Just In
- 1 hr ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 2 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 2 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 4 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರಮಹಾಲಕ್ಷ್ಮಿ ವ್ರತ 2022: ವರಮಹಾಲಕ್ಷ್ಮಿ ಉಪವಾಸದ ವೇಳೆ ಯಾವ ಆಹಾರ ಸೇವಿಸಬಹುದು?
ಶ್ರಾವಣ ಮಾಸದ ಪ್ರಮುಖ ವ್ರತಾಚರಣೆ ವರಮಹಾಲಕ್ಷ್ಮಿ. ಈ ವ್ರತದ ವೇಳೆ ಸಂಕಲ್ಪ ತೊಟ್ಟ ಮಹಿಳೆಯರು ಉಪವಾಸ ಮಾಡುತ್ತಾರೆ. ಈ ಸಂದರ್ಭದಲ್ಲಿ ಯಾವ ಆಹಾರವನ್ನು ಸೇವಿಸಬಹುದು ಎಂಬ ಪಟ್ಟಿ ಈ ಲೇಖದಲ್ಲಿದೆ.
ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತ ಸಹ ಒಂದು. ವಿವಾಹಿತ ಮಹಿಳೆಯರು ಸಂಕಲ್ಪ ಮಾಡಿ ಕಳಶವಿಟ್ಟು ಲಕ್ಷ್ಮಿ ದೇವಿಯನ್ನು ವಿಗ್ರಹಗಳಲ್ಲಿ ಆವಾಹಿಸಿ ಶುದ್ಧ ಮನಸ್ಸಿನಿಂದ ತನ್ನ ಪತಿ, ಕುಟುಂಬದ ಶ್ರೇಯೋಭಿವೃದ್ಧಿ, ಧನ ಪ್ರಾಪ್ತಿಗಾಗಿ ಕಟ್ಟುನಿಟ್ಟಿನಿಂದ ಪೂಜಿಸುತ್ತಾರೆ. 2022 ಈ ವರ್ಷದ ವರಮಹಾಲಕ್ಷ್ಮಿ ವ್ರತಾಚರಣೆ ಆಗಸ್ಟ್ 5ರಂದು ಆಚರಿಸಲಾಗುತ್ತಿದೆ.
ಶ್ರಾವಣ ಮಾಸದ ಯಾವುದೇ ಶುಕ್ರವಾರ ವರಮಹಾಲಕ್ಷ್ಮಿ ವ್ರತ ಆಚರಿಸಬಹುದು.
ವರಮಹಾಲಕ್ಷ್ಮಿ ವ್ರತಾಚರಣೆ ವೇಳೆ ಸಂಕಲ್ಪ ತೊಟ್ಟ ಮಹಿಳೆಯರು ಬೆಳಗಿನಿಂದ ಸಂಜೆವರೆಗೂ ಉಪವಾಸ ಮಾಡುತ್ತಾರೆ. ಶ್ರಾವಣ ಮಾಸದ ಪೂರ್ಣ ಚಂದ್ರನನ್ನು ವೀಕ್ಷಿಸಿದ ಬಳಿಕವಷ್ಟೇ ದೇವಿಯನ್ನು ಪ್ರಾರ್ಥಿಸಿ ಉಪವಾಸವನ್ನು ಕೈಬಿಡುತ್ತಾರೆ.
ವರಮಹಾಲಕ್ಷ್ಮಿ ವ್ರತಾಚರಣೆ ವೇಳೆ ಈ ಕೆಳಗಿನ ಆಹಾರಗಳನ್ನು ಸೇವಿಸಬಹುದು.
ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತ ಸಹ ಒಂದು. ವಿವಾಹಿತ ಮಹಿಳೆಯರು ಸಂಕಲ್ಪ ಮಾಡಿ ಕಳಶವಿಟ್ಟು ಲಕ್ಷ್ಮಿ ದೇವಿಯನ್ನು ವಿಗ್ರಹಗಳಲ್ಲಿ ಆವಾಹಿಸಿ ಶುದ್ಧ ಮನಸ್ಸಿನಿಂದ ತನ್ನ ಪತಿ, ಕುಟುಂಬದ ಶ್ರೇಯೋಭಿವೃದ್ಧಿ, ಧನ ಪ್ರಾಪ್ತಿಗಾಗಿ ಕಟ್ಟುನಿಟ್ಟಿನಿಂದ ಪೂಜಿಸುತ್ತಾರೆ. ಈ ವರ್ಷದ ವರಮಹಾಲಕ್ಷ್ಮಿ ವ್ರತಾಚರಣೆ ಆಗಸ್ಟ್ 9ರಂದು ಆಚರಿಸಲಾಗುತ್ತಿದೆ.
