Just In
Don't Miss
- Sports PBKS vs GT IPL 2024: ಗುಜರಾತ್ ಟೈಟನ್ಸ್ ಆಲ್ರೌಂಡ್ ಪ್ರದರ್ಶನ; ಪಂಜಾಬ್ ಕಿಂಗ್ಸ್ಗೆ ಸೋಲುಣಿಸಿದ ಗಿಲ್ ಪಡೆ
- Movies "ನೇಹಾ ಹಿರೇಮಠ ಸಾವಿಗೆ ನ್ಯಾಯ ಸಿಗಲಿ"; ನಿರ್ಮಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್
- News ಬಿಜೆಪಿಯ ₹2 ಕೋಟಿ ಹಣ ವಶಪಡಿಸಿಕೊಂಡ ನಾಲ್ಕು ಗಂಟೆಯಲ್ಲೇ ಕ್ಲೀನ್ ಚಿಟ್: ತನಿಖೆಗೆ ಕೃಷ್ಣಬೈರೇಗೌಡ ಆಗ್ರಹ
- Finance ಅಂತಾರಾಷ್ಟ್ರೀಯ ಮದ್ಯದ ಬ್ರ್ಯಾಂಡ್ಗಳಿಗೆ ಪ್ರಬಲ ಸ್ಪರ್ಧೆ ಒಡ್ಡುವ ಭಾರತೀಯ ವಿಸ್ಕಿಗಳು ಇವು
- Technology Uber: ಉಬರ್ನಲ್ಲಿ ಭಾರತೀಯರು ಏನನ್ನೆಲ್ಲಾ ಮರೆತು ಬರುತ್ತಾರೆ ಗೊತ್ತಾ!?
- Automobiles ಮದುವೆ ಉಡುಪು ಧರಿಸಿ ಕೆಟಿಎಂ ಬೈಕ್ನಲ್ಲಿ ಯುವತಿ ಸವಾರಿ... ವಿಡಿಯೋ ವೈರಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುರುಪೂರ್ಣಿಮಾ 2020: ಗುರುವಿನ ಮಹತ್ವ, ಪೂಜಾ ಸಮಯ
ಅಜ್ಞಾನ
ತಿಮಿರಾಂಧಸ್ಯ
ಜ್ಞಾನಾಂಜನ
ಶಲಾಕಯಾ|
ಚಕ್ಷುರುನ್ಮೀಲಿತಂ
ದೇವ
ತಸ್ಮೈ
ಶ್ರೀ
ಗುರುವೇ
ನಮಃ
ಶಿಷ್ಯನ
ಅಜ್ಞಾನವೆಂಬ
ಬೇನೆಯನ್ನು
ಜ್ಞಾನವೆಂಬ
ಅಂಜನದಿಂದ
ಗುಣಪಡಿಸಿ,
ಅವನ
ಕೀರ್ತಿ
ಎಲ್ಲೆಡೆ
ಪಸರಿಸುವಂತೆ
ಮಾಡಿದ
ಶ್ರೀ
ಗುರುವಿಗೆ
ಕೃತಜ್ಞತೆ.
ಗುರುಗಳಿಗೆ
ಧನ್ಯತಾ
ಭಾವವಾಗಿ
ವಂದನೆ
ಅರ್ಪಿಸುವ
ಗುರು
ಪೂರ್ಣಿಮಾವನ್ನು
ಪ್ರತಿ
ವರ್ಷವೂ
ಆಷಾಢ
ಮಾಸದ
ಶುಕ್ಲ
ಪಕ್ಷದ
ಹುಣ್ಣಿಮೆಯಂದು
ಅಥವಾ
ವ್ಯಾಸ
ಪೂರ್ಣಿಮೆಯಂದು
ಆಚರಿಸಲಾಗುತ್ತದೆ.
ಆದಿ
ಗುರು
ಎಂದು
ಪೂಜಿಸುವ
ವ್ಯಾಸರನ್ನು
ಸ್ಮರಿಸುವ
ಸಲುವಾಗಿ
ಗುರುಪೂರ್ಣಿಮಾ
ಆಚರಣೆ
ರೂಢಿಗೆ
ಬಂದಿತು.
ಈ
ವರ್ಷ
ಜುಲೈ
5ರಂದು
ಗುರುಸ್ಮರಣೆ
ಮಾಡುವ
ಸದವಕಾಶ
ನಮ್ಮೆಲ್ಲರಿಗೂ
ಲಭಿಸಿದೆ.
ಕೊರೋನಾ ಮಹಾಮಾರಿ ನಡುವೆಯೂ ನಮ್ಮ ಜೀವನದ ಏಳ್ಗೆಗೆ ಅಲ್ಲದೇ ನಮ್ಮ ಪ್ರತಿ ಹೆಜ್ಜೆಯಲ್ಲೂ ನಮ್ಮನ್ನು ಸರಿಮಾಡಿದ ಗುರುಗಳಿಗೆ ವಂದಿಸುವ ನಮ್ಮ ಆದ್ಯ ಕರ್ತವ್ಯವನ್ನು ನಾವು ಮಾಡಲೇಬೇಕಿದೆ. ಕಾರಣ, ಗುರುಪೂರ್ಣಿಮೆ ದಿನ ಮಹತ್ವವೇ ಹಾಗಿದೇ, ಇತರೆ ದಿನಗಳಿಗಿಂತ ಈ ದಿನಲ್ಲದಿ ಗುರುಗಳ ಆಶೀರ್ವಾದ ಪಡೆದರೆ ಅದು ಬೇರೆ ಯಾವುದೇ ದಿನಕ್ಕಿಂತ ಸಾವಿರ ಪಟ್ಟು ಅಧಿಕ ಫಲಪ್ರದ ಎನ್ನಲಾಗಿದೆ.
