Just In
- 2 min ago 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- 2 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 11 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 12 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
Don't Miss
- Finance 2023 ಡಿಸೆಂಬರ್ ವೇಳೆಗೆ 160 ಲಕ್ಷ ಕೋಟಿ ರೂ. ದಾಟಿದ ಸರ್ಕಾರದ ಸಾಲ!
- Automobiles Vande Bharat: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್ಗೆ ಫಿದಾ ಆಗ್ತೀರ!
- News Karnataka Lok Sabha: 28 ಕ್ಷೇತ್ರಗಳ ಜಾತಿವಾರು ಅಭ್ಯರ್ಥಿಗಳು ಯಾರು? ಮಾಹಿತಿ ಇಲ್ಲಿದೆ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಶ್ವತ್ಥ ಮರದಲ್ಲಿ ಹಲವು ದೇವತೆಗಳ ವಾಸ... ತಪ್ಪದೇ ಪೂಜಿಸಿ
ನಮ್ಮ ಹಿಂದೂ ಸಂಸ್ಕೃತಿಯ ಆಚಾರ-ವಿಚಾರಗಳಿಗೆ ತನ್ನದೇ ಆದ ಶ್ರೇಷ್ಠತೆ ಹಾಗೂ ಹಿನ್ನೆಲೆಗಳಿವೆ. ಅಲ್ಲದೆ ಕೆಲವು ಗಿಡ ಮರಗಳಿಗೆ ಆಧ್ಯಾತ್ಮಿ ಶಕ್ತಿ ಇರುವುದನ್ನು ಸಹ ನಾವು ಕಾಣಬಹುದು. ಅಂತಹವುಗಳಲ್ಲಿ ಅಶ್ವತ್ಥ ಮರವೂ ಒಂದು. ಈ ಮರದಲ್ಲಿ ದೇವತೆಗಳು ವಾಸಿಸುತ್ತಾರೆ. ಹಾಗಾಗಿ ಎಲ್ಲಾ ಸಮಯದಲ್ಲೂ ಈ ಮರದ ಬಳಿ ಇರಬಾರದು ಎನ್ನುವ ಪ್ರತೀತಿ ಇದೆ. ಈ ನಂಬಿಕೆಗೆ ಸಾಕ್ಷಿಯಾಗಿ ಒಂದು ಕಥೆ ಇರುವುದನ್ನು ನಾವು ನೋಡಬಹುದು.
ಬ್ರಹ್ಮ ಪುರಾಣದ ಪ್ರಕಾರ, ದುಷ್ಟ ಶಕ್ತಿಗಳು ಆಗಾಗ ದೇವತೆಗಳ ವಿರುದ್ಧ ದಂಗೆ ಏಳುತ್ತಿದ್ದವು. ದುಷ್ಟ ಶಕ್ತಿಗಳಿಗೆ ಸರಿಯಾಗಿ ಪಾಠ ಕಲಿಸಬೇಕು ಎನ್ನುವ ಉದ್ದೇಶದಿಂದ, ಭಗವಂತನಾದ ವಿಷ್ಣುವು ಎಲ್ಲಾ ದೇವತೆಗಳಿಗೆ ಅಶ್ವತ್ಥ ಮರದ ಹಿಂದೆ ಅಡಗಿ ಕೊಳ್ಳಲು ಹೇಳಿದನು. ವಿಷ್ಣುವಿನ ಮಾತಿನಂತೆ ಎಲ್ಲಾ ದೇವತೆಗಳು ಮರದ ಒಂದೊಂದು ಭಾಗದಲ್ಲಿ ಒಬ್ಬೊಬ್ಬರಂತೆ ಅವಿತು ಕುಳಿತರು.
ಇತಿಹಾಸ ಪುರಾಣಗಳಲ್ಲಿಯೇ 'ವೃಕ್ಷಾರಾಧನೆ' ಬೇರೂರಿದೆ...
