Just In
- 1 hr ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 2 hrs ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 4 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 4 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- News ಹಾಸನದಲ್ಲಿ ಬಿಜೆಪಿಯ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ: ಮತ್ತೆ ಸಂಕಷ್ಟದಲ್ಲಿ ದಳಪತಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚತುರ್ಥಿ ವಿಶೇಷ: ಅಷ್ಟ ನಾಮ 'ಗಣಪನಿಗೆ' ಇದೋ ನಮೋ ನಮಃ
ದೇವನೊಬ್ಬ ನಾಮ ಹಲವು ಎಂಬುದೊಂದು ಗಾದೆ. ಪ್ರತಿ ದೇವರ ಶಕ್ತಿ ಮತ್ತು ಸಾಮರ್ಥ್ಯವನ್ನಾಧರಿಸಿ ಒಂದಕ್ಕಿಂತ ಹೆಚ್ಚು ಹೆಸರಿನಿಂದಲೂ ಕರೆಯಲಾಗುತ್ತದೆ. ಉದಾಹರಣೆಗೆ ಕೃಷ್ಣನಿಗೆ ಇರುವ ಹೆಸರುಗಳು.
ಮಹಾಭಾರತದಲ್ಲಿ ಕೃಷ್ಣನ ಪಾತ್ರವನ್ನು ಆಧರಿಸಿ ಒಟ್ಟು ಮೂವತ್ತೇಳು ಹೆಸರುಗಳಿವೆ. ಗಿರಿಯನ್ನು ಹೊತ್ತ ಕಾರಣ ಗಿರಿಧರ, ಹಸುಗಳನ್ನು ರಕ್ಷಿಸುವ ಗೋವಿಂದ, ಕಪ್ಪು ವರ್ಣದವನೆಂದು ಶ್ಯಾಮಸುಂದರ, ಕೊಳಲನ್ನು ಊದುವವನಾಗಿ ಮುರಳಿ ಇತ್ಯಾದಿ. ಗಣೇಶ ಚತುರ್ಥಿ ವಿಶೇಷ: ಗಣಪನಿಗೆ ಇವುಗಳೆಂದರೆ ಅಚ್ಚುಮೆಚ್ಚು
ಎಲ್ಲರ ನೆಚ್ಚಿನ ವಿನಾಯಕನಿಗೂ ಆತನ ಶಕ್ತಿ, ರೂಪ ಮತ್ತು ಸಾಮರ್ಥ್ಯವನ್ನಾಧರಿಸಿ ಕೆಲವಾರು ಹೆಸರುಗಳಿವೆ. ಪುರಾಣಗಳಲ್ಲಿ ಒಟ್ಟು ಎಂಟು ಹೆಸರುಗಳನ್ನು ನೀಡಿರುವ ಕಾರಣ ಗಣಪನಿಗೆ ಅಷ್ಟ ಗಣಪತಿ ಎಂದೂ ಕರೆಯುತ್ತಾರೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನ ಹೆಸರುಗಳು ಮತ್ತು ಈ ಹೆಸರುಗಳು ಏಕಾಗಿ ಬಂದಿವೆ ಎಂಬುದನ್ನು ಅರಿಯುವುದು ಸಮಯೋಚಿತ ಹಾಗೂ ಅಗತ್ಯವೂ ಆಗಿದೆ... ಮುಂದೆ ಓದಿ...
ಏಕದಂತ
ಗಣೇಶನ ಮುಖ ಆನೆಯದ್ದಾಗಿದ್ದು ಆನೆಗೆ ಇರುವ ಎರಡು ದಂತಗಳಲ್ಲಿ ಒಂದು ದಂತ (ಬಲದಂತ) ತುಂಡಾಗಿರುತ್ತದೆ. ಒಂದೇ ಪೂರ್ಣದಂತ ಇರುವ ಕಾರಣಕ್ಕಾಗಿ ಗಣೇಶನನ್ನು ಏಕದಂತ ಎಂಬ ಹೆಸರಿನಿಂದ ಕರೆಯಲಾಗುತ್ತದೆ. (ಕೆಲವು ಪುರಾಣಗಳ ಪ್ರಕಾರ ಇದು ಎಡದಂತವೂ ಆಗಿದೆ) ಗಣಪ ಕ್ರೋಧವನ್ನು ಗೆದ್ದವನಾಗಿದ್ದು ಡೊಳ್ಳು ಹೊಟ್ಟೆ ಹೊಂದಿದ್ದಾನೆ. ಕೈಯಲ್ಲಿ ಕೊಡಲಿ, ಜಪಮಾಲೆ, ಮೋದಕ ಹಿಡಿದಿರುತ್ತಾನೆ.
