For Quick Alerts
ALLOW NOTIFICATIONS  
For Daily Alerts

ದತ್ತ ಜಯಂತಿ 2021: ದಿನಾಂಕ ಹಾಗೂ ಆಚರಣೆಯ ಮಹತ್ವವೇನು?

|

ಮಾರ್ಗಶಿರ ಮಾಸದ ಹುಣ್ಣಿಮೆಯ ದಿನವನ್ನು ದತ್ತಾತ್ರೇಯನ ಜನ್ಮದಿನವೆಂದು ಆಚರಿಸಲಾಗುತ್ತದೆ. ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರ ಪ್ರತೀಕವಾದ ದತ್ತಾತ್ರೇಯನ ಪ್ರಾರ್ಥನೆಯಿಂದ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹಿಂದೂಗಳು ನಂಬುತ್ತಾರೆ. ಗುಜರಾತ್ ಸೇರಿ ದಕ್ಷಿಣ ಭಾರತದಲ್ಲಿ ದತ್ತನನ್ನು ಪೂಜಿಸುವ ಭಕ್ತರಿದ್ದಾರೆ. ಈ ದೇವತಾ ಪುರುಷನಿಗೆ ಮೂರು ಮುಖ ಹಾಗೂ ಆರು ಕೈಗಳು ಏಕಿವೆ ಎಂಬುದಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ.

ದತ್ತ ಜಯಂತಿ ನವರಾತ್ರಿಯೂ ಹಿಂದೂ ದೇವರು ದತ್ತಾತ್ರೇಯನೊಂದಿಗೆ ಸಂಬಂಧ ಹೊಂದಿದೆ. ಇದು ದತ್ತಾತ್ರೇಯ ಜಯಂತಿಯ ಒಂಬತ್ತು ದಿನಗಳ ಮೊದಲು ಪ್ರಾರಂಭವಾಗುತ್ತದೆ. ಈ ವರ್ಷದ ದತ್ತ ಜಯಂತಿಯು ಡಿಸೆಂಬರ್ 18ರಂದು ಆಚರಿಸಲಾಗುತ್ತದೆ. ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಸಪ್ತಮಿ ಅಥವಾ ಏಳನೇ ದಿನದಿಂದ ತಿಂಗಳ ಹುಣ್ಣಿಮೆಯ ದಿನದವರೆಗೆ ಇದನ್ನು ಆಚರಿಸಲಾಗುತ್ತದೆ. ಒಂಬತ್ತು ದಿನವೂ ದತ್ತಾತ್ರೇಯನಿಗೆ ದೇವಾಲಯಗಳಲ್ಲಿ ವಿಶೇಷ ಆಚರಣೆಗಳು ನಡೆಯುತ್ತವೆ.

ದತ್ತ ಜಯಂತಿ ಹಿನ್ನಲೆ:

ದತ್ತ ಜಯಂತಿ ಹಿನ್ನಲೆ:

ಮಹಾಪತಿವ್ರತೆಯಾದ ಅನಸೂಯಾನನ ಪಾತಿವ್ರತ್ಯವನ್ನು ಹೇಗಾದರೂ ಭಂಗಗೊಳಿಸಬೇಕೆಂಬ ನಿರ್ಧಾರದಿಂದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ತೆರಳುತ್ತಾರೆ. ಅನಸೂಯಾ ಪತಿ ಅತ್ರಿ ಮಹರ್ಷಿಗಳು ಹೊರ ಹೋಗಿದ್ದಾಗ, ಆಶ್ರಮಕ್ಕೆ ಸನ್ಯಾಸಿಗಳ ರೂಪದಲ್ಲಿ ಈ ತ್ರಿಮೂರ್ತಿಗಳು ತೆರಳುತ್ತಾರೆ. ಆಶ್ರಮಕ್ಕೆ ಯಾರೂ ಬಂದರೂ ಹಾಗೆಯೇ ಕಳುಹಿಸುವುದಿಲ್ಲವೆಂದು ಅರಿತಿದ್ದ ತ್ರಿಮೂರ್ತಿಗಳು ಅನಸೂಯ ಮನೆಗೆ ಊಟಕ್ಕೆ ಹೋಗುತ್ತಾರೆ. ಜತೆಗೆ, ಬೆತ್ತಲೆಯಾಗಿ ಬಡಿಸಬೇಕೆಂಬ ಶರತ್ತೂ ವಿಧಿಸುತ್ತಾರೆ. ಯಾವುದಕ್ಕೂ ವಿಚಲಿತವಾಗದ ಅನಸೂಯ ತನ್ನ ತಪಶ್ಯಕ್ತಿಯಿಂದ ಈ ತ್ರೀಮೂರ್ತಿಗಳ ಮೇಲೆ ತೀರ್ಥ ಪ್ರೋಕ್ಷಿಸಿ, ಮಕ್ಕಳನ್ನಾಗಿ ಪರಿವರ್ತಿಸುತ್ತಾಳೆ. ಆಗ ನೆಮ್ಮದಿಯಾಗಿ ಆ ಮೂರು ಪುಟ್ಟ ಪುಟ್ಟ ಮಕ್ಕಳಿಗೆ ಸ್ತನ್ಯ ಪಾನವನ್ನೂ ಮಾಡಿಸುತ್ತಾಳೆ. ಅತ್ತ ಅತಿಥಿಗಳ ಇಚ್ಛೆಯಂತೆ ಬೆತ್ತಲೆಯಾಗಿಯೇ ಸತ್ಕಾರವನ್ನೂ ಪೂರೈಸಿರುತ್ತಾಳೆ. ಇತ್ತ ತನ್ನ ಪಾತಿವ್ರತ್ಯವನ್ನು ಪಾಡಿಕೊಳ್ಳುವಲ್ಲಿಯೂ ಯಶಸ್ವಿಯಾಗುತ್ತಾಳೆ.