ವರಮಹಾಲಕ್ಷ್ಮಿ ವ್ರತಾಚರಣೆ ವೇಳೆ ಸಂಕಲ್ಪ ತೊಟ್ಟ ಮಹಿಳೆಯರು ಬೆಳಗಿನಿಂದ ಸಂಜೆವರೆಗೂ ಉಪವಾಸ ಮಾಡುತ್ತಾರೆ. ಶ್ರಾವಣ ಮಾಸದ ಪೂರ್ಣ ಚಂದ್ರನನ್ನು ವೀಕ್ಷಿಸಿದ ಬಳಿಕವಷ್ಟೇ ದೇವಿಯನ್ನು ಪ್ರಾರ್ಥಿಸಿ ಉಪವಾಸವನ್ನು ಕೈಬಿಡುತ್ತಾರೆ.
ಬಾಳೆಹಣ್ಣು
ಶಕ್ತಿಸಂವರ್ಧನೆಗೆ ಬಾಳೆಹಣ್ಣು ಸಾಕಷ್ಟು ಅತ್ಯುಪಕಾರಿ. ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಹೆಚ್ಚಾಗಿರುತ್ತದೆ, ಅಲ್ಲದೇ ನೈಸರ್ಗಿಕವಾದ ಗ್ಲೊಕೋಸ್ ಅಂಶಗಳನ್ನು ಹೊಂದಿದೆ. ಆದ್ದರಿಂದ ಉಪವಾಸದ ವೇಳೆ ಎಷ್ಟೇ ಕೆಲಸಗಳಿದ್ದರೂ ಬಾಳೆಹಣ್ಣಿನ ಸೇವೆನೆಯಿಂದ ನಿಶ್ಯಕ್ತಿ ಕಾಡುವುದಿಲ್ಲ. ಇದನ್ನು ಹಣ್ಣು ಅಥವಾ ಜ್ಯೂಸ್ ಮಾಡಿ ಸೇವಿಸಬಹುದು.
ವರಮಹಾಲಕ್ಷ್ಮಿ ಪೂಜಾ 2019 ದಿನಾಂಕ, ಮುಹೂರ್ತ ಮತ್ತು ಆಚರಣೆ
ಹಾಲು: ಹಾಲನ್ನು ಅಮೃತ ಎನ್ನುತ್ತಾರೆ, ಪೂಜಾ ವೇಳೆ ಲಕ್ಷ್ಮಿದೇವಿಗೆ ಹಾಲಿನಿಂದಲೂ ಸಹ ಅಭಿಷೇಕ ಮಾಡುತ್ತಾರೆ. ಪೋಷಕಾಂಶಗಳು, ಮೆಗ್ನೀಷಿಯಂ, ಕ್ಯಾಲ್ಶಿಯಂನ ಅಪಾರ ಸತ್ವಾಂಶವುಳ್ಳ ಹಾಲು ಅತ್ಯುತ್ತಮ ಶುದ್ಧಾಹಾರವಾಗಿದೆ. ಅದರಲ್ಲೂ ವ್ರತಾಚರಣೆ ವೇಳೆ ಹಾಲಿನ ಸೇವನೆ ಶಕ್ತಿಗೆ ಪೂರಕವಾಗಿರುತ್ತದೆ. ಒಂದು ಲೋಟ ಹಾಲು ಸಾಕಷ್ಟು ಶಕ್ತಿ ಜತೆಗೆ, ಹಸಿವನ್ನೂ ಸಹ ಹೋಗಲಾಡಿಸುತ್ತದೆ.
ಹಾಲು
ಹಾಲನ್ನು ಅಮೃತ ಎನ್ನುತ್ತಾರೆ, ಪೂಜಾ ವೇಳೆ ಲಕ್ಷ್ಮಿದೇವಿಗೆ ಹಾಲಿನಿಂದಲೂ ಸಹ ಅಭಿಷೇಕ ಮಾಡುತ್ತಾರೆ. ಪೋಷಕಾಂಶಗಳು, ಮೆಗ್ನೀಷಿಯಂ, ಕ್ಯಾಲ್ಶಿಯಂನ ಅಪಾರ ಸತ್ವಾಂಶವುಳ್ಳ ಹಾಲು ಅತ್ಯುತ್ತಮ ಶುದ್ಧಾಹಾರವಾಗಿದೆ. ಅದರಲ್ಲೂ ವ್ರತಾಚರಣೆ ವೇಳೆ ಹಾಲಿನ ಸೇವನೆ ಶಕ್ತಿಗೆ ಪೂರಕವಾಗಿರುತ್ತದೆ. ಒಂದು ಲೋಟ ಹಾಲು ಸಾಕಷ್ಟು ಶಕ್ತಿ ಜತೆಗೆ, ಹಸಿವನ್ನೂ ಸಹ ಹೋಗಲಾಡಿಸುತ್ತದೆ.
