Just In
Don't Miss
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- News Darshan: ಡಿ.ಕೆ. ಸುರೇಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ ಚತುರ್ಥಿ 2022: ಗಣೇಶನಿಗೆ ಅಕ್ಷತೆಯನ್ನು ಏಕೆ ಪ್ರೋಕ್ಷಣೆ ಮಾಡುತ್ತೇವೆ ಗೊತ್ತೆ?
ಗಣೇಶನ ಕೃಪೆಗೆ ಪಾತ್ರರಾಗಲು ಅವನಿಗೆ ಇಷ್ಟವಾದ ಫಲ, ಫುಷ್ಪ, ಸಿಹಿತಿಂಡಿಗಳನ್ನು ಅರ್ಪಿಸಿ ಪೂಜಿಸುತ್ತೇವೆ. ಇದೆಲ್ಲದರ ನಡುವೆ ನಾವು ವಿನಾಯಕನಿಗೆ ಅಕ್ಷತೆ ಹಾಕುವುದನ್ನು ತಪ್ಪಿಸುವುದಿಲ್ಲ. ಅರಿಶಿನ ಮತ್ತು ಕುಂಕುಮದಿಂದ ಲೇಪಿತ ಅಕ್ಕಿ ಕಾಳನ್ನು ಅಕ್ಷತೆಯ ರೂಪದಲ್ಲಿ ಬಳಸುತ್ತಾರೆ.
ಮೋದಕ ಪ್ರಿಯ ಗಣೇಶನ ಹಬ್ಬವನ್ನು 2022ನೇ ಸಾಲಿನಲ್ಲಿ ಆಗಸ್ಟ್ 31ರಂದು ಆಚರಿಸಲಾಗುತ್ತಿದೆ. ಈ ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶನನ್ನು ತರುವ ಸಮಯದಿಂದ ವಿಸರ್ಜಿಸುವ ಪ್ರತಿಹಂತದಲ್ಲೂ ಮೊದಲು ಅಕ್ಷತೆಯನ್ನು ಹಾಕಿ ಮುಂದಿನ ಕಾರ್ಯ, ಪೂಜೆಗಳನ್ನು ಮಾಡುತ್ತೇವೆ. ಇನ್ನು ಹಲವರು ವಿನಾಯಕ ಚತುರ್ಥಿಯಂದು ಗಣೇಶ ಇಟ್ಟಿರುವವರ ಮನೆಗಳಿಗೆ ಹೋಗಿ ಅಕ್ಷತೆಯನ್ನು ಹಾಕಿ ವಂದಿಸುವ ವಾಡಿಕೆಯೂ ಇದೆ.
ಗಣಪತಿಯ ಪೂಜೆಯಲ್ಲಿ ಅಕ್ಷತೆಗೆ ಏಕೆ ಇಷ್ಟು ವಿಶೇಷ ಮಹತ್ವ ಇದೆ. ಅಕ್ಷತೆಯನ್ನು ಏಕೆ ಶುಭಕರ್ತಾ ಎಂದು ಹೇಳಲಾಗುತ್ತದೆ ಮುಂದೆ ನೋಡೋಣ:
ಶುಭದ ಸಂಕೇತ
ಅಕ್ಷತೆ ಅಂದರೆ ಅದು ಖುಷಿ ಮತ್ತು ಸಮೃದ್ಧಿಯ ಸಂಕೇತ. ಗಣೇಶನನ್ನು ಮನೆಗೆ ಕರೆತರುವಾಗ ಆತನ ಮೇಲೆ ಅಕ್ಷತೆ ಅಥವಾ ಅಕ್ಕಿಯನ್ನು ಹಾಕುವುದರಿಂದ ಮನೆಯಲ್ಲಿನ ಎಲ್ಲ ಬಾಧೆಗಳು ದೂರವಾಗುತ್ತವೆ. ಅಲ್ಲಿಂದ ಮನೆಯಲ್ಲಿ ಶುಭ ಮನೆ ಮಾಡುತ್ತದೆ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.
ದೇವತೆಗಳ ಆಶೀರ್ವಾದ
ಇದರ ಹೊರತಾಗಿ ಅಕ್ಷತೆ ಹಾಕುವುದರಿಂದ ಗಣೇಶನ ಜೊತೆಗೆ ಎಲ್ಲ ದೇವಾನು-ದೇವತೆಗಳ ಆಶೀರ್ವಾದ ಲಭಿಸುತ್ತದೆ. ಮನೆಯಲ್ಲಿ ಇದರಿಂದ ಸಕಾರಾತ್ಮಕತೆ ತುಂಬುತ್ತದೆ.
ಮೊದಲ ಪೂಜಾಕಾರಕ
ಯಾವುದೇ ಶುಭ ಕಾರ್ಯ ಇದ್ದರೂ ಗಣೇಶನಿಗೆ ಮೊದಲು ಪೂಜಿಸಲಾಗುತ್ತದೆ. ಸರ್ವ ದೇವತೆಗಳಲ್ಲೂ ವಿನಾಯಕನಿಗೆ ಪೂಜೆಗೆ ಪ್ರಥಮ ಆದ್ಯತೆ. ಈ ವೇಳೆ ಸಮೃದ್ಧಿ ಎಂದು ಪರಿಗಣಿಸಲಾದ ಅಕ್ಕಿ, ಶುಭ ಎಂದು ಹೇಳಲಾಗುವ ಅರಿಶಿನ ಹಾಗೂ ಕುಂಕುಮವನ್ನು ಮಿಶ್ರಣ ಮಾಡಿ ಅರ್ಪಿಸುವುದು ಮಂಗಳಕರ ಎನ್ನಲಾಗುತ್ತದೆ.
ಐದು ದೇವತೆಗಳ ಶಕ್ತಿ
ಗಣೇಶಯನ್ನು ಮನೆಗೆ ಸ್ವಾಗತಿಸುವಾಗ, ಕುಂಕುಮದೊಂದಿಗೆ ಅಕ್ಷತೆಯನ್ನು ಪ್ರೋಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ಏಕೆಂದರೆ ಅಕ್ಕಿ ಧಾನ್ಯವು ಐದು ಪ್ರಮುಖ ದೇವತೆಗಳಾದ ಶಿವ, ಶಕ್ತಿ, ಶ್ರೀರಾಮ, ಶ್ರೀ ಕೃಷ್ಣ ಮತ್ತು ಶ್ರೀ ಗಣೇಶರಿಂದ ಧನಾತ್ಮಕತೆ ಮತ್ತು ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.
ಮುರಿಯದ ಅಕ್ಕಿ ಬಳಸಿ
ಮುರಿಯದ ಅಕ್ಕಿಯನ್ನು ಬಳಸುವುದರಿಂದ ದೇವಾನು-ದೇವತೆಗಳಿಂದ ಉತ್ತಮ ಕಂಪನಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಅರಿಶಿನ-ಕುಂಕುಮ ತಪ್ಪಿಸಬೇಡಿ
ಗಣೇಶ ಅಥವಾ ಯಾವುದೇ ದೇವರಿಗೆ ಅಕ್ಷತೆಯನ್ನು ಪ್ರೋಕ್ಷಣೆ ಮಾಡುವಾಗ ಅಕ್ಕಿಯನ್ನು ಹಾಗೆಯೇ ಹಾಕುವಂತಿಲ್ಲ, ದಕ್ಕೆ ಕುಂಕುಮ ಅಥವಾ ಅರಿಶಿನವನ್ನು ಲೇಪಿಸಬೇಕು. ಅಕ್ಕಿ ಮುರಿಯದಂತೆ ನೀವು ಅದನ್ನು ನಿಧಾನವಾಗಿ ಮಿಶ್ರಣ ಮಾಡಬೇಕು.