ಧೂಮೃವರ್ಣ
ಧೂಮೃ ಎಂಬ ಪದ ಧೂಮದಿಮ್ದ ಬಂದಿದ್ದು ಹೊಗೆ ಎಂಬ ಅರ್ಧ ಹೊಂದಿದೆ. ಧೂಮೃವರ್ಣ ಎಂದರೆ ಹೊಗೆಯ ಬಣ್ಣವನ್ನು ಹೊಂದಿದವನು ಎಂಬ ಅರ್ಥ ಬರುತ್ತದೆ. ದೇವನೇ ಮೂಲಭೂತವಾಗಿದ್ದು ಆತನೇ ಸತ್ಯವಾಗಿದ್ದಾನೆ. ಗಣೇಶ ಈ ರೂಪದಲ್ಲಿ ಅಹಂಕಾರವನ್ನು ಮೆಟ್ಟಿ ನಿಲ್ಲುವವನಾಗಿದ್ದಾನೆ.
ವಕ್ರತುಂಡ
ಗಣೇಶನ ಸೊಂಡಿಲು ವಕ್ರವಾಗಿರುವ ಕಾರಣ ವಕ್ರತುಂಡನೆಂಬ ಹೆಸರು ಬಂದಿದೆ. ಅಂದರೆ ಮನದಲ್ಲಿರುವ ಅಸೂಯೆಯನ್ನು ತೊಡೆದುಹಾಕುವವನಾಗಿ ಈ ರೂಪ ಹೊಂದಿದ್ದಾನೆ. ನಮ್ಮ ಒಳ್ಳೆಯ ಮತ್ತು ಕೆಟ್ಟ ನಡವಳಿಕೆಯನ್ನು ಗಮನಿಸಿ ನಮ್ಮನ್ನು ಸನ್ಮಾರ್ಗದತ್ತ ನಡೆಸುವ ಮಾರ್ಗದರ್ಶಕನೂ ಆಗಿದ್ದಾನೆ.
ಮಹೋದರ
ಉದರ ಎಂದರೆ ಹೊಟ್ಟೆ. ಮಹಾ ಉದರ ಎಂದರೆ ದೊಡ್ಡ ಹೊಟ್ಟೆ. ದೊಡ್ಡ ಹೊಟ್ಟೆಯನ್ನು ಹೊಂದಿರುವ ಗಣೇಶ ಮಹಾ ಉದರವುಳ್ಳವ ಎಂದರೆ ಮಹೋದರನಾಗಿದ್ದಾರೆ. ಗಣೇಶನು ಇಡಿಯ ಬ್ರಹ್ಮಾಂಡವನ್ನು ಎತ್ತಿ ಹಿಡಿದಿದ್ದಾನೆ. ಮೋಹ ಅಥವಾ ಆಕರ್ಷಣೆಯನ್ನು ಇಲ್ಲವಾಗಿಸಿ ಸತ್ಯವನ್ನು ತೋರುವ ಮೂಲಕ ಸತ್ಯದ ಕಡೆ ನಡೆಸುವವನಾಗಿದ್ದಾನೆ.
ಗಜಾನಾನ
ಕುಬೇರನ ಮಗ ಲೋಭನನ್ನು ಇಲಿಯ ಮೇಲೆ ಸವಾರಿ ಮಾಡುವ ಗಜಮುಖದ ಗಣೇಶ ಸೋಲಿಸಿ ಕೊಲ್ಲುವ ಮೂಲಕ ಶಾಂತಿಯನ್ನು ಕಾಪಾಡುತ್ತಾನೆ. ನಮ್ಮ ಮನದಲ್ಲಿಯೂ ಲೋಭ ಮತ್ತು ಅತಿಯಾಸೆಗಳೆಂಬ ರಾಕ್ಷಸರು ಶಾಂತಿಯಿಂದ ವಿಮುಖರಾಗಿಸುತ್ತಾರೆ. ಈ ರಾಕ್ಷಸರನ್ನು ಸದೆಬಡಿದು ಮನದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ಗಣೇಶ ನೆರವಾಗುತ್ತಾನೆ.