ಮನೆಗೆ ಮರಳಿದ ಪತಿಗೆ, ಅನಸೂಯಾ ಎಲ್ಲ ವಿಚಾರವನ್ನೂ ವಿವರಿಸುತ್ತಾಳೆ. ತನ್ನ ಅತೀಂದ್ರೀಯ ಶಕ್ತಿಯಿಂದ ಎಲ್ಲವನ್ನೂ ಅರಿತಿದ್ದ ಅತ್ರಿ ಮಹರ್ಷಿಗಳು ಮೂರೂ ಮಕ್ಕಳನ್ನು ಒಂದಾಗಿಸಿ, ದತ್ತನೆಂದು ನಾಮಕರಣ ಮಾಡುತ್ತಾರೆ. ಆ ಕಾರಣದಿಂದಲೇ ಮೂರು ತಲೆಗಳು ಹಾಗೂ ಆರು ಕೈಗಳುಳ್ಳ ದತ್ತಾತ್ರೇಯ ಜನ್ಮ ತಾಳುತ್ತಾನೆ. ಆದರೆ, ತ್ರಿಮೂರ್ತಿಗಳು ಎಷ್ಟು ಹೊತ್ತಾದರೂ ಮರಳಿದಿದ್ದಾಗ ಲಕ್ಷ್ಮಿ, ಸರಸ್ವತಿ ಹಾಗೂ ಪಾರ್ವತಿಯರು ಚಿಂತಿರಾಗುತ್ತಾರೆ. ಅತ್ರಿ ಆಶ್ರಮಕ್ಕೆ ಆಗಮಿಸಿ, ನೈಜ ಸ್ವರೂಪದಲ್ಲಿಯೇ ಪತಿಯರನ್ನು ಮರಳಿಸಲು ಕೋರುತ್ತಾರೆ. ಅನಸೂಯ ಅಸ್ತು ಎನ್ನುತ್ತಾಳೆ. ಆದರೆ, ಬೇಕಾದ ವರ ಬೇಡುವಂತೆ ದಂಪತಿಗೆ ಹೇಳುತ್ತಾರೆ. ಮಕ್ಕಳಿಲ್ಲದ ದಂಪತಿ ಮಕ್ಕಳಿಗಾಗಿಯೇ ಪ್ರಾರ್ಥಿಸುತ್ತಾರೆ. ಆಗ ತ್ರಿಮೂರ್ತಿ ಸ್ವರೂಪಿ ದತ್ತಾತ್ರೇಯನೇ ಪುನರ್ ಅವತಾರವೆತ್ತುತ್ತಾನೆ. ಈ ರೀತಿ ಅವತಾರವೆತ್ತಿದ ದಿನವನ್ನೇ ದತ್ತ ಜಯಂತಿ ಎಂದು ಆಚರಿಸುತ್ತಾರೆ.

ದತ್ತ ಜಯಂತಿಯ ಪೂಜಾ ವಿಧಿ ಮತ್ತು ಉಪವಾಸ:

ದತ್ತ ಜಯಂತಿಯ ಪೂಜಾ ವಿಧಿ ಮತ್ತು ಉಪವಾಸ:

ಭಕ್ತರು ಸೂರ್ಯೋದಯಕ್ಕೆ ಮುಂಚಿತವಾಗಿ ಎಚ್ಚರಗೊಂಡು ಪವಿತ್ರ ಸ್ನಾನ ಮಾಡಿ ನಂತರ ದತ್ತ ಜಯಂತಿಗೆ ಉಪವಾಸ ಆಚರಣೆಯನ್ನು ಮಾಡಬೇಕು

ಪೂಜೆಯ ಸಮಯದಲ್ಲಿ ಭಕ್ತರು ಸಿಹಿತಿಂಡಿಗಳು, ಧೂಪದ್ರವ್ಯ ಕೋಲುಗಳು, ಹೂವುಗಳು ಮತ್ತು ದೀಪಗಳನ್ನು ಅರ್ಪಿಸಬೇಕು

ಭಕ್ತರು ಪವಿತ್ರ ಮಂತ್ರಗಳು ಮತ್ತು ಧಾರ್ಮಿಕ ಗೀತೆಗಳನ್ನು ಪಠಿಸಬೇಕು ಮತ್ತು ಜೀವನ್ಮುಕ್ತ ಗೀತಾ ಮತ್ತು ಅವಧುತ ಗೀತೆಯ ಪದ್ಯಗಳನ್ನು ಓದಬೇಕು