ಆದರೆ ಲಕ್ಷ್ಮಿ ಮಾತ್ರ ಮರದ ಬುಡದಲ್ಲಿ ಕುಳಿತಳು. ಹಾಗಾಗಿಯೇ ಈ ಮರದ ಆರಾಧನೆಯು ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನಲಾಗುತ್ತದೆ. ಶಾಸ್ತ್ರವು ಅಶ್ವತ್ಥ ಮರದ ಬಳಿ ಹೋಗುವುದು ಮತ್ತು ಅದರ ಪೂಜೆ ಮಾಡುವುದಕ್ಕೆ ನಿಗದಿತ ಸಮಯವನ್ನು ಹೇಳುತ್ತದೆ. ಹಾಗಾದರೆ ಅದು ಯಾವ ಸಮಯ ಎನ್ನುವ ವಿಚಾರ ಇಲ್ಲಿದೆ....
ಪದ್ಮ ಪುರಾಣ
ಪದ್ಮ ಪುರಾಣದ ಪ್ರಕಾರ ಸೂರ್ಯೋದಯಕ್ಕಿಂತ ಮುಂಚೆ ಅಶ್ವತ್ಥ ಮರದ ಬಳಿ ಹೋಗಬಾರದು. ಹಾಗೊಮ್ಮೆ ಹೋದರೆ ಜೀವನದಲ್ಲಿ ಬಡತನ ಎದುರಾಗುವುದು. ಈ ಮರದ ಪೂಜೆಗೆ ಸೂಕ್ತ ಕಾಲವೆಂದರೆ ಸೂರ್ಯೋದಯದ ನಂತರದ ಕಾಲ. ಈ ಸಮಯದಲ್ಲಿ ಲಕ್ಷ್ಮಿ ದೇವಿಯು ಇಲ್ಲಿಯೇ ನೆಲೆಸುತ್ತಾಳೆ. ಆ ವೇಳೆ ಪೂಜಿಸಿದವರಿಗೆ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ.
ಶ್ರೀಕೃಷ್ಣನ ಸ್ಥಾನ
ಋಷಿ ಮುನಿಗಳ ನಡುವೆ ನಾರದ ಮಹರ್ಷಿಗಳು ಇರುವಂತೆ, ಶ್ರೀಕೃಷ್ಣನು ಅಶ್ವತ್ಥಮರದಲ್ಲಿ ನೆಲೆಸಿದ್ದಾನೆ. ಹಾಗಾಗಿ ಈ ಮರವನ್ನು ಆರಾಧಿಸುವುದರಿಂದ ಪುಣ್ಯ ಪ್ರಾಪ್ತಿಯಾಗುವುದು.
ಸ್ಕಂದ ಪುರಾಣ
ಶನಿ ದೇವರಿಗೆ ಸಂಬಂಧಿಸಿದಂತೆ ವ್ಯಕ್ತಿಗೆ ಸಾಡೇ ಸಾತಿ ಸಂಧಿ ನಡೆಯುತ್ತಿದ್ದರೆ, ಪ್ರತಿ ಶನಿವಾರ ಸಂಜೆ ಮರವನ್ನು ಪ್ರದಕ್ಷಿಣೆ ಹಾಕಿ ಪೂಜಿಸಬೇಕು. ಆಗ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ...
'ಸಾಡೇ ಸಾತಿ' ಇದು ಶನಿ ದೇವನ ಇನ್ನೊಂದು ಅಗ್ನಿ ಪರೀಕ್ಷೆ!
ಪುಣ್ಯ ಪ್ರಾಪ್ತಿ
ಈ ಮರದ ಆರಾಧನೆ ಕೇವಲ ಕಲ್ಪನೆ ಅಥವಾ ನಂಬಿಕೆಗೆ ಸೀಮಿತವಾಗಿಲ್ಲ. ಇದರ ಆರಾಧನೆಯಿಂದ ಆರೋಗ್ಯ ಮತ್ತು ಇತರ ಒಳ್ಳೆಯ ಪ್ರಯೋಜನಗಳು ಉಂಟಾಗುವುದು ಎನ್ನಲಾಗುತ್ತದೆ.