ಲಂಬೋದರ
ಗಣೇಶನು ಕ್ರೋಧವನ್ನು ನಾಶಮಾಡುವವನಾಗಿದ್ದು ಈ ಕ್ರೋಧವನ್ನು ತನ್ನ ಬೊಜ್ಜುತುಂಬಿದ ಹೊಟ್ಟೆಯಲ್ಲಿ ಅರಗಿಸಿಕೊಳ್ಳುತ್ತಾನೆ ಎಂಬ ನಂಬಿಕೆಯಿದೆ. ಕ್ರೋಧ, ಋಣಾತ್ಮಕ ಭಾವನೆಗಳನ್ನು ನಿವಾರಿಸುವ ಮೂಲಕ ನೆಮ್ಮದಿಯನ್ನು ನೀಡುತ್ತಾನೆ.
ವಿಕಟ
ವಿರೂಪಗೊಂಡ ಎಂಬ ಅರ್ಥ ಬರುವ ವಿಕಟ ಎಂಬ ಹೆಸರು ಈತನ ಒಂದು ಅಸಾಮಾನ್ಯ ಅವತಾರವಾಗಿದೆ. ಈ ಅವತಾರದಲ್ಲಿ ಗಣೇಶ ಕಾಮಾಸುರನನ್ನು ಸೋಲಿಸುತ್ತಾನೆ. ಮನದಲ್ಲಿ ಮೂಡುವ ಕಾಮವಾಂಛೆಗಳನ್ನು ನಿಗ್ರಹಿಸುವ ಮೂಲಕ ಗಣೇಶ ಮನವನ್ನು ಗೆಲ್ಲಲು ನೆರವಾಗುತ್ತಾನೆ.
ವಿಘ್ನರಾಜ
ವಿಘ್ನ ಎಂದರೆ ಒಂದು ಕೆಲಸಕ್ಕೆ ಎದುರಾಗುವ ಯಾವುದೇ ರೂಪದ ಅಡ್ಡಿ. ತನ್ನ ಭಕ್ತರ ಕೆಲಸಕ್ಕೆ ಅಡ್ಡಿಬರುವ ವಿಘ್ನಗಳನ್ನು ನಿವಾರಿಸಿ ಕೆಲಸ ಸುಸೂತ್ರವನ್ನಾಗಿಸುವ ಕಾರಣಕ್ಕೆ ಗಣೇಶನನ್ನು ವಿಘ್ನರಾಜ ಎಂದು ಕರೆಯಲಾಗುತ್ತದೆ. ನಮ್ಮ ಮನಸ್ಸಿನಲ್ಲಿರುವ ಅಹಮ್ಮಿಕೆ, ಗರ್ವ ಅಥವಾ ಒಣಪ್ರತಿಷ್ಠೆಯನ್ನು ನಿವಾರಿಸಿ ಸ್ವಸಾಮರ್ಥ್ಯವನ್ನು ಪ್ರಕಟಿಸಲು ಗಣೇಶ ನೆರವಾಗುತ್ತಾನೆ.
ಗಣೇಶನ ಕೃಪೆಗೆ ಪಾತ್ರರಾಗಿ...
ನಮ್ಮ ಸ್ವಂತ ಸಾಮರ್ಥ್ಯಗಳನ್ನು ಅರಿತು ಮುಂದುವರೆದರೇ ನಿಜವಾದ ಆನಂದ ದೊರಕುತ್ತದೆ. ಈ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನ ಹೆಸರುಗಳ ಬಗ್ಗೆ ತಿಳಿಸು ಈ ಹಬ್ಬವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಗಣೇಶನ ಕೃಪೆಗೆ ಪಾತ್ರರಾಗಬಹುದು ಹಾಗೂ ನಮಗೆ ಎದುರಾಗುವ ವಿಘ್ನ ಕಂಟಕಗಳನ್ನು ನಿವಾರಿಸಿ ಉತ್ತಮ ಜೀವನ ಸಾಗಿಸಬಹುದು.