Just In
- 7 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 8 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 9 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 9 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಂತ ಚತುರ್ದಶಿ 2021: ವಿಷ್ಣುವಿನ ಆರಾಧನೆಗೆ ಶುಭ ಸಮಯ ಹಾಗೂ ಮಹತ್ವ
ಅನಂತ ಚತುರ್ದಶಿ ಹಿಂದೂಗಳಿಗೆ ತುಂಬಾ ಮಹತ್ವವಾದ ದಿನವಾಗಿದೆ. ಅನಂತ ಚತುರ್ದಶಿಯು ಗಣೇಶ ವಿಸರ್ಜನೆಗೆ ತುಂಬಾ ಸೂಕ್ತವಾದ ದಿನವಾಗಿದೆ. ಅಲ್ಲದೆ ಈ ದಿನ ಅನಂತನ ಅಂದರೆ ಶ್ರೀ ವಿಷ್ಣುವಿನ ಪೂಜೆಗೆ ಶ್ರೇಷ್ಠವಾದ ದಿನವಾಗಿದೆ. ಈ ವರ್ಷ ಅನಂತ ಚತುರ್ದಶಿ ಸೆಪ್ಟೆಂಬರ್ 19ರಂದು ಆಚರಿಸಲಾಗುವುದು.
ಭಾದ್ರಪದ ಮಾಸದ ಶುಕ್ಲ ಪಕ್ಷದ 14ನೇ ದಿನದಂದು ಅನಂತ ಚತುರ್ದಶಿ ಆಚರಿಸಲಾಗುವುದು. ಈ ದಿನದಂದು ವಿಷ್ಣುವಿಗೆ ಪೂಜೆ ಸಲ್ಲಿಸಿದ ಬಳಿಕ ರೇಷ್ಮೆ ನೂಲಿನಲ್ಲಿ ತಯಾರಿಸಿದ ದಾರಕ್ಕೆ 14 ಗಂಟುಗಳನ್ನು ಹಾಕಿ, ವಿಷ್ಣುವಿನ ಬಳಿ ಪೂಜಿಸಿ ಕೈಗೆ ಕಟ್ಟಬೇಕು.
ಅನಂತ ಚತುರ್ದಶಿಯ ವಿಶೇಷ
* ಭಾದ್ರಪದ ಮಾಸದ ಶುಕ್ಲ ಪಕ್ಷದ 14ನೇ ದಿನ ಉಪವಾಸವಿದ್ದು ಅನಂತ ಚತುರ್ದಶಿ ಆಚರಿಸಲಾಗುವುದು.
* ಭಗವಾನ್ ವಿಷ್ಣುವಿನ ಅನಂತ ರೂಪವನ್ನು ಈ ದಿನ ಪೂಜಿಸಲಾಗುತ್ತದೆ.
* ಭಗವಾನ್ ವಿಷ್ಣುವು ಭು, ಭುವಸ್, ಸ್ವರ್, ಮಹಾಸ್, ಜನಸ್, ತಪಸ್, ಮತ್ತು ಸತ್ಯ ಮತ್ತು ಮೇಲಿನ ಮತ್ತು ಅಟಲ, ವಿಟಲ, ಸುತಲ, ರಸಾತಲ, ತಲಾತಲ, ಮಹಾತಲ, ಪಾತಾಳ ಈ ಎಲ್ಲಾ ಲೋಕವನ್ನು ವಿವಿಧ ಅವತಾರಗಳನ್ನು ಎತ್ತಿ ರಕ್ಷಣೆ ಮಾಡಿದನು ಎಂದು ಹೇಳಲಾಗುವುದು. ವಿಷ್ಣುವಿನ ಈ ಅವತಾರವನ್ನು ಅನಂತನ ಅವತಾರವೆಂದು ಹೇಳಲಾಗುವುದು. ಅನಂತ ಚತುರ್ದಶಿಯಂದು ಉಪವಾಸವಿದ್ದು ಪೂಜೆ ಮಾಡಿ ಆಚರಿಸಲಾಗುವುದು.
* ಯಾರು ಈ ಅನಂತ ಚತುರ್ದಶಿಯನ್ನು ಆಚರಿಸುತ್ತಾರೆ ಅವರ ಸಂಕಷ್ಟಗಳು ದೂರವಾಗುವುದು.
ಅನಂತ ಚತುರ್ದಶಿ ಹೇಗೆ ಆಚರಿಸಬೇಕು?
* ಬೆಳಗ್ಗೆ ಎದ್ದು ಸ್ನಾನ ಮಾಡಿ ಕಲಶ ತಯಾರಿಸಬೇಕು. ಕಲಶವನ್ನು ಕಮಲದ ಹೂವಿನಿಂದ ಅಲಂಕರಿಸಬೇಕು. ವಿಷ್ಣುವಿನ ಮೂರ್ತಿಯನ್ನು ಅಲಂಕರಿಸಿಬೇಕು.
