Just In
Don't Miss
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುರುವಾರದಂದು ಸಾಯಿಬಾಬಾರನ್ನು ಹೀಗೆ ಆರಾಧಿಸಿದರೆ ಶುಭಫಲ ಪ್ರಾಪ್ತಿ
ಎಲ್ಲಾ ಧರ್ಮದಿಂದಲೂ ಪೂಜಿಸಲ್ಪಡುವ ಆಧ್ಯಾತ್ಮಿಕ ನಾಯಕರಾಗಿದ್ದವರು, ಶಿವನ ಅವತಾರ ಎಂಬ ನಂಬಿಕೆಯೂ ಇದೆ ಮತ್ತು ದತ್ತಾತ್ರೇಯ ಎಂದು ಹೇಳಲಾಗುವ ಆರಾಧ್ಯದೈವ ಶಿರಡಿ ಸಾಯಿಬಾಬಾ. ಸಾಯಿಬಾಬಾರವರು ಮಾನವ ರೂಪದಲ್ಲಿರುವ "ದೇವರು" ಎಂಬುದಲ್ಲದೆ, ಸಂತ ಮತ್ತು ಫಕೀರ್ ಎಂದು ಕರೆಯಲ್ಪಡುತ್ತಿದ್ದರು.
1835
ರಲ್ಲಿ
ಜನಿಸಿದರು
ಮತ್ತು
1918
ರಲ್ಲಿ
ನಿಧನರಾದ
ಸಾಯಿಬಾಬಾ
ಸ್ವಯಂ-ಸಾಕ್ಷಾತ್ಕಾರದ
ಬೋಧಕ
ಎಂದು
ಕರೆಯುತ್ತಾರೆ
ಆದ್ದರಿಂದ
ಅವರ
ಆರಾಧಕರು
ಪ್ರಾಮಾಣಿಕತೆ,
ಶಾಂತಿ
ಮತ್ತು
ಕ್ಷಮೆಯ
ಮಾರ್ಗವನ್ನು
ಅನುಸರಿಸುತ್ತಾರೆ.
ಇವರನ್ನು
ಗುರುವಾರದಂದು
ಆರಾಧಿಸಿದರೆ
ಭಕ್ತರಿಗೆ
ಶುಭಫಲ
ಪ್ರಾಪ್ತಿಯಾಗುತ್ತದೆ
ಎಂಬ
ನಂಬಿಕೆ
ಇದೆ.
ಸಾಯಿಬಾಬಾವನ್ನು
ಗುರುವಾರ
ಹೇಗೆ
ಪೂಜಿಸಬೇಖು,
ಯಾವೆಲ್ಲಾ
ಫಲಾಹಾರ
ನೀಡಿದರೆ
ಸಾಯಿಬಾಬಾ
ಕೃಪೆ
ನಮ್ಮದಾಗುತ್ತದೆ
ಮುಂದೆ
ನೋಡೋಣ:
ಆರತಿ ಮತ್ತು ಮಂತ್ರಗಳನ್ನು ಪಠಿಸುವುದು
ಸಾಯಿ ಭಕ್ತ ಮಾಧವ ಅಡ್ಕರ್ ರಚಿಸಿದ ಆರತಿಯು ಸಾಯಿಬಾಬಾರನ್ನು ಆರಾಧಿಸುವಾಗ ಪಠಿಸಲು ಅತ್ಯುತ್ತಮ ಸ್ತೋತ್ರವಾಗಿದೆ. ಅಷ್ಟೇ ಅಲ್ಲದೆ, ಇತರ ಸಾಯಿಬಾಬಾ ಆರತಿಯನ್ನು ಸಹ ಪಠಿಸಬಹುದು. ನೂರು, ಸಾವಿರ ಬಾರಿ ಸಾಯಿಬಾಬಾ ಮಂತ್ರ ಪಠಿಸಿದರೆ ಶುಭ ಎಂದು ಹೇಳಲಾಗುತ್ತದೆ ಆದರೂ, ಅಂತಿಮವಾಗಿ ಎಣಿಕೆ ಏನೆಂದರೆ ಪ್ರಯತ್ನದ ಹಿಂದೆ ಹೃದಯದ ಸಮರ್ಪಣೆ ಮತ್ತು ಶುದ್ಧತೆ.
ಹೂವು, ಸುಗಂಧ ದ್ರವ್ಯಗಳು
ಸಾಯಿಬಾಬಾರವರ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲ ನೀವು ಹೂವುಗಳು, ಸುಗಂಧ ದ್ರವ್ಯಗಳು, ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಬೇಕು. ಹೂವನ್ನು ಅಲಂಕಾರಕ್ಕಾಗಿ ಬಳಸುವುದರಿಂದ ದೇವಾಲಯದಲ್ಲಿ ಉತ್ಸಾಹಭರಿತ ವಾತಾವರಣವನ್ನು ಇಡಲು ಸಹಾಯ ಮಾಡುತ್ತದೆ. ಸುಗಂಧ ದ್ರವ್ಯಗಳು ವಿಗ್ರಹಗಳಿಗೆ ಉತ್ತಮ ಸುಗಂಧವನ್ನು ನೀಡುತ್ತವೆ. ಹಣ್ಣುಗಳನ್ನು ಸಿಹಿಯಾಗಿ ದೇವರಿಗೆ ಮತ್ತು ಭಕ್ತರಿಗೆ ಪೂಜೆಗೆ ಬರಲು ಅರ್ಪಿಸಲಾಗುತ್ತದೆ.
ಬಡವರಿಗೆ ಆಹಾರ ನೀಡುವುದು
ಎಲ್ಲಾ ಧರ್ಮಗಳಲ್ಲಿ ದಾನವನ್ನು ಬೋಧಿಸಲ್ಪಟ್ಟಿದೆ, ಬಡವರಿಗೆ ಆಹಾರ ನೀಡುವುದು ದೇವರನ್ನು ಆರಾಧಿಸುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಏಕೆಂದರೆ ಜಗತ್ತಿನಲ್ಲಿ ನಿಮಗೆ ಎಲ್ಲಾ ಸಂಪನ್ಮೂಲಗಳನ್ನು ಒದಗಿಸಿದ್ದಕ್ಕಾಗಿ ನೀವು ದೇವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೀರಿ. ಯಾವಾಗಲೂ ಅಗತ್ಯವಿರುವವರಿಗೆ ಸಹಾಯ ಮಾಡಿ ಮತ್ತು ಅದು ಸ್ವತಃ ದೇವರನ್ನು ಆರಾಧಿಸುವ ನಿಮ್ಮ ಮಾರ್ಗವಾಗಿದೆ ಎಂಬುದು ಸಾಯಿಬಾಬಾ ಅನುಯಾಯಿಗಳ ಸಲಹೆ.
ಸಾಯಿಬಾಬಾನಿಗೆ ಇಷ್ಟವಾದ ನೈವೇದ್ಯಗಳು
ಪಾಲಕ್
ಪಾಲಕ್ ಅತ್ಯಂತ ಆರೋಗ್ಯಕರ ಮಾತ್ರವಲ್ಲ, ಸಾಯಿಬಾಬಾರ ನೆಚ್ಚಿನ ತರಕಾರಿ ಎಂದು ಹೇಳಲಾಗುತ್ತದೆ. ಸಾಯಿಬಾಬಾರವರಿಗೆ ಗುರುವಾರದಂದು ಪಾಲಕ್ ಸೊಪ್ಪನ್ನು ಅರ್ಪಿಸಬೇಕು.