Just In
Don't Miss
- News Women voters: ರಾಜ್ಯದ 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರದ್ದೇ ಪಾರುಪತ್ಯ!
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ ಚತುರ್ಥಿ 2019: ವಿಶೇಷ ಸಂದೇಶಗಳು ಮತ್ತು ಶುಭಾಶಯಗಳು
ವಿನಾಯಕ ಚತುರ್ಥಿ ಎಂದು ಕರೆಯಲ್ಪಡುವ ಗಣೇಶನ ಹಬ್ಬ ಹಿಂದೂಗಳ ಪವಿತ್ರವಾದ ಹಬ್ಬಗಳಲ್ಲಿ ಒಂದು. ಭಾರತದಾದ್ಯಂತ ಈ ಹಬ್ಬವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ. ಪಾರ್ವತಿ ದೇವಿಯ ಸೃಷ್ಟಿಯಿಂದ ಜನಿಸಿದ ಗಣೇಶನು ತಂದೆ ಶಿವನಿಂದ ಆನೆಯ ಮುಖವನ್ನು ಪಡೆಯುತ್ತಾನೆ. ಶಿವ-ಪಾರ್ವತಿಯ ಪ್ರಿಯ ಪುತ್ರ ಹಾಗೂ ಜನರ ಕಷ್ಟಗಳ ನಿವಾರಣೆಗೆ ನಿಲ್ಲುವ ಶಕ್ತಿಶಾಲಿ ದೇವ ಗಣೇಶ. ಇವನ ಹುಟ್ಟಿದ ಹಬ್ಬದ ಸಂಭ್ರದ ಆಚರಣೆಯೇ ಗಣೇಶ ಚತುರ್ಥಿ. ಭಗವಾನ್ ಗಣೇಶನು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದ್ದಾನೆ.
ಭಾದ್ರಪದ ಚೌತಿಯಂದು ಮನೆಗೆ ಬರುವ ಗಜಮುಖ
ವಿಘ್ನಗಳ ನಿವಾರಕ ಗಣೇಶನ ಹಬ್ಬವನ್ನು ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಚೌತಿಯ ದಿನದಂದು ಆಚರಿಸಲಾಗುವುದು. ಈ ವರ್ಷ ಅಂದರೆ 2019ರಲ್ಲಿ ಸೆಪ್ಟೆಂಬರ್ 2 ಸೋಮವಾರದಂದು ಆಚರಿಸಲಾಗುವುದು. ಗಣೇಶನ ಹಬ್ಬವನ್ನು ಮೂರು ದಿನ, ಏಳು ದಿನ ಹಾಗೂ ಹನ್ನೊಂದು ದಿನಗಳ ಕಾಲ ಆಚರಿಸಲಾಗುವುದು. ಅನಂತ ಚತುರ್ದಶಿಯ ದಿನ ಕೊನೆಯ ದಿನ ಎಂದು ಹೇಳಲಾಗುವುದು. ಗಣೇಶ ಚತುರ್ಥಿಯ ಕೊನೆಯ ದಿನ ಸೆಪ್ಟೆಂಬರ್ 12ರಂದು ಬರುವುದು.
ಇಂಟರ್ನೆಟ್ ಶುಭಾಶಯ
ದೊಡ್ಡ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಯ ದಿನ ಬಂಧು-ಬಾಂಧವರಿಗೆ, ಸ್ನೇಹಿತರಿಗೆ ಹಾಗೂ ನೆರೆಹೊರೆಯವರಿಗೆ ಮನೆಗೆ ಕರೆಯುವುದು ಹಾಗೂ ಶುಭಾಶಯ ಕೋರುವುದು ಒಂದು ಪದ್ಧತಿ. ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳಿರುವುದರಿಂದ ಶುಭಾಶಗಳನ್ನು ಕೋರುವುದು ಇಂದು ಅತ್ಯಂತ ಸುಲಭದ ಸಂಗತಿ. ಆದರೆ ಎಂತಹ ಶುಭಾಶಯಗಳನ್ನು ಕೋರುವುದು ಎನ್ನುವುದು ಸಾಕಷ್ಟು ಜನರಿಗೆ ಗೊಂದಲ ಇರುತ್ತದೆ. ಹಾಗಾಗಿ ಯಾರಾದರೂ ಕಳುಹಿಸಿದ ಶುಭಾಶಯವನ್ನೇ ಕೋರುತ್ತಾರೆ.
