Just In
- 1 hr ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- 1 hr ago ಗುರು ಸಂಚಾರ: ಮೇ 1ರಿಂದ 3ನೇ ಸ್ಥಾನದಲ್ಲಿರುವ ಗುರು ಮೀನ ರಾಶಿಯವರಿಗೆ ಅದೃಷ್ಟವೇ?
- 13 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 14 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
Don't Miss
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- News Air India: ಹಾರಾಟ ನಿಲ್ಲಿಸಿದ ಆಕಾಶದ ರಾಣಿ: ಐಶಾರಾಮಿ ವಿಮಾನದ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
- Movies ಕಲರ್ಫುಲ್ ಲೈಟು.. ಡಿಂಪಲ್ ಸ್ಮೈಲು.. 'ಸಂಜು ವೆಡ್ಸ್ ಗೀತಾ 2' ಒಂದು ಹಾಡಿನ ಸೆಟ್ಟಿಗೆ ಬರೋಬ್ಬರಿ ₹50 ಲಕ್ಷ!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುರು ನಾನಕ್ ಜಯಂತಿ: ಈ ದಿನ ಸಿಖ್ರು ಪಾಕಿಸ್ತಾನದ ಕರ್ತಾಪುರಕ್ಕೆ ಭೇಟಿ ನೀಡುವುದೇಕೆ ಗೊತ್ತಾ?
ಸಿಖ್ರ ಪ್ರಮುಖ ಆಚರಣೆಗಳಲ್ಲಿ ಒಂದಾದ ಗುರು ನಾನಕ್ ಜಯಂತಿಯನ್ನು ನವೆಂಬರ್ 27ರಂದು ಆಚರಿಸಲಾಗುವುದು. ಗುರು ನಾನಕ್ ಜಯಂತಿಯನ್ನು ತುಂಬಾನೇ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು.
ಗುರು ನಾನಕ್ ಜಯಂತಿಯನ್ನು ಪ್ರತೀವರ್ಷ ಕಾರ್ತಿಕ ಪೂರ್ಣಿಮೆಯ ದಿನ ಆಚರಿಸಲಾಗುವುದು.
ಗುರು ನಾನಕ್ ಜಯಂತಿ ಮಹತ್ವ
ಗುರು ನಾನಕ್ ಜಯಂತಿಯನ್ನು ಕಾರ್ತಿಕ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತಿದ್ದು ಈ ದಿನದಂದು ಸಿಖ್ ಧರ್ಮದಲ್ಲಿ ಅನೇಕ ಧಾರ್ಮಿಕ ಆಚರಣೆಗಳನ್ನು ಮಾಡಲಾಗುವುದು. ಈ ಆಚರಣೆಯನ್ನು ಗುರು ಪರ್ಬ ಎಂದು ಕರೆಯಲಾಗುವುದು. ಗುರು ನಾನಕ್ ಸಿಖ್ ಧರ್ಮದ ಮೊದಲು ಗುರು, ಇವರು ಜನಿಸಿದ ದಿನವನ್ನು ಗುರು ನಾನಕ್ ದಿನವನ್ನಾಗಿ ಆಚರಿಸಲಾಗುವುದು. ಈ ಬಾರಿ ಗುರುನಾನಕ್ ಅವರ 553ನೇ ಜಯಂತಿಯನ್ನು ಆಚರಿಸಲಾಗುತ್ತಿದೆ.
ಯಾರಿವರು ಗುರು ನಾನಕ್ ?
ಗುರು ನಾನಕ್ ಅವರು ಸಿಖ್ ಧರ್ಮದ ಮೊದಲ ಗುರುವಾಗಿದ್ದಾರೆ. ಇವರು ಆಗ ಅಖಂಡ ಭಾರತವಾಗಿದ್ದ ತಲ್ವಾಂಡಿಯಲ್ಲಿ ಜನಿಸಿದರು (ಈಗ ಆ ಜಾಗ ಪಾಕಿಸ್ತಾನಕ್ಕೆ ಸೇರಿದೆ). ಆ ಸ್ಥಳದಲ್ಲಿ ನಂಕಾನಾ ಸಾಹಿಬ್ ಎಂಬ ಗುರುದ್ವಾರವಿದೆ. ಗುರುನಾನಕ್ ದೇವ್ ಅವರಿಗೆ 16ನೇ ವಯಸ್ಸಿನಲ್ಲಿ ವಿವಾಹ ಮಾಡಲಾಗುತ್ತೆ. ಇವರು ಸಿಖ್ ಧರ್ಮದ ಉದಯಕ್ಕೆ ಅಡಿಪಾಯ ಹಾಕುತ್ತಾರೆ. ಅದಾದ ಬಳಿಕ ವಿಶ್ವದ ಹಲವು ಭಾಗಗಳಿಗೆ ತಮ್ಮ ಸಹಚರರ ಜೊತೆ ಅಫ್ಘಾನಿಸ್ತಾನ, ಪರ್ಷಿಯಾ ಮತ್ತು ಅರೇಬಿಯಾದ ಮುಂತಾದ ದೇಶಗಳಿಗೆ ಹೋಗಿ ಬರುತ್ತಾರೆ. ಇವರೊಬ್ಬ ಸಂತರಾಗಿದ್ದರು, ತಮ್ಮ ಇಡೀ ಜೀವನವನ್ನು ಸಮಾಜದ ಸುಧಾರಣೆಗೆ ಮೀಸಲಿಡುತ್ತಾರೆ. ತಮ್ಮ ಜೀವನದ ಕೊನೆಯ ಸಮಯವನ್ನು ಕರ್ತಾರ್ಪುರದಲ್ಲಿ ಕಳೆಯುತ್ತಾರೆ, ಅಲ್ಲಿಯೇ ಮರಣವೊಂದುತ್ತಾರೆ. ಹಾಗಾಗಿ ಪಾಕಿಸ್ತಾನದ ಕರ್ತಾರ್ಪುರ ಸಾಹಿಬ್ಗೆ ಈಗಲೂ ತುಂಬಾನೇ ಮಹತ್ವವಿದೆ.
ಇವರ ನಿಸ್ವಾರ್ಥ ಸೇವೆ
ಸಮಾಜಕ್ಕೆ ಇವರು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಈಗಲೂ ನೆನೆಸಲಾಗುತ್ತೆ. ಇವರು ಸಾಮಾಜಿಕ ನ್ಯಾಯ, ಮಾನವೀಯತೆಗೆ ಹೆಚ್ಚು ಒತ್ತು ನೀಡುತ್ತಿದ್ದರು. ಈ ವಿಶೇಷ ದಿನ ಗುರುದ್ವಾರಗಳಲ್ಲಿ ಅಖಂಡ ಪಥವನ್ನು ನಿರಂತರ 48 ಗಂಟೆ ಪಠಿಸಲಾಗುವುದು. ಸಿಖ್ರು ಗುರು ನಾನಕ್ ಜಯಂತಿ ದಿನ ಕರ್ತಾರ್ಪುರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ, ಸಿಖ್ರ ಆ ಪವಿತ್ರ ಕ್ಷೇತ್ರಕ್ಕೆ ತೆರಳಲು ಕರ್ತಾರ್ಪುರ ಕಾರಿಡಾರ್ ನಿರ್ಮಿಸಲಾಗಿದೆ.
ಗುರು ನಾನಾಕ್ರವರ ನೆನಪಿಗಾಗಿ ರಾವಿ ನದಿ ದಂಡೆಯಲ್ಲಿ ಸ್ಮಾರಕ ಕೂಡ ಇದೆ.