Just In
- 7 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 7 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
- 8 hrs ago ದಿನ ಭವಿಷ್ಯ: ಈ ದಿನ 12 ರಾಶಿಗಳಲ್ಲಿ ಈ ರಾಶಿಗಳಿಗೆ ಅದ್ಭುತ ದಿನ
- 10 hrs ago ಗುರು ಸಂಚಾರ 2024: ಮೇ ರಿಂದ 12 ತಿಂಗಳು ಧನು ರಾಶಿಯವರು ಖರ್ಚು ಬಗ್ಗೆ ಜಾಗ್ರತೆ, ಇನ್ನು ಹೇಗೆಲ್ಲಾ ಪ್ರಭಾವ ಬೀರಲಿದೆ?
Don't Miss
- Sports RR vs MI IPL 2024: ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ; ರಾಜಸ್ಥಾನ್ ವಿರುದ್ಧ ಮುಂಬೈ ಇಂಡಿಯನ್ಸ್ಗೆ ಮುಖಭಂಗ
- News Bengaluru Real Estate: ಬೆಂಗಳೂರಿನಲ್ಲಿ ಸೈಟು ಖರೀದಿಸುವ ಮುನ್ನ ಎಚ್ಚರ! 279 ಅಕ್ರಮ ಲೇಔಟ್ ಗುರುತಿಸಿದ ಬಿಡಿಎ
- Movies ತಾವೇ ತೋಡಿದ ಖೆಡ್ಡಾಗೆ ಬಿದ್ದ ರಾಖಿ ಸಾವಂತ್ ? ಕಂಬಿ ಹಿಂದೆ ಡ್ರಾಮಾ ಕ್ವೀನ್..?
- Finance ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಸರಾ 2023: ವಿಜಯದಶಮಿಯಂದು ಇವುಗಳನ್ನು ನೋಡಿದರೆ ಅದೃಷ್ಟ
ಅಕ್ಟೋಬರ್ 24ರಂದು ವಿಜಯದಶಮಿಯನ್ನು ಸಡಗರದಿಂದ ಆಚರಿಸಲಾಗುತ್ತಿದೆ. ದುಷ್ಟಶಕ್ತಿಯ ವಿರುದ್ಧ ಸಾರಿದ ಜಯದ ಆಚರಣೆಯೇ ವಿಜಯದಶಮಿ. ದುರ್ಗಾ ದೇವಿ ಮಹಿಷಾಸುರ ಎಂಬ ಅಸುರನನ್ನು ಹತ್ಯೆ ಮಾಡಿದ ದಿನವೇ ವಿಜಯದಶಮಿ. ಪೌರಾಣಿಕ ಕತೆಯ ಪ್ರಕಾರ ರಾಮ ರಾವಣನನ್ನು ಕೊಂದ ದಿನವನ್ನು ವಿಜಯದಶಮಿಯೆಂದು ಆಚರಿಸಲಾಗುವುದು.
ವಿಜಯದಶಮಿಯಂದು ಕೆಲವು ವಸ್ತುಗಳನ್ನು ನೋಡುವುದರಿಂದ ಅಥವಾ ಕೆಲ ಕಾರ್ಯ ಮಾಡುವುದರಿಂದ ಅದೃಷ್ಟ ಒಲಿಯಲಿದೆ ಎಂದು ನಂಬಲಾಗುವುದು. ಅವುಗಳೇನು ಎಂದು ನೋಡೋಣ ಬನ್ನಿ:
ನೀರಿನಲ್ಲಿ ಮೀನು ನೋಡಿದರೆ
ವಿಜಯದಶಮಿಯಂದು ನೀರಿನಲ್ಲಿ ಮೀನು ನೋಡಿದರೆ ಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಜೀವನದಲ್ಲಿರುವ ಎಲ್ಲಾ ಕಷ್ಟಗಳು ದೂರಾಗುವುದು ಎಂಬ ನಂಬಿಕೆ ಇದೆ.
ನೀಲಕಂಠ ಪಕ್ಷಿಯನ್ನು ನೋಡುವುದು
ದಸರಾ ಹಬ್ಬದಂದು ನೀಲಕಂಠ ಪಕ್ಷಿಯನ್ನು ನೋಡಿದರೆ ತುಂಬಾನೇ ಶುಭ ಎಂದು ಪರಿಗಣಿಸಲಾಗಿದೆ. ನಂಬಿಕೆಗಳ ಪ್ರಕಾರ ಇದನ್ನು ನೋಡಿದವರ ಅದೃಷ್ಟ ಹೆಚ್ಚುವುದು ಅಲ್ಲದೆ ಜೀವನದಲ್ಲಿ ಏಳಿಗೆ ಉಂಟಾಗುವುದು.
ರಾಮ ಅಥವಾ ಶಿವನ ದೇವಾಲಯಕ್ಕೆ ಹೋಗುವುದು
ದಸರಾ ಹಬ್ಬದಂದು ರಾಮ ಅಥವಾ ಶಿವನ ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆಯುವುದರಿಂದ ಶುಭ ಉಂಟಾಗುವುದು. ಈ ದಿನ ರಾಮ ಹಾಗೂ ಶಿವನ ಆರಾಧನೆ ಮಾಡಬೇಕು.
ಹನುಮಂತನಿಗೆ ಪಾನ್ ಇಡುವುದು
ದಸರಾ ಹಬ್ಬದಂದು ರಾಮನ ಮಾತ್ರವಲ್ಲ ರಾಮನ ಭಕ್ತ ಹನುಮಂತನನ್ನು ಕೂಡ ಪೂಜಿಸಬೇಕು. ಹನುಮಂತನಿಗೆ ಪಾನ್ ಅರ್ಪಿಸುವುದರಿಂದ ಶುಭ ಉಂಟಾಗುವುದು. ಪಾನ್ ಪ್ರೀತಿ ಹಾಗೂ ಗೌರವ, ವಿಜಯದ ಸಂಕೇತವಾಗಿದೆ.