Just In
- 6 hrs ago ವಾಸ್ತು ಪ್ರಕಾರ ಹೋಳಿಯ ಈ ದಿನ ಈ ರೀತಿ ಮಾಡಿದರೆ ಮನೆಯಲ್ಲಿನ ಸಮಸ್ಯೆ ದೂರಾಗುವುದು, ಸಮೃದ್ಧಿ ಹೆಚ್ಚುವುದು
- 7 hrs ago 'ಉಡುಗೊರೆ ಬೇಡ, ಮೋದಿಗೆ ಓಟು ಹಾಕಿ' ಎಂಬ ಮದುವೆ ಆಮಂತ್ರಣ ಪತ್ರಿಕೆ ವೈರಲ್
- 10 hrs ago ದಿನ ಭವಿಷ್ಯ ಮಾರ್ಚ್ 25: ಹೋಳಿ, ಚಂದ್ರಗ್ರಹಣದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 12 hrs ago ಹೋಳಿಯಾಟದ ಮುನ್ನ ಹಾಗೂ ನಂತರ ಈ ಟಿಪ್ಸ್ ಅನುಸರಿಸಿದರೆ ಬಣ್ಣದಿಂದ ತ್ವಚೆ, ಕೂದಲಿಗೆ ಹಾನಿಯಾಗಲ್ಲ
Don't Miss
- News ಬದುಕು ಕೊಟ್ಟ ಮಣ್ಣಿಗೆ, ಗುರುತು ಕೊಟ್ಟ ನನ್ನ ಜನಕ್ಕೆ ಕೃತಜ್ಞತೆ: ಅನಂತ್ ಕುಮಾರ್ ಹೆಗ್ಗಡೆ ಭಾವುಕ ಪತ್ರ
- Movies ಕಂಚಿನ ಕಂಠದ ವಸಿಷ್ಠ ಸಿಂಹ ಈಗ 'ವಿಐಪಿ'; ಫಸ್ಟ್ ಲುಕ್ ಚಿಂದಿ
- Sports IPL 2024: ಆರ್ಸಿಬಿ vs ಪಂಜಾಬ್ ಕಿಂಗ್ಸ್ ಪಂದ್ಯಕ್ಕಾಗಿ ನಮ್ಮ ಮೆಟ್ರೋ ಸಮಯದಲ್ಲಿ ಬದಲಾವಣೆ
- Automobiles ಟಾಟಾ ಪಂಚ್ ಇವಿ VS ಟಿಯಾಗೋ ಇವಿ: ಟಾಟಾದ ಬಜೆಟ್ ಫ್ರೆಂಡ್ಲಿ ಇವಿಯಲ್ಲಿ ಯಾವುದು ಬೆಸ್ಟ್?
- Finance ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟಕ್ಕೆ ಸಿದ್ಧವಾದ ಅಮುಲ್, ಯುಎಸ್ನಲ್ಲಿ ತಾಜಾ ಉತ್ಪನ್ನಗಳು ಲಭ್ಯ
- Technology Smartphones: 12GB RAM ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು, ಅದೂ ಸಹ 30 ಸಾವಿರದೊಳಗೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ ಚತುರ್ಥಿ 2022: ಗಣಪನಿಗೆ ಪ್ರಿಯವಾದ ಎಲೆ, ಪುಷ್ಪಗಳು ಇದೇ ನೋಡಿ
ಹಿಂದೂ ಧರ್ಮದಲ್ಲಿ ನಾವು ರಾಮಾ, ಕೃಷ್ಣ, ಶಿವ, ಗಣಪ, ಲಕ್ಷ್ಮಿ ಹೀಗೆ ಅನೇಕ ದೇವರನ್ನು ಪೂಜಿಸುತ್ತೇವೆ. ಪ್ರತಿಯೊಂದು ದೇವರಿಗೆ ಪೂಜಾ ವಿಧಾನಗಳು, ಇಷ್ಟದ ಆಹಾರಗಳು, ಹೂಗಳು, ವಾಹನಗಳು ಬೇರೆ-ಬೇರೆಯಾಗಿರುತ್ತದೆ. ಅನೇಕ ಬಗೆಯ ಪೂಜೆಗಳಿರುತ್ತದೆ. ಆದರೆ ಯಾವುದೇ ಪೂಜೆ ಮಾಡುವ ಮುಂಚೆ ಗಣಪನಿಗೆ ಪೂಜೆ ಮಾಡಿ, 'ವಿಘ್ನಗಳನ್ನು ನಿವಾರಿಸು ತಂದೇ' ಎಂದು ಬೇಡಿಕೊಳ್ಳುತ್ತೇವೆ.
