Just In
- 48 min ago
ಚರ್ಮದ ಕ್ಯಾನ್ಸರ್ ಯೌವನ ಪ್ರಾಯದವರಲ್ಲಿ ಹೆಚ್ಚು ಯಾಕೆ . .? ತಡೆಗಟ್ಟುವುದು ಹೇಗೆ?
- 1 hr ago
30 ದಿನ ಸಕ್ಕರೆ ಸೇವಿಸದಿದ್ದರೆ ಇಷ್ಟೆಲ್ಲಾ ಲಾಭವಾಗುತ್ತಾ..? ವೈಟ್ಲಾಸ್ಗೆ ಇದೇ ಬೆಸ್ಟ್..!
- 9 hrs ago
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- 14 hrs ago
ವಾರ ಭವಿಷ್ಯ (ಫೆ.4-11): ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
Don't Miss
- Sports
IND vs AUS Test: ಡೇವಿಡ್ ವಾರ್ನರ್ ಅಭ್ಯಾಸ ನೋಡಿ ಆಸ್ಟ್ರೇಲಿಯಾ ಆಟಗಾರರೇ ಸುಸ್ತು!
- Movies
ತಮಿಳು ನಿರ್ಮಾಪಕರ ನಿದ್ದೆ ಕೆಡಿಸಿದ ದಿಗ್ಗಜರು: ಅಜಿತ್ ₹100 ಕೋಟಿ.. ವಿಜಯ್ ಕೇಳಿದ್ದೆಷ್ಟು?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗುರು ನಾನಕ್ ಜಯಂತಿ: ಈ ದಿನ ಸಿಖ್ರು ಪಾಕಿಸ್ತಾನದ ಕರ್ತಾಪುರಕ್ಕೆ ಭೇಟಿ ನೀಡುವುದೇಕೆ ಗೊತ್ತಾ?
ಸಿಖ್ರ ಪ್ರಮುಖ ಆಚರಣೆಗಳಲ್ಲಿ ಒಂದಾದ ಗುರು ನಾನಕ್ ಜಯಂತಿಯನ್ನು ನವೆಂಬರ್ 8ರಂದು ಆಚರಿಸಲಾಗುವುದು. ಗುರು ನಾನಕ್ ಜಯಂತಿಯನ್ನು ತುಂಬಾನೇ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು.
ಗುರು ನಾನಕ್ ಜಯಂತಿಯನ್ನು ಪ್ರತೀವರ್ಷ ಕಾರ್ತಿಕ ಪೂರ್ಣಿಮೆಯ ದಿನ ಆಚರಿಸಲಾಗುವುದು.

ಗುರು ನಾನಕ್ ಜಯಂತಿ ಮಹತ್ವ
ಗುರು ನಾನಕ್ ಜಯಂತಿಯನ್ನು ಕಾರ್ತಿಕ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತಿದ್ದು ಈ ದಿನದಂದು ಸಿಖ್ ಧರ್ಮದಲ್ಲಿ ಅನೇಕ ಧಾರ್ಮಿಕ ಆಚರಣೆಗಳನ್ನು ಮಾಡಲಾಗುವುದು. ಈ ಆಚರಣೆಯನ್ನು ಗುರು ಪರ್ಬ ಎಂದು ಕರೆಯಲಾಗುವುದು. ಗುರು ನಾನಕ್ ಸಿಖ್ ಧರ್ಮದ ಮೊದಲು ಗುರು, ಇವರು ಜನಿಸಿದ ದಿನವನ್ನು ಗುರು ನಾನಕ್ ದಿನವನ್ನಾಗಿ ಆಚರಿಸಲಾಗುವುದು. ಈ ಬಾರಿ ಗುರುನಾನಕ್ ಅವರ 553ನೇ ಜಯಂತಿಯನ್ನು ಆಚರಿಸಲಾಗುತ್ತಿದೆ.
ಗುರು ನಾನಕ್ ಜಯಂತಿ ನವೆಂಬರ್ 7, 4:15ಕ್ಕೆ ಪ್ರರಂಭವಾಗಿದೆ. ನವೆಂಬರ್ 8 ಸಂಜೆ 4:31ಕ್ಕೆ ಕೊನೆಯಾಗುತ್ತೆ.

