. ಉತ್ಸವವು ಮರದ ಮತ್ತು ಮಣ್ಣಿನ ಗೊಂಬೆ ತಯಾರಿಕೆಯ ಕರಕುಶಲತೆಯನ್ನು ಜೀವಂತವಾಗಿಡಲು ಪ್ರೋತ್ಸಾಹಿಸುತ್ತದೆ ಮತ್ತು ವಯಸ್ಕರಿಗೆ ಪ್ರತಿವರ್ಷ ಕೆಲವು ದಿನಗಳವರೆಗೆ ಮಕ್ಕಳಾಗಲು ಅನುವು ಮಾಡಿಕೊಡುತ್ತದೆ.
3. ನವರಾತ್ರಿ ಗೊಂಬೆ ಬೆಸ ಸಂಖ್ಯೆಯ ಮೆಟ್ಟಿಗಳಲ್ಲಿ ಮಾತ್ರ ಹೊಂದಿಸಬೇಕು?
* ನವರಾತ್ರಿಯ ಮುನ್ನಾದಿನದಂದು ಬರುವ ಅಮವಾಸ್ಯೆಯ ದಿನ ಮರದಿಂದ ಅಥವಾ ಉಕ್ಕಿನಿಂದ ಮಾಡಬಹುದಾದ ಮೆಟ್ಟಿಲುಗಳನ್ನು ಸ್ಥಾಪಿಸುವ ಮೂಲಕ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಅದರ ನಂತರ ಅಲಂಕಾರಗಳು ನಡೆಯುತ್ತವೆ.
* ಸಂಖ್ಯೆಗಳು ಒಂದರಿಂದ 11 ರವರೆಗೆ ಬದಲಾಗಬಹುದು ಆದರೆ ಪ್ರದರ್ಶನಕ್ಕೆ ಲಭ್ಯವಿರುವ ಗೊಂಬೆಗಳ ಸಂಖ್ಯೆಯನ್ನು ಅವಲಂಬಿಸಿ ಹೆಚ್ಚಾಗಿ ಬೆಸವಾಗಿರುತ್ತದೆ.
* ಅನೇಕ ಕುಟುಂಬಗಳು ಒಂಬತ್ತು ಮೆಟ್ಟಿಲುಗಳನ್ನು ಹಾಕಿದರೆ, ಪ್ರತಿ ಹಂತವು ನವರಾತ್ರಿಯ ಒಂಬತ್ತು ದಿನಗಳನ್ನು ಪ್ರತಿನಿಧಿಸುತ್ತದೆ. ಕೆಲವರು ಮೂರು, ಐದು ಅಥವಾ ಏಳು ಇಡುತ್ತಾರೆ. ಮೆಟ್ಟಿಲುಗಳನ್ನು ಅಲಂಕಾರಿಕ ಬಟ್ಟೆಯಿಂದ ಮುಚ್ಚಲಾಗುತ್ತದೆ ಮತ್ತು ಅದರ ಮೇಲೆ ಗೊಂಬೆಗಳನ್ನು ಇರಿಸಲಾಗುತ್ತದೆ.
* ಗೊಂಬೆಗಳ ಜೋಡಣೆಯು ಚಂದನ ಮರದಿಂದ (ಗಂಧದ ಮರ) ಮಾಡಿದ ‘ಪಟ್ಟದ ಬೊಂಬೆ' ಸುತ್ತ ಇರುತ್ತಿತ್ತು. ಚಂದನದ ಗೊಂಬೆ ಇಲ್ಲದವರು ಬದಲಿಗೆ ಬೇರೆ ಮರದ ಪಟ್ಟದ ಗೊಂಬೆ ಇಡುತ್ತಾರೆ.
* ಮೊದಲ ಹಂತವನ್ನು ಕಲಶದಿಂದ ಅಲಂಕರಿಸಲಾಗಿದೆ. ನೀರು ತುಂಬಿದ ಕಳಶಕ್ಕೆ ಮಾವಿನ ಎಲೆಗಳ ಕಿರೀಟದಿಂದ ಅಲಂಕರಿಸಲಾಗುತ್ತದೆ ಮತ್ತು ಅದರ ಮೇಲೆ ತೆಂಗಿನಕಾಯಿಯನ್ನು ಇಡಲಾಗುತ್ತದೆ. ಇದು ದುರ್ಗಾ ದೇವಿಯನ್ನು ಪ್ರತಿನಿಧಿಸುತ್ತದೆ ಎಂದು ಪರಿಗಣಿಸಲಾಗಿದೆ.
