Just In
- 8 min ago ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- 1 hr ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 2 hrs ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 4 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Don't Miss
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- News Heavy Rain: ರಣಭೀಕರ ಮಳೆಗೆ ರಾಷ್ಟ್ರೀಯ ಹೆದ್ದಾರಿ ಇಬ್ಭಾಗ: ಭೂಕುಸಿತದಿಂದ ರಸ್ತೆ ಸಂಪರ್ಕ ಬಂದ್-ಎಲ್ಲಿ?
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನ.5ರಿಂದ ಕಾರ್ತಿಕ ಮಾಸ: ಜೀವನ ಸಮೃದ್ಧತೆಯಿಂದ ಕೂಡಿರಲು ಈ ತಿಂಗಳಲ್ಲಿ ಮಾಡಬೇಕಾದ ಹಾಗೂ ಮಾಡಬಾರದ ಕಾರ್ಯಗಳೇನು?
ಇಂದಿನಿಂದ ಶಿವ ಹಾಗೂ ವಿಷ್ಣುವಿನ ಪೂಜೆಗೆ ಪ್ರಾಶಸ್ತ್ಯವಾದ ಕಾರ್ತಿಕ ಮಾಸ ಆರಂಭವಾಗಿದೆ. ನವೆಂಬರ್ 5ರಿಂದ ಆರಂಭವಾಗಿ ಡಿಸೆಂಬರ್ 4ರಂದು ಅಂತ್ಯವಾಗಲಿರುವ ಈ ಕಾರ್ತಿಕ ಮಾಸವು ಕೀರ್ತಿ, ಲಾಭ ಮತ್ತು ಉತ್ತಮ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ.
ಹಿಂದೂ ಸಂಸ್ಕೃತಿಯಲ್ಲಿ ಈ ತಿಂಗಳು ಮಹತ್ವದ ಮತ್ತು ಮಂಗಳಕರವಾದ ಪ್ರಾಮುಖ್ಯತೆಯನ್ನು ಹೊಂದಿದ್ದು, ದೀಪಾವಳಿ, ಏಕಾದಶಿ ಸೇರಿದಂತೆ ಹಿಂದೂ ಸಂಪ್ರದಾಯದ ಪ್ರಮುಖ ಹಬ್ಬಗಳು ಇದೇ ತಿಂಗಳಲ್ಲಿ ಬರಲಿವೆ. ಈ ದಿನ ಶಿವನ ಮಗ ಕಾರ್ತಿಕೇಯನು ರಾಕ್ಷಸ ತಾರಕಾಸುರನನ್ನು ಕೊಂದನೆಂದು ಹೇಳಲಾಗುತ್ತದೆ, ಆದ್ದರಿಂದ ಇದಕ್ಕೆ ಕಾರ್ತಿಕ ಎಂದು ಹೆಸರು ಬಂದಿದೆ.
ಬಹಳ ಶ್ರದ್ಧಾಭಕ್ತಿಯಿಂದ ಈ ತಿಂಗಳಲ್ಲಿ ವ್ರತ ನಿರ್ವಹಿಸಿದರೆ, ವಿಷ್ಣುವು ತಮ್ಮಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿದೆ. ಹಾಗಾದರೆ, ಈ ತಿಂಗಳಲ್ಲಿ ಶಿವ, ವಿಷ್ಣು ಹಾಗೂ ಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಯಾವ ಕೆಲಸಗಳನ್ನು ಮಾಡಬೇಕು? ಯಾವುದನ್ನು ಮಾಡಬಾರದು ಎಂಬುದನ್ನು ಇಲ್ಲಿ ನೋಡೋಣ.
ಕಾರ್ತಿಕಮಾಸದಲ್ಲಿ ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಕಾರ್ತಿಕ ಮಾಸದಲ್ಲಿ ಭಕ್ತರು ಈ ನಿಯಮಗಳನ್ನು ಪಾಲಿಸಬೇಕು:
1. ಈ ತಿಂಗಳಲ್ಲಿ ತುಳಸಿಯ ಗಿಡವನ್ನು ಪೂಜಿಸಬೇಕು, ಇದು ಪೂಜೆಯ ಮಹತ್ವವನ್ನು ದ್ವಿಗುಣಗೊಳಿಸುತ್ತದೆ ಎಂದು ಹೇಳಲಾಗುತ್ತದೆ.
2. ಈ ತಿಂಗಳಲ್ಲಿ ವ್ಯಕ್ತಿಯು ನೆಲದ ಮೇಲೆ ಮಲಗಬೇಕು ಏಕೆಂದರೆ ಅದು ಶಾಂತಿಯುತ ಮತ್ತು ಪವಿತ್ರವಾದ ಆಲೋಚನೆಗಳನ್ನು ನೀಡುತ್ತದೆ.
3. ಈ ತಿಂಗಳಲ್ಲಿ, ಭಕ್ತರು ಬ್ರಹ್ಮಚರ್ಯವನ್ನು ಪಾಲಿಸಬೇಕು.
4. ಭಕ್ತರು ದೀಪಗಳನ್ನು ದಾನ ಮಾಡಬೇಕು, ಇದನ್ನು ದೀಪದಾನ ಎಂದು ಕರೆಯಲಾಗುತ್ತದೆ. ಹೀಗೆ ಮಾಡುವುದರಿಂದ ವ್ಯಕ್ತಿಗೆ ಸಮೃದ್ಧ ಜೀವನ ಸಿಗುವುದು.
5. ಇದರ ಹೊರತಾಗಿ, ಉಪವಾಸ ಮತ್ತು ಉಪವಾಸವನ್ನು ನಿಯಮಗಳನ್ನು ಸಂಯಮದಿಂದ ಮಾಡಬೇಕು.
6. ಸೂರ್ಯೋದಯಕ್ಕೆ ಮುಂಚಿತವಾಗಿ ತಣ್ಣೀರಿನಿಂದ ಸ್ನಾನ ಮಾಡುವುದು ಕಾರ್ತಿಕ ಮಾಸದಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
7. ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ವಿಷ್ಣು ಹಾಗೂ ಲಕ್ಷ್ಮಿಯನ್ನು ಪೂಜಿಸಬೇಕು.
8. ಈ ಮಾಸದಲ್ಲಿ ಬೆಲ್ಲದೊಂದಿಗೆ ಹಾಲು ಸೇವಿಸಬೇಕು, ಇದು ನಿಮ್ಮ ದೇಹವನ್ನು ಬೆಚ್ಚಗಿಡುವುದಲ್ಲದೇ, ರೋಗನಿರೋಧಕ ಶಕ್ತಿಯನ್ನು ಕಾಪಾಡುವುದು.
ಕಾರ್ತಿಕ ಮಾಸದಲ್ಲಿ ಏನು ಮಾಡಬಾರದು?:
1. ಧರ್ಮಗ್ರಂಥಗಳ ಪ್ರಕಾರ, ಭಕ್ತರು ಈ ತಿಂಗಳಲ್ಲಿ ಮಾಂಸಾಹಾರವನ್ನು ತ್ಯಜಿಸಬೇಕು, ಏಕೆಂದರೆ ಇದು 'ರಾಕ್ಷಸರ' ಜೀವನಕ್ಕೆ ಕಾರಣವಾಗುತ್ತದೆ.
2. ಕಾರ್ತಿಕ ಮಾಸದಲ್ಲಿ ಬೇಳೆ, ಬಟಾಣಿ, ಸಾಸಿವೆ ಇತ್ಯಾದಿಗಳನ್ನು ಸೇವಿಸಬಾರದು.
3. ಕಾರ್ತಿಕ ಮಾಸದ ನರಕ ಚತುರ್ದಶಿಯನ್ನು ಹೊರತುಪಡಿಸಿ, ಬೇರೆ ದಿನ ದೇಹಕ್ಕೆ ಎಣ್ಣೆ ಹಚ್ಚುವುದನ್ನು ನಿಷೇಧಿಸಲಾಗಿದೆ.
4. ಈ ತಿಂಗಳು ಕಡಿಮೆ ಮಾತನಾಡಿ. ಇತರರನ್ನು ಟೀಕಿಸುವುದು ಅಥವಾ ಇತರರ ಜೊತೆ ವಾದಿಸುವುದು ಅಹಿತಕರ ಫಲಿತಾಂಶಗಳನ್ನು ನೀಡುತ್ತದೆ.
5. ಭಕ್ತರು ತಣ್ಣೀರು ಕುಡಿಯುವುದನ್ನು ತಪ್ಪಿಸಬೇಕು ಏಕೆಂದರೆ ಇದು ಕೆಮ್ಮು ಮತ್ತು ಶೀತಕ್ಕೆ ಕಾರಣವಾಗುತ್ತದೆ ಮತ್ತು ಆರೋಗ್ಯಕ್ಕೆ ಒಳ್ಳೆಯದಲ್ಲ.
6. ಈ ತಿಂಗಳಲ್ಲಿ ಮಧ್ಯಾಹ್ನ ಮಲಗುವುದನ್ನು ಸಹ ನಿಷೇಧಿಸಲಾಗಿದೆ.
7. ದೀಪವನ್ನು ಕೈಯಿಂದ ನಂದಿಸಬೇಡಿ, ಅದನ್ನು ನಂದಿಸಬೇಕಾದರೆ, ಗಾಳಿ ಅಥವಾ ಬಟ್ಟೆಯಿಂದ ನಂದಿಸಿ.