Just In
- 1 hr ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 1 hr ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 2 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 2 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ ಚತುರ್ಥಿ 2022: ಗಣೇಶನನ್ನು ಪ್ರತಿಷ್ಠಾಪಿಸಿದ ನಂತರ ಮಾಡಲೇಬಾರದ ಕೆಲಸಗಳಿವು
ವಿದ್ಯೆ, ಜ್ಞಾನ, ಸಂಕಷ್ಟಹರ ನಿವಾರಕ ಗಣೇಶನ್ನು ಪೂಜಿಸುವುದರಿಂದ ನಮ್ಮ ಜೀವನದಲ್ಲಿ ಕಷ್ಟ, ನೋವುಗಳು ಪರಿಹಾರವಾಗುತ್ತದೆ, ಜ್ಞಾನ, ವಿದ್ಯೆಯಿಂದ ಆಶೀರ್ವದಿಸಲ್ಪಡುತ್ತೇವೆ ಎಂದು ನಂಬಲಾಗಿದೆ.
ಮೋದಕ ಪ್ರಿಯ ಗಣೇಶನ ಹಬ್ಬವನ್ನು 2022ನೇ ಸಾಲಿನಲ್ಲಿ ಆಗಸ್ಟ್ 31ರಂದು ಆಚರಿಸಲಾಗುತ್ತಿದೆ. ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಇಷ್ಟವಾದ ಬಗೆ ಬಗೆಯ ತಿಂಡಿ, ಫಲಪುಷ್ಪಗಳನ್ನು ಅರ್ಪಿಸಿ ಪೂಜಿಸುತ್ತೇವೆ.
ವಿನಾಯಕನ ಪೂಜೆಯ ವೇಳೆ ನಾವು ಮಾಡಲೇಬಾರದ ತಪ್ಪುಗಳು, ಪಾಲಿಸಲೇಬೇಕಾದ ನಿಯಮಗಳು ಹಾಗೂ ಗಣೇಶನನ್ನು ಎಷ್ಟು ದಿನ ಪ್ರತಿಷ್ಠಾಪಿಸಬೇಕು ಎಂಬ ವಿವರಗಳನ್ನು ನಾವಿಂದು ನಿಮಗೆ ನೀಡಲಿದ್ದೇವೆ:
ಗಣಪತಿ ಸ್ಥಾಪನೆಯನ್ನು ಮಾಡಿದ ನಂತರ ಭಕ್ತರು ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕು:
* ಭಕ್ತರು ಗಣೇಶನನ್ನು 1.5 ದಿನ, 3 ದಿನ, 7 ದಿನ ಅಥವಾ 10 ದಿನ ಮನೆಯಲ್ಲಿ ಪ್ರತಿಷ್ಠಾಪಿಸಬಹುದು.
* ಭಕ್ತರು ಮತ್ತು ಅವರ ಕುಟುಂಬ ಸದಸ್ಯರು ಹಬ್ಬದ ಸಮಯದಲ್ಲಿ ಗಣಪತಿ ಪ್ರತಿಷ್ಠಾಪನೆಯ ನಂತರ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವಿಸುವುದನ್ನು ತಪ್ಪಿಸಬೇಕು.
ಗಣೇಶನ್ನು ಮನೆಯಲ್ಲಿ ಎಷ್ಟು ದಿನ ಪ್ರತಿಷ್ಠಾಪಿಸಬೇಕು
* ಹಬ್ಬದ ಸಮಯದಲ್ಲಿ ಗಣೇಶ ದೇವರು ನಿಮ್ಮ ಮನೆಗೆ ಅತಿಥಿಯಾಗಿದ್ದಾನೆ. ಆದ್ದರಿಂದ, ಎಲ್ಲವೂ- ಅಂದರೆ ಆಹಾರ, ನೀರು ಅಥವಾ ಪ್ರಸಾದವಾಗಿರಲಿ- ಮೊದಲು ಗಣಪತಿಗೆ ಮೊದಲು ಅರ್ಪಿಸಬೇಕು.
* ಹಳೆಯ ಗಣಪತಿಯ ಮೂರ್ತಿಯನ್ನು ಈ ವರ್ಷ ಪೂಜಿಸುವುದು ಅಥವಾ ಎರಡು ಗಣಪತಿ ಮೂರ್ತಿಯನ್ನು ಮನಯಲ್ಲಿಟ್ಟು ಪೂಜೆ ಮಾಡುವುದು ನಿಷಿದ್ಧ.