* ಕಲಶದ ಎರಡೂ ಬದಿಯಲ್ಲಿ ದೇವತೆಗಳ ವಿಗ್ರಹಗಳನ್ನು ಇರಿಸಲಾಗಿದೆ. ಸಂಪ್ರದಾಯದ ಪ್ರಕಾರ, ದುರ್ಗಾ, ಲಕ್ಷ್ಮಿ, ಸರಸ್ವತಿ ದೇವಿಯ ಗೊಂಬೆಗಳು ಮತ್ತು ಮರಪಾಚಿ ಬೊಮ್ಮಾಯಿ ಎಂಬ ಮರದ ಗೊಂಬೆಗಳು ಯಾವಾಗಲೂ ಜೋಡಣೆಯ ಭಾಗವಾಗಿದೆ.
* ಮುಂದಿನ ಕೆಲವು ಹಂತಗಳಲ್ಲಿ ದೇಶದ ಸಂತರು ಮತ್ತು ವೀರರ ವಿಗ್ರಹಗಳು, ನಂತರ ಮಾನವ ಚಟುವಟಿಕೆಗಳನ್ನು ಪ್ರತಿನಿಧಿಸುತ್ತದೆ, ಉದಾ: ಮದುವೆ, ದೇವಾಲಯಗಳು ಮತ್ತು ಸಂಗೀತ ಬ್ಯಾಂಡ್ನಂತಹ ಕಾರ್ಯಗಳನ್ನು ಚಿತ್ರಿಸುತ್ತದೆ.
* ವ್ಯಾಪಾರವನ್ನು ಸಾಮಾನ್ಯವಾಗಿ ಚೆಟ್ಟಿಯಾರ್ ಗೊಂಬೆಗಳು ಪ್ರತಿನಿಧಿಸುತ್ತವೆ, ಅಂಗಡಿ ವಸ್ತುಗಳು ಮತ್ತು ಮರಪಾಚಿ ದಂಪತಿಗಳು, ಮಕ್ಕಳ ಇಷ್ಟದ ಮರದ ಗೊಂಬೆಗಳು ಮುಂದಿನ ಹಂತಗಳಲ್ಲಿ ಇಡಲಾಗುತ್ತದೆ.
* ಪ್ರಗತಿ ಮತ್ತು ಬೆಳವಣಿಗೆಯನ್ನು ಪ್ರತಿನಿಧಿಸುವ ಪ್ರತಿ ವರ್ಷ ಕನಿಷ್ಠ ಒಂದು ಹೊಸ ಗೊಂಬೆಯನ್ನು ಸೇರಿಸುವುದು ಯಾವಾಗಲೂ ರೂಢಿಯಾಗಿದೆ.
* ಮೈಸೂರು ಪ್ರದೇಶಕ್ಕೆ ‘ಗೊಂಬ ಹಬ್ಬ'ವನ್ನು ಪರಿಚಯಿಸಿದ ಒಡೆಯರ್ ಅರಸರು ದಸರಾ ಹಬ್ಬದ ಸಂದರ್ಭದಲ್ಲಿ ಗೊಂಬೆಗಳನ್ನು ಪ್ರದರ್ಶಿಸಲು ವಿಶೇಷ ಗ್ಯಾಲರಿಯನ್ನು ಹೊಂದಿದ್ದರು.
4. ಆಚರಣೆ ಹೇಗಿರುತ್ತದೆ?
