Just In
Don't Miss
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Movies ಲಂಡನ್ನಲ್ಲಿ ಬಾಡಿಗೆಗೆ ಪಡೆದಿದ್ದ ಬಂಗಲೆಯನ್ನೇ ಖರೀದಿಸಿದ್ರಾ ಪ್ರಭಾಸ್?
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂ.24ಕ್ಕೆ ಕಾರ ಹುಣ್ಣಿಮೆ: ಸಾಂಸ್ಕೃತಿಕ ವೈಶಿಷ್ಟ್ಯ ಇರುವ ಈ ದಿನದ ವಿಶೇಷವೇನು?
ಉತ್ತರ ಕರ್ನಾಟಕದವರಿಗೆ ಕಾರ ಹುಣ್ಣಿಮೆ ಎಂದರೆ ತುಂಬಾನೇ ವಿಶೇಷ. ಈ ಹಬ್ಬದಂದು ಎತ್ತುಗಳಿಗೆ ಶೃಂಗರಿಸಿ ಅವುಗಳಿಗೆ ಕೃತಜ್ಞತೆ ಸಲ್ಲಿಸಲಾಗುವುದು. ರೈತರ ಸಡಗರ, ಸಂಭ್ರಮದ ಹಬ್ಬವಾದ ಕಾರ ಹುಣ್ಣಿಮೆ ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದಾಗಿ ಅಷ್ಟೇನು ಸಡಗರದಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ.
ಕಾರ
ಹುಣ್ಣಿಮೆ
ಬಳಿಕವಷ್ಟೇ
ಮುಂಗಾರು
ಆರಂಭವಾಗುವುದು
ಎಂದು
ಹೇಳಲಾಗುವುದು.
ಈ
ವರ್ಷ
ಜೂನ್
24ರಂದು
ಆಚರಿಸಲಾಗುತ್ತಿದೆ.
ಇದಕ್ಕೆ
ನಮ್ಮ
ದ
ರಾ
ಬಂದ್ರೆಯವರು
"
ಕಾರಹುಣ್ಣಿಮೆಯ
ಮಾರನೆಯ
ದಿನವೇ
ಮೋಡ
ಕೋಡನಪ್ಪಿ
ಕಂಡಿತೊಡ್ಡಿ
ನೋಡ
ಢಿಕ್ಕಿ
ಯಾಡುವಾ
ಆನೆ
ಬೇಡಗನೊಪ್ಪಿ
"
ಎಂದು
ಹೇಳಿರುವುದು.
ಕಾರ ಹುಣ್ಣಿಮೆ ಮಹತ್ವ
ಬೇಸಿಗೆ ತಾಪ ಹೋಗಿ ಮುಂಗಾರು ಮಳೆಯಿಂದ ಭೂಮಿ ತಂಪಾಗುವುದು. ಭೂಮಿ ತಂಪಾದಾಗ ಉತ್ತು- ಬಿತ್ತಲು ಎತ್ತುಗಳು ನೆರವಾಗುವುದು. ಆದ್ದರಿಂದ ಈ ದಿನದಂದು ಅವುಗಳನ್ನು ಅಲಂಕರಿಸಿ ಧನ್ಯವಾದ ಅರ್ಪಿಸಲಾಗುವುದು.
ಊರಿನವರ ಸಂಭ್ರಮ ಹೆಚ್ಚಿಸುವ ಹಬ್ಬ
ಈ ಹಬ್ಬ ಸಾಂಸ್ಕೃತಿಕವಾಗಿ ವೈಶಿಷ್ಟ್ಯ ಹೊಂದಿರುವ ಹಬ್ಬವಾಗಿದೆ. ಈ ದಿನ ಎತ್ತುಗಳಿಗೆ ಅಲಂಕಾರ ಮಾಡಲಾಗುವುದು. ಅವುಗಳ ಹಣೆಗಳಿಗೆ ಬಾಸಿಂಗ, ಹಣೆಪಟ್ಟಿ, ಕೊರಳಲ್ಲಿ ಘಂಟೆ, ಕೊರಳಿಗೆ ಚೆಂದದ ಫರಾರಿಯನ್ನು ಕಟ್ಟಿ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುವುದು. ನಂತರ ಅವುಗಳನ್ನು ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಇಡೀ ಊರಿಗೇ ಊರೇ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದು.
ಮಕ್ಕಳಿಗೆ ಸಡಗರವೋ ಸಡಗರ
ಈ ದಿನ ಮಕ್ಕಳಿಗಂತೂ ತುಂಬಾನೇ ಸಡಗರ. ಮನೆಯ ಎತ್ತುಗಳಿಗೆ ಅಲಂಕಾರ ಮಾಡಲಾಗುವುದು. ಮಕ್ಕಳು ಹೊಸ ಬಟ್ಟೆ ಧರಿಸಿ ಹಬ್ಬದ ಅಡುಗೆಯಾದ ಹೋಳಿಗೆ, ತುಪ್ಪ ಸವಿಯಲಾಗುವುದು.
ಎಣ್ಣೆ ತೆಗೆಯುವ ಗಾಣಕ್ಕೂ ಅಲಂಕಾರ ಮಾಡಲಾಗುವುದು
ಈ ದಿನ ಎಣ್ಣೆ ತೆಗೆಯುವ ಗಾಣಕ್ಕೂ ಅಲಂಕಾರ ಮಾಡಿ ಪೂಜೆ ಮಾಡಲಾಗುವುದು.