ಗಣೇಶನ್ನು ಮನೆಯಲ್ಲಿ ಎಷ್ಟು ದಿನ ಪ್ರತಿಷ್ಠಾಪಿಸಬೇಕು
* ಗಣೇಶನನ್ನು ಎಂದಿಗೂ ಒಂಟಿಯಾಗಿ ಅಥವಾ ಗಮನಿಸದೆ ಬಿಡಬಾರದು ಎಂದು ಗಮನಿಸಬೇಕು. ಅವನೊಂದಿಗೆ ಕುಟುಂಬದ ಸದಸ್ಯರು ಸದಾ ಇರಲೇಬೇಕು.
* ಗಣಪತಿ ಪೂಜೆಯ ಸ್ಥಳವನ್ನುಹೆಚ್ಚು ಬೆಳಕಿನಲ್ಲಿಡಿ. ಕತ್ತಲೆಯಲ್ಲಿ ಗಣಪತಿಯನ್ನು ನೋಡುವುದು ಅಶುಭ.
ಗಣೇಶನ್ನು ಮನೆಯಲ್ಲಿ ಎಷ್ಟು ದಿನ ಪ್ರತಿಷ್ಠಾಪಿಸಬೇಕು
* ಈ ಸಮಯದಲ್ಲಿ, ಭಕ್ತರು ಮನೆಯ ಒಳಗೆ ಅಥವಾ ಹೊರಗೆ ಜೂಜನ್ನು ತಪ್ಪಿಸಬೇಕು.
* ಮಾಂಸ ಮತ್ತು ಆಲ್ಕೋಹಾಲ್ ಸೇವಿಸುವುದನ್ನು ಸಹ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
* ಗಣೇಶನಿಗೆ ತುಳಸಿಯನ್ನು ಅರ್ಪಿಸಬೇಡಿ, ವಿನಾಯಕನು ಕೋಪಗೊಳ್ಳಬಹುದು.
* ಗಣೇಶನಿಂದ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವಾತ, ಆದ್ದರಿಂದ ಕದಿಯಬಾರದು ಅಥವಾ ಮೋಸ ಮಾಡಬಾರದು.
ಗಣೇಶನ್ನು ಮನೆಯಲ್ಲಿ ಎಷ್ಟು ದಿನ ಪ್ರತಿಷ್ಠಾಪಿಸಬೇಕು
* ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ಗಣೇಶನನ್ನು ಮನೆಯಲ್ಲಿಟ್ಟು ಜಗಳವಾಡಬಾರದು ಅಥವಾ ಅಸಭ್ಯ ಭಾಷೆಯನ್ನು ಬಳಸಬಾರದು. * ಕಷ್ಟದ ಸಂದರ್ಭಗಳಲ್ಲಿ ಶಾಂತವಾಗಿರಲು ಪ್ರಯತ್ನಿಸಿ, ಏಕೆಂದರೆ ಗಣೇಶನು ನಿಮ್ಮನ್ನು ಮತ್ತು ನಿಮ್ಮ ತೊಂದರೆಗಳನ್ನು ನೋಡಿಕೊಳ್ಳುತ್ತಾನೆ.
* ಚಂದ್ರನನ್ನು ಯಾವುದೇ ಕಾರಣಕ್ಕೂ ನೋಡವುದನ್ನು ತಪ್ಪಿಸಿ. ಆಕಸ್ಮಿಕವಾಗಿ ಚಂದ್ರನನ್ನು ನೋಡಿದರೆ ಕೂಡಲೇ ನೆಲದಿಂದ ಕಲ್ಲಿನ ತುಂಡನ್ನು ತೆಗೆದುಕೊಂಡು ಅದನ್ನು ಹಿಂದಕ್ಕೆ ಎಸೆಯಿರಿ ಇದೊಂದು ರೀತಿಯ ಪರಿಹಾರವಾಗಿದೆ.
* ಗಣೇಶನ ಪೂಜೆಯ ವೇಳೆ ನೀಲಿ ಮತ್ತು ಕಪ್ಪು ಬಟ್ಟೆಗಳನ್ನು ಧರಿಸಬಾರದು. ಆದಷ್ಟು ಚತುರ್ಥಿಯಂದು ಕೆಂಪು ಮತ್ತು ಹಳದಿ ಬಟ್ಟೆಗಳನ್ನು ಧರಿಸುವುದು ಉತ್ತಮ.