ಆದರೆ ಈ ಭಾರಿ ನೀವು ಗಣೇಶನ ಶುಭ ಹಾರೈಕೆಗೆ ಸಂಬಂಧಿಸಿದಂತೆ ಅದ್ಭುತ ಹಿತನುಡಿಗಳನ್ನು ಸೇರಿಸಿ, ಸಂದೇಶವನ್ನು ಕಳುಹಿಸಿ. ಅಂತಹ ಯಾವ ಬಗೆಯ ವಿಭಿನ್ನ ಶುಭಾಶಯಗಳನ್ನು ಕಳುಹಿಸಬಹುದು? ಎನ್ನುವುದನ್ನು ಲೇಖನದ ಮುಂದಿನ ಭಾಗದಲ್ಲಿ ತಿಳಿಸಿದ್ದೇವೆ ನೋಡಿ...
ಗಣೇಶ ಉತ್ತಮ ಮಾರ್ಗದರ್ಶಕ
1. ಭಗವಾನ್ ಗಣೇಶನು ಎಲ್ಲರಿಗೂ ಉತ್ತಮ ಮಾರ್ಗದರ್ಶಕ ಹಾಗೂ ರಕ್ಷಕ. ಅವನು ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಆರಂಭವನ್ನು ನೀಡಲಿ. ನಿಮ್ಮ ಮುಂದಿನ ಜೀವನದಲ್ಲಿ ಯಾವುದೇ ಅಡೆತಡೆ ಬರದಂತೆ ಕಾಯುವುದರ ಮೂಲಕ ಉತ್ಕೃಷ್ಟ ಜೀವನವನ್ನು ದಯ ಪಾಲಿಸಲಿ. ಗಣೇಶ ಹಬ್ಬದ ಶುಭಾಶಯಗಳು.
ಗಣೇಶ ರಕ್ಷಕನಾಗಲಿ
2. ಗಣೇಶ ಯಾವಾಗಲೂ ನಿಮ್ಮ ಮಾರ್ಗದರ್ಶಕ ಮತ್ತು ರಕ್ಷಕನಾಗಿ ಉಳಿಯಲಿ ಮತ್ತು ನಿಮ್ಮ ಜೀವನದಿಂದ ಅಡೆತಡೆಗಳನ್ನು ತೆಗೆದುಹಾಕಲಿ. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಗಣೇಶ ಚತುರ್ಥಿಯ ಶುಭಾಶಯಗಳು!
ದೇವರ ಅನುಗ್ರಹವಿರಲಿ
3. ನಿಮಗೆ ವಿನಾಯಕ ಚತುರ್ಥಿಯ ಶುಭಾಶಯಗಳು. ದೇವರ ಅನುಗ್ರಹವು ನಿಮ್ಮ ಜೀವನವನ್ನು ಪ್ರಬುದ್ಧಗೊಳಿಸಲಿ ಮತ್ತು ಯಾವಾಗಲೂ ನಿಮ್ಮನ್ನು ಆಶೀರ್ವದಿಸಲಿ.
ಸದಾಚಾರದ ಹಾದಿಯಲ್ಲಿ ಸಾಗಿ
4. ಭಗವಾನ್ ಗಣೇಶ ತೋರಿಸಿದಂತೆ ನೀವು ಸದಾಚಾರದ ಹಾದಿಯಲ್ಲಿ ಸಾಗಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗಣೇಶ ಚತುರ್ಥಿಯ ಶುಭ ಹಾರೈಕೆಗಳು.
ಸಂತೋಷ ಕರುಣಿಸಲಿ
5. ಭಗವಾನ್ ಗಣೇಶ ನಿಮ್ಮ ಎಲ್ಲಾ ಚಿಂತೆಗಳು, ದುಃಖಗಳು ಮತ್ತು ಉದ್ವಿಗ್ನತೆಗಳನ್ನು ನಾಶಮಾಡಿ ನಿಮ್ಮ ಜೀವನವನ್ನು ಪ್ರೀತಿ ಮತ್ತು ಸಂತೋಷವನ್ನು ಕರುಣಿಸಲಿ. ಗಣೇಶ ಚತುರ್ಥಿ ಶುಭಾಶಯಗಳು!
ವಕ್ರತುಂಡನ ಶುಭ ಹಾರೈಕೆ ಇರಲಿ
6. ಶ್ರೀ ವಕ್ರತುಂಡ ಮಹಾಕಾಯ,
ಸೂರ್ಯಕೋಟಿ ಸಮಪ್ರಭಾ,
ನಿರ್ವಿಘ್ನಮ್ ಕುರುಮೇ ದೇವ,
ಸರ್ವ-ಕಾರ್ಯೇಶು ಸರ್ವ ದಾ.
