For Quick Alerts
ALLOW NOTIFICATIONS  
For Daily Alerts

ಗಣೇಶ ಚತುರ್ಥಿ 2022: ಗಣೇಶ ಪ್ರತಿಷ್ಠಾಪನೆಯ ವೇಳೆ ಈ 4 ಆಚರಣೆಗಳನ್ನು ತಪ್ಪದೇ ಪಾಲಿಸಿ

|

ಡೊಳ್ಳು ಹೊಟ್ಟೆ, ಗಜಮುಖ, ಗೌರಿಪುತ್ರ ಗಣೇಶನ ಜನ್ಮವನ್ನು 2022ನೇ ಸಾಲಿನಲ್ಲಿ ಆಗಸ್ಟ್‌ 31ರಂದು ಆಚರಿಸಲಾಗುತ್ತಿದೆ. ವಿನಾಯಕ ಚತುರ್ಥಿ ಅಥವಾ ವಿನಾಯಕ ಚೌತಿ ಎಂದೂ ಕರೆಯಲ್ಪಡುವ ಈ ಹಬ್ಬವು ಭಾರತದಾದ್ಯಂತ ಆಚರಿಸುವ ದೊಡ್ಡ ಹಬ್ಬವಾಗಿದೆ.

Ganesh Chaturthi 2022: Know About Rituals Performed During the 10-day Festival in Kannada

ಗಣೇಶ ಹಬ್ಬವನ್ನು ಒಂದು ದಿನದಿಂದ 11 ದಿನಗಳವರೆಗೂ ಆಚರಿಸಲಾಗುತ್ತದೆ. ಹಿಂದೂ ಆಚರಣೆಯ ನಿಗದಿತ ದಿನಗಳಲ್ಲಿ ಮಾತ್ರ ಗಣೇಶನನ್ನು ವಿಸರ್ಜನೆ ಮಾಡಬೇಕು ಎಂಬ ನಿಯಮವಿದೆ.

ಅದರಲ್ಲೂ ಗಣೇಶನನ್ನು 10 ದಿನಗಳವರೆಗೆ ಇಟ್ಟರೆ ಅತ್ಯಂತ ಶುಭ ಎಂಬ ನಂಬಿಕೆ ಇದೆ. ಗಣೇಶ ಚತುರ್ಥಿಯ 10 ದಿನಗಳ ಅವಧಿಯಲ್ಲಿ, 16 ಆಚರಣೆಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ ನಾವು ಅವುಗಳನ್ನು 4 ಪ್ರಮುಖ ಆಚರಣೆಗಳು ಬಹಳ ಮುಖ್ಯವಾಗುತ್ತದೆ. ಆದರೆ ಈ 10 ದಿನಗಳು ಯಾವೆಲ್ಲಾ ಆಚರಣೆಗಳನ್ನು ಮಾಡಬೇಕು, ಗಣೇಶನನ್ನು ಹೇಗೆ ಪೂಜಿಸಬೇಕು ಮುಂದೆ ಓದಿ:

ಗಣೇಶ ಚತುರ್ಥಿಯ 4 ಪ್ರಮುಖ ಆಚರಣೆಗಳು ಹೀಗಿದೆ:

ಆವಾಹನೆ ಮತ್ತು ಪ್ರಾಣ ಪ್ರತಿಷ್ಠಾಪನೆ

ಆವಾಹನೆ ಮತ್ತು ಪ್ರಾಣ ಪ್ರತಿಷ್ಠಾಪನೆ

ಭಕ್ತರು ‘ದೀಪ-ಪ್ರಜ್ವಲನ' ಮತ್ತು ‘ಸಂಕಲ್ಪ' ಮಾಡಿದ ನಂತರ ಇದು ಮೊದಲ ಹೆಜ್ಜೆಯಾಗಿದೆ. ಮಂತ್ರ ಪಠಣದೊಂದಿಗೆ, ಗಣಪತಿಯನ್ನು ಪೂಜ್ಯಪೂರ್ವಕವಾಗಿ ಆಹ್ವಾನಿಸಲಾಗುತ್ತದೆ, ರಸ್ತೆಗಳಲ್ಲಿ, ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿ ಇಡಲಾಗುವ ವಿಗ್ರಹದಲ್ಲಿ ಜೀವವನ್ನು ಆವಾಹಿಸಲಾಗುತ್ತದೆ. ಇದು 'ಮೂರ್ತಿ' ಅಥವಾ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಆಚರಣೆಯಾಗಿದೆ.

ಷೋಡಶೋಪಚಾರ

ಷೋಡಶೋಪಚಾರ

ಮುಂದಿನ ಹಂತವು 16-ಹಂತದ ಪೂಜೆಯ ಸಂಪ್ರದಾಯವನ್ನು ಒಳಗೊಂಡಿರುತ್ತದೆ, ಇದರಲ್ಲಿ 'ಷೋಡಶ' ಎಂದರೆ 16 ಮತ್ತು ಉಪಚಾರ ಎಂದರೆ 'ಭಗವಂತನನ್ನು ಭಕ್ತಿಯಿಂದ ಅರ್ಪಿಸುವುದು', ಸಂಸ್ಕೃತದಲ್ಲಿ.

ಗಣೇಶನ ಪಾದಗಳನ್ನು ತೊಳೆದ ನಂತರ, ವಿಗ್ರಹವನ್ನು ಹಾಲು, ತುಪ್ಪ, ಜೇನುತುಪ್ಪ, ಮೊಸರು, ಸಕ್ಕರೆ (ಪಂಚಾಮೃತ ಸ್ನಾನ) ನಂತರ ಪರಿಮಳಯುಕ್ತ ಎಣ್ಣೆ ಮತ್ತು ನಂತರ ಗಂಗಾಜಲದಿಂದ ಅಭಿಷೇಕ ಮಾಡಿ. ನಂತರ ಹೊಸ ವಸ್ತ್ರ, ಹೂವುಗಳು, ಮುರಿಯದ ಅಕ್ಷತೆಯ ಅಕ್ಕಿ, ಹಾರ, ಸಿಂಧೂರ ಮತ್ತು ಚಂದನದ ಜೊತೆಗೆ ಗಣೇಶನನ್ನು ಅಲಂಕರಿಸಿ. ಧಾರ್ಮಿಕವಾಗಿ ಮೋದಕ, ವೀಳ್ಯದೆಲೆ, ತೆಂಗಿನಕಾಯಿ (ನೈವೇದ್ಯ) ಬೆಳಗುವ ಧೂಪದ್ರವ್ಯ, ದೀಪ, ಸ್ತೋತ್ರಗಳು, ಮಂತ್ರಗಳನ್ನು ಪಠಿಸುವ ಮೂಲಕ ಪೂಜಿಸಲಾಗುತ್ತದೆ.

ಉತ್ತರಪೂಜೆ

ಉತ್ತರಪೂಜೆ

ಈ ಆಚರಣೆಯನ್ನು ವಿಸರ್ಜನಕ್ಕೆ ಮೊದಲು ನಡೆಸಲಾಗುತ್ತದೆ. ಅತ್ಯಂತ ಸಂತೋಷ ಮತ್ತು ಭಕ್ತಿಯಿಂದ, ಎಲ್ಲಾ ವಯೋಮಾನದ ಜನರು ಉತ್ಸವದಲ್ಲಿ ಭಾಗವಹಿಸುತ್ತಾರೆ. ದೇವಾಲಯಗಳಲ್ಲಾಗಲಿ, ಮನೆಗಳಲ್ಲಾಗಲಿ ಗಣೇಶ ಚತುರ್ಥಿಯನ್ನು ಅಪಾರ ಸಂತೋಷದಿಂದ ಆಚರಿಸಲಾಗುತ್ತದೆ. ಜನರು ಹಾಡುತ್ತಾರೆ, ನೃತ್ಯ ಮಾಡುತ್ತಾರೆ ಮತ್ತು ಪಟಾಕಿಗಳನ್ನು ಹಚ್ಚುತ್ತಾರೆ. ಮಂತ್ರಗಳು, ಆರತಿ, ಹೂವುಗಳ ಸುಂದರವಾದ ಪಠಣದೊಂದಿಗೆ ವಿದಾಯ ಹೇಳಲು ಗಣೇಶನನ್ನು ಪೂಜಿಸಲಾಗುತ್ತದೆ. ನಿರಂಜನ ಆರತಿ, ಪುಷ್ಪಾಂಜಲಿ ಅರ್ಪಣ, ಪ್ರದಕ್ಷಿಣೆ ಒಳಗೊಂಡ ಕ್ರಮಗಳು ಅನುಕ್ರಮವಾಗಿರುತ್ತದೆ.

ಗಣಪತಿ ವಿಸರ್ಜನೆ

ಗಣಪತಿ ವಿಸರ್ಜನೆ

ಇದು ಮಹಾರಥೋತ್ಸವದ ಅಂತಿಮ ಸಮಾರೋಪ ವಿಧಿ. ಮುಂದಿನ ವರ್ಷ ಜ್ಞಾನದ ಭಗವಂತ ಹಿಂತಿರುಗಲಿ ಎಂದು ಹಾರೈಸಿ ಗಣೇಶನ ಮೂರ್ತಿಯನ್ನು ಜಲಮೂಲಗಳಲ್ಲಿ ಪೂಜಿಸಲಾಗುತ್ತದೆ. ಜನರು ಮುಳುಗಲು ಹೋಗುವಾಗ "ಗಣಪತಿ ಬಪ್ಪಾ ಮೋರಿಯಾ, ಮಂಗಳ ಮೂರ್ತಿ ಮೋರಿಯಾ" ಎಂದು ಜೋರಾಗಿ ಕೂಗುತ್ತಾರೆ.

English summary

Ganesh Chaturthi 2022: Know About Rituals Performed During the 10-day Festival in Kannada

Here we are discussing about Ganesh Chaturthi 2022 : Know About Rituals Performed During the 10-day Festival in Kannada. Read more.
X
Desktop Bottom Promotion