ಈ ವರ್ಷದ ಅಂದರೆ 2022ನೇ ಸಾಲಿನಲ್ಲಿ ಆಗಸ್ಟ್ನಲ್ಲಿ 31ರಂದು ಗಣೇಶ ಎಲ್ಲರ ಮನೆಗಳಿಗೆ ಬರಲಿದ್ದಾನೆ. ಆ ದಿನದಂದು ಗಣೇಶನಿಗೆ ಪುಷ್ಪಾರ್ಚನೆ ಮಾಡುವಾಗ ಅವನಿಗೆ ಇಷ್ಟವಾದ ಹೂಗಳಿಂದ ಮಾಡಿದರೆ ಗಣೇಶ ತುಂಬಾ ಸಂತುಷ್ಟನಾಗುತ್ತಾನೆ ಎಂಬ ನಂಬಿಕೆ ನಮ್ಮಲ್ಲಿದೆ. ಆದ್ದರಿಂದ ಗಣಪನ ಪೂಜೆಗೆ ಈ ಕೆಳಗಿನ ಹೂಗಳನ್ನು ಬಳಸಿ, ಗಣೇಶ ಕೃಪೆಗೆ ಪಾತ್ರರಾಗಿ.
ಕೆಂಪು ದಾಸವಾಳದ ಹೂ
ಗಣೇಶನಿಗೆ ಕೆಂಪು ಬಣ್ಣದ ಹೂಗಳೆಂದರೆ ಇಷ್ಟ, ಅದರಲ್ಲೂ ಕೆಂಪು ದಾಸವಾಳವೆಂದರೆ ತುಂಬಾ ಇಷ್ಟವಂತೆ. ಇದನ್ನು ಸಾಮಾನ್ಯ ಈ ಹೂವು ಮಾರಾಟಕ್ಕೆ ಸಿಗುವುದು ಅಪರೂಪ ಆದರೂ, ಮನೆಗಳಲ್ಲೇ ಸುಲಭವಾಗಿ ಬೆಳೆಯಬಹುದು.
ಗರಿಕೆ ಹುಲ್ಲು
ಗಣಪನ ಪೂಜೆಗೆ ಗರಿಕೆ ಹುಲ್ಲು ಇರಲೇಬೇಕು. ಗರಿಕೆ ಹುಲ್ಲು ಬಳಸದಿದ್ದರೆ ಗಣಪನ ಪೂಜೆ ಪೂರ್ಣವಾಗುವುದಿಲ್ಲ. ಗರಿಕೆ ಇಲ್ಲದೆ ಗಣೇಶ ಸಂತೃಪ್ತನಾಗುವುದಿಲ್ಲ. ಆದ್ದರಿಂದ ಗಣೇಶನ ಪೂಜೆಗೆ ತಪ್ಪದೇ ಗರಿಕೆ ಇಡಿ.
ದಾಳಿಂಬೆ ಹೂ
ಗಣಪನಿಗೆ ದಾಳಿಂಬೆ ಹೂವೆಂದರೆ ತುಂಬಾ ಇಷ್ಟ.ಗಣಪನ ಪೂಜೆಯಲ್ಲಿ ಸಾಮಾನ್ಯವಾಗಿ ದಾಳಿಂಬೆ ಹೂ ಇದ್ದೇ ಇರುತ್ತದೆ. ಈ ಹೂವು ಸಿಗುವುದು ಅಪರೂಪವಾದರೂ, ಪೂಜೆಗೆ ಇಟ್ಟರೆ ಶುಭ ಎನ್ನಲಾಗುತ್ತದೆ.
