Just In
- 18 min ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 1 hr ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 3 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 3 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಭದ್ರ ಕುಮಾರಿ ಚೌಹಾಣ್ ಅವರಿಗೆ ಗೂಗಲ್ ಗೌರವ: ಪ್ರತಿಯೊಬ್ಬ ಭಾರತೀಯ ಇವರ ಬಗ್ಗೆ ತಿಳಿದಿರಲೇಬೇಕಾದ ಸಂಗತಿಗಳು
ಇಂದು ಗೂಗಲ್ ಭಾರತದ ಮೊದಲ ಮಹಿಳಾ ಸತ್ಯಾಗ್ರಹಿ ಸುಭದ್ರ ಕುಮಾರಿ ಚೌಹಾಣ್ ಅವರ 117ನೇ ಜನ್ಮ ದಿನಾಚರಣೆಯ ದಿನಂದು ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ಪುರುಷ ಪ್ರಧಾನ ಸಮಾಜದಲ್ಲಿ ಕಟ್ಟಳೆಗಳನ್ನು ಮೀರಿ ಮುಂದೆ ಬಂದ ದಿಟ್ಟ ಮಹಿಳೆ ಸುಭದ್ರ ಕುಮಾರಿ ಚೌಹಾಣ್. ಇವರು ಬರಹಗಾರ್ತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿ. ಸುಭದ್ರರವರ 'ಜಾನ್ಸಿ ಕೀ ರಾಣಿ' ರಾಷ್ಟ್ರೀಯ ಪದ್ಯವಾಗಿದೆ.
1904 ಆಗಸ್ಟ್ 16ರಂದು ತಮಿಳು ನಾಡಿನ ನಿಹಾಲ್ಪುರ್ನಲ್ಲಿ ಜನಿಸಿದರು. ಇವರು ತುಂಬಾ ಬರೆಯುತ್ತಿದ್ದರು. ಸ್ಕೂಲ್ಗೆ ಕುದುರೆಗಾಡಿಯಲ್ಲಿ ಹೋಗುತ್ತಿರುವಾಗಲೂ ಬರೆಯುತ್ತಿದ್ದರು, ಅವರು ಒಂಭತ್ತು ವರ್ಷವಿದ್ದಾಗಲೇ ಮೊದಲ ಪದ್ಯ ಪ್ರಕಟವಾಗಿತ್ತು.
ಇವರು ಹದಿಹರೆಯದ ಪ್ರಾಯಕ್ಕೆ ಬರುವಾಗಲೇ ದೇಶದಲ್ಲಿ ಸ್ವಾತಂತ್ರ್ಯ ಕಹಳೆ ಜೋರಾಗಿತ್ತು. ಇವರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.. ತಮ್ಮ ಕವನಗಳ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಒಗ್ಗೂಡಿಸುತ್ತಿದ್ದರು. ಪ್ರಾರಂಭದಲ್ಲಿ ಜಾತಿ ಬೇಧ, ಲಿಂಗ ತಾರತಮ್ಯ ಬಗ್ಗೆ ಬರೆಯುತ್ತಿದ್ದ ಸುಭದ್ರ ಅವರು ನಂತರ ದೇಶದ ಕುರತು ಬರೆಯಲಾರಂಭಿಸಿದರು.
1923ರಲ್ಲಿ ಬ್ರಿಟಿಷರಿಂದ ಬಂಧನಕ್ಕೊಳಗಾದರು, ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಲ್ಲಿ ನಂಧನಕ್ಕೆ ಒಳಗಾದ ಮೊದಲ ಮಹಿಳಾ ಸತ್ಯಾಗ್ರಹಿ ಸುಭದ್ರವರು. ಸುಭದ್ರವರು ಅನೇಕ ಕ್ರಾಂತಿಕಾರಿ ಹೇಳಿಕೆಗಳನ್ನು ನೀಡುತ್ತಿದ್ದರು, ಇವರು ಮಾತುಗಳು ಜನರಲ್ಲಿ ಸ್ವಾತಂತ್ರ್ಯ ಕಿಚ್ಚು ಹೆಚ್ಚಿಸುತ್ತಿತ್ತು. ಸುಭದ್ರರವರು ಒಟ್ಟು 88 ಪದ್ಯಗಳು ಮತ್ತು 46 ಚಿಕ್ಕ ಕತೆಗಳನ್ನು ಬರೆದಿದ್ದಾರೆ.
ಸುಭದ್ರ ಕುಮಾರಿ ಚೌಹಾಣ್ 1948ರಲ್ಲಿ ಮಧ್ಯಪ್ರದೇಶದಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಇಂಥ ಮಹಾನ್ ಹೋರಾಟಗಾರ್ತಿ, ಕವಿಯತ್ರಿಯನ್ನು ಗೂಗಲ್ ಡೂಡಲ್ ಮೂಲಕ ಸ್ಮರಿಸಲಾಗಿದೆ.