ಗುರು ಎಂದರೆ ಯಾರು
ಗುರು ಎಂಬ ಪದದಲ್ಲಿನ ಗು ಎಂಬ ಅಕ್ಷರಕ್ಕೆ ಅಂಧಕಾರವೆಂದು ರು ಎಂಬುದಕ್ಕೆ ಅದನ್ನು ನಿರೋಧಿಸುವವನು ಎಂಬ ಅರ್ಥವನ್ನು ಸಾರುತ್ತದೆ. ಹಿಂದು ಸಂಪ್ರದಾಯದಲ್ಲಿ ಗುರು ಪೂಜೆ ಮಾಡದೇ ಯಾವ ಕಾರ್ಯವನ್ನು ಆರಂಭಿಸಬಾರದು. ಪ್ರಾಚೀನ ಭಾರತದ ಶಿಕ್ಷಣ ಪದ್ದತಿಯಲ್ಲಿ ಶಿಷ್ಯರನ್ನು ಗುರು ತನ್ನಾಶ್ರಮಕ್ಕೆ ಬರಮಾಡಿಕೊಂಡು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಗಳೆರಡನ್ನು ನೀಡುತ್ತಿದ್ದರು. ಶಿಷ್ಯರು ಸಹ ಗುರುವಿನ ಬಗ್ಗೆ ಅನನ್ಯ ಭಕ್ತಿಯಿಂದ ವಿದ್ಯಾರ್ಜನೆ ಮಾಡುತ್ತಿದ್ದರು. ಗುರುಗಳ ಆಶ್ರಮದಲ್ಲಿಯೇ ಇದ್ದು ಭಕ್ತಿ, ಶ್ರದ್ದೆ, ಶುದ್ಧ ಮನಸ್ಸಿನಿಂದ ಸ್ವಾರ್ಥರಹಿತರಾಗಿ ಸೇವೆ ಮಾಡಿ ಗುರುಕೃಪೆಗೆ ಪಾತ್ರರಾಗುತ್ತಿದ್ದನು. ಅಂಥ ಶಿಷ್ಯನಿಗೆ ಗುರು ಅನುಗ್ರಹ ಮಾಡುತ್ತಿದ್ದನು.
ಗುರುಪೂಜೆ ಮಾಡುವ ವಿಧಾನ
ಗುರು ಪೂರ್ಣಿಮೆಯಂದು "ಗುರು ಪರಂಪರಾ ಸಿದ್ದಯರ್ಥಂ ವ್ಯಾಸ ಪೂಜಾಂ ಕರಿಷ್ಯೇ" ಎಂದು ಧ್ಯಾನಿಸುತ್ತಾ, ಶುಭ್ರ ವಸ್ತ್ರವನ್ನು ಧರಿಸಿ, ತಂದೆ-ತಾಯಿ ಸೇರಿದಂತೆ ಗುರುಗಳನ್ನು ಕೂಡಿಸಿ ಪಾದ ಪೂಜೆ ಮಾಡಿ, ಅವರಿಗೆ ಆರತಿ ಮಾಡಬೇಕು. ನಂತರ ಶಿರ ಸಾಷ್ಟಾಂಗ ನಮಸ್ಕಾರ ಸಲ್ಲಿಸಿ ಗುರುದಕ್ಷಿಣೆ ನೀಡಿ, ಹೂ, ಫಲತಾಂಬೂಲ ಸಲ್ಲಿಸಿ, ಅವರಿಂದ ಮಂತ್ರ ಪುಷ್ಪದಿಂದ ಆಶೀರ್ವಾದ ಮಾಡಿಸಿಕೊಳ್ಳಬೇಕು.
ಗುರುಪೂಜಾ ಸಮಯ
ಈ ವರ್ಷದ ಗುರುಪೂರ್ಣಿಮಾವನ್ನು ಜುಲೈ 5ರಂದು ಆಚರಿಸಲಾಗುತ್ತಿದ್ದು, ಮತ್ತೊಂದು ವಿಶೇಷ ಎಂದರೆ ಇದೇ ದಿನ ಚಂದ್ರಗ್ರಹಣ ಸಹ ಬಂದಿದೆ. ಈ ದಿದಿನ ಗುರುಪೂರ್ಣಿಮೆಯು ಜುಲೈ 4ರಂದು ಬೆಳಿಗ್ಗೆ 11.33ಕ್ಕೆ ಆರಂಭವಾಗಿ ಜುಲೈ 5ರಂದು ಬೆಳಿಗ್ಗೆ 10.13ಕ್ಕೆ ಅಂತ್ಯವಾಗಲಿದೆ. ಈ ಸಮಯದಲ್ಲಿ ಗುರುಗಳಿಗೆ ಪೂಜೆ ಮಾಡಲು ಶುಭ ಸಮಯ ಎಂದು ಹಿಂದೂ ಪಂಚಾಂಗ ಹೇಳುತ್ತದೆ.