* ಈಗ ಕುಂಕುಮ, ಕೇಸರಿ,ಅರಿಶಿಣ ಹಾಕಿದ ತಟ್ಟೆಯಲ್ಲಿ ರೇಷ್ಮೆ ನೂಲು ಮಿಶ್ರ ಮಾಡಿ 14 ಗಂಟುಗಳನ್ನು ಹಾಕಿ ಮಹಾವಿಷ್ಣುವಿನ ಬಳಿ ಇಡಬೇಕು. ನಂತರ ಮಹಾ ವಿಷ್ಣು ಮಂತ್ರಗಳನ್ನು ಹೇಳುತ್ತಾ ಪೂಜೆ ಮಾಡಬೇಕು.
* ನಂತರ ಆ ಪವಿತ್ರ ನೂಲನ್ನು ತೆಗೆದುಕೊಂಡು ನಿಮ್ಮ ಕೈಗೆ ಕಟ್ಟಿಕೊಳ್ಳಬೇಕು.
* ಪುರುಷರು ಈ ನೂಲನ್ನು ಎಡಗೈಗೆ ಕಟ್ಟಿದರೆ, ಮಹಿಳೆಯರು ಈ ನೂಲನ್ನು ಬಲಗೈಗೆ ಕಟ್ಟಿಕೊಳ್ಳಬೇಕು. ನಂತರ ಪ್ರಸಾದವನ್ನು ಸ್ವೀಕರಿಸಬೇಕು.
ಅನಂತ ಚತುರ್ದಶಿ ಪೂಜೆಗೆ ಶುಭ ಮುಹೂರ್ತ
ಅನಂತ ಚತುರ್ದಶಿ ತಿಥಿ ಪ್ರಾರಂಭ: ಸೆಪ್ಟೆಂಬರ್ 19, ಬೆಳಗ್ಗೆ 6:07ಕ್ಕೆ
ಅನಂತ ಚತುರ್ದಶಿ ತಿಥಿ ಅಂತ್ಯ: ಸೆಪ್ಟೆಂಬರ್ 20 ಬೆಳಗ್ಗೆ 5:30ಕ್ಕೆ
ಅನಂತ ಚತುರ್ದಶಿ ಆಚರಣೆಯ ಪ್ರಯೋಜನವೇನು?
ಪುರಾಣದ ಪ್ರಕಾರ, ಅನಂತ ಚತುರ್ದಶಿ ಉಪವಾಸವನ್ನು ಸತತ 14 ವರ್ಷಗಳ ಕಾಲ ಆಚರಿಸಿದರೆ ಆ ವ್ಯಕ್ತಿ ವಿಷ್ಣುವಿನ ಲೋಕದಲ್ಲಿ ಸ್ಥಾನ ಪಡೆಯುತ್ತಾನೆ. ವಿಷ್ಣುವಿನ ಕೃಪೆ ಅವನ ಮೇಲಿರುತ್ತದೆ. ಈ ದಿನ ಉಪವಾಸವಿದ್ದು ವಿಷ್ಣುವಿನ ಸಹಸ್ರನಾಮ ಪಠಿಸಿದರೆ ಮನೋಕಾಮನೆಗಳು ಈಡೇರುವುದು. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೊಂದುತ್ತಾರೆ ಎಂದು ನಂಬಲಾಗಿದೆ. ಅನಂತ ಚತುರ್ದಶಿ ಉಪವಾಸವನ್ನು ಮೊದಲು ಆರಂಭಿಸಿದ್ದು ಮಹಾಭಾರತದ ಕಾಲದಿಂದ ಎಂದು ಹೇಳಲಾಗುವುದು.
ಪಾಂಡವರು ಕೌರವರ ಜೊತೆ ಸೋತು ಅಜ್ಞಾತವಾಸದಲ್ಲಿರುತ್ತಾರೆ. ಆಗ ಅಲ್ಲಿಗೆ ಬಂದ ಶ್ರೀಕೃಷ್ಣನನ್ನು ಪಾಂಡವರು ಸ್ವಾಗತಿಸುತ್ತಾರೆ. ಶ್ರೀಕೃಷ್ಣನ ಬಳಿಕ ತಾವು ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಏನು ಮಾಡಬೇಕು ಎಂದು ಕೇಳುತ್ತಾರೆ, ಆಗ ಶ್ರೀ ಕೃಷ್ಣ ಅನಂತ ಚತುರ್ದಶಿ ಕುರಿತು ವಿವರಿಸುತ್ತಾನೆ. ಅದರಂತೆ ಯುಧಿಷ್ಠರ ತನ್ನ ಪರಿವಾರದ ಜೊತೆ ಅನಂತ ಚತುರ್ದಶಿ ವ್ರತವನ್ನು ಆಚರಿಸುತ್ತಾನೆ. ನಂತರ ಕಳೆದು ಸಾಮ್ರಾಜ್ಯ ಮರಳಿ ಸಿಗುವಂತಾಗುವುದು ಎಂಬ ಪೌರಾಣಿಕ ಕತೆ ಇದೆ.