Just In
- 6 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 6 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 7 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 7 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಸಂಕ್ರಾಂತಿಗೆ ಎಳ್ಳು-ಬೆಲ್ಲ ಬೀರೋಣ ಒಳ್ಳೆಯ ಮಾತನಾಡೋಣ
ಎಳ್ಳು ಬೆಲ್ಲ ಬೀರುವುದು ಕನ್ನಡಿಗರು ಸಂಕ್ರಾಂತಿಯ ದಿನ ನಡೆಸಿಕೊಂಡು ಬರುತ್ತಿರುವ ಅರ್ಥಪೂರ್ಣ ಆಚರಣೆ. "ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ" ಎಂದು ಹಿರಿಯರು ಸಂಕ್ರಾಂತಿಯ ದಿನ ತಪ್ಪದೆ ಹೇಳುತ್ತಿರುತ್ತಾರೆ.
ಸಂಕ್ರಾಂತಿ ಎನ್ನುವುದು ಸಮೃದ್ಧಿಯ ಸಂಕೇತ. ಈ ಹಬ್ಬವು ಪೌರಾಣಿಕವಾಗಿಯೂ, ಸೂರ್ಯನ ಪಥ ಬದಲಾವಣೆಯ ಗುರುತಿಗಾಗಿಗೂ, ನಮ್ಮ ಅನ್ನದಾತ ರೈತರ ಸುಗ್ಗಿ ಹಾಗೂ ಕೊಯ್ಲಿನ ಸಂಕೇತವಾಗಿಯೂ ಆಚರಿಸುತ್ತೇವೆ. ಎಳ್ಳು ಬೆಲ್ಲ ಸಂಕ್ರಾಂತಿಯ ಬಹು ಮುಖ್ಯ ಭಾಗ. ಎಳ್ಳು ಬೆಲ್ಲ ಬೀರುವುದು ಕನ್ನಡಿಗರು ಸಂಕ್ರಾಂತಿಯ ದಿನ ನಡೆಸಿಕೊಂಡು ಬರುತ್ತಿರುವ ಅರ್ಥಪೂರ್ಣ ಆಚರಣೆ. "ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ" ಎಂದು ಹಿರಿಯರು ಸಂಕ್ರಾಂತಿಯ ದಿನ ತಪ್ಪದೆ ಹೇಳುತ್ತಿರುತ್ತಾರೆ. ಮಕರ ಸಂಕ್ರಾಂತಿಗೆ ಎಳ್ಳು, ಸಕ್ಕರೆ ಅಚ್ಚು, ಹುಗ್ಗಿ
ಏನಿದು
ಎಳ್ಳು-ಬೆಲ್ಲ?
ಏತಕ್ಕೆ
ಇಷ್ಟು
ಮುಖ್ಯ
ಎಂಬೆಲ್ಲ
ಪ್ರಶ್ನೆಗಳಿಗೆ
ವಿವರಣೆ
ಹೀಗಿದೆ.
ಇದೆಲ್ಲ
ಓದಿದ
ನಂತರ
ತಯಾರು
ಮಾಡುವ
ವಿಧಾನವನ್ನು
ಸಹ
ತಿಳಿಸಿದ್ದೇವೆ.
ಎಳ್ಳಿನಲ್ಲಿ
ವಿಟಮಿನ್ಸ್,
ಮಿನರಲ್ಸ್,
ಕಾಪರ್,
ಮ್ಯಾಂಗನೀಸ್,
ಜಿಂಕ್,
ಫೈಬೆರ್
ಹೀಗೆ
ನಮ್ಮ
ದೇಹಕ್ಕೆ
ಬೇಕಾದ
ಅನೇಕಾನೇಕ
ಪೋಷಕಾಂಶಗಳು
ಇವೆ.
ಎಳ್ಳು
ಶರೀರಕ್ಕೆ
ಉಷ್ಣತೆಯನ್ನು
ನೀಡುತ್ತದೆ.
ಎಳ್ಳನ್ನು
ನಾವು
ಸಾಮಾನ್ಯವಾಗಿ
ಮುಖ್ಯ
ಪದಾರ್ಥವಾಗಿ
ಯಾವ
ಅಡುಗೆಯಲ್ಲೂ
ಬಳಸುವುದಿಲ್ಲ.
