For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯಶಾಸ್ತ್ರ: ನಿಮಗೆ ಸರ್ಕಾರಿ ಕೆಲ್ಸ ಬೇಕಂದ್ರೆ ತಪ್ಪದೇ ಹೀಗೆ ಮಾಡಿ…

|

ಜೀವನದಲ್ಲಿ ಭದ್ರತೆ ಬೇಕಿದ್ದರೆ ಆಗ ಶಾಶ್ವತ ಉದ್ಯೋಗ ಎನ್ನುವುದು ಅತೀ ಅಗತ್ಯವಾಗಿರುವುದು. ಪ್ರತಿಯೊಬ್ಬರು ಕೂಡ ತನಗೆ ಒಳ್ಳೆಯ ಸರ್ಕಾರಿ ಉದ್ಯೋಗ ಬೇಕೆಂದು ಬಯಸುವರು. ಎಲ್ಲರಿಗೂ ಸರ್ಕಾರಿ ಉದ್ಯೋಗದ ಭಾಗ್ಯ ಸಿಗದು. ಅದಕ್ಕಾಗಿ ತುಂಬಾ ಖರ್ಚು ಮಾಡಬೇಕಾಗುತ್ತದೆ. ಸರ್ಕಾರಿ ಕೆಲಸ ಸಿಕ್ಕಿದರೆ ಅದು ಜೀವನದಲ್ಲಿ ಹೆಚ್ಚಿನ ಭದ್ರತೆ ನೀಡುವುದು ಸಹಜ. ಯಾಕೆಂದರೆ ತಿಂಗಳ ಸಂಬಳದೊಂದಿದೆ ನಿವೃತ್ತಿ ಬಳಿಕವೂ ಜೀವನವು ಸರಾಗವಾಗಿ ಸಾಗಲು ಇದರಿಂದ ನೆರವಾಗುವುದು. ಇದರಿಂದಾಗಿ ಹೆಚ್ಚಿನ ಯುವಕರು ಕೂಡ ಇಂದಿನ ದಿನಗಳಲ್ಲಿ ಸರ್ಕಾರಿ ಕೆಲಸಕ್ಕಾಗಿ ಹಾತೊರೆಯುತ್ತಿರುವರು.

Astrological Remedies For Government Job

ಸರ್ಕಾರಿ ಕೆಲಸವೆಂದರೆ ಅಷ್ಟು ಸುಲಭವಾಗಿ ಕೈಗೆಟುಕಲ್ಲ. ಇದಕ್ಕಾಗಿ ಹಲವಾರು ಪರೀಕ್ಷೆಗಳನ್ನು ಕಟ್ಟಬೇಕು. ಸಂದರ್ಶನ ನೀಡಬೇಕು. ಸರ್ಕಾರಿ ಕೆಲಸಕ್ಕಾಗಿ ಹೆಚ್ಚಿನ ಬದ್ಧತೆ, ತಾಳ್ಮೆ ಕೂಡ ಅಗತ್ಯ. ಹೀಗಿದ್ದರೆ ಮಾತ್ರ ಅಂತಿಮ ಹಂತದ ಪಟ್ಟಿಗೆ ನಿಮ್ಮ ಹೆಸರು ಬರಬಹುದು. ಕೇವಲ ಕಠಿಣ ಪರಿಶ್ರಮ ಇದ್ದರೆ ಸಾಲದು, ಅದರೊಂದಿಗೆ ಅದೃಷ್ಟವು ಇದ್ದರೆ ಸರ್ಕಾರಿ ಕೆಲಸವು ಕೈ ಹಿಡಿಯವುದು ಎಂದು ಹೆಚ್ಚಿನವರು ಭಾವಿಸುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಇದು ನಿಜವೆನ್ನಬಹುದು. ಸರ್ಕಾರಿ ಕೆಲಸವನ್ನು ಪಡೆಯಲು ಮಾಡಬಹುದಾದಂತಹ ಜ್ಯೋತಿಷ್ಯದ ಪರಿಹಾರಗಳು ಇಲ್ಲಿದೆ. ನೀವು ಮುಂದಕ್ಕೆ ಓದುತ್ತಾ ಸಾಗಿ....

