Just In
- 1 hr ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 2 hrs ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 4 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 4 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- News Rain Alert: ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಗ್ಯಾರಂಟಿ!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೇ 22ಕ್ಕೆ ಕಾಲಾಷ್ಟಮಿ: ರಾಹು, ಶನಿ ದೋಷ ನಿವಾರಣೆಗೆ ಕಾಲ ಭೈರವನನ್ನು ಹೇಗೆ ಪೂಜಿಸಬೇಕು?
ಮೇ 22ಕ್ಕೆ ಕಾಲಾಷ್ಟಮಿ, ಕಾಲ ಭೈರವನ ಪೂಜೆಗಂದೇ ಮೀಸಲಾಗಿರುವ ದಿನ. ವರ್ಷದಲ್ಲಿ 12 ಕಾಲಾಷ್ಟಮಿ ಆಚರಿಸಲಾಗುವುದು. ಪ್ರತೀ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಕಾಲಾಷ್ಟಮಿ ಆಚರಿಸಲಾಗುವುದು.
ಕಾಲಭೈರವನ ಪೂಜೆಗೆ ಕಾಲಾಷ್ಟಮಿ ತುಂಬಾ ವಿಶೇಷವಾದ ದಿನ ಏಕೆ, ಮೇ 22ರಂದು ಕಾಲ ಭೈರವನ ಪೂಜೆಗೆ ಶುಭ ಮುಹೂರ್ತ ಯಾವಾಗ? ಈ ದಿನದ ಪೂಜಾ ವಿಧಿಗಳೇನು ಎಂದು ನೋಡೋಣ ಬನ್ನಿ?
ಮೇ ತಿಂಗಳಿನಲ್ಲಿ ಕಾಲಾಷ್ಟಮಿ ದಿನಾಂಕ ಹಾಗೂ ಶುಭ ಮುಹೂರ್ತ
ಮೇ 22, ಭಾನುವಾರ 2022
ಅಷ್ಟಮಿ ತಿಥಿ ಪ್ರಾರಂಭ ಮೇ 22 ಮಧ್ಯಾಹ್ನ 1 ಗಂಟೆಗೆ
ಅಷ್ಟಮಿ ತಿಥಿ ಮುಕ್ತಾಯ ಮೇ 23 ಬೆಳಗ್ಗೆ 11:34ಕ್ಕೆ
ಕಾಲಾಷ್ಟಮಿ ಮಹತ್ವ
ಕಾಲಾಷ್ಟಮಿಯಂದು ಶಿವನ ಕಾಲ ಭೈರವ ರೂಪ ಅಂದರೆ ರೌದ್ರಾವತಾರದ ರೂಪವನ್ನುಆರಾಧಿಸಲಾಗುವುದು. ಈ ದಿನ ಕಾಲ ಭೈರವನ ಭಕ್ತರು ಶಿವನ ಜೊತೆಗೆ ಪಾರ್ವತಿಗೂ ಪೂಜೆಯನ್ನು ಸಲ್ಲಿಸುತ್ತಾರೆ. ಪೂಜೆಯ ಬಳಿಕ ಕಾಲ ಭೈರವ ಕತೆ ಹೇಳಲಾಗುವುದು.
ಈ ದಿನದಂದು ಬೆಳಗ್ಗೆ ವಿಶೇಷ ಪೂಜೆಯನ್ನು ಮಾಡಲಾಗುವುಉದ, ಈ ದಿನದಂದು ಪೂರ್ವಜರಿಗೂ ಪೂಜೆ ಸಲ್ಲಿಸಲಾಗುವುದು.
ಈ ದಿನ ರಾತ್ರಿ ಎಚ್ಚರವಾಗಿದ್ದು ಕಾಲ ಭೈರವನ ಕತೆ ಓದುವುದು, ಕೇಳುವುದು ಮಾಡಲಾಗುವುದು. ಮಧ್ಯರಾತ್ರಿಯಲ್ಲಿ ಕಾಲ ಭೈರವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು, ಸಾಂಪ್ರದಾಯಿಕವಾದ ಡ್ರಮ್ ಬಾರಿಸಲಾಗುವುದು ಗಂಟೆ ಬಾರಿಸಿ ಶಂಖ ಓದಿಸಲಾಗುವುದು.
ಈ ದಿನ ಉಪವಾಸವಿದ್ದು ಪೂಜೆಯನ್ನು ಸಲ್ಲಿಸಲಾಗುವುದು. ಈ ದಿನ ನಾಯಿಗಳಿಗೆ ಆಹಾರ ನೀಡುವುದು. ಈ ದಿನ ಕಾಲ ಭೈರವ ನಾಯಿಯ ಮೇಲೆ ಕುಳಿತು ಸವಾರಿ ಮಾಡುತ್ತಾನೆ ಆದ್ದರಿಂದ ಈ ದಿನ ನಾಯಿಗಳಿಗೆ ಆಹಾರ ನೀಡಿದರೆ ತೃಪ್ತನಾಗುತ್ತಾನೆ ಎಂದು ನಂಬಲಾಗುವುದು.
ಕಾಲ ಭೈರವನ ಪೂಜೆ ಮಾಡಿದರೆ ದೊರೆಯುವ ಪ್ರಯೋಜನಗಳೇನು?
* ಈ ದಿನ ಭೈರವನ ಪೂಜೆ ಮಾಡುವುದರಿಂದ ಶಿವ ನಮ್ಮ ಪಾಪಗಳಿಂದ ವಿಮೋಚನೆ ಮಾಡುತ್ತಾನೆ ಎಂದು ನಂಬಲಾಗಿದೆ.
* ಶಿವನನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ನೆರವೇರುವುದು.
* ಶಿವ ಒಳ್ಳೆಯ ಆರೋಗ್ಯ, ಸಂಪತ್ತು ನೀಡಿ ಆಶೀರ್ವದಿಸುತ್ತಾನೆ.
* ರಾಹು ಹಾಗೂ ಶನಿ ದೋಷವಿರುವವರು ಕಾಲ ಭೈರವನ ಪೂಜಿಸಿದರೆ ಗ್ರಹ ದೋಷದ ಕೆಟ್ಟ ಪರಿಣಾಮ ಕಡಿಮೆಯಾಗುವುದು.