Just In
- 6 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 7 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 7 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 8 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ವರ್ಣಗೌರಿ ವ್ರತ 2022: ದಿನ, ಪೂಜಾ ಸಮಯ, ವ್ರತ ಹಾಗೂ ಬಾಗಿನದ ಮಹತ್ವ
ಎಲ್ಲರ ಮನೆಗೆ ಗಣೇಶ ಬರುವ ಮುನ್ನಾ ದಿನ ಬರುವ ತಾಯಿ ಗೌರಿ ಹೆಣ್ಣು ಮಕ್ಕಳ ನೆಚ್ಚಿನ ದೇವಿ. ಮಣ್ಣಿನ ಮೂರ್ತಿಯಲ್ಲಿ ದೇವಿಯನ್ನು ಸ್ಥಾಪಿಸಿ ಅವಳಿಗೆ ಇಷ್ಟವಾಗುವ ನೈವೇದ್ಯವನ್ನು ಅರ್ಪಿಸಿ, ನಾನಾ ಹೂವುಗಳಿಂದ ಅಲಂಕರಿಸಿ, ಮುತ್ತೈದೆಯರಿಗೆ, ಹೆಣ್ಣು ಮಗಳಿಗೆ ಬಾಗಿನ ನೀಡುವ ಸಂಪ್ರದಾಯವಿದೆ.
ಶಿವನ ಪತ್ನಿ ಪಾರ್ವತಿ ಎಂದೂ ಕರೆಯಲ್ಪಡುವ ಗೌರಿ ದೇವಿಗೆ ಅರ್ಪಿತವಾದ ಹಬ್ಬ ಪ್ರಧಾನವಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಖ್ಯಾತಿ ಗಳಿಸಿದೆ.
ಗೌರಿ ವ್ರತ ಪೂಜಾ ದಿನ, ಶುಭಸಮಯ
2022ನೇ ಸಾಲಿನಲ್ಲಿ ಆಗಸ್ಟ್ 30ರಂದು ಗೌರಿ ವ್ರತವನ್ನು ಆಚರಿಸಲಾಗುತ್ತಿದೆ. ಭಾಧ್ರಪದ ಮಾಸದಲ್ಲಿ ಆಚರಿಲ್ಪಡುವ ಗೌರಿ ವ್ರತವನ್ನು ತೃತೀಯ ತಿಥಿ (ಮೂರನೇ ದಿನ), ಶುಕ್ಲ ಪಕ್ಷದಂದು ಮನೆಗೆ ತರುವುದು ವಾಡಿಕೆ.
ಪ್ರಾತಃಕಾಲ ಗೌರಿ ಪೂಜಾ ಶುಭ ಮುಹೂರ್ತ: ಬೆಳಗ್ಗೆ 6.08 ರಿಂದ 8.37 ರವರೆಗೆ
ಗೌರಿ ಹಬ್ಬದ ಮಹತ್ವ
ಗೌರಿ ದೇವಿಯು ತನ್ನ ತಾಯಿಯ ಮನೆಗೆ ತದಿಗೆ ದಿನ ಭೇಟಿ ನೀಡಿ ಮರುದಿನ ಕೈಲಾಸಕ್ಕೆ ಹಿಂದಿರುಗುತ್ತಾಳೆ. ಈ ರೀತಿ ತವರು ಮನೆಗೆ ಬಂದ ಗೌರಿಯನ್ನು ಮರಳಿ ಕೈಲಾಸಕ್ಕೆ ಕರೆದುಕೊಂಡು ಹೋಗಲು ಮರುದಿನ ಪುತ್ರ ಗಣೇಶ ಬಂದ ಎಂದು ನಂಬಲಾಗಿದೆ. ಈ ಸಮಯದಲ್ಲಿ ಗೌರಿಯನ್ನು ತೃಪ್ತಿಪಡಿಸಲು ಮುತ್ತೈದೆಯರು ಗೌರಿ ವ್ರತ ಮಾಡುತ್ತಾರೆ ಎಂದು ಸಹ ಪ್ರತೀತಿ ಇದೆ.
