For Quick Alerts
ALLOW NOTIFICATIONS  
For Daily Alerts

ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಲು ಸಹಕಾರಿಯಾಗಿರುವ ಸರಸ್ವತಿ ಮಂತ್ರ

|

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಅಂಕಗಳನ್ನು ಸಾಧಿಸಿ ತಮ್ಮ ಅಧ್ಯಯನದಲ್ಲಿ ಉತ್ತಮತೆಯನ್ನು ಸಾಧಿಸುವ ಹಂಬಲವಿರುತ್ತದೆ. ಓದುವ ಛಲ ಅವರಲ್ಲಿ ಹೆಚ್ಚಿರುತ್ತದೆ ಮತ್ತು ಇನ್ನೊಬ್ಬರನ್ನು ಸೋಲಿಸಿ ತಾವು ಮೇಲೆ ಬರಬೇಕು ನಂಬರ್ ಒನ್ ಪಟ್ಟದಲ್ಲಿರಬೇಕು ಎಂಬ ತುಡಿತ ವಿದ್ಯಾರ್ಥಿಗಳಲ್ಲಿರುತ್ತದೆ. ಪರೀಕ್ಷಾ ಸಮಯದಲ್ಲಿ ಮಕ್ಕಳು ಹಗಲು ರಾತ್ರಿಯೆನ್ನದೆ ಓದಿ ಉತ್ತಮ ಅಂಕಗಳನ್ನು ಪಡೆಯಲು ಅವಿರತ ಶ್ರಮ ಪಡುತ್ತಾರೆ.

ಒಂದು ರೀತಿಯಲ್ಲಿ ಹೇಳಬೇಕೆಂದರೆ ಹೆತ್ತವರ, ಹಿರಿಯರ ಒತ್ತಡ ಕೂಡ ಅವರ ಮೇಲಿರುತ್ತದೆ ಮತ್ತು ಇದರಿಂದ ಒಂದು ರೀತಿಯ ಭಯ ಅವರಲ್ಲಿ ಮೂಡುತ್ತದೆ. ತಾವು ಫೇಲಾಗಿ ಬಿಟ್ಟರೆ, ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗದೇ ಇದ್ದರೆ ಎಂಬ ಭೀತಿಯಲ್ಲಿ ಅವರು ಓದಿದ್ದನ್ನೂ ಮರೆತುಬಿಡುತ್ತಾರೆ.

ಆದ್ದರಿಂದ ಪೋಷಕರೇ ಮತ್ತು ಗುರುಗಳೇ ಈ ಸಮಯದಲ್ಲಿ ಓದುವ ಮಕ್ಕಳ ಮೇಲೆ ಒತ್ತಡವನ್ನು ಹಾಕದೇ ಅವರನ್ನು ರಿಫ್ರೆಶ್ ಆಗಿ ಓದಲು ಬಿಡಿ. ಪರೀಕ್ಷಾ ಭೂತ ಅವರನ್ನು ಕಾಡದಿರಲಿ ಇದರಿಂದ ಮಾನಸಿಕ ಒತ್ತಡಕ್ಕೆ ಅವರು ಒಳಗಾಗುವ ಸಾಧ್ಯತೆ ಇರುತ್ತದೆ. ಅಂತೆಯೇ ಖಿನ್ನತೆ ಅವರನ್ನು ಕಾಡಬಹುದು. ಈ ಸಮಯದಲ್ಲಿ ಅವರಿಗೆ ನೈತಿಕ ಬೆಂಬಲವನ್ನು ನೀಡಿ ಉತ್ತಮವಾಗಿ ಓದಲು ಅವರನ್ನು ಪ್ರೋತ್ಸಾಹಿಸಿ ಮತ್ತು ಅವರಿಗೆ ಬೇಕಾಗಿರುವ ಧೈರ್ಯವನ್ನು ನೀಡಿ.

ಹಿಂದೂಗಳು ವಿದ್ಯಾ ದೇವತೆ ಸರಸ್ವತಿಯನ್ನು ಪೂಜಿಸುತ್ತಾರೆ ಮತ್ತು ಸರಸ್ವತಿಯ ಕೃಪೆ ಇದ್ದಲ್ಲಿ ವಿದ್ಯಾರ್ಥಿಯೂ ಏನನ್ನೂ ಸಾಧಿಸಬಹುದು ಎಂಬ ನಂಬಿಕೆ ಕೂಡ ಇರುತ್ತದೆ. ನಿಮ್ಮ ವಿದ್ಯಾ ಜೀವನವನ್ನು ಉತ್ತಮಗೊಳಿಸಲು ಮತ್ತು ವೃತ್ತಿಯಲ್ಲಿ ಸಾಧನೆಯನ್ನು ಮಾಡಲು ಸರಸ್ವತಿಯ ಅನುಗ್ರಹ ಬೇಕಾಗಿದೆ. ಅದಕ್ಕಾಗಿ ಇಂದಿನ ಲೇಖನದಲ್ಲಿ ಸರಸ್ವತಿ ಮಂತ್ರವನ್ನು ನಾವು ನೀಡುತ್ತಿದ್ದು ಈ ಮಂತ್ರವನ್ನು ಪಠಿಸಿ ನಿಮ್ಮ ವಿದ್ಯಾಭ್ಯಾಸದ ಕಠಿಣತೆಯನ್ನು ದೂರಮಾಡಿಕೊಳ್ಳಬಹುದು....