ದೀರ್ಘಾಯುಷ್ಯ ಹೊಂದಲಿ
7. ನೀವು ಸಮೃದ್ಧ ಮತ್ತು ದೀರ್ಘಾಯುಷ್ಯವನ್ನು ಹೊಂದಲಿ ಎಂದು ನಾನು ಗಣೇಶ ನಲ್ಲಿ ಪ್ರಾರ್ಥಿಸುತ್ತೇನೆ. ಗಣೇಶ ಚತುರ್ಥಿ ಶುಭಾಶಯಗಳು!
ಶಾಂತಿ ನೀಡಲಿ
8. ಭಗವಂತ ನಿಮಗೆ ಪ್ರೀತಿ ಮತ್ತು ಶಾಂತಿಯನ್ನು ನೀಡಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗಣೇಶ ಚತುರ್ಥಿಯ ಶುಭ ಹಾರೈಕೆಗಳು.
ಗಣಪತಿ ಬಪ್ಪ ಮೊರೈಯಾ
9. ಓಂ ಗಣ ಗಣಪತಾಯ ನಮೋ ನಮ! ಶ್ರೀ ಸಿದ್ಧಿವಿನಾಯಕ್ ನಮೋ ನಮ! ಅಸ್ತಾ ವಿನಾಯಕ ನಮೋ ನಮ! ಗಣಪತಿ ಬಪ್ಪ ಮೊರೈಯಾ!
ಸಮೃದ್ಧಿ ತುಂಬಲಿ
10. ಗಣೇಶ ಭಗವಾನ್ ನಿಮ್ಮ ಮನೆಯಲ್ಲಿ ಸಮೃದ್ಧಿ ಮತ್ತು ಅದೃಷ್ಟವನ್ನು ತುಂಬಬೇಕೆಂದು ನಾನು ಹೃತ್ಪೂರ್ವಕವಾಗಿ ಬಯಸುತ್ತೇನೆ. ಗಣೇಶ ಚತುರ್ಥಿಯ ಶುಭಾಶಯಗಳು!
ದುಷ್ಟ ಶಿಕ್ಷಕ
11. ಗಣೇಶ ಚತುರ್ಥಿಯನ್ನು ಗಣೇಶನ ಹಬ್ಬವನ್ನು ಆಚರಿಸಿ. ಗಣೇಶ ಭಗವಂತ ದುಷ್ಟರನ್ನು ಕೊಲ್ಲಲು ಈ ಭೂಮಿಯ ಮೇಲೆ ಇಳಿದ ಈ ದಿನ ಈ ಜಗತ್ತಿನಲ್ಲಿ ಪ್ರಾಮಾಣಿಕತೆ ಮತ್ತು ಪ್ರೀತಿಯ ಸಂದೇಶವನ್ನು ಹರಡಿ. ಗಣೇಶ ಚತುರ್ಥಿಯ ಶುಭ ಹಾರೈಕೆಗಳು.
ಕುಟುಂಬಕ್ಕೆ ನನ್ನ ಪ್ರಾರ್ಥನೆ
12. ಗಣೇಶ ಚತುರ್ಥಿಯಂದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಪ್ರಾರ್ಥನೆ ಮತ್ತು ಆತ್ಮೀಯ ಶುಭಾಶಯಗಳನ್ನು ಕಳುಹಿಸುತ್ತಿದ್ದೇನೆ.
ಯಶಸ್ಸು ನೀಡಲಿ
13. ಗಣಪತಿ ಬಪ್ಪ ಮೊರಿಯಾ! ಗಣೇಶ ಭಗವಂತ ನಿಮಗೆ ಎಲ್ಲಾ ಸಂತೋಷ ಮತ್ತು ಯಶಸ್ಸನ್ನು ನೀಡಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗಣೇಶ ಚತುರ್ಥಿಯ ಶುಭ ಹಾರೈಕೆಗಳು.
ಸಂಪತ್ತು ನಿಮ್ಮದಾಗಲಿ
14. ಸಂಪತ್ತು ಮತ್ತು ಯಶಸ್ಸಿನ ಭಗವಂತನು ಗಣೇಶ. ಗಣೇಶ ಚತುರ್ಥಿಯ ಸಂದರ್ಭವು ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಆಶೀರ್ವಾದವನ್ನು ಸುರಿಸಲಿ.