Just In
- 11 min ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 1 hr ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 4 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 6 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- Movies "ಸದಾ ನನ್ನ ಹಿಂಭಾಗವನ್ನೇ ಸದಾ ಜೂಮ್ ಮಾಡ್ತಾರೆ"; ನೋರಾ ಫತೇಹಿ ಆಕ್ರೋಶ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- News Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರತಿ ಮಂಗಳವಾರ ಈ ಕ್ರಮಗಳನ್ನು ಮಾಡಿದರೆ, ಜೀವನದ ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತೆ!
ಹಿಂದೂ ಧರ್ಮದಲ್ಲಿ, ಹನುಮನನ್ನು ವಿಪತ್ತುಗಳ ನಾಶಕನೆಂದು ಪರಿಗಣಿಸಲಾಗಿದೆ. ಜೊತೆಗೆ ಮಂಗಳವಾರದಂದು ಹನುಮಂತನ್ನು ಪೂಜಿಸುವುದು ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀರಾಮನ ಸಂಕಷ್ಟಗಳನ್ನು ಹೋಗಲಾಡಿಸುವಲ್ಲಿ ಹನುಮ ವಿಶೇಷ ಕೊಡುಗೆ ನೀಡಿದಂತೆಯೇ, ಮಂಗಳವಾರದಂದು ಕೆಲವು ಕ್ರಮಗಳಿಂದ ಮಹಾಬಲಿ ಹನುಮಂತನನ್ನು ಪ್ರಸನ್ನಗೊಳಿಸುವ ಮೂಲಕ ಭಕ್ತರು ತಮ್ಮ ದುಃಖಗಳನ್ನು ಹೋಗಲಾಡಿಸಿಕೊಳ್ಳಬಹುದು. ಹಾಗಾದರೆ ನಿಮ್ಮ ತೊಂದರೆಗಳನ್ನು ನಿವಾರಿಸಿಕೊಳ್ಳಲು ಮಂಗಳವಾರದಂದು ಮಾಡಬೇಕಾದ ಕ್ರಮಗಳ ಬಗ್ಗೆ ನೋಡೋಣ.
ಮಂಗಳವಾರದಂದು ಈ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ನೀವು ಎಲ್ಲಾ ತೊಂದರೆಗಳನ್ನು ತೊಡೆದುಹಾಕಬಹುದು:
ಆರ್ಥಿಕ ಸಮಸ್ಯೆ ನಿವಾರಣೆಗೆ:
ಹಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ತೊಡೆದುಹಾಕಲು, ಪ್ರತಿ ಮಂಗಳವಾರ ರಾತ್ರಿ ಮಲಗುವ ಮೊದಲು, ಸಾಸಿವೆ ಎಣ್ಣೆಯನ್ನು ಮಣ್ಣಿನ ದೀಪದಲ್ಲಿ ಹಾಕಿ ಹನುಮನ ಮುಂದೆ ಬೆಳಗಬೇಕು. ತದನಂತರ ಆಸನವನ್ನು ಹರಡಿ ಮತ್ತು ಹನುಮಾನ್ ಚಾಲೀಸಾವನ್ನು ಪಠಿಸಿ. ಇದಲ್ಲದೇ ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಹೊಂದಲು ಪ್ರತಿ ಮಂಗಳವಾರ ಬೆಳಗ್ಗೆ ಮಹಾಬಲಿಗೆ ಧೂಪ, ಹೂವು ಇತ್ಯಾದಿಗಳನ್ನು ಅರ್ಪಿಸಬೇಕು.
ಮನೆಯ ತೊಂದರೆ ನಿವಾರಣೆಗೆ:
ಮಂಗಳವಾರದಂದು, 11 ಅಶ್ವಸ್ಥ ಅಥವಾ ಅರಳಿ ಮರದ ಎಲೆಗಳನ್ನು ನೀರಿನಿಂದ ಚೆನ್ನಾಗಿ ತೊಳೆದು, ಅದರ ಮೇಲೆ ಕುಂಕುಮದಿಂದ ಶ್ರೀರಾಮ ಎಂದು ಬರೆದು ಹನುಮಂತನಿಗೆ ಅರ್ಪಿಸಿ. ಹನುಮನ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಮನೆಯಲ್ಲಿ ಹನುಮಂತನ ವಿಗ್ರಹದ ಮುಂದೆಈ ಎಲೆಗಳನ್ನು ಅರ್ಪಿಸುವುದರಿಂದ ತೊಂದರೆಗಳು ದೂರವಾಗುತ್ತವೆ.
ದುಃಖ ನಿವಾರಣೆಗೆ:
ದುಃಖದಿಂದ ಬಳಲುತ್ತಿರುವ ವ್ಯಕ್ತಿಯ ಇಷ್ಟಾರ್ಥಗಳ ನೆರವೇರಿಕೆಗಾಗಿ, ಪ್ರತಿ ಮಂಗಳವಾರ, ತೆಂಗಿನಕಾಯಿ ನೀರನ್ನು ತೆಗೆದುಕೊಂಡು, ಅದನ್ನು ಅವನ ತಲೆಯ ಮೇಲೆ 21 ಬಾರಿ ತಿರುಗಿಸಿ, ಅರ್ಪಿಸಿ. ಇದಲ್ಲದೇ, ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ, ಅದಕ್ಕೆ ಕೆಂಪು ಚಂದನವನ್ನು ಸೇರಿಸಿ, ರಾತ್ರಿ ಮಲಗುವಾಗ ಆ ಲೋಟವನ್ನು ತಲೆಯ ಬಳಿ ಇಟ್ಟುಕೊಂಡು ಮಲಗಿಕೊಳ್ಳಿ. ಮರುದಿನ ಬೆಳಿಗ್ಗೆ ಎದ್ದ ತಕ್ಷಣ, ಆ ಶ್ರೀಗಂಧದ ನೀರನ್ನು ತುಳಸಿಗೆ ಅರ್ಪಿಸಿ.
ಇಷ್ಟಾರ್ಥ ಈಡೇರಿಕೆಗೆ:
ಪ್ರತಿ ಮಂಗಳವಾರ ಹನುಮನಿಗೆ ಮಲ್ಲಿಗೆ ಎಣ್ಣೆ ಮತ್ತು ಕೆಂಪು ಕುಂಕುಮವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳೂ ಈಡೇರುತ್ತವೆ. ಇದರ ಜೊತೆಗೆ ಪ್ರತಿ ಮಂಗಳವಾರ, ಹನುಮನ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥಿಸುವುದರಿಂದ, ನಿಮ್ಮೆಲ್ಲಾ ಕಷ್ಟಗಳು ಕಳೆದು, ಇಷ್ಟಾರ್ಥಗಳೆಲ್ಲವೂ ಈಡೇರುವುದು.