ಸರಸ್ವತಿ ಮಂತ್ರ

ಸರಸ್ವತಿ ಮಂತ್ರ

ಓಂ ವಾಗೀಶ್ವರಿಯೇ ವಿದ್‌ಮಹೇ ವಗವಡಿನಾಯಾಯಿ ಧೀಮಹೇ ತನ್ನಾ ಸರಸ್ವತಿ ಪ್ರಚೋದಾಯತ್

ಸರಸ್ವತಿ ಮಂತ್ರ ಪಠಣ

ಸರಸ್ವತಿ ಮಂತ್ರ ಪಠಣ

ಪ್ರತಿ ದಿನ ಬೆಳಗ್ಗೆ ಸರಸ್ವತಿ ಮಂತ್ರವನ್ನು ಪಠಿಸುವುದು ಒಳ್ಳೆಯದು. ಸರಸ್ವತಿ ಮಂತ್ರವನ್ನು ಪ್ರತಿ ಬಾರಿ ಬೆಳಿಗ್ಗೆ ಮತ್ತು ಸಂಜೆ ಸತತ 21 ಬಾರಿ ಪಠಿಸುವ ಮೂಲಕ ದೇವಿ ಸರಸ್ವತಿಯ ಆಶೀರ್ವಾದವನ್ನು ಪಡೆಯಲು ಈ ಮಂತ್ರ ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ.

ಜ್ಞಾನೋದಯ ಮತ್ತು ಜ್ಞಾನ

ಜ್ಞಾನೋದಯ ಮತ್ತು ಜ್ಞಾನ

ಪಠಣ ಸರಸ್ವತಿ ಮಂತ್ರವು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಅಧ್ಯಯನದಲ್ಲಿ ನಿರಾಸಕ್ತಿಯಿಲ್ಲದವರಿಗೆ ತಿಳುವಳಿಕೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಜ್ಞಾನ ಮತ್ತು ಕಲಿಕೆ ಸೇರಿದಂತೆ ಎಲ್ಲಾ ಜ್ಞಾನದ ಮೂರ್ತರೂಪದ ದೇವತೆ ಸರಸ್ವತಿಯಾಗಿದ್ದಾರೆ. ಸರಸ್ವತಿ ಮಂತ್ರವನ್ನು ಪಠಿಸುವುದರಿಂದ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಕೇಂದ್ರೀಕರಿಸಲು ಸಹಾಯವಾಗುತ್ತದೆ ಮತ್ತು ಅಗತ್ಯವಾದ ಜ್ಞಾನವನ್ನು ಪಡೆಯುತ್ತಾರೆ.

ಧನಾತ್ಮಕ ಪ್ರಜ್ಞೆಗೆ

ಧನಾತ್ಮಕ ಪ್ರಜ್ಞೆಗೆ

ಸರಸ್ವತಿಯ ದೇವತೆಗಳ ಮಂತ್ರಗಳನ್ನು ಭಕ್ತಿಯಿಂದ ಪಠಿಸುವುದರಿಂದ ನಿಮ್ಮ ಪ್ರಜ್ಞೆಯ ಮಟ್ಟವನ್ನು ಹೆಚ್ಚಿಸಲು ಮತ್ತು ಕಠಿಣ ವಿಷಯದೊಂದಿಗೆ ಗ್ರಹಿಸಲು ನಿಮ್ಮ ಸಾಮರ್ಥ್ಯವನ್ನು ವಿಸ್ತರಿಸುವ ಒಂದು ಉತ್ತಮ ಮಾರ್ಗವಾಗಿದೆ ಎಂದು ಹೇಳಲಾಗುತ್ತದೆ.

 ಬುದ್ಧಿವಂತಿಕೆ ಮತ್ತು ಕಲಿಕೆ

ಬುದ್ಧಿವಂತಿಕೆ ಮತ್ತು ಕಲಿಕೆ

ಸರಸ್ವತಿ ಮಂತ್ರವನ್ನು ಪಠಿಸುವುದು ಮತ್ತು ಜ್ಞಾನದ ದೇವತೆಯಾದ ಸರಸ್ವತಿಯನ್ನು ಪೂಜಿಸುವುದು ನಿಮ್ಮ ಅಧ್ಯಯನದಲ್ಲಿ ನಿಮಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ ಜೊತೆಗೆ ಬುದ್ಧಿವಂತಿಕೆಯಿಂದ ಆಶೀರ್ವದಿಸಲ್ಪಡುತ್ತದೆ.

 ಬುದ್ಧಿವಂತಿಕೆ ಮತ್ತು ಕಲಿಕೆ

ಬುದ್ಧಿವಂತಿಕೆ ಮತ್ತು ಕಲಿಕೆ

ನೀವು ದೇವತೆ ಸರಸ್ವತಿ ಮಂತ್ರವನ್ನು ಸಂಪೂರ್ಣವಾಗಿ ಭಕ್ತಿಪೂರ್ವಕವಾಗಿ ಪಠಿಸುವುದು ನಿಮಗೆ ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಪರೀಕ್ಷೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಹಾಗೂ ಒಳ್ಳೆಯ ಅಂಕಗಳನ್ನು ಪಡೆಯಲು ಈ ಮಂತ್ರ ಸಹಾಯ ಮಾಡುತ್ತದೆ ಜೊತೆಗೆ ನಿಮ್ಮ ಓದುವಿಕೆ ಕೂಡ ಮುಖ್ಯವಾಗಿರುತ್ತದೆ.

English summary

Invoke The Blessings of Goddess Saraswati

Hindu Goddess Saraswati is known to be associated with knowledge, music and arts. Many students are asked to worship Goddess Saraswati to invoke her blessings in order to excel in their studies. Appeasing Goddess Saraswati is highly beneficial in countering the planet mercury for removing problems in education and career.udies. Appeasing Goddess Saraswati is highly beneficial in countering the planet mercury for removing problems in education and career.
X
Desktop Bottom Promotion