ಈಶ್ವರ ದೇವರನ್ನು ಪೂಜಿಸಿ

ಈಶ್ವರ ದೇವರನ್ನು ಪೂಜಿಸಿ

ಪ್ರತೀ ಸೋಮವಾರದಂದು ನೀವು ಶಿವಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡಿ. ಇಷ್ಟು ಮಾತ್ರವಲ್ಲದೆ ಅಕ್ಕಿ ಮತ್ತು ಹಸಿ ಹಾಲನ್ನು ಸಮರ್ಪಿಸಿ. ಇದರಿಂದ ಸರ್ಕಾರಿ ಕೆಲಸಕ್ಕೆ ನಿಮಗೆ ಏನೇ ಅಡೆತಡೆಯಿದ್ದರೂ ಅದು ನಿವಾರಣೆಯಾಗುವುದು. ಈಶ್ವರ ದೇವರ ಹೃದಯವು ಬೇಗನೆ ಕರಗುವುದು ಎಂದು ಹೇಳಲಾಗುತ್ತದೆ. ಇದರಿಂದ ನಿಮಗೆ ಸರ್ಕಾರಿ ಕೆಲಸ ಬೇಕಿದ್ದರೆ ಶಿವ ದೇವರಲ್ಲಿ ಬೇಡಿಕೊಳ್ಳಬಹುದು.

ಹನುಮಂತ ದೇವರಿಗೆ ಗುಲಾಬಿ ಮತ್ತು ಕುಂಕುಮ ಸಮರ್ಪಿಸಿ

ಹನುಮಂತ ದೇವರಿಗೆ ಗುಲಾಬಿ ಮತ್ತು ಕುಂಕುಮ ಸಮರ್ಪಿಸಿ

ಮಂಗಳವಾರದಂದು ನೀವು ಆಂಜನೇಯ ದೇವರ ಮಂದಿರಕ್ಕೆ ಭೇಟಿ ನೀಡಿ. ದೇವರ ಮೂರ್ತಿಗೆ ಗುಲಾಬಿ ಮತ್ತು ಕುಂಕುಮ ಸಮರ್ಪಣೆ ಮಾಡಿ. ಆಂಜನೇಯ ದೇವರು ಆಕಾಶದಲ್ಲಿ ಹಾರುತ್ತಿರುವ ಫೋಟೊದ ಮುಂದೆ ನಿಂತು ನೀವು ಪ್ರಾರ್ಥನೆ ಮಾಡಿ. ಪ್ರತಿನಿತ್ಯ ಹನುಮಾನ್ ಚಾಲೀಸ ಪಠಿಸಿ. ಒಂದು ಹನುಮಾನ್ ಯಂತ್ರವನ್ನು ನೀವು ಇಟ್ಟುಕೊಳ್ಳಬಹುದು.

Most Read: ಮನೆಯಲ್ಲಿ ಎಷ್ಟು ದೇವರ ವಿಗ್ರಹ ಇಟ್ಟರೆ ಮಂಗಳಕರ ಎನ್ನುವುದು ನಿಮಗೆ ಗೊತ್ತಾ?

ಗಣೇಶ ದೇವರನ್ನು ಪೂಜಿಸಿ

ಗಣೇಶ ದೇವರನ್ನು ಪೂಜಿಸಿ

ಗಣಪತಿ ದೇವರ ಸೊಂಡಿಲು ಬಲಕ್ಕೆ ತಿರುಗಿರುವಂತಹ ಮೂರ್ತಿಯನ್ನು ಇಟ್ಟು ನೀವು ಪೂಜೆ ಮಾಡಿ. ಇದನ್ನು ನೀವು ಚತುರ್ಥಿ ಯಂದು ಮಾಡಬೇಕಾಗಿದೆ. ಪ್ರತಿನಿತ್ಯ ನೀವು ಈ ಮೂರ್ತಿ ಎದುರು ಪ್ರಾರ್ಥನೆ ಮಾಡಿಕೊಳ್ಳಿ.

ಗೋವಿಗೆ ಆಹಾರ ನೀಡಿ

ಗೋವಿಗೆ ಆಹಾರ ನೀಡಿ

ಹಿಂದೂ ಧರ್ಮದಲ್ಲಿ ಗೋವಿಗೆ ಆಹಾರ ನೀಡುವುದು ಅತೀ ದೊಡ್ಡ ಪುಣ್ಯದ ಕೆಲಸವೆಂದು ಪರಿಗಣಿಸಲಾಗುತ್ತದೆ. ಸಂದರ್ಶನಕ್ಕೆ ಹೋಗುವ ಮೊದಲು ಗೋವಿಗೆ ಚಪಾತಿ ಮತ್ತು ಬೆಲ್ಲವನ್ನು ನೀಡಿ. ಗೋಧಿ ಹಿಟ್ಟಿನಿಂದ ಮಾಡಿರುವಂತಹ ಆಹಾರ ನೀಡಿದರೆ ಅದು ತುಂಬಾ ಲಾಭಕಾರಿಯಾಗಿರಲಿದೆ. ಇದರಿಂದಾಗಿ ನೀವು ಸಂದರ್ಶನದಲ್ಲಿ ಯಶಸ್ಸು ಪಡೆಯುವ ಸಾಧ್ಯತೆಯು ಹೆಚ್ಚಾಗಿ ಇರುವುದು.