ಯಾರಿವರು ಗುರು ನಾನಕ್ ?
ಗುರು ನಾನಕ್ ಅವರು ಸಿಖ್ ಧರ್ಮದ ಮೊದಲ ಗುರುವಾಗಿದ್ದಾರೆ. ಇವರು ಆಗ ಅಖಂಡ ಭಾರತವಾಗಿದ್ದ ತಲ್ವಾಂಡಿಯಲ್ಲಿ ಜನಿಸಿದರು (ಈಗ ಆ ಜಾಗ ಪಾಕಿಸ್ತಾನಕ್ಕೆ ಸೇರಿದೆ). ಆ ಸ್ಥಳದಲ್ಲಿ ನಂಕಾನಾ ಸಾಹಿಬ್ ಎಂಬ ಗುರುದ್ವಾರವಿದೆ. ಗುರುನಾನಕ್ ದೇವ್ ಅವರಿಗೆ 16ನೇ ವಯಸ್ಸಿನಲ್ಲಿ ವಿವಾಹ ಮಾಡಲಾಗುತ್ತೆ. ಇವರು ಸಿಖ್ ಧರ್ಮದ ಉದಯಕ್ಕೆ ಅಡಿಪಾಯ ಹಾಕುತ್ತಾರೆ. ಅದಾದ ಬಳಿಕ ವಿಶ್ವದ ಹಲವು ಭಾಗಗಳಿಗೆ ತಮ್ಮ ಸಹಚರರ ಜೊತೆ ಅಫ್ಘಾನಿಸ್ತಾನ, ಪರ್ಷಿಯಾ ಮತ್ತು ಅರೇಬಿಯಾದ ಮುಂತಾದ ದೇಶಗಳಿಗೆ ಹೋಗಿ ಬರುತ್ತಾರೆ. ಇವರೊಬ್ಬ ಸಂತರಾಗಿದ್ದರು, ತಮ್ಮ ಇಡೀ ಜೀವನವನ್ನು ಸಮಾಜದ ಸುಧಾರಣೆಗೆ ಮೀಸಲಿಡುತ್ತಾರೆ. ತಮ್ಮ ಜೀವನದ ಕೊನೆಯ ಸಮಯವನ್ನು ಕರ್ತಾರ್ಪುರದಲ್ಲಿ ಕಳೆಯುತ್ತಾರೆ, ಅಲ್ಲಿಯೇ ಮರಣವೊಂದುತ್ತಾರೆ. ಹಾಗಾಗಿ ಪಾಕಿಸ್ತಾನದ ಕರ್ತಾರ್ಪುರ ಸಾಹಿಬ್ಗೆ ಈಗಲೂ ತುಂಬಾನೇ ಮಹತ್ವವಿದೆ.

ಇವರ ನಿಸ್ವಾರ್ಥ ಸೇವೆ
ಸಮಾಜಕ್ಕೆ ಇವರು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಈಗಲೂ ನೆನೆಸಲಾಗುತ್ತೆ. ಇವರು ಸಾಮಾಜಿಕ ನ್ಯಾಯ, ಮಾನವೀಯತೆಗೆ ಹೆಚ್ಚು ಒತ್ತು ನೀಡುತ್ತಿದ್ದರು. ಈ ವಿಶೇಷ ದಿನ ಗುರುದ್ವಾರಗಳಲ್ಲಿ ಅಖಂಡ ಪಥವನ್ನು ನಿರಂತರ 48 ಗಂಟೆ ಪಠಿಸಲಾಗುವುದು. ಸಿಖ್ರು ಗುರು ನಾನಕ್ ಜಯಂತಿ ದಿನ ಕರ್ತಾರ್ಪುರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ, ಸಿಖ್ರ ಆ ಪವಿತ್ರ ಕ್ಷೇತ್ರಕ್ಕೆ ತೆರಳಲು ಕರ್ತಾರ್ಪುರ ಕಾರಿಡಾರ್ ನಿರ್ಮಿಸಲಾಗಿದೆ.
ಗುರು ನಾನಾಕ್ರವರ ನೆನಪಿಗಾಗಿ ರಾವಿ ನದಿ ದಂಡೆಯಲ್ಲಿ ಸ್ಮಾರಕ ಕೂಡ ಇದೆ.