ತುಳಸಿ
ತುಳಸಿಯನ್ನು ಸಾಮಾನ್ಯವಾಗಿ ಎಲ್ಲಾ ಪೂಜೆಗೂ ಬಳಸುತ್ತೇವೆ. ತುಳಸಿಯನ್ನು ಮಾಲೆ ಮಾಡಿ ಗಣಪನಿಗೆ ಹಾಕಿದರೆ ಒಳ್ಳೆಯದು, ಬೇಡಿದ್ದು ನೆರವೇರುತ್ತದೆ ಎಂಬ ನಂಬಿಕೆ ಇದೆ.
ಶಂಖ ಪುಷ್ಪ
ಈ ಹೂ ಸಾಮಾನ್ಯವಾಗಿ ಬಿಳಿ ಮತ್ತು ನೀಲಿ ಬಣ್ಣದಲ್ಲಿರುತ್ತದೆ. ಇದು ಶಂಖದ ಆಕೃತಿಯಲ್ಲಿರುವುದರಿಂದ ಇದನ್ನು ಶಂಖ ಪುಷ್ಪವೆಂದು ಕರೆಯುತ್ತಾರೆ. ಇದನ್ನು ಸಹ ಮನೆಯಲ್ಲೇ ಸುಲಭವಾಗಿ ಬೆಳೆಯಬಹುದು, ಇದು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿಗುವುದಿಲ್ಲ. ನೋಡಲು ಬಹಳ ಆಕರ್ಷಕವಾಗಿ ಇರುವ ಈ ಹೂವು ಗಣಪನಿಗೆ ಅಚ್ಚುಮೆಚ್ಚಂತೆ.
ಕೇದಗೆ
ಕೇದಗೆ ಹೂ ಕೂಡ ಗಣಪನಿಗೆ ತುಂಬಾ ಪ್ರಿಯವಾದ ಹೂವಾಗಿದೆ.ಉದ್ದದ ಎಲೆಯ ಮಧ್ಯೆ ಹಳದಿ ಬಣ್ಣದ ಪತ್ರಗಳ ಆಕಾರದ ಹೂವಿನ ಸೌಂದರ್ಯ ಕಣ್ಮನ ಸೆಳೆಯುವಂತದ್ದು. ಅತ್ಯಂತ ವಿರಳ ಮತ್ತು ಸುವಾಸನೆಯುಕ್ತ ಹೂ. ಈ ಹೂವು ಗಣಪನಿಗೆ ಬಹಳ ಇಷ್ಟವಂತೆ.
ಕಣಗಲೆ ಹೂ (ಗೆನ್ನೇರು ಹೂ)
ಈ ಹೂವನ್ನು ಸಾಮಾನ್ಯವಾಗಿ ಎಲ್ಲಾ ದೇವರ ಅರ್ಚನೆಗೆ ಬಳಸುತ್ತಾರೆ.ಕಣಗಲೆ ಹೂವಿನಿಂದ ಪೂಜೆ ಮಾಡಿದರೆ ನಮ್ಮಲ್ಲಿ ಕಾಣಿಸುವ ಭಯ ಭೀತಿಗಳು ನಿವಾರಣೆಯಾಗುತ್ತದೆ. ವಿಘ್ನ ನಿವಾರಕನಿಗೆ ಈ ಹೂವನ್ನು ಅರ್ಪಿಸಿದರೆ ನಮ್ಮಲ್ಲಿರುವ ಭಯವನ್ಉ ತೊಲಗಿಸುತ್ತಾನೆ ಎಂಬ ನಂಬಿಕೆ ಇದೆ.