Just In
- 35 min ago
Mental Health: ಅತಿಯಾಗಿ ಯೋಚನೆ ಮಾಡುವುದರಿಂದ ಹೀಗೂ ಆಗಬಹುದು ಗೊತ್ತಾ..?
- 2 hrs ago
ಈ 4 ರಾಶಿಯವರನ್ನು ಜನ ಸುಲಭವಾಗಿ ಯಾಮಾರಿಸುತ್ತಾರೆ...ನೀವು ಈ ರಾಶಿಯವರೇ? ಹುಷಾರು ಕಣ್ರಿ!
- 4 hrs ago
ಓವರ್ಆ್ಯಕ್ಟಿವ್ ಬ್ಲಾಡರ್ ಸಮಸ್ಯೆಗೆ ಯಾವ ಆಹಾರ ಹಾಗೂ ಪಾನೀಯ ಒಳ್ಳೆಯದು?
- 8 hrs ago
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಮೇಷ, ಸೇರಿದಂತೆ ಈ ರಾಶಿಯ ಉದ್ಯೋಗಿಗಳಿಗೆ ಉತ್ತಮ ದಿನ
Don't Miss
- Movies
ಬಂಗಾರಮ್ಮನ ವಿರುದ್ಧ ನಿಂತ ಸ್ನೇಹಾ: ದಂಗಾದ ಪುಟ್ಟಕ್ಕ
- Automobiles
ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ
- Education
KCET 2022 Application Correction : ಅರ್ಜಿ ತಿದ್ದುಪಡಿಗೆ ಇಂದು ಕೊನೆಯ ದಿನ
- News
ರಸ್ತೆ, ಶಾಲೆ ಗೋಡೆ, ಮೆಟ್ಟಿಲು ಮೇಲೆ sorry.. sorry..ಬರಹ: ಯುವಕರ ಹುಚ್ಚಾಟ!
- Sports
ಆರ್ಸಿಬಿಗೆ ಮತ್ತೆ ಬರ್ತಿದ್ದೇನೆ ಎಂದ ಎಬಿಡಿ: ಯಾವ ಪಾತ್ರ ಎಂಬುದರ ಕುರಿತು ಸುಳಿವು ಕೊಟ್ಟ ಮಿ.360!
- Technology
ನೀವು ಬಳಸಬಹುದಾದ ಅತ್ಯುತ್ತಮ ಪಾಸ್ವರ್ಡ್ ಮ್ಯಾನೇಜರ್ಗಳ ವಿವರ ಇಲ್ಲಿದೆ!
- Finance
*99# ಮೂಲಕ ಆಫ್ಲೈನ್ ಯುಪಿಐ ಪಾವತಿ ಸೆಟ್ಅಪ್ ಮಾಡುವುದು ಹೇಗೆ?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುಭದ್ರ ಕುಮಾರಿ ಚೌಹಾಣ್ ಅವರಿಗೆ ಗೂಗಲ್ ಗೌರವ: ಪ್ರತಿಯೊಬ್ಬ ಭಾರತೀಯ ಇವರ ಬಗ್ಗೆ ತಿಳಿದಿರಲೇಬೇಕಾದ ಸಂಗತಿಗಳು
ಇಂದು ಗೂಗಲ್ ಭಾರತದ ಮೊದಲ ಮಹಿಳಾ ಸತ್ಯಾಗ್ರಹಿ ಸುಭದ್ರ ಕುಮಾರಿ ಚೌಹಾಣ್ ಅವರ 117ನೇ ಜನ್ಮ ದಿನಾಚರಣೆಯ ದಿನಂದು ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ಪುರುಷ ಪ್ರಧಾನ ಸಮಾಜದಲ್ಲಿ ಕಟ್ಟಳೆಗಳನ್ನು ಮೀರಿ ಮುಂದೆ ಬಂದ ದಿಟ್ಟ ಮಹಿಳೆ ಸುಭದ್ರ ಕುಮಾರಿ ಚೌಹಾಣ್. ಇವರು ಬರಹಗಾರ್ತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿ. ಸುಭದ್ರರವರ 'ಜಾನ್ಸಿ ಕೀ ರಾಣಿ' ರಾಷ್ಟ್ರೀಯ ಪದ್ಯವಾಗಿದೆ.
1904 ಆಗಸ್ಟ್ 16ರಂದು ತಮಿಳು ನಾಡಿನ ನಿಹಾಲ್ಪುರ್ನಲ್ಲಿ ಜನಿಸಿದರು. ಇವರು ತುಂಬಾ ಬರೆಯುತ್ತಿದ್ದರು. ಸ್ಕೂಲ್ಗೆ ಕುದುರೆಗಾಡಿಯಲ್ಲಿ ಹೋಗುತ್ತಿರುವಾಗಲೂ ಬರೆಯುತ್ತಿದ್ದರು, ಅವರು ಒಂಭತ್ತು ವರ್ಷವಿದ್ದಾಗಲೇ ಮೊದಲ ಪದ್ಯ ಪ್ರಕಟವಾಗಿತ್ತು.
ಇವರು ಹದಿಹರೆಯದ ಪ್ರಾಯಕ್ಕೆ ಬರುವಾಗಲೇ ದೇಶದಲ್ಲಿ ಸ್ವಾತಂತ್ರ್ಯ ಕಹಳೆ ಜೋರಾಗಿತ್ತು. ಇವರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.. ತಮ್ಮ ಕವನಗಳ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಒಗ್ಗೂಡಿಸುತ್ತಿದ್ದರು. ಪ್ರಾರಂಭದಲ್ಲಿ ಜಾತಿ ಬೇಧ, ಲಿಂಗ ತಾರತಮ್ಯ ಬಗ್ಗೆ ಬರೆಯುತ್ತಿದ್ದ ಸುಭದ್ರ ಅವರು ನಂತರ ದೇಶದ ಕುರತು ಬರೆಯಲಾರಂಭಿಸಿದರು.
1923ರಲ್ಲಿ ಬ್ರಿಟಿಷರಿಂದ ಬಂಧನಕ್ಕೊಳಗಾದರು, ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಲ್ಲಿ ನಂಧನಕ್ಕೆ ಒಳಗಾದ ಮೊದಲ ಮಹಿಳಾ ಸತ್ಯಾಗ್ರಹಿ ಸುಭದ್ರವರು. ಸುಭದ್ರವರು ಅನೇಕ ಕ್ರಾಂತಿಕಾರಿ ಹೇಳಿಕೆಗಳನ್ನು ನೀಡುತ್ತಿದ್ದರು, ಇವರು ಮಾತುಗಳು ಜನರಲ್ಲಿ ಸ್ವಾತಂತ್ರ್ಯ ಕಿಚ್ಚು ಹೆಚ್ಚಿಸುತ್ತಿತ್ತು. ಸುಭದ್ರರವರು ಒಟ್ಟು 88 ಪದ್ಯಗಳು ಮತ್ತು 46 ಚಿಕ್ಕ ಕತೆಗಳನ್ನು ಬರೆದಿದ್ದಾರೆ.
ಸುಭದ್ರ ಕುಮಾರಿ ಚೌಹಾಣ್ 1948ರಲ್ಲಿ ಮಧ್ಯಪ್ರದೇಶದಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಇಂಥ ಮಹಾನ್ ಹೋರಾಟಗಾರ್ತಿ, ಕವಿಯತ್ರಿಯನ್ನು ಗೂಗಲ್ ಡೂಡಲ್ ಮೂಲಕ ಸ್ಮರಿಸಲಾಗಿದೆ.