ಅರಿಶಿನ ಪುಡಿ, ವರ್ಮಿಲಿಯನ್ ಮತ್ತು ಶ್ರೀಗಂಧದ ಪೇಸ್ಟ್ ಅನ್ನು ಪೂಜೆಯ ಸಮಯದಲ್ಲಿ ದತ್ತ ದೇವರ ಪ್ರತಿಮೆಯ ಮೇಲೆ ಹಚ್ಚಿ

ಆತ್ಮ ಮತ್ತು ಮನಸ್ಸಿನ ಶುದ್ಧೀಕರಣ ಮತ್ತು ಜ್ಞಾನೋದಯಕ್ಕಾಗಿ, ಭಕ್ತರು "ಓಂ ಶ್ರೀ ಗುರುದೇವ್ ದತ್ತ" ಮತ್ತು "ಶ್ರೀ ಗುರು ದತ್ತಾತ್ರೇಯ ನಮಃ" ಮಂತ್ರಗಳನ್ನು ಪಠಿಸಬೇಕು.

ದತ್ತಾತ್ರೇಯ ಬೀಜ ಮಂತ್ರ:

ದತ್ತಾತ್ರೇಯ ಬೀಜ ಮಂತ್ರ:

ದಕ್ಷಿಣಮೂರ್ತಿ ಬೀಜಂಚ ರಾಮ ಬೀಕನ್ ಸಮುಕ್ತಂ.

ನಾಟಕ ಇಟೇಕಾಕ್ಷರಂ ಗ್ನö್ಯಂ ಬಿಂದುನಾಥಕಲತ್ಮಾಕಂ

ದತ್ತಸ್ಯಾಡಿ ಮಂತ್ರಸ್ಯ ದತ್ರೇಯ ಸಯಾಡಿಮಸ್ವರಹ

ತತ್ರಸ್ಥರೆಫ

ಸಮ್ಯಕ್ತಂ

ದತ್ತ ಜಯಂತಿಯ ಮಹತ್ವ:

ದತ್ತ ಜಯಂತಿಯ ಮಹತ್ವ:

ದತ್ತಾತ್ರೇಯ ಜಯಂತಿಯ ದಿನದಂದು ಪೂಜಾ ವಿಧಿಗಳನ್ನು ಆಚರಿಸುವುದರಿಂದ ಜೀವನದ ಎಲ್ಲಾ ಭಾಗಗಳಲ್ಲಿಯೂ ಅವರು ಲಾಭ ಪಡೆಯುತ್ತಾರೆ ಎಂದು ಭಕ್ತರು ನಂಬುತ್ತಾರೆ. ಆದರೆ ಪವಿತ್ರ ದಿನದ ಪ್ರಾಥಮಿಕ ಅವಶ್ಯಕತೆಯೆಂದರೆ ಅದು ಜನರನ್ನು ಪೂರ್ವಜರ ಸಮಸ್ಯೆಗಳು ಮತ್ತು ಸಮಸ್ಯೆಗಳಿಂದ ರಕ್ಷಿಸುತ್ತದೆ. ಅವತಾರದ ದಿನದಂದು ದೇವರಿಗೆ ಪೂಜೆ ಸಲ್ಲಿಸುವುದು ಮತ್ತು ಪ್ರಾರ್ಥನೆ ಮಾಡುವುದು ಉತ್ಸಾಹಿಗಳಿಗೆ ಸಮೃದ್ಧ ಅಸ್ತಿತ್ವವನ್ನು ಹೊಂದಲು ಸಹಾಯ ಮಾಡುತ್ತದೆ.

ಇನ್ನೂ ಕರ್ನಾಟಕ, ಮಹಾರಾಷ್ಟ್ರ ಆಂಧ್ರ ಪ್ರದೇಶ ಮತ್ತು ಗುಜರಾತ್‌ನಲ್ಲಿ ದತ್ತ ಭಕ್ತರು ಹೆಚ್ಚು. ಗುಲ್ಬರ್ಗಾ ಸಮೀಪದ ಗಾಣಗಪುರ, ಕೋಲ್ಹಾಪುರ ಜಿಲ್ಲೆಯ ನರಸಿಂಹ ವಾಡಿ, ಆಂಧ್ರದ ಕಾಕಿನಾಡದ ಪಿಥಾಪುರಮ್, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿರುವ ಔದುಂಬರ ಹಾಗೂ ಗುಜರಾತಿನ ಸೌರಾಷ್ಟ್ರದಲ್ಲಿರುವ ಗಿರ್ನಾರ್‌ನಲ್ಲಿ ಈ ತ್ರಿಭುವನ ಪಾಲಕ, ಸದ್ಗುಣ ಮೂರ್ತಿ, ನಿರಾಕಾರನಾದ ದತ್ತಾತ್ರೇಯ ದೇವಸ್ಥಾನಗಳಿವೆ.

English summary

Datta Jayanti 2021 :Date, Story, Rituals And Importance

People have confuse about when is DattaJayanthi, So Here we gave complite information about Datta Jayanthi 2020, have a look
X
Desktop Bottom Promotion