ಶನಿ ದೇವರನ್ನು ಪ್ರಾರ್ಥಿಸಿ

ಶನಿ ದೇವರನ್ನು ಪ್ರಾರ್ಥಿಸಿ

ಶನಿ ದೇವರನ್ನು ಪ್ರತೀ ಶನಿವಾರದಂದು ಪೂಜೆ ಮಾಡಿ. ಶನಿ ದೇವರಿಗೆ ಪ್ರಾರ್ಥನೆ ಸಲ್ಲಿಸುವ ವೇಳೆ ನೀವು ಶನಿ ಮಂತ್ರವಾಗಿರುವ `ಓಂ ಶಾಂ ಶನೈಶ್ಚರಾಯ ನಮಃ'ವನ್ನು 108 ಸಲ ಪಠಿಸಿ. ಇದರಿಂದ ನಿಮ್ಮ ಜನ್ಮ ಕುಂಡಲಿಯಲ್ಲಿ ಇರುವಂತಹ ಕೆಲವೊಂದು ನಕಾರಾತ್ಮಕ ಶಕ್ತಿಗಳು ದೂರವಾಗಿ ಅದೃಷ್ಟವು ಬರುವುದು.

ಸಂದರ್ಶನಕ್ಕೆ ಮೊದಲು

ಸಂದರ್ಶನಕ್ಕೆ ಮೊದಲು

ಸಂದರ್ಶನಕ್ಕೆ ಹೋಗುವ ಮೊದಲು ನೀವು ಏನಾದರೂ ಸಿಹಿಯಾಗಿರುವುದನ್ನು ಸೇವಿಸಬೇಕು. ಮೊಸರು ಮತ್ತು ಸಕ್ಕರೆ ಸೇವಿಸಿ ಹೋಗುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.

Most Read: 2019ರಲ್ಲಿ ಗುರು ಗ್ರಹದ ಪ್ರಯಾಣ-ರಾಶಿಚಕ್ರದ ಮೇಲೆ ಹೇಗೆ ಪ್ರಭಾವ ಬೀರಲಿದೆ? ಇಲ್ಲಿದೆ ಡಿಟೇಲ್ಸ್

ಓಂ ಮಂತ್ರ

ಓಂ ಮಂತ್ರ

`ಓಂ ನಮೋ ಭಗವತಿ ಪದ್ಮಾವತಿ ರಿಧಿ ಸಿದ್ಧಿ ದಾಯಿನಿ' ಎನ್ನುವ ಮಂತ್ರವನ್ನು ನೀವು 108 ಸಲ ಪಠಿಸಿದ ಬಳಿಕ ಸಂದರ್ಶನಕ್ಕೆ ಹೋಗಿ. ಇದರಿಂದ ನಿಮಗೆ ಸರ್ಕಾರಿ ಕೆಲಸವು ಸಿಗಲು ನೆರವಾಗುವುದು.

ಅಶ್ವತ್ಥ ಮರವನ್ನು ಪೂಜಿಸಿ

ಅಶ್ವತ್ಥ ಮರವನ್ನು ಪೂಜಿಸಿ

ಭಾನುವಾರ ಹೊರತಾಗಿ ನೀವು ಪ್ರತಿನಿತ್ಯ ಅಶ್ವತ್ಥ ಮರವನ್ನು ಪೂಜಿಸಬೇಕು. ಈ ಮರದಲ್ಲಿ ಎಲ್ಲಾ ದೇವದೇವತೆಗಳು ಹಾಗೂ ನಿಮ್ಮ ಪೂರ್ವಜರು ನೆಲೆಸಿರುತ್ತಾರೆ ಎಂದು ನಂಬಲಾಗಿದೆ. ಶನಿವಾರದಂದು ಕೆಲವು ಮಂದಿ ಅಶ್ವತ್ಥ ಮರದ ಸಮೀಪ ದೀಪವನ್ನು ಕೂಡ ಹಚ್ಚಿಡುವರು.

English summary

Astrological Remedies For Government Job

A lot of hard work, determination as well as perseverance is needed in order to get one's name in the merit list. However, as most of the people believe, it is not the hard work alone but luck also that is needed to crack such exams and get a job in the government sector. Here are some astrological remedies for government job.
X
Desktop Bottom Promotion