ಗೌರಿ ಹಬ್ಬದಂದು ಸುಮಂಗಲಿಯರು ಉಪವಾಸವನ್ನು ಆಚರಿಸುತ್ತಾರೆ, ಗೌರಿ ದೇವಿಯನ್ನು ಆರಾಧಿಸುತ್ತಾರೆ ಮತ್ತು ಸಂತೋಷದ ದಾಂಪತ್ಯ ಜೀವನಕ್ಕಾಗಿ ಆಶೀರ್ವಾದ ಪಡೆಯುತ್ತಾರೆ. ಮಹಿಳೆಯರು 16 ಗಂಟುಗಳ ಪವಿತ್ರ ಗೌರಿದಾರವನ್ನು ತಮ್ಮ ಬಲಗೈಗೆ ಕಟ್ಟಿಕೊಳ್ಳುತ್ತಾರೆ. ಇದು ಗೌರಿಯ ಆಶೀರ್ವಾದವೆಂದು ಭಾವಿಸುತ್ತಾರೆ. ಗೌರಿಯನ್ನು ಆರಾಧಿಸುವುದರಿಂದ ಸುಖ ಸಂಪತ್ತು ಸುಧೀರ್ಘ ಸುಂದರ ಜೀವನವನ್ನು ನೀಡುವುದಲ್ಲದೆ, ಉತ್ತಮ ಜೀವನ ಸಂಗಾತಿ ಸಿಗುತ್ತಾರೆ ಎಂದು ಸ್ವರ್ಣಗೌರಿ ವ್ರತವನನ್ನು ಮಾಡುತ್ತಾರೆ.
ಗೌರಿ ಬಾಗಿನದ ಪದ್ಧತಿ
ಪ್ರಕೃತಿಯ ಪ್ರತಿರೂಪ ಅಥವಾ ಪ್ರತಿನಿಧಿ ಗೌರಿ ಎಂದು ಎನ್ನಲಾಗುತ್ತದೆ. ಗೌರಿ ಹಬ್ಬ ಎಂದರೆ ಹೆಣ್ಣುಮಕ್ಕಳಿಗೆ ಎಲ್ಲಿಲ್ಲದ ಸಡಗರ ಏಕೆಂದರೆ ತವರು ಮನೆಗೆ ಹೋಗಿ ಬಾಗಿನ ಪಡೆಯುವ ಸಂಪ್ರದಾಯ ಈ ಹಬ್ಬದ ಹಿಂದಿದೆ. ಈ ಹಬ್ಬದಲ್ಲಿ ಹೆಣ್ಣು ಮಕ್ಕಳಿಗೆ ಹೆತ್ತವರು ಅಥವಾ ಸೋದರ ಸಂಬಂಧಿಗಳು ಉಡುಗೊರೆ ನೀಡಿ ನೂರ್ಕಾಲ ಬಾಳೆಂದು ಹಾರೈಸುತ್ತಾರೆ.
ಸ್ವರ್ಣಗೌರಿ ವ್ರತದಲ್ಲಿ ಬಾಗಿನ ಕೊಡುವುದೇ ಒಂದು ವಿಶೇಷ. ಬಾಗಿನ ನೀಡಲು, ಮೊರವನ್ನು ಶುಭ್ರಗೊಳಿಸಿ ಅದಕ್ಕೆ ಅರಿಶಿನ, ಕುಂಕುಮ ಹಚ್ಚಿ ನವಧಾನಧಾನ್ಯಗಳನ್ನು ಇಟ್ಟು, ತೆಂಗಿನಕಾಯಿ, ಬಿಚ್ಚೋಲೆ, ಕನ್ನಡಿ, ಕಪ್ಪು ಬಳೆಗಳು, ಅಕ್ಕಿ, ಗೋಧಿ, ಬೆಲ್ಲ, 5 ಬಗೆಯ ಹಣ್ಣುಗಳು, ರವಿಕೆ ಮುತ್ತೈದೆಯರು ಉಪಯೋಗಿಸುವ ವಸ್ತುಗಳನ್ನು ಇಟ್ಟು ಮೊರದ ಬಾಗಿನ ಸಿದ್ಧಪಡಿಸಿ ಗೌರಿಯ ಮುಂದಿಡುತ್ತಾರೆ. ಆ ಮೊರವನ್ನು ಅರಿಶಿನಕ್ಕೆ ಬಂದ ಸುಮಂಗಲಿಯರಿಗೆ ನೀಡುತ್ತಾರೆ. ಕನಿಷ್ಠ ಐವರು ಮುತ್ತೈದೆಯರಿಗೆ ಬಾಗಿನ ನೀಡುವುದು ಪದ್ಧತಿ.
ಮಂಗಳಕರವಸ್ತುಗಳನ್ನು ಕೊಡುವುದರಿಂದ ಆರ್ಥಿಕವಾಗಿ, ಉತ್ತಮ ಆರೋಗ್ಯ, ಸುಖ, ಶಾಂತಿ, ಸಮೃದ್ಧಿ, ಸಕಲ ಸೌಲಭ್ಯಗಳನ್ನು ಪಡೆದು ಸದಾ ಕಾಲ ಮುತ್ತೈದೆಯಾಗಿ ಬಾಳು ಎನ್ನುವುದು ಈ ಬಾಗಿನ ಕೊಡುವುದರ ಉದ್ದೇಶವಾಗಿದೆ.