ಸ್ನೇಹ,
ಪ್ರೀತಿಯ
ಸಂಕೇತ
ಪೊಂಗಲ್
ಹಬ್ಬದ
ವೈಶಿಷ್ಟ್ಯ
ಅದೇನಿದ್ದರೂ ಇತರೆ ಆಹಾರ ಅಥವಾ ಸಿಹಿ ತಿಂಡಿಗಳಲ್ಲಿ ಒಂದು ಸಣ್ಣ ಭಾಗ ವಷ್ಟೇ. ಎಳ್ಳಿನ ಉಂಡೆ ಎಂದು ಮಾಡುತ್ತೇವೆಯಾದರೂ ಅವುಗಳನ್ನು ಹೆಚ್ಚು ಸೇವಿಸುವುದಿಲ್ಲ. ನವಗ್ರಹಗಳಿಗೆ ನೈವೇದ್ಯ ನೀಡುವ ನವ ಧಾನ್ಯಗಳಲ್ಲಿ ಎಳ್ಳು ಕೂಡ ಸೇರಿದೆ. ಇದರಿಂದ ತಯಾರಿಸುವ ಎಣ್ಣೆಯನ್ನು ಅಡಿಗೆಗೆ ಬಳಸುತ್ತೇವೆಯಾದರೂ ದೇವರಿಗೆ ಹಚ್ಚುವ ದೀಪಕ್ಕೆ ಶ್ರೇಷ್ಠವಾಗಿ ಬಳಸುತ್ತೇವೆ.
ಎಳ್ಳು ತಿನ್ನುವುದರಿಂದ ಉಷ್ಣತೆ ಹಾಗೂ ಪಿತ್ತ ದೇಹದಲ್ಲಿ ಹೆಚ್ಚಾಗುತ್ತದೆ. ಆದರೂ ಈ ಜನವರಿ ಕಾಲದಲ್ಲಿ ನಮ್ಮ ದೇಹಕ್ಕೆ ಎಳ್ಳು ಬೇಕಾಗಿದೆ. ಆದ್ದರಿಂದ ನಮ್ಮ ಪೂರ್ವಿಕರು ಎಳ್ಳನ್ನು ಬೆಲ್ಲದ ಜೊತೆ ಮಾಡಿ ಸೇವಿಸಲು ಹೇಳಿದರು. ಎಲ್ಲರಿಗೂ ತಿಳಿದಂತೆ ಬೆಲ್ಲ ಪಿತ್ತ ಶಮನಕಾರಿ.
ಬೆಲ್ಲದ ಪೋಷಕಾಂಶಗಳಲ್ಲಿ ಕೊರತೆಯೆ ಇಲ್ಲ. ಎಳ್ಳು ಹಾಗೂ ಬೆಲ್ಲ ಜೊತೆಗೂಡಿ ನಮಗೆ ಒಳ್ಳೆಯ ಪೋಷಕಾಂಶಗಳನ್ನು ನೀಡುತ್ತವೆ ಹಾಗೂ ಯಾವುದೇ ಹಾನಿಕಾರಕ ಪ್ರತಿಕ್ರಿಯೆಗಳನ್ನು ಉಂಟು ಮಾಡುವುದಿಲ್ಲ.
ಎಳ್ಳು ಬೆಲ್ಲಗಳ ಜೊತೆಯಲ್ಲಿ ಹುರಿದ ಕಡಲೆ ಬೀಜ, ಹುರಿಕಡಲೆ, ಒಣ ಕೊಬ್ಬರಿಯ ತುಂಡುಗಳನ್ನು ಸೇರಿಸಲಾಗುತ್ತದೆ. ಮನೆಯಲ್ಲಿ ಸುಲಭವಾಗಿ ತಯಾರಿಸಲ್ಪಡುವ ಎಳ್ಳು ಬೆಲ್ಲವನ್ನು ಸಕ್ಕರೆ ಅಚ್ಚು, ಕಬ್ಬಿನ ತುಂಡುಗಳೊಂದಿಗೆ ನೆಂಟರ, ಸ್ನೇಹಿತರ ಮನೆ ಮನೆಗೆ ಹೋಗಿ ಸಂಕ್ರಾಂತಿಯ ಶುಭಾಶಯ ಕೋರಿ ನೀಡಿ ಬರುವುದು ಕನ್ನಡಿಗರ ಸಂಪ್ರದಾಯ.