ಪ್ರತಿದಿನ ಗೊಂಬೆಗಳ ಮುಂದೆ ವರ್ಣರಂಜಿತ ರಂಗೋಲಿಗಳನ್ನು ಬಿಡಲಾಗುತ್ತದೆ, ನಿತ್ಯ ದೀಪಗಳನ್ನು ಬೆಳಗಿಸಬೇಕು, ಆರತಿಯನ್ನು ಮಾಡಬೇಕು. ಶ್ಲೋಕಗಳನ್ನು ಪಠಿಸುತ್ತಾರೆ ಮತ್ತು ಪ್ರತಿದಿನ ಕೆಲವು ರುಚಿಕರವಾದ ಸಿಹಿತಿಂಡಿಗಳು ಮತ್ತು ಹಣ್ಣುಗಳೊಂದಿಗೆ ದ್ವಿದಳ ಧಾನ್ಯಗಳಿಂದ ಮಾಡಿದ ವಿಶೇಷ ಭಕ್ಷ್ಯಗಳನ್ನು ನೈವೇದ್ಯ ಅರ್ಪಿಸಲಾಗುತ್ತದೆ. ಮುತ್ತೈದೆಯರು ಮತ್ತು ಮಕ್ಕಳನ್ನು ವಿಶೇಷವಾಗಿ ಚಿಕ್ಕ ಹುಡುಗಿಯರನ್ನು ಪ್ರತಿದಿನ ಸಂಜೆ ಗೊಂಬೆ ನೋಡಲು ಮನೆಗಳಲ್ಲಿ ವಿಶೇಷವಾಗಿ ಕರೆಯುತ್ತಾರೆ. ದೇವಿಯ ಗೌರವಾರ್ಥ ಭಕ್ತಿಗೀತೆಗಳನ್ನು ಸಹ ಹಾಡಲು ವಿನಂತಿಸಲಾಗುತ್ತದೆ. ನಂತರ ಅವರಿಗೆ ವೀಳ್ಯದೆಲೆ, ತೆಂಗಿನಕಾಯಿ, ಹಣ್ಣು, ಹೂವು, ಬಳೆ, ಅರಿಶಿನ, ಕುಂಕುಮ, ಪ್ರಸಾದ ನೀಡಿ ಗೌರವಿಸಲಾಗುತ್ತದೆ.
5. ನವರಾತ್ರಿಯ ಯಾವ ದಿನ ವಿಶೇಷತೆ ಏನು, ದೇವತೆ, ಹೂ, ಶ್ಲೋಕ?
ನವರಾತ್ರಿ ದಿನ 1
ದೇವಿ: ಮಾಹೇಶ್ವರಿ
ನೈವೇದ್ಯ: ಖಾರ ಹುಗ್ಗಿ
ಹೂವು: ಮಲ್ಲಿಗೆ
ತಿಥಿ: ಪಾಡ್ಯ
ಶ್ಲೋಕ: ಓಂ ಶ್ವೇತವರ್ಣೀಯಾ ವಿದ್ವಮೇ ಶೂಲ ಹಸ್ತಾಯ ಧೀಮಹಿ ತನ್ನೋ ಮಾಹೇಶ್ವರಿ ಪ್ರಚೊದಯಾತ್
ನವರಾತ್ರಿ ದಿನ 2
ದೇವಿ: ಕೌಮಾರಿ
ತಿಥಿ: ಬಿದಿಗೆ
ಹೂವು: ಕಣಗಲೆ
ನೈವೇದ್ಯ: ಪುಳಿಯೋಗರೆ
ಶ್ಲೋಕ: ಓಂ ಶಿಕಿ ವಾಹನಾಯ ವಿದ್ಮಹೇ ಶಕ್ತಿ ಹಸ್ತಾಯೈ ಧೀಮಹಿ ತನ್ನೋ ಕೌಮಾರಿ ಪ್ರಚೋದಯಾತ್
ನವರಾತ್ರಿ ದಿನ 3
ದೇವಿ: ವಾರಾಹಿ
ತಿಥಿ: ತದಿಗೆ
ಹೂವು: ಸಂಪಿಗೆ
ನೈವೇದ್ಯ: ಸಿಹಿ ಹುಗ್ಗಿ
ಶ್ಲೋಕ: ಓಂ ಮಹಿಶತ್ವಜಾಯ ವಿದ್ಮಹೇ ತಂಡ ಹಸ್ತಾಯ
ಧೀಮಹಿ ತನ್ನೋ ವಾರಾಹಿ ಪ್ರಚೋದಯತ್
ನವರಾತ್ರಿ ದಿನ 4
ದೇವಿ: ಲಕ್ಷ್ಮೀ
ಹೂವು: ಜಾಜಿ
ತಿಥಿ: ಚತುರ್ಥಿ
ಶ್ಲೋಕ: ಓಂ ಪದ್ಮ ವಾಸನ್ಯೈ ಚ ವಿದ್ಮಹೀ ಪದ್ಮಲೋಚನೀ ಸ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್
ನವರಾತ್ರಿ ದಿನ 5
ದೇವಿ: ವೈಷ್ಣವಿ
ಹೂವು: ಪಾರಿಜಾತ
ನೈವೇದ್ಯ: ಮೊಸರನ್ಬ
ತಿಥಿ: ಪಂಚಮಿ
ಶ್ಲೋಕ: ಓಂ ಶ್ಯಾಮವರ್ಣಾಯೈ ವಿದ್ಮಹಿ ಚಕ್ರ ಹಸ್ತಾಯೈ ಧೀಮಹಿ ತನ್ನೋ ವೈಷ್ಣವಿ ಪ್ರಚೋದಯಾತ್
ನವರಾತ್ರಿ ದಿನ 6
ದೇವಿ: ಇಂದ್ರಾಣಿ
ಹೂವು: ದಾಸವಾಳ
ನೈವೇದ್ಯ: ತೆಂಗಿನಕಾಯಿ ಅನ್ನ
ತಿಥಿ: ಷಷ್ಠಿ
ಶ್ಲೋಕ: ಓಂ ಕಜತ್ವಜಾಯೈ ವಿದ್ಮಹಿ ವಜ್ರ ಹಸ್ತಾಯ ಧೀಮಹಿ ತನ್ನೋ ಇಂದ್ರಾಯೀ ಪ್ರಚೋದಯಾತ್
ನವರಾತ್ರಿ ದಿನ 7
ದೇವಿ: ಸರಸ್ವತಿ
ಹೂವು: ಮಲ್ಲಿಗೆ ಮತ್ತು ಮೊಲ್ಲೆ
ತಿಥಿ: ಸಪ್ತಮಿ
ನೈವೇದ್ಯ: ನಿಂಬೆಹಣ್ಣಿನ ಅನ್ನ
ಶ್ಲೋಕ: ಓಂ ವಾಗ್ಧೇವ್ಯೈ ವಿದ್ಮಹಿ ವೃಂಜಿ ಪತ್ನಯೈ ಸ ಧೀಮಹಿ
ತನ್ನೋ ವಾಣಿ ಪ್ರಚೋದಯಾತ್
ನವರಾತ್ರಿ ದಿನ 8
ದೇವಿ: ದುರ್ಗಾ
ಹೂವು: ಗುಲಾಬಿ
ನೈವೇದ್ಯ: ಪಾಯಸಾನ್ನ
ತಿಥಿ: ಅಷ್ಟಮಿ
ಶ್ಲೋಕ: ಓಂ ಮಹಿಷಮರ್ದಿನ್ಯೈ ಚ ವಿದ್ಮಹೀ ದುರ್ಗಾ ದೇವ್ಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್
ನವರಾತ್ರಿ ದಿನ 9
ಹೂವು: ತಾವರೆ
ನೈವೇದ್ಯ: ಕ್ಷೀರಾನ್ನ
ತಿಥಿ: ನವಮಿ
ಶ್ಲೋಕ: ಓಂ ಕೃಷ್ಣವರ್ಣಾಯೈ ವಿದ್ಮಹೀ ಶೂಲ ಹಸ್ತಾಯೈ ಧೀಮಹಿ ತನ್ನೋ ಜಾಮುಂಡಾ ಪ್ರಚೋದಯಾತ್
ವಿಜಯ ದಶಮಿ
ದೇವಿ: ವಿಜಯ
ಹೂವು: ಮಲ್ಲಿಗೆ, ಗುಲಾಬಿ
ನೈವೇದ್ಯ : ಕಲ್ಲು ಸಕ್ಕರೆ ಅನ್ನ ಹಾಗೂ ಸಿಹಿ ಭಕ್ಷ್ಯ
ಶ್ಲೋಕ: ಓಂ ವಿಜಯಾ ದಿವ್ಯೈ ವಿದ್ಮಹೀ ಮಹಾ ನಿತ್ಯಾಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್