ಹಣ್ಣಿನ ರಸ: ಉಪವಾಸದ ಸಂದರ್ಭದಲ್ಲಿ ಪೂಜಾ ವಿಧಿ-ವಿಧಾನ ಮಾಡುವ ವೇಳೆ ಆಗುವ ನಿತ್ರಾಣವನ್ನು ತಡೆಯಲು ತಾಜಾ ಹಣ್ಣಿನ ರಸಗಳು ಸಹ ಬಲು ಸಹಕಾರಿ. ಮೂಸಂಬಿ, ಪಪ್ಪಾಯ, ಕಲ್ಲಂಗಡಿ, ಆರೆಂಜ್, ದಾಳಿಂಬೆ ಹೀಗೆ ಹಲವು ಹಣ್ಣುಗಳು ಹಸಿವನ್ನು ನೀಗಿಸಿ ಆರೋಗ್ಯಕರ ಶಕ್ತಿ ತುಂಬುತ್ತದೆ.
ಹಣ್ಣಿನ ರಸ
ಉಪವಾಸದ ಸಂದರ್ಭದಲ್ಲಿ ಪೂಜಾ ವಿಧಿ-ವಿಧಾನ ಮಾಡುವ ವೇಳೆ ಆಗುವ ನಿತ್ರಾಣವನ್ನು ತಡೆಯಲು ತಾಜಾ ಹಣ್ಣಿನ ರಸಗಳು ಸಹ ಬಲು ಸಹಕಾರಿ. ಮೂಸಂಬಿ, ಪಪ್ಪಾಯ, ಕಲ್ಲಂಗಡಿ, ಆರೆಂಜ್, ದಾಳಿಂಬೆ ಹೀಗೆ ಹಲವು ಹಣ್ಣುಗಳು ಹಸಿವನ್ನು ನೀಗಿಸಿ ಆರೋಗ್ಯಕರ ಶಕ್ತಿ ತುಂಬುತ್ತದೆ.
ಒಣಹಣ್ಣುಗಳು: ಒಣಹಣ್ಣುಗಳು ದುಬಾರಿ ಬೆಲೆಯಂತೆ ದೇಹಕ್ಕೆ ಸಹ ದುಬಾರಿಯಾಗಿಯೇ ಶಕ್ತಿಯನ್ನು ನೀಡುತ್ತದೆ. ಅದರಲ್ಲೂ ಬಾದಾಮಿ ಹಾಗೂ ಒಣ ದ್ರಾಕ್ಷಿ ಇ ಪೋಷಕಾಂಶವನ್ನು ಹೊಂದಿದ್ದು, ಸಾಕಷ್ಟು ಶಕ್ತಿದಾಯಕ ಆಹಾರವಾಗಿದೆ. 4ರಿಂದ 5 ಬಾದಾಮಿ ಹಾಗೂ ಒಣ ದ್ರಾಕ್ಷಿಯನ್ನು ರಾತ್ರಿಯೇ ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯುವದರಿಂದ ಹೆಚ್ಚು ಶಕ್ತಿ ದೇಹಕ್ಕೆ ಪೂರೈಕೆಯಾಗುತ್ತದೆ.
ಒಣಹಣ್ಣುಗಳು
ಒಣಹಣ್ಣುಗಳು ದುಬಾರಿ ಬೆಲೆಯಂತೆ ದೇಹಕ್ಕೆ ಸಹ ದುಬಾರಿಯಾಗಿಯೇ ಶಕ್ತಿಯನ್ನು ನೀಡುತ್ತದೆ. ಅದರಲ್ಲೂ ಬಾದಾಮಿ ಹಾಗೂ ಒಣ ದ್ರಾಕ್ಷಿ ಇ ಪೋಷಕಾಂಶವನ್ನು ಹೊಂದಿದ್ದು, ಸಾಕಷ್ಟು ಶಕ್ತಿದಾಯಕ ಆಹಾರವಾಗಿದೆ. 4ರಿಂದ 5 ಬಾದಾಮಿ ಹಾಗೂ ಒಣ ದ್ರಾಕ್ಷಿಯನ್ನು ರಾತ್ರಿಯೇ ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯುವದರಿಂದ ಹೆಚ್ಚು ಶಕ್ತಿ ದೇಹಕ್ಕೆ ಪೂರೈಕೆಯಾಗುತ್ತದೆ.