Just In
- 1 hr ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 10 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 11 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 11 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- News ಡಿಸೆಂಬರ್ ಒಳಗೆ ಕಾಂಗ್ರೆಸ್ ಸರ್ಕಾರ ಪತನ: ಎಚ್.ಡಿ.ಕುಮಾರಸ್ವಾಮಿ ನುಡಿದ ಭವಿಷ್ಯ ನಿಜವಾಗಲಿದ್ಯಾ?
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Sports RCB vs KKR: ಚಿನ್ನಸ್ವಾಮಿಯಲ್ಲಿ ಮತ್ತೊಂದು ರೋಚಕ ಪಂದ್ಯ; ಸಂಭಾವ್ಯ ಆಡುವ 11ರ ಬಳಗ, ಲೈವ್ ಸ್ಟ್ರೀಮಿಂಗ್
- Automobiles Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- Movies ಮಂಗಳ ಗ್ರಹದಿಂದ ಬಂದಿದ್ದಾರೆ ಎಂಬಷ್ಟು ವಿಚಿತ್ರ ವ್ಯಕ್ತಿ ರಾಹುಲ್ ಗಾಂಧಿ ; ಕಂಗನಾ ರಣಾವತ್..!
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂ.24ಕ್ಕೆ ಕಾರ ಹುಣ್ಣಿಮೆ: ಸಾಂಸ್ಕೃತಿಕ ವೈಶಿಷ್ಟ್ಯ ಇರುವ ಈ ದಿನದ ವಿಶೇಷವೇನು?
ಉತ್ತರ ಕರ್ನಾಟಕದವರಿಗೆ ಕಾರ ಹುಣ್ಣಿಮೆ ಎಂದರೆ ತುಂಬಾನೇ ವಿಶೇಷ. ಈ ಹಬ್ಬದಂದು ಎತ್ತುಗಳಿಗೆ ಶೃಂಗರಿಸಿ ಅವುಗಳಿಗೆ ಕೃತಜ್ಞತೆ ಸಲ್ಲಿಸಲಾಗುವುದು. ರೈತರ ಸಡಗರ, ಸಂಭ್ರಮದ ಹಬ್ಬವಾದ ಕಾರ ಹುಣ್ಣಿಮೆ ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದಾಗಿ ಅಷ್ಟೇನು ಸಡಗರದಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ.
ಕಾರ
ಹುಣ್ಣಿಮೆ
ಬಳಿಕವಷ್ಟೇ
ಮುಂಗಾರು
ಆರಂಭವಾಗುವುದು
ಎಂದು
ಹೇಳಲಾಗುವುದು.
ಈ
ವರ್ಷ
ಜೂನ್
24ರಂದು
ಆಚರಿಸಲಾಗುತ್ತಿದೆ.
ಇದಕ್ಕೆ
ನಮ್ಮ
ದ
ರಾ
ಬಂದ್ರೆಯವರು
"
ಕಾರಹುಣ್ಣಿಮೆಯ
ಮಾರನೆಯ
ದಿನವೇ
ಮೋಡ
ಕೋಡನಪ್ಪಿ
ಕಂಡಿತೊಡ್ಡಿ
ನೋಡ
ಢಿಕ್ಕಿ
ಯಾಡುವಾ
ಆನೆ
ಬೇಡಗನೊಪ್ಪಿ
"
ಎಂದು
ಹೇಳಿರುವುದು.
ಕಾರ ಹುಣ್ಣಿಮೆ ಮಹತ್ವ
ಬೇಸಿಗೆ ತಾಪ ಹೋಗಿ ಮುಂಗಾರು ಮಳೆಯಿಂದ ಭೂಮಿ ತಂಪಾಗುವುದು. ಭೂಮಿ ತಂಪಾದಾಗ ಉತ್ತು- ಬಿತ್ತಲು ಎತ್ತುಗಳು ನೆರವಾಗುವುದು. ಆದ್ದರಿಂದ ಈ ದಿನದಂದು ಅವುಗಳನ್ನು ಅಲಂಕರಿಸಿ ಧನ್ಯವಾದ ಅರ್ಪಿಸಲಾಗುವುದು.
ಊರಿನವರ ಸಂಭ್ರಮ ಹೆಚ್ಚಿಸುವ ಹಬ್ಬ
ಈ ಹಬ್ಬ ಸಾಂಸ್ಕೃತಿಕವಾಗಿ ವೈಶಿಷ್ಟ್ಯ ಹೊಂದಿರುವ ಹಬ್ಬವಾಗಿದೆ. ಈ ದಿನ ಎತ್ತುಗಳಿಗೆ ಅಲಂಕಾರ ಮಾಡಲಾಗುವುದು. ಅವುಗಳ ಹಣೆಗಳಿಗೆ ಬಾಸಿಂಗ, ಹಣೆಪಟ್ಟಿ, ಕೊರಳಲ್ಲಿ ಘಂಟೆ, ಕೊರಳಿಗೆ ಚೆಂದದ ಫರಾರಿಯನ್ನು ಕಟ್ಟಿ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುವುದು. ನಂತರ ಅವುಗಳನ್ನು ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಇಡೀ ಊರಿಗೇ ಊರೇ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದು.
ಮಕ್ಕಳಿಗೆ ಸಡಗರವೋ ಸಡಗರ
ಈ ದಿನ ಮಕ್ಕಳಿಗಂತೂ ತುಂಬಾನೇ ಸಡಗರ. ಮನೆಯ ಎತ್ತುಗಳಿಗೆ ಅಲಂಕಾರ ಮಾಡಲಾಗುವುದು. ಮಕ್ಕಳು ಹೊಸ ಬಟ್ಟೆ ಧರಿಸಿ ಹಬ್ಬದ ಅಡುಗೆಯಾದ ಹೋಳಿಗೆ, ತುಪ್ಪ ಸವಿಯಲಾಗುವುದು.
ಎಣ್ಣೆ ತೆಗೆಯುವ ಗಾಣಕ್ಕೂ ಅಲಂಕಾರ ಮಾಡಲಾಗುವುದು
ಈ ದಿನ ಎಣ್ಣೆ ತೆಗೆಯುವ ಗಾಣಕ್ಕೂ ಅಲಂಕಾರ ಮಾಡಿ ಪೂಜೆ ಮಾಡಲಾಗುವುದು.