Just In
- 1 hr ago ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- 2 hrs ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 4 hrs ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 5 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
Don't Miss
- Movies 'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
- News ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೆ ಜನ ಒಪ್ಪಲ್ಲ: ಡಿ ಕೆ ಸುರೇಶ್ ಹೀಗೆ ಹೇಳಿದ್ದು ಯಾರಿಗೆ?
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರ್ಕ ಸಂಕ್ರಾಂತಿ 2021: ಯಾವಾಗ, ಈ ದಿನ ತುಂಬಾ ಮಹತ್ವವಾದದ್ದು ಏಕೆ?
ಸೂರ್ಯನು ಮಿಥುನ ರಾಶಿಯಿಂದ ಕರ್ಕ ರಾಶಿಗೆ ಸಂಚರಿಸುವುದನ್ನು ಕರ್ಕ ಸಂಕ್ರಾಂತಿ ಎಂದು ಕರೆಯಲಾಗುವುದು. ಈ ವರ್ಷ ಜುಲೈ 16ಕ್ಕೆ ಕರ್ಕ ಸಂಕ್ರಾಂತಿ. ಈ ಕರ್ಕ ಸಂಕ್ರಾಂತಿಯ ಮತ್ತೊಂದು ವಿಶೇಷವೆಂದರೆ ಈ ದಿನದಿಂದ ದಕ್ಷಿಣಾಯಾನ ಕಾಲ ಪ್ರಾರಂಭವಾಗುವುದು, ಅಂದರೆ ದಕ್ಷಿಣಾಭಿಮುಖವಾಗಿ ಚಲಿಸಲು ಪ್ರಾರಂಭಿಸುತ್ತದೆ.
ಹಿಂದೂ ಪುರಾಣದ ಪ್ರಕಾರ ಕರ್ಕ ಸಂಕ್ರಾಂತಿಯಿಂದ ಮಳೆಗಾಲ ಪ್ರಾರಂಭ ಎಂದರ್ಥ. ದಕ್ಷಿಣಾಯಾನ ನಾಲ್ಕು ತಿಂಗಳು ಇರುತ್ತದೆ, ಮಕರ ಸಂಕ್ರಾಂತಿಗೆ ದಕ್ಷಿಣಾಯಾನ ಮುಕ್ತಾಯವಾಗುವುದು.
ಕರ್ಕ ಸಂಕ್ರಾಂತಿಯ ವಿಶೇಷ
ಕರ್ಕ ಸಂಕ್ರಾಂತಿಯಂದು ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು. ಈ ದಿನ ಭಕ್ತರು ಆಹಾರ ಹಾಗೂ ವಸ್ತ್ರಗಳನ್ನು ದಾನ ಮಾಡುತ್ತಾರೆ. ಪೌರಾಣಿಕ ಹಿನ್ನೆಲೆ ನೋಡಿದಾಗ ಕರ್ಕ ಸಂಕ್ರಾಂತಿಯ ದಿನದ ನಂತರ ಸೂರ್ಯ, ವಿಷ್ಣು ಹಾಗೂ ಇತರ ದೇವರು ಗಾಢ ನಿದ್ದೆಗೆ ಜಾರುತ್ತಾರೆ, ಈ ಸಮಯದಲ್ಲಿ ಶಿವನು ಇಡೀ ವಿಶ್ವವನ್ನು ನೋಡಿಕೊಳ್ಳುತ್ತಾನೆ ಎಂದು ಹೇಳಲಾಗುವುದು.
ಚಾತುರ್ಮಾಸದ ಪ್ರಾರಂಭ
ಚಾತುರ್ಮಾಸ ಶ್ರಾವಣ ಮಾಸದಿಂದ ಪ್ರಾರಂಭವಾಗುವುದು. ಭಾದ್ರಪದದಲ್ಲಿ ಗಣೇಶ ಹಾಗೂ ಶ್ರೀಕೃಷ್ಣನನ್ನು ಆರಾಧಿಸಲಾಗುವುದು, ನಂತರ ನವರಾತ್ರಿ ಪ್ರಾರಂಭ ಅದಾದ ಬಳಿಕ ದೀಪಾವಳಿ... ಹೀಗೆ ಹಬ್ಬಗಳ ಸಂಭ್ರಮಕ್ಕೆ ನಾಂದಿ ಈ ಕರ್ಕ ಸಂಕ್ರಾಂತಿ.
ಕರ್ಕ ಸಂಕ್ರಾಂತಿ ದಿನದ ಮಹತ್ವ
ಈ ದಿನದಂದು ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ಶ್ರಾದ್ಧ ಕಾರ್ಯ ಮಾಡಲಾಗುವುದು. ಈ ದಿನ ಶ್ರಾದ್ಧ ಕಾರ್ಯ ಮಾಡುವುದಿಂದ ಪಿತೃಗಳಿಗೆ ಮೋಕ್ಷ ಸಿಗುವುದು ಎಂದು ಹೇಳಲಾಗುವುದು.
ಕರ್ಕ ಸಂಕ್ರಾಂತಿ ಮುಹೂರ್ತ
ದಿನ: ಶುಕ್ರವಾರ
ದಿನಾಂಕ: ಜುಲೈ 16, 2021
ಸಂಕ್ರಾಂತಿ ಪ್ರಾರಂಭ ಸಮಯ : ಬೆಳಗ್ಗೆ 11:39ಕ್ಕೆ
ಸಂಕ್ರಾಂತಿ ರಾಶಿ: ಕನ್ಯಾ
ಸಂಕ್ರಾಂತಿ ನಕ್ಷತ್